ಗುರಿಯನ್ನು ತಲುಪಲು ಶ್ರೇಷ್ಠವಾದ ಪ್ರಯತ್ನ ಅಗತ್ಯ-ಮಾಜಿ ಸೈನಿಕ ಅಚಲ ಎಂ.ಜಿ: ಮುಳ್ಳೇರಿಯ ಮಂಡಲದ ಜೀವನಬೋಧ ಶಿಬಿರ ಉದ್ಘಾಟನೆ
ಬದಿಯಡ್ಕ: ಸೇನೆಯಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಬ್ಬನಿಗೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಒಂದು ತಂಡದ ವ್ಯವಸ್ಥೆ ಇನ್ನೊಂ ದು ತಂಡಕ್ಕೆ ಗೊತ್ತಿರುವುದಿಲ್ಲ. ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ. ನಿರ್ಧಿಷ್ಟವಾದ ಗುರಿಯನ್ನು ತಲುಪಲು ನಮ್ಮ ಶ್ರೇಷ್ಠ ಪ್ರಯತ್ನ ಇರಬೇಕು ಎಂದು ಮಾಜಿ ಸೈನಿಕ ಹವಾಲ್ದಾರ್ ಅಚಲ ಎಂ.ಜಿ ಪುತ್ರಕಳ ಹೇಳಿದರು. ಶ್ರೀ ರಾಮ ಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಿನ್ನೆ ಆರಂಭವಾದ ಎರಡು ದಿನಗಳ ಜೀವನಬೋಧ ಶಿಬಿರವನ್ನು …