ಢಿಕ್ಕಿ ಹೊಡೆದ ಕಾರುಗಳಿಗೆ ಬಡಿದು ಮಗುಚಿದ ಆಂಬುಲೆನ್ಸ್: ಗೃಹಿಣಿ ಮೃತ್ಯು

ಉಪ್ಪಳ: ಢಿಕ್ಕಿ ಹೊಡೆದು ನಿಂತ ಕಾರುಗಳಿಗೆ ಆಂಬುಲೆನ್ಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗೃಹಿಣಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ 4.30ರ ವೇಳೆ ಈ ಅಪಘಾತ ಉಂಟಾಗಿದೆ. ಆಂಬುಲೆನ್ಸ್‌ನಲ್ಲಿದ್ದ ಕಣ್ಣೂರು ವಾರಂ ನಿವಾಸಿ  ಶಾಹಿನ (48) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಅವರ ಜೊತೆಗಿದ್ದ ನಾಲ್ಕು ಮಂದಿ  ಗಾಯಗೊಂಡಿದ್ದಾರೆ. ಮೃತಪಟ್ಟ ಶಾಹಿನರ ಪುತ್ರಿ ರಿಯಾ ಫಾತಿಮ (9)ಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಉಪ್ಪಳ ಗೇಟ್ …

ತ್ರೀ ಪೇಸ್ ವಿದ್ಯುತ್ ತಂತಿ ಮೇಲೆ ಬಿದ್ದ ಮರ: ತಪ್ಪಿದ ಅಪಾಯ

ನೀರ್ಚಾಲು:  ತ್ರಿ ಫೇಸ್ ವಿದ್ಯುತ್ ತಂತಿ ಮೇಲೆ ಇಂದು ಬೆಳಿಗ್ಗೆ ಮರವೊಂದು ಬುಡ ಸಹಿತ ಮಗುಚಿ ಬಿದ್ದಿದೆ. ಕನ್ಯಪ್ಪಾಡಿಯಲ್ಲಿ ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿ ಮೇಲೆ  ಮರ ಬಿದ್ದಿದೆ. ಘಟನೆ ವೇಳೆ ಆ ಪರಿಸರದಲ್ಲಿ  ಯಾರೂ ಇಲ್ಲದಿದ್ದುದರಿಂದ ಭಾರೀ ಅಪಾಯ ತಪ್ಪಿಹೋಗಿದೆ. ವಿಷಯ ತಿಳಿದು ತಲುಪಿದ ಕೆಎಸ್‌ಇಬಿ ನೌಕರರು  ಮರವನ್ನು ತೆರವುಗೊಳಿಸಿದರು.

ಮದ್ಯದಮಲಿನಲ್ಲಿ ಹೆತ್ತಬ್ಬೆಯನ್ನೇ ತುಳಿದು ಕೊಂದ ಪುತ್ರ: ಪೊಲೀಸ್ ಕಸ್ಟಡಿಗೆ

ತಿರುವನಂತಪುರ: ಮದ್ಯದಮಲಿನಲ್ಲಿ ಹೆತ್ತ ತಾಯಿಯನ್ನೇ ಪುತ್ರ ಕಾಲಿನಿಂದ ತುಳಿದು ಕೊಲೆಗೈದ ಘಟನೆ ತಿರುವನಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ತಿರುವನಂತಪುರ ನಡುಮಂಹಾಡ್ ವಟ್ಟಪ್ಪಾರ ತೇಕೆಡ ನಿವಾಸಿ ಓಮನ (75) ಕೊಲೆಗೀಡಾದ ತಾಯಿ. ಇದಕ್ಕೆ ಸಂಬಂಧಿಸಿ ಆಕೆಯ ಪುತ್ರ ಮಣಿಕಂಠನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮದ್ಯದಮಲಿನಲ್ಲಿ ನಿನ್ನೆ ರಾತ್ರಿ ಮನೆಗೆ ಬಂದ ಆರೋಪಿ ತಾಯಿ ಓಮನಳೊಂದಿಗೆ ಜಗಳಕ್ಕಿಳಿದು ಹೊಡೆದು ಬೀಳಿಸಿದ ನಂತರ ಕಾಲಿನಿಂದ ತುಳಿಯತೊಡಗಿದನು. ಆಕೆಯ ಬೊಬ್ಬೆ ಕೇಳಿ ನೆರೆಮನೆಯವರು ಓಡಿ ಬಂದಾಗ ಓಮನ  ಗಂಭೀರಾವಸ್ಥೆಯಲ್ಲಿ  ಬಿದ್ದಿರುವುದನ್ನು ಕಂಡರು. …

ನಾಪತ್ತೆಯಾದ ಯುವತಿ ಮೃತದೇಹ ಕೆರೆಯಲ್ಲಿ ಪತ್ತೆ

ಹೊಸದುರ್ಗ: ಚೀಮೇನಿಯಿಂದ ನಾಪತ್ತೆಯಾದ ಯುವತಿಯ ಮೃತದೇಹ ಮನೆ ಬಳಿಯ ಬಯಲಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ವಡಕ್ಕೇಕರದ ಸುನಿಲ್ ಎಂಬವರ ಪತ್ನಿ ಕೆ.ಟಿ. ಬೀನ (40) ಸಾವಿಗೀಡಾದ ಯುವತಿ. ಸೋಮ ವಾರ ಬೆಳಿಗ್ಗೆ ಮಗುವನ್ನು ಅಂಗನ ವಾಡಿಗೆ ತಲುಪಿಸಿದ ಬಳಿಕ ಮನೆಗೆ ಮರಳಿದ್ದರು. ಅನಂತರ ಮುಳಕ್ಕೋ ದಲ್ಲಿರುವ ಕೆಲಸ ಸ್ಥಳಕ್ಕೆ ತೆರಳುವು ದಾಗಿ ತಿಳಿಸಿ ಹೋಗಿದ್ದರೆನ್ನಲಾಗಿದೆ. ಸಂಜೆ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿಯ ಸಹೋದರ ಸತೀಶನ್  ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ …

ಬಾಲಕಿಯ ನಿಗೂಢ ಸಾವು: ಆರೋಪಿಯನ್ನು : ಪಾಣತ್ತೂರಿಗೆ ತಲುಪಿಸಿ ಮಾಹಿತಿ ಸಂಗ್ರಹ

ಕಾಸರಗೋಡು:ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ  ಆರೋಪಿ ಪಾಣತ್ತೂರು, ಬಾಪುಂಗಯದ ಬಿಜು ಪೌಲೋಸ್ (40) ಎಂಬಾತನನ್ನು ಕ್ರೈಂ ಬ್ರಾಂಚ್ ತಂಡ ಪಾಣತ್ತೂರಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದೆ. ಅಗ್ನಿಶಾಮಕದಳದ ಸ್ಕೂಬ ಟೀಮ್‌ನ ಸಹಾಯದೊಂದಿಗೆ ಪಾಣತ್ತೂರು ಪವಿತ್ರಂಕಯ ಹೊಳೆಯಲ್ಲಿ ಶೋಧ ನಡೆಸಲಾಯಿತು. ಬಾಲಕಿಯ ಮೃತದೇಹವನ್ನು ಜೀಪಿನಲ್ಲಿ ಕೊಂಡೊಯ್ದು ಕಲ್ಲು ಕಟ್ಟಿ ಪವಿತ್ರಂಕಯ  ಹೊಳೆಗೆ ತಳ್ಳಿರುವುದಾಗಿ ಬಿಜು ಪೌಲೋಸ್ ಹೇಳಿಕೆ ನೀಡಿದ್ದನು. ಮೃತದೇಹಕ್ಕೆ ಸಂಬಂಧಿಸಿ ಏನಾದರೂ ಸುಳಿವು ಲಭಿಸುವುದೇ ಎಂದು ಪರಿಶೀಲಿಸಲು ಶೋಧ …

ಯುವಕ ನಾಪತ್ತೆ

ಉಪ್ಪಳ: ಯುವಕನೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊಸಬೆಟ್ಟು ಪಾಂಡ್ಯಾಲ ಜುಮಾ ಮಸೀದಿ ರಸ್ತೆ ನಿವಾಸಿ ರಂಶಾದ್ (28) ನಾಪತ್ತೆಯಾದ ವ್ಯಕ್ತಿ. ಈ ತಿಂಗಳ 18ರಂದು ಸಂಜೆ 7 ಗಂಟೆಗೆ ಇವರು ಮನೆಯಿಂದ ಸ್ಕೂಟರ್‌ನಲ್ಲಿ ತೆರಳಿದ್ದರು. ಅನಂತರ ಮರಳಿ ಮನೆಗೆ ತಲುಪಿಲ್ಲವೆನ್ನಲಾಗಿದೆ.  ಈ ಬಗ್ಗೆ ತಂದೆ ಕೆ.ಎಂ.ಕೆ. ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

ಉಪ್ಪಳ ಸರ್ವೀಸ್ ರಸ್ತೆಯಲ್ಲಿ ಕೆಸರಿನಲ್ಲಿ ಸಿಲುಕಿದ ಟ್ಯಾಂಕರ್ ಲಾರಿ

ಉಪ್ಪಳ: ಉಪ್ಪಳ ಗೇಟ್ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಟ್ಯಾಂಕರ್ ಲಾರಿಯೊಂದು ಸಿಲುಕಿಕೊಂಡಿತ್ತು. ಇದರಿಂದ ಅಲ್ಪ ಹೊತ್ತು ಸಾರಿಗೆ ಅಡಚಣೆ ಎದುರಾ ಯಿತು. ಮಂಗಳೂರಿನಿಂದ ಕೊಲ್ಲಂಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಲಾರಿಯ ಚಕ್ರಗಳು ರಸ್ತೆ ಬದಿ ಹೂತು ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಆಂಬುಲೆನ್ಸ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ  ಟ್ಯಾಂಕರ್ ಲಾರಿಯನ್ನು  ಸರ್ವೀಸ್ ರಸ್ತೆಯಲ್ಲಿ ಬಿಡಲಾಗಿತ್ತು.  ಈ ವೇಳೆ ಬೇರೊಂದು ವಾಹನಕ್ಕೆ ಸೈಡ್ ನೀಡುತ್ತಿದ್ದಾಗ ಟ್ಯಾಂಕರ್ ಲಾರಿ  …

ಪ್ಲಸ್ವನ್ ಪ್ರವೇಶ: ಜಿಲ್ಲೆಯಲ್ಲಿ 20,008 ಅರ್ಜಿ ಸಲ್ಲಿಕೆ

ಕಾಸರಗೋಡು: ಪ್ಲಸ್ವನ್ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ನಿನ್ನೆ ಕೊನೆಗೊಂ ಡಿರುವಂತೆಯೇ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 20,008 ಅರ್ಜಿಗಳು ಸಲ್ಲಿಸಲ್ಪಟ್ಟಿವೆ.ರಾಜ್ಯದಲ್ಲಿ ಒಟ್ಟಾರೆಯಾಗಿ 4,62,116 ಅರ್ಜಿಗಳು ಸಲ್ಲಿಸಲ್ಪ ಟ್ಟಿವೆ. ಇದರಲ್ಲಿ ಅತೀ ಹೆಚ್ಚು ಎಂ ಬಂತೆ ಮಲಪ್ಪುರಂ ಜಿಲ್ಲೆಯಲ್ಲಿ 82,271 ಅರ್ಜಿಗಳು ಸಲ್ಲಿಕೆಯಾಗಿದೆ. ಅತೀ ಕಡಿಮೆ ಎಂಬAತೆ ವಯನಾಡು ಜಿಲ್ಲೆಯಲ್ಲಿ 12,133 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷದೊಂದಿಗೆ ಹೋಲಿಸಿದಲ್ಲಿ ಈ ಬಾರಿ ಪ್ಲಸ್ವನ್ ಪ್ರವೇಶಕ್ಕೆ ಸಲ್ಲಿಸಲ್ಪಟ್ಟ ಅರ್ಜಿಗಳ ಸಂಖ್ಯೆಯಲ್ಲಿ 17,675ರಷ್ಟು ಕುಸಿತ ಉಂಟಾಗಿದೆ.ಈಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ …

ಚಿಪ್ಪಾರು ಶಾಲಾ ಬಳಿ ರಸ್ತೆ ಬದಿ ಕುಸಿತ: ಸಂಚಾರ ಭೀತಿ

ಪೈವಳಿಕೆ: ಮಳೆಗೆ ರಸ್ತೆ ಬದಿ ಕುಸಿದು ಬಿದ್ದು ಸಂಚಾರಕ್ಕೆ ಆತಂಕ ಉಂಟಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್ಭಾಗ್-ಕುರುಡಪದವು ರಸ್ತೆಯ ಚಿಪ್ಪಾರು ಶಾಲಾ ಬಳಿಯಲ್ಲಿ ರಸ್ತೆ ಬದಿ ನಿನ್ನೆಯ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ. ಇನ್ನೂ ಮಣ್ಣು ಕುಸಿದು ಬಿದ್ದಲ್ಲಿ ರಸ್ತೆ ಸಂಚಾರ ಸಮಸ್ಯೆಯಾಗಲಿದೆ.

ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆಯಲ್ಲಿ ಕಟ್ಟಿನಿಂತ ಮಳೆನೀರು: ವ್ಯಾಪಾರಿಗಳು, ಪಾದಚಾರಿಗಳಿಗೆ ಸಮಸ್ಯೆ

ಮಂಜೇಶ್ವರ: ನಿನ್ನೆ ಒಂದೇ ದಿನ ಸುರಿದ ಮಳೆಗೆ ಹೊಸಂಗಡಿ ಪೇಟೆಯ ತಲಪಾಡಿ ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಕೆಸರು ಗದ್ದೆಯಾಗಿ ಮಾರ್ಪಾಡುಗೊಂಡಿದೆ. ಸ್ಥಳೀಯ ವ್ಯಾಪಾರಿಗಳು ಸಹಿತ ಪಾದಾಚಾರಿಗಳು ಸಮಸ್ಯೆಗೀಡಾಗಿದ್ದಾರೆ. ವ್ಯಾಪಾರ ಸಂಸ್ಥೆಯ ಎದುರುಗಡೆ ನೀರು ಕಟ್ಟಿ ನಿಲ್ಲಲು ಚರಂಡಿ ಸಮತಟ್ಟು ಇಲ್ಲದೆ ಇರುವುದು ಕಾರಣವೆನ್ನಲಾಗಿದೆ. ನೀರು ಸಂಗ್ರಹಗೊಂಡು ನಡೆದಾಡಲು ಅಸಾದ್ಯವಾಗಿತ್ತು. ಇಲ್ಲಿ ಸಮತಟ್ಟುಗೊಳಿಸಲು ವ್ಯಾಪಾರಿಗಳು ಈ ಹಿಂದೆ ಆಗ್ರಹಿಸಿದ್ದರು. ಆದರೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ಸ್ಥಳೀಯರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಳೆಗಾಲ ಪ್ರಾರಂಭಗೊಳ್ಳುವ ಮುನ್ನವೇ ದುರಸ್ತಿಗೊಳಿಸಬೇಕೆಂದು …