ವಿವಿಧೆಡೆಗಳಿಂದ ಹೊಗೆಸೊಪ್ಪು ಉತ್ಪನ್ನ ಸಹಿತ 3 ಮಂದಿ ಸೆರೆ

ಮಂಜೇಶ್ವರ: ಮಂಜೇಶ್ವರ ಪೊಲೀಸರು ಗಸ್ತು ನಡೆಸುತ್ತಿರುವ ವೇಳೆ ಮಾರಾಟಕ್ಕಾಗಿ ಕೈವಶವಿರಿಸಿದ ಹೊಗೆಸೊಪ್ಪುಉತ್ಪನ್ನ ಸಹಿತ ಮೂರು ಮಂದಿಯನ್ನು ವಿವಿಧೆಡೆಯಿಂದ ಸೆರೆಹಿಡಿದಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಮಜೀರ್ ಪಳ್ಳ ಬಸ್‌ನಿಲ್ದಾಣ ಪರಿಸರದಿಂದ 48 ಪ್ಯಾಕೆಟ್ ಸಹಿತ ಕೊಡ್ಲಮೊಗರು ಅಸನ ಬೈಲ್ ನಿವಾಸಿ ಅಹಮ್ಮದ್ ನಜೀಬ್ (22), ಸಂಜೆ 7ಗಂಟೆಗೆ ಆನೆಕಲ್ಲು ಬಸ್ ನಿಲ್ದಾಣ ಪರಿಸರದಿಂದ 28 ಪ್ಯಾಕೆಟ್ ಸಹಿತ ರಾಜಸ್ಥಾನ ನಿವಾಸಿ ಮಂಗಳೂರಿನಲ್ಲಿ ವಾಸವಾಗಿರುವ ಜಿತೇಂದ್ರ ಸಿಂಗ್ (28), ರಾತ್ರಿ 9ಗಂಟೆಗೆ ವರ್ಕಾಡಿ ಸುಂಕದಕಟ್ಟೆ ಬಸ್ ನಿಲ್ದಾಣ ಬಳಿಯಿಂದ …

ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ವಿರುದ್ಧ  ಸ್ಕ್ವಾಡ್‌ನಿಂದ ದಂಡ ವಸೂಲಿ

ಕಾಸರಗೋಡು:  ನಗರಸಭೆ ವ್ಯಾಪ್ತಿಯ ಕೋಟೆಕಣಿ ರಸ್ತೆಬದಿಯ ದ್ವಿ ಮಹಡಿ ಕಟ್ಟಡದಿಂದಿರುವ ಜೈವಿಕ-ಅಜೈವಿಕ ತ್ಯಾಜ್ಯವನ್ನು ಕಟ್ಟಡದ ಹಿಂಬದಿಯಲ್ಲಿ ರಾಶಿ ಹಾಕಿ ಪರಿಸರ ಹಾನಿಗೊಳಿಸಿರುವುದಕ್ಕೆ ಕಟ್ಟಡ ಮಾಲಕನಿಗೆ 5 ಸಾವಿರ ರೂ . ದಂಡ ಹೇರಲಾಯಿತು. ಕಾಂಪ್ಲೆಕ್ಸ್‌ನ ಒಳಗಿರುವ ಇಲೆಕ್ಟ್ರಿಕಲ್ಸ್, ಸ್ಟೋರ್ ಎಂಬೀ ಸಂಸ್ಥೆಗಳ ಮಾಲಕರಿಗೂ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಉಪೇಕ್ಷಿಸಿರುವುದಕ್ಕೆ ೫ ಸಾವಿರ ರೂ.ನಂತೆ ದಂಡ ಹಾಕಲಾಗಿದೆ. ವಿದ್ಯಾನಗರದ ಗೂಡಂಗಡಿಯಿಂದಿ ರುವ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ ಮಾಲಕನಿಂದ ೩ ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.  ತಪಾಸಣೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ …

ಜನಪ್ರತಿನಿಧಿಗಳು ಕರಾವಳಿ ಪ್ರದೇಶದ ಜನರನ್ನು ನಿರ್ಲಕ್ಷಿಸುವುದು ನಿಲ್ಲಿಸಬೇಕು: ಇಲ್ಲದಿದ್ದರೆ ತೀವ್ರ ಹೋರಾಟ- ಕೇರಳ ಮತ್ಸ್ಯ ಪ್ರವರ್ತಕ ಸಂಘ

ಉಪ್ಪಳ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಮಂಗಲ್ಪಾಡಿ ಪಂಚಾಯತ್‌ನ ವ್ಯಾಪ್ತಿಯ ಶಾರದಾ ನಗರ, ಹನುಮಾನ್ ನಗರ ಮತ್ತು ಶಿವಾಜಿ ನಗರದ ಕಡಲೆÆ್ಕರೆತ ಪ್ರದೇಶಗಳಿಗೆ ಕೇರಳ ಮಲ್ಸ ್ಯ ಪ್ರವರ್ತಕ ಸಂಘ ನೇತಾರರು ಭೇಟಿ ನೀಡಿದರು. ತೀವ್ರವಾದ ಕಡಲÉÆ್ಕರೆತ ಇದ್ದರೂ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕ, ಕಾಸರಗೋಡು ಸಂಸದ ಸ್ಥಳಕ್ಕೆ ಭೇಟಿ ನೀಡದಿ ರುವುದು ಅತ್ಯಂತ ದೊಡ್ಡ ನಾಚಿಕೆ ಗೇಡು ಎಂದು ಅವರು ಆರೋಪಿ ಸಿದರು. ಜನ ಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಲ್ಲಿನ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಚಿತ್ರವಾ …

ಬಿಎಂಎಸ್ ಮುಳಿಯಾರು ಪಂ. ಸಮಿತಿ ಕುಟುಂಬ ಸಂಗಮ

ಮುಳಿಯಾರು: ಬಿಎಂಎಸ್ ಮುಳಿಯಾರು ಪಂಚಾಯತ್ ಸಮಿತಿ ಕುಟುಂಬ ಸಂಗಮವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯ ಉದ್ಘಾಟಿಸಿದರು. ಬಿಎಂಎಸ್ ಮುಳಿಯಾರು  ಪಂ. ಸಮಿತಿ ಅಧ್ಯಕ್ಷ ವೇಣುಗೋಪಾಲನ್ ಅಮ್ಮಂ ಗೋಡು ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯ ವಲಯ ಅಧ್ಯಕ್ಷ ಆನಂದ ಸಿ.ಎಚ್, ಪಂಚಾಯತ್ ಪ್ರಭಾರಿ ವಿನು ಮುಳ್ಳೇರಿಯ ಶುಭ ಕೋರಿದರು. ಪಂ. ಕಾರ್ಯದರ್ಶಿ ಪ್ರಕಾಶನ್ ಪಾತನಡ್ಕ ಸ್ವಾಗತಿಸಿ, ನಳಿನಾಕ್ಷನ್ ಚಿಪ್ಲಿಕಯ ವಂದಿಸಿ ದರು. ಗೋಪಾಲನ್ ಕಾನತ್ತೂರು ಮಜ್ದೂರ್ ಗೀತೆ ಹಾಡಿದರು. ಹಿರಿಯ ನಾಗರಿಕರನ್ನು ಪ್ಲಸ್ ಟು ಎಸ್‌ಎಸ್‌ಎಲ್‌ಸಿಗಳಲ್ಲಿ ಉನ್ನತ ಅಂಕ …

ಕೊಲ್ಲಂನಲ್ಲಿ ಪತಿ ಇರಿದು ಕೊಲೆಗೈದ ಯುವತಿಯ ಮೃತದೇಹ ಬಂದಡ್ಕಕ್ಕೆ ತಲುಪಿಸಿ ಅಂತ್ಯಕ್ರಿಯೆ

ಕಾಸರಗೋಡು: ಕೊಲ್ಲಂ ಕಲ್ಲುವಾದುಕ್ಕಲ್‌ನಲ್ಲಿ ಪತಿಯಿಂದ ಹತ್ಯೆಗೀಡಾದ ಯುವತಿಯ ಮೃತದೇಹವನ್ನು ಬಂದಡ್ಕದ ಮನೆಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ರತಿ ಅಲಿಯಾಸ್ ರೇವತಿ (39)ರ ಮೃತದೇಹವನ್ನು ಇಂದು ಬೆಳಿಗ್ಗೆ ಬಂದಡ್ಕ ಪೇಟೆ ಸಮೀಪದ ಮನೆಗೆ ತರಲಾಗಿದೆ. ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತರುವಾಗ ಈಕೆಯ ಮಕ್ಕಳಾದ ಜೆ. ಬಿಜಿನ್, ಆರ್. ಎಜಿನ್ ಜೊತೆಗಿದ್ದರು. ಗುರುವಾರ ರಾತ್ರಿ 11 ಗಂಟೆ ವೇಳೆ ರತಿ ರಲ್ಲುವಾದುಕ್ಕಲ್ ತಾನಿಮುಖ್ ಸಮೀಪದ ಶಾನವಾಸ್ ಮಂಜಿಲ್‌ನಲ್ಲಿ ಕೊಲೆಗೀಡಾಗಿದ್ದರು. ಆ ಮನೆಯ ಮಾಲಕನಿಗೆ ಶುಶ್ರೂಷೆ ನೀಡಲು ರತಿ …

ಕಾರುಗಳಲ್ಲಿ ಸಾಗಿಸುತ್ತಿದ್ದ 123 ಕಿಲೋ ಗಾಂಜಾ ವಶ: ದೇಲಂಪಾಡಿ ನಿವಾಸಿಗಳಾದ ಮೂವರ ಸೆರೆ

ಕಾಸರಗೋಡು: ಆಂಧ್ರಪ್ರದೇಶ ದಿಂದ  ಕಾರುಗಳಲ್ಲಿ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದ 123 ಕಿಲೋ ಗಾಂಜಾವನ್ನು ಕರ್ನಾಟಕ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ದೇಲಂಪಾಡಿ ನಿವಾಸಿಗಳಾದ ಮೂವರನ್ನು ಬಂಧಿಸಿದ್ದಾರೆ. ದೇಲಂಪಾಡಿ  ಅಡೂರು ಉರ್ಡೂರಿನ ಎಂ.ಕೆ. ಮಸೂದ್ (45), ದೇಲಂಪಾಡಿ ಚಂದಮೂ ಲೆಯ ಮುಹಮ್ಮದ್ ಆಶಿಕ್ (24), ದೇಲಂಪಾಡಿಯ ಸುಬೈರ್ (30) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಮೊನ್ನೆ ಸಂಜೆ   ಮೂಡಬಿದ್ರೆ ಸಮೀಪದ ಕಾಂತಾವರದಲ್ಲಿ ಮಂಗಳೂರು ಸಿಟಿ ಕ್ರೈಂ ಬ್ರಾಂಚ್ ನಡೆಸಿದ ವಾಹನ ತಪಾಸಣೆ ವೇಳೆ  ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ.   ಪೊಲೀಸರು  …

ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ಬೈಗುಳ, ಕೊಲೆ ಬೆದರಿಕೆ: ಮಂಜೇಶ್ವರ ಠಾಣೆಯಲ್ಲಿ 2 ಕೇಸು ದಾಖಲು

ವರ್ಕಾಡಿ: ಕುಟುಂಬಶ್ರೀ ಸಾಲಕ್ಕೆ ಸಂಬಂಧಿಸಿದ ವಿವಾದದಲ್ಲಿ  ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ಸಿಡಿಎಸ್ ಚೆಯರ್ ಪರ್ಸನ್ ಹಾಗೂ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆ ಅಸಭ್ಯ ಬೈಗುಳ, ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿದ್ದಾರೆ. ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ನಿನ್ನೆ ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿದೆ. ಸಿಡಿಎಸ್ ಚೆಯರ್ ಪರ್ಸನ್ ವಿಜಯಲಕ್ಷ್ಮಿಯ ದೂರಿನಂತೆ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಾವೂರಿನ ರಾಜ್‌ಕುಮಾರ್ ಶೆಟ್ಟಿ, ರಕ್ಷಣ್ ಅಡೆಕಳ, ಭಾಸ್ಕರ …

ಮುಟ್ಟತ್ತೋಡಿ ನಿವಾಸಿ ನಾಪತ್ತೆ-ದೂರು

ಮಂಜೇಶ್ವರ: ಕಾಸರಗೋಡು ನಾಯಮ್ಮಾರಮೂಲೆ ಬಳಿಯ ಮುಟ್ಟತ್ತೋಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮೊಹಮ್ಮದ್ ಅನೀಫ್ (42) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೊಹ ಮ್ಮದ್ ಅನೀಫ್‌ರ ಸಹೋದರಿ ಸಣ್ಣಡ್ಕ ನಿವಾಸಿ ಅಪ್ಸ ಅಬೂಬಕರ್ ನೀಡಿದ ದೂರಿನಂತೆ  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಮೊಹಮ್ಮದ್ ಅನೀಫ್ ಸಹೋದರಿ ಅಪ್ಸ ಅಬೂಬಕರ್‌ರ ಮನೆಗೆ ಇತ್ತೀಚೆಗೆ ಬಂದಿದ್ದು, ಬಳಿಕ ಜುಲೈ 31ರಂದು ಮಂಗಳೂರಿನಲ್ಲಿ ಕೆಲಸಕ್ಕೆಂದು ತೆರಳಿದ್ದಾರೆ.  ಆದರೆ ಅನಂತರ ಅವರು ನಾಪತ್ತೆಯಾಗಿದ್ದು, ವಿವಿಧೆಡೆ  ಹುಡುಕಾಡಿದರೂ ಪತ್ತೆಹಚ್ಚಲಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ನಕಲಿ ಚಿನ್ನಾಭರಣ ಅಡವಿರಿಸಿ ವಂಚನೆ ಯತ್ನ: ಇಬ್ಬರು ಸೆರೆ

ಕಾಸರಗೋಡು: ತೃಕರಿಪುರದಲ್ಲಿ ನಕಲಿ ಚಿನ್ನಾಭರಣವನ್ನು ಅಡವಿಟ್ಟು ಹಣ ಪಡೆಯಲು ಯತ್ನ ನಡೆದಿದೆ. ಈ ಘಟನೆಯಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ತೃಕರಿಪುರ ಆಯಿಟ್ಟಿ ನಿವಾಸಿ ಜಾಫರ್‌ಖಾನ್, ಆಯಿಟ್ಟಿ ಹೌಸ್‌ನ ಮುನಿರುದ್ದೀನ್ ಎಂಬಿವರನ್ನು ಚಂದೇರ ಎಸ್‌ಐ ವಿ. ಜಿಯೋಸದಾನಂದನ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.  ನಿನ್ನೆ ಸಂಜೆ ತೃಕರಿಪುರ ಫಾರ್ಮರ್ಸ್ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ. ಬ್ಯಾಂಕ್‌ನ ವ್ಯವಹಾರ ಸಮಯ ಕೊನೆಗೊಳ್ಳುವುದಕ್ಕಿಂತ ಸ್ವಲ್ಪ ಮುಂಚೆ ತಲುಪಿದ ಆರೋಪಿಗಳು 24.900 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡವಿರಿಸಲು ಯತ್ನಿಸಿದ್ದರು. ಬ್ಯಾಂಕ್ ಎಂಡಿ ನೋರ್ತ್ ತೃಕರಿಪುರ, …

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರ್ಥಿಕ ವಂಚನೆ ನಡೆಸಿದ ಯುವತಿ ಸೆರೆ

ಕಾಸರಗೋಡು: ಆರ್ಥಿಕ ವಂಚನೆ ಪ್ರಕರಣದಲ್ಲಿ ನ್ಯಾಯಾಲ ಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಯುವತಿಯನ್ನು ಪೊಲೀ ಸರು ಬಂಧಿಸಿದ್ದಾರೆ. ಕೋಟಯಂ ಐಮಾನಂ ಅಂಬಾಡಿಕವಳ ನಿವಾಸಿ ವೃಂದಾ ರಾಜೇಶ್‌ಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಇವಳ ವಿರುದ್ಧ ಅಂಬಲತ್ತರ ಠಾಣೆಯಲ್ಲಿ 49 ಪ್ರಕರಣಗಳು ಜ್ಯಾರಿಯಲ್ಲಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳಲ್ಲಿ 100ರಷ್ಟು ಪ್ರಕರಣಗಳು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಯ್ಯನ್ನೂರಿನಲ್ಲಿ ಅಡಗಿ ವಾಸಿಸುತ್ತಿದ್ದ ಈಕೆಯನ್ನು ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಸಿಖ್‌ಟೆಕ್ ಎಂಬ ಹೆಸರಲ್ಲಿ ಚಿಟ್ಟಿ ಕಂಪೆನಿ …