ಪೆರಿಯ ಬಳಿ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ: ಸ್ಥಳದಿಂದ ನಾಪತ್ತೆಯಾದ ಯುವಕರು ಹೈದರಾಬಾದ್‌ನಲ್ಲಿ

ಕಾಸರಗೋಡು: ಪೆರಿಯ ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಒಡಿಶ್ಶಾ ನಿವಾಸಿ ಡೆಂಬು (37) ಎಂಬವರೆಂದು ಗುರುತು ಹಚ್ಚಲಾಗಿದೆ. ಬೇಕಲ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಬಗ್ಗೆ ತಿಳಿದು ಬಂದಿದೆ. ಮೃತದೇಹ ಡೆಂಬುರದ್ದೇ ಆಗಿದೆ ಎಂದು ವೈಜ್ಞಾನಿಕವಾಗಿ ಖಚಿತಪಡಿ ಸಲು ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಮೃತವ್ಯಕ್ತಿಯ ಮಗನನ್ನು ಬೇಕಲಕ್ಕೆ ಬರುವಂತೆ ತಿಳಿಸಲಾಗಿದೆ. ಮೇ 16ರಂದು ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ …

ಹೈಯರ್ ಸೆಕೆಂಡರಿ ಫಲಿತಾಂಶ: ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ

ಕಾಸರಗೋಡು: ರಾಜ್ಯ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಅತ್ಯುತ್ತಮ ಸಾಧನೆಗೈದಿದೆ. ಜಿಲ್ಲೆಯಲ್ಲಿ ಜನರಲ್ ಸ್ಕೂಲ್ ವಿಭಾಗದಲ್ಲಿ 96 ಶೇ. ಫಲಿತಾಂಶ ಗಳಿಸಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನಕ್ಕೆ ತಲುಪಿದೆ. ಜನರಲ್ ಸ್ಪೆಶಲ್ ಶಾಲೆಗಳ ಸಂಯುಕ್ತ ಫಲಿತಾಂಶದಲ್ಲಿ ಚೆರ್ಕಳ ಮಾರ್ತೋಮಾ ಹೈಯರ್ ಸೆಕೆಂಡರಿ ಸ್ಪೆಷಲ್ ಸ್ಕೂಲ್ ಪ್ರಥಮ ಸ್ಥಾನ ಗಳಿಸಿದೆ.  ಶ್ರವಣಶಕ್ತಿ, ಮಾತನಾಡಲು ಸಾಧ್ಯವಿಲ್ಲದ ಮಕ್ಕಳು ಮಾರ್ತೋಮಾ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶೇಣಿ ಶಾಲೆಯಲ್ಲಿ ಪರೀಕ್ಷೆ ಬರೆದ  121 …

ತ್ರಿವರ್ಣ ಸ್ವಾಭಿಮಾನ ಯಾತ್ರೆ

ಕಾಸರಗೋಡು: ಕಾಸರಗೋಡಿ ನಲ್ಲಿ ತ್ರಿವರ್ಣ ಸ್ವಾಭಿಮಾನ ಯಾತ್ರೆ ನಡೆಸಲಾಯಿತು. ಶ್ರೀ ಮಲ್ಲಿಕಾ ರ್ಜುನ ದೇವಸ್ಥಾನ ಸಮೀಪದಿಂದ ಆರಂಭಗೊಂಡು ಪಿಲಿಕುಂಜೆಯ ಖಾನ್ ಬಹದ್ದೂರ್ ಯುದ್ಧ ಸ್ಮಾರಕದಲ್ಲಿ ಸಮಾಪ್ತಿಗೊಂಡಿತು. ಯಾತ್ರೆಗೆ ನಿವೃತ್ತ ಆರ್ಮಿ ಆಫೀಸರ್ ರಮೇಶ್, ರಾಜೇಂದ್ರನ್, ಸುಕು ಮಾರನ್, ವೆಂಕಟ್ರಮಣ ಹೊಳ್ಳ, ಮಾಧವ ಮಾಸ್ತರ್, ಗುರುಪ್ರಸಾದ್ ಪ್ರಭು, ಪ್ರಮೀಳ ಮಜಲ್, ಪುಷ್ಪಾ ಗೋಪಾಲನ್, ಸುಕುಮಾರ ಕುದ್ರೆಪ್ಪಾಡಿ, ಕೆ. ಚಂದ್ರಶೇಖರ, ಶ್ರೀಧರ ಕೂಡ್ಲು ನೇತೃತ್ವ ನೀಡಿದರು.

ಪ್ಲಸ್ಟು ಪರೀಕ್ಷೆ: ಜಿಲ್ಲೆಯಲ್ಲಿ ಶೇ. 71.09 ಮಂದಿ ಉತ್ತೀರ್ಣ

ಕಾಸರಗೋಡು: ನಿನ್ನೆ ಪ್ರಕಟ ಗೊಂಡ ಪ್ಲಸ್ಟು ಪರೀಕ್ಷಾ ಫಲಿತಾಂ ಶದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ. 71.09 ಮಂದಿ ಉತ್ತೀರ್ಣರಾಗಿ ದ್ದಾರೆ. ಇತರ ಜಿಲ್ಲೆಗಳೊಂದಿಗೆ ಹೋಲಿಸಿದಾಗ ಕಾಸರಗೋಡು ಜಿಲ್ಲೆ ಹಿನ್ನಡೆಗೆ ಸಾಗಿದೆ.ಜಿಲ್ಲೆಯಲ್ಲಿ ಈಬಾರಿ ಒಟ್ಟು 15,462 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10,992 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 932 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಲಭಿಸಿದೆ. ಕಳೆದ ವರ್ಷ 1,192 ವಿದ್ಯಾರ್ಥಿಗಳು ಎಲ್ಲಾ ವಿಷಯ ಗಳಲ್ಲೂ ಎ ಪ್ಲಸ್ ಪಡೆದಿದ್ದರು. ಇನ್ನು …

ಹೈಯರ್ ಸೆಕೆಂಡರಿ ಫಲಿತಾಂಶ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ, ವಾಣಿಜ್ಯ ವಿಭಾಗಕ್ಕೆ ನೂರು ಶೇಕಡಾ ಫಲಿತಾಂಶ

ಬದಿಯಡ್ಕ: 2024-25 ನೆಯ ಸಾಲಿನ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ರೀರಂಜಿನಿ ಎಸ್ 1200 ರಲ್ಲಿ 1200 ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ.ಶಾಲೆಯ 12 ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಅಂಕ ಲಭಿಸಿದೆ.ವಾಣಿಜ್ಯ ವಿಭಾಗದಲ್ಲಿ ಶ್ರೀರಂಜಿನಿ, ಪ್ರಜ್ಞಾ.ಕೆ, ಸ್ಕಂದಾ ಶರ್ಮ ಜೆ.ಕೆ, ನಭಿಸತುಲ್ ಶಿಜಾನ, ಅನುರಾಗ್, ರಕ್ಷಿತಾ.ಬಿ ಹಾಗೂ ಶಿವಾನಿ.ಕೆ . ಹ್ಯುಮಾನಿಟೀಸ್ ವಿಭಾಗದಲ್ಲಿ ಸುಖಿ.ಬಿ, …

ಗಾಂಜಾ ವಶ: ಓರ್ವ ಸೆರೆ

ಉಪ್ಪಳ: ಉಪ್ಪಳ ಕುರ್ಚಿಪ್ಪಳ್ಳದಲ್ಲಿ ಕಾಸರಗೋಡು ಎಕ್ಸೈಸ್  ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಡಿಯವರ ನೇತೃತ್ವದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 39 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕುರ್ಚಿಪಳ್ಳದ ಮೊಹಮ್ಮದ್ ಅರ್ಶಾದ್ 50) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್)ಗಳಾದ ಸುಧೀಂದ್ರನ್ ಎಂ.ವಿ, ಜನಾರ್ದನನ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ರಮೇಶನ್ ಮತ್ತು ಸ್ವಾತಿ ಯು ಎಂಬಿವರು ಒಳಗೊಂಡಿದ್ದರು.

ಬೀಡಿ ಕಾರ್ಮಿಕೆ ನಿಧನ

ಬಾಯಾರು: ಬೀಡಿ ಕಾರ್ಮಿಕೆ ಚೇರಾಲು ರಂಬೈಮೂಲೆ ನಿವಾಸಿ ಲಲಿತಾ (55) ನಿಧನ ಹೊಂದಿದರು. ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ 21ರಂದು ರಾತ್ರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಪತಿ ಕರಿಯ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಚಂದ್ರಶೇಖರ, ಅನುರಾಧ, ಸಹೋದರರಾದ ಕರಿಯ, ದೇವಪ್ಪ, ಬಾಬು, ಸಹೋದರಿಯರಾದ ಲಕ್ಷ್ಮಿ, ಕಮಲ, ಸೊಸೆ ಸುಸ್ಮಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೊಗ್ರಾಲ್‌ನಲ್ಲಿ  ಲಾರಿಗಳು ಪರಸ್ಪರ ಢಿಕ್ಕಿ ಗಂಭೀರ ಗಾಯಗೊಂಡು ಕ್ಯಾಬಿನ್‌ನೊಳಗೆ ಸಿಲುಕಿದ ಚಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ

ಮೊಗ್ರಾಲ್‌ಪುತ್ತೂರು:  ನಿಲ್ಲಿಸಿದ್ದ ಲಾರಿಯ ಹಿಂದೆ ಇನ್ನೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮ ಕ್ಯಾಬಿನ್‌ನಲ್ಲಿ ಸಿಲುಕಿ ಗಂಭೀರ ಗಾಯಗೊಂಡ ಚಾಲಕ ನನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು ಬೆಳಿಗ್ಗೆ  6  ಗಂಟೆ ವೇಳೆಗೆ ಮೊಗ್ರಾಲ್ ಸೇತುವೆ ಬಳಿ  ನಡೆದಿದೆ. ಮಂಗಳೂರಿನಿಂದ ಜಲ್ಲಿ ಕಲ್ಲು ಹೇರಿಕೊಂಡು ಪಯ್ಯನ್ನೂರಿಗೆ ಹೋಗುತ್ತಿದ್ದ ಟೋರಸ್ ವಾಹನ ಮೊಗ್ರಾಲ್ ಪುತ್ತೂರು ಸೇತುವೆ ಮೇಲೆ ನಿಲ್ಲಿಸಲಾಗಿದ್ದ ಇನ್ನೊಂದು ಟೋರಸ್ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಟೋರಸ್ ವಾಹನದ ಕ್ಯಾಬಿನ್‌ನಲ್ಲಿ ಚಾಲಕ ತೃಶೂರು ಕೋಟ್ಟಕ್ಕರ …

ಕುಂಬಳೆ ಬಸ್ ನಿಲ್ದಾಣ ಪ್ರವೇಶಿಸದ ಬಸ್‌ಗಳು: ಹೆದ್ದಾರಿಯಲ್ಲಿ ಇಳಿದು ರಸ್ತೆ ದಾಟುವ ಪ್ರಯಾಣಿಕರು; ಅಪಾಯ ಭೀತಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ತೆರಳುವ ಬಸ್‌ಗಳು ಇಂದು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಕಾಸರಗೋಡು ಭಾಗದಿಂದ ತಲಪಾಡಿ ಭಾಗಕ್ಕೆ ತೆರಳುವ ಬಸ್‌ಗಳು  ಕುಂಬಳೆ ದೇವಿನಗರ ಸರ್ವೀಸ್ ರಸ್ತೆ ಮೂಲಕ ಅಂಡರ್ ಪ್ಯಾಸೇಜ್‌ನಲ್ಲಾಗಿ ಕುಂಬಳೆ ಬಸ್ ನಿಲ್ದಾಣಕ್ಕೆ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಂಡರ್ ಪ್ಯಾಸೇಜ್ ಮೂಲಕ ಕುಂಬಳೆ ಪೇಟೆಗೆ ತೆರಳುವುದು ವಿರುದ್ಧ ದಿಶೆಯಲ್ಲಾದುದರಿಂದ ಎದುರಿನಿಂದ ಬರುವ ವಾಹನಗಳಿಗೆ ಸೈಡ್ ನೀಡಲು ಸಮಸ್ಯೆ ಎದುರಾಗುತ್ತಿದೆ. ಈ ಕಾರಣದಿಂದ ಇಂದು ಕಾಸರಗೋಡಿನಿಂದ …

24 ಗಂಟೆಯೊಳಗೆ ದೇಶ ತೊರೆಯಲು ಪಾಕ್ ಹೈಕಮಿಶನ್ ಅಧಿಕಾರಿಗೆ ನಿರ್ದೇಶ

ನವದೆಹಲಿ: ನವದೆಹಲಿಯ ಲ್ಲಿರುವ ಪಾಕಿಸ್ತಾನ ಹೈಕಮಿಶನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೋರ್ವರು ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಕ್ಕೆ ಹೊಂದಿಕೆ ಯಾಗದ ಚಟುವಟಿಕೆಗಳಲ್ಲ್ಲಿ ತೊಡಗಿದ್ದಕ್ಕಾಗಿ ಭಾರತ ಸರಕಾರ ಅವರನ್ನು ಇಂದು ದೇಶದಿಂದ ಹೊರಗೆ ಹಾಕಿದೆ. ಮುಂದಿನ 24 ಗಂಟೆಯೊಳಗಾಗಿ ಭಾರತವನ್ನು ತೊರೆಯುವಂತೆ ಆ ಅಧಿಕಾರಿಗೆ ಭಾರತ ನಿರ್ದೇಶ ನೀಡಿದೆ. ಮಾತ್ರವಲ್ಲ ಆ ಅಧಿಕಾರಿಯನ್ನು ಭಾರತ ಪರ್ಸಾನಾ ನಾನ್ ಗ್ರಾಟಾ ಎಂದೂ ಘೋಷಿಸಿದೆ.