ಕಾಸರಗೋಡು ಗಿಡ್ಡ ತಳಿ ದನಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾಗಿದೆ- ಸಚಿವೆ

ನೀರ್ಚಾಲು: ಕಾಸರಗೋಡಿನ ಗಿಡ್ಡ ತಳಿಗೆ ಸೇರಿದ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾ ಗಿದೆ ಎಂದು ರಾಜ್ಯ ಪಶು ಸಂಗೋಪನಾ ಮತ್ತು ಹೈನುಗಾರಿಕಾ ಖಾತೆ ಸಚಿವೆ ಜೆ. ಚಿಂಜುರಾಣಿ ಹೇಳಿದ್ದಾರೆ. ಬೇಳದ ಗಿಡ್ಡ ತಳಿ ಫಾಂನಲ್ಲಿ ನೂತನವಾಗಿ ನಿರ್ಮಿಸಲಾದ ಆಡಳಿತ ವಿಭಾಗದ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ಈ ಕೇಂದ್ರದಲ್ಲಿ ೧೦೦೦ದಷ್ಟು ಗಿಡ್ಡ ಹಸುಗಳನ್ನು ಸಂರಕ್ಷಿಸಲು ಸಾಧ್ಯವಾದರೆ, ಇಂತಹ ಗಿಡ್ಡ ತಳಿಯ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಲು ಸಾಧ್ಯವಾಗಲಿದೆ. ಜ್ಯಾರಿಯಲ್ಲಿ ವೆಚ್ಚೂರ್ ತಳಿಗೆ ಸೇರಿದ …

ಶಾಂತಿಗುರಿ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಸಮಾಪ್ತಿ: ಯತಿವರ್ಯರಿಂದ ಆಶೀರ್ವಚನ

ಬೇಕೂರು: ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಮೂಕಾಂಬಿಕಾ ದೇವಿಯ ಪೀಠ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತಿಷ್ಟ್ಠೆ ಕಲಶಾಭಿಷೇಕ ಕಾರ್ಯಕ್ರಮ ನಿನ್ನೆ ಸಮಾಪ್ತಿಗೊಂಡಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸದಾಶಿವ ಶೆಟ್ಟಿ ಕುಳೂರು …

ಹೆದ್ದಾರಿಯಲ್ಲಿ ಮಾತ್ರ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು: ಸರ್ವಿಸ್ ರಸ್ತೆಯಲ್ಲಿ ಕಾದು ನಿಲ್ಲುವ ಪ್ರಯಾಣಿಕರಿಗೆ ಸಮಸ್ಯೆ; ಪರಿಹಾರಕ್ಕಾಗಿ ಕಾಂಗ್ರೆಸ್ ಮಂಡಲ ಅಧ್ಯಕ್ಷರ ಮನವಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳ ನಿರ್ಮಾಣ ಕೆಲಸ ಅಂತಿಮ ಹಂತಕ್ಕೆ ತಲುಪಿರುವಾಗಲೇ ಕರ್ನಾಟಕ, ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳು ಸರ್ವೀಸ್ ರಸ್ತೆಗಿಳಿಯದೆ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುತ್ತಿವೆ ಎಂದು ಕಾಂಗ್ರೆಸ್ ಕುಂಬಳೆ ಮಂಡಲ ಅಧ್ಯಕ್ಷ ರವಿ ಪೂಜಾರಿ ಆರೋ ಪಿಸಿದ್ದಾರೆ. ಬಸ್‌ಗಳು ಹೆದ್ದಾರಿ ಮೂಲಕ ಸಂಚರಿಸುವುದರಿಂದ ಸರ್ವೀಸ್ ರಸ್ತೆಯಲ್ಲಿ ಬಸ್‌ಗಾಗಿ ಕಾದು ನಿಂತ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ. ತಲಪಾಡಿಯಿಂದ ಕಾಸರಗೋಡು ವರೆಗಿನ ಪ್ರಯಾಣ ಮಧ್ಯೆ ವಿವಿಧ ಸ್ಟಾಪ್‌ಗಳಲ್ಲಿ ಬಸ್‌ಗಾಗಿ ಕಾದು ನಿಂತಿರುವವರನ್ನು ಹತ್ತಿಸದೆ ಬಸ್‌ಗಳು ಸಂಚರಿಸುತ್ತವೆ. …

ಮಂಜೇಶ್ವರ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭ

ಮಂಜೇಶ್ವರ: ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಎರಡೂ ದಿಕ್ಕುಗಳಿಗೆ ದಾಟಲು ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸ ಲಾಗುತ್ತಿರುವ ಪಾದಾಚಾರಿ ಮೇಲ್ಸೇ ತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿತು.ಕೆಲವರು ಮಂದಿ ರೈಲು ನಿಲ್ದಾಣದ ಸಮೀಪ ಫ್ಲೈಓವರ್ ಬೇ ಕೆಂಬ ಬೇಡಿಕೆ ಇಟ್ಟಿದ್ದರೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರಿನವರು ಬೇಡಿಕೆ ಇಟ್ಟಿದ್ದ ಸ್ಥಳದಲ್ಲೇ ಇದೀಗ ಕಾಮಗಾರಿ ಆರಂಭಗೊAಡಿರುವುದನ್ನು ಹೋರಾಟ ಕ್ರಿಯಾ ಸಮಿತಿ ಹಾಗೂ ಊರವರು ಸ್ವಾಗತಿಸಿದ್ದಾರೆ.ಈ ಪಾದಾಚಾರಿ ಮೇಲ್ಸೇತುವೆ ನಿರ್ಮಾಣದಿಂದಾಗಿ ಜಂಕ್ಷನಿನಲ್ಲಿ ಇರುವ ವಾಹನ ದಟ್ಟನೆ ಸಮಸ್ಯೆ …

ಕಾಂಗ್ರೆಸ್‌ನಿಂದ ನಾಳೆ ವಿವಿಧ ಕಡೆಗಳಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ

ಕಾಸರಗೋಡು: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ೩೧ನೇ ಹುತಾತ್ಮ ದಿನಾಚರಣೆಯಾದ ನಾಳೆ ಬೆಳಿಗ್ಗೆ 8 ಗಂಟೆಗೆ ಬೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ 8.30ಕ್ಕೆ ಮಂಡಲ ಸಮಿತಿಗಳ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಯಲಿದೆ. 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ಪುಷ್ಪಾರ್ಚನೆ, ಸಂಸ್ಮರಣೆ ಸಮ್ಮೇಳನ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಡಾ. ಎ.ಎಂ. ಶ್ರೀಧರನ್ ಸಂಸ್ಮರಣೆ ನಡೆಸುವರು. ಸಂಜೆ ೩ ಗಂಟೆಗೆ  ಬ್ಲೋಕ್ ಕಾಂಗ್ರೆಸ್ ಸಮಿತಿಗಳ ನೇತೃದ್ವದಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ ಸಮ್ಮೇಳನ, …

ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸನ್ ನಿಧನ

ಚೆನ್ನೈ: ಭಾರತದ ಪರಮಾಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಮತ್ತು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಎಂ.ಆರ್. ಶ್ರೀನಿವಾಸನ್ (95) ಇಂದು ನೀಲಗಿರಿಯಲ್ಲಿ ನಿಧನ ಹೊಂದಿದರು. ಅವರು ವೈಜ್ಞಾನಿಕ ನಾಯಕತ್ವ, ತಾಂತ್ರಿಕ ಆವಿಷ್ಕಾರ ಮತ್ತು ಸಾರ್ವಜನಿಕ ಸೇವೆಯ ಅಸಾಧಾರಣ ಪರಂಪರೆಯನ್ನು ಬಿಟ್ಟು ಹೋಗಿದ್ದರು. ದೇಶದ ಪರಮಾಣು ಶಕ್ತಿಗಳ ಸ್ಥಾಪಕ ವಾಸ್ತುಶಿಲ್ಪಿ ಎಂದೇ ಇವರು ಖ್ಯಾತಿ ಹೊಂದಿದ್ದರು.

ಎಡರಂಗ ಸರಕಾರದ ವಾರ್ಷಿಕಾಚರಣೆ : ಐಕ್ಯರಂಗದಿಂದ ಕಪ್ಪು ದಿನಾಚರಣೆ; ಡಂಗುರಜಾಥಾ

ಮಧೂರು: ಆರ್ಥಿಕ ಸಂಧಿಗ್ದತೆಯ ಸಮಯದಲ್ಲಿ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕಾಚರಣೆಗಾಗಿ ಖಜಾನೆಯ ಹಣವನ್ನು ಪೋಲು ಮಾಡುತ್ತಿದೆಯೆಂದು ಆರೋಪಿಸಿ ಇಂದು ನಡೆಯಲಿರುವ ಐಕ್ಯರಂಗದ ಕಪ್ಪು ದಿನಾಚರಣೆ ಯಶಸ್ವಿಗೊಳಿಸಲು ಯುಡಿಎಫ್ ಮಧೂರು ಪಂ. ಸಮಿತಿ ಡಂಗುರ ಜಾಥಾ ನಡೆಸಿತು. ಜಾಥಾಕ್ಕೆ ಪಂ. ಸಮಿತಿ ಅಧ್ಯಕ್ಷ ಹಾರಿಸ್ ಸೂರ್ಲು, ಸಂಚಾಲಕ ಸುಮಿತ್ರನ್ ಪಿ.ಎ, ಮಜೀರ್ ಪಟ್ಲ ಸಹಿತ ಹಲವು ಮುಖಂಡರು ನೇತೃತ್ವ ನೀಡಿದರು.

ರಾಜ್ಯದ ಪ್ರಥಮ ಜರ್ನಲಿಸ್ಟ್ ಹಗ್ಗಜಗ್ಗಾಟ ಚಾಂಪಿಯನ್‌ಶಿಪ್ ನಾಳೆ

ಕಾಸರಗೋಡು: ಕಾಸರಗೋಡು ಪ್ರೆಸ್ ಕ್ಲಬ್ ಹಾಗೂ ಬೋಬಿ ಇಂಟರ್ ನ್ಯಾಷನಲ್ ಗ್ರೂಪ್‌ನ ಜಂಟಿ ಆಶ್ರಯದಲ್ಲಿ ರಾಜ್ಯದಲ್ಲಿ ಇದೇ ಪ್ರಥಮವಾಗಿ ನಡೆಯುವ ರಾಜ್ಯ ಮಟ್ಟದ ಜರ್ನಲಿಸ್ಟ್ (ಪತ್ರಕರ್ತ) ಹಗ್ಗ- ಜಗ್ಗಾಟ ಚಾಂಪಿಯನ್ ಶಿಪ್ ಸ್ಪರ್ಧೆ ನಾಳೆ ಕಾಸರಗೋಡು ಪ್ರೆಸ್‌ಕ್ಲಬ್ ಬಳಿಯಲ್ಲೇ ವಿಶೇಷವಾಗಿ ಸಿದ್ಧಪಡಿಸಲಾದ ವೆಲ್ ಫಿಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಳೆ ಸಂಜೆ ೫ ಗಂಟೆಗೆ ಈ ಟೂರ್ನಿ ಆರಂಭಗೊಳ್ಳಲಿದೆ. ಮೊದಲು ರಾಜ್ಯದ ಪ್ರೆಸ್‌ಕ್ಲಬ್‌ಗಳು ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಸಂಘಟನೆ  (ಕೆಯುಡಬ್ಲ್ಯುಜೆ) ನಡುವೆ ಸ್ಪರ್ಧೆ ನಡೆಯಲಿದೆ. ಬಳಿಕ ಕಾಸರಗೋಡು …

ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮಧೂರು ಘಟಕ ಸಭೆ

ಮಧೂರು: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಧೂರು ಘಟಕದ ಸಭೆ ಮೀಪುಗುರಿ ತರವಾಡಿನಲ್ಲಿ ಜರಗಿತು. ಸಭೆಯಲ್ಲಿ ರತ್ನಾಕರ ಮನ್ನಿಪ್ಪಾಡಿ, ತನಿಯಪ್ಪ ಇವರಿಗೆ ಚಿಕಿತ್ಸಾ ಧನ ಸಹಾಯವನ್ನು ಕಾಳ್ಯಂಗಾಡು ಮೂಕಾಂಬಿಕಾ ಕ್ಷೇತ್ರ ಆಡಳಿತ ಮೊಕ್ತೆಸರ ಅಚ್ಚುತ ಪೂಜಾರಿ ಹಾಗು ಅಂತಾರಾಷ್ತ್ರೀಯ ಕಬ್ಬಡಿ ಪಟು ಜಗದೀಶ ಕುಂಬಳೆ ವಿತರಿಸಿದರು. ಕೇರಳ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಆಫಿಸರ್ ಹಾಗಿ ಉದ್ಯೋಗ ದೊರಕಿದ ಭಗವತಿ ನಗರದ ಉಮೇಶ್- ಜಲಜಾಕ್ಷಿ ದಂಪತಿ ಪುತ್ರಿ ಸ್ವಾತಿಯನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. …

ಜಾತಿ ಸೆನ್ಸಸ್ ಜ್ಯಾರಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನ ಸ್ವಾಗತಾರ್ಹ-ಎಸ್‌ಎನ್‌ಡಿಪಿ

ಹೊಸಂಗಡಿ: ಜಾತಿ ಸೆನ್ಸಸ್ ಜಾರಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನವನ್ನು ಎಸ್‌ಎನ್‌ಡಿಪಿ  ಯೋಗಂ ಮಂಜೇಶ್ವರ ಶಾಖಾ ವಾರ್ಷಿಕ ಸಭೆಯಲ್ಲಿ ಸ್ವಾಗತಿಸಲಾ ಯಿತು. ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾರಾಯಣನ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.  ಕಾಶ್ಮೀರದಲ್ಲಿ ವೀರಮೃತ್ಯು ಪಡೆದ ಸೈನಿಕರು ಹಾಗೂ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಆಕ್ರಮಣದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ  ಅರ್ಪಿಸ ಲಾಯಿತು. ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಾರ್ಯ ದರ್ಶಿ ಗಣೇಶ್ ಪಾರಕಟ್ಟೆ ಉದ್ಘಾಟಿಸಿದರು. ತೀಯಾ ಸಮುದಾಯವು ಪಕ್ಷಾತೀತ ವಾಗಿ ಒಗ್ಗಟ್ಟಾಗಿ ನಿಂತು ಸಮುದಾಯದ ಹಕ್ಕುಗಳನ್ನು ಪಡೆಯಲು …