ತಂದೆಯನ್ನು ಕಡಿದು ಕೊಂದ ಪುತ್ರ

ವಯನಾಡ್: ತಂದೆಯನ್ನು ಮಗನೋರ್ವ ಕಡಿದು ಕೊಲೆಗೈದ ಘಟನೆ ವಯನಾಡ್ ಬಳಿ ನಡೆದಿದೆ. ವಯನಾಡ್ ಎಡವಕ ಡನ್ನಲಾಬ್‌ಕುನ್ನು ಮಲೇಕುಡಿಯರ ಬೇಬಿ (65) ಎಂಬವರು ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಪುತ್ರ ರೋಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಇಂದು ಮುಂಜಾನೆ 1 ಗಂಟೆ ವೇಳೆ ಈ ಕೊಲೆ ಕೃತ್ಯ ನಡೆದಿದೆ. ನಿನ್ನೆ ರಾತ್ರಿಯಿಂದಲೇ ಮನೆಯಲ್ಲಿ ತಂದೆ, ಮಗನ ಮಧ್ಯೆ ಜಗಳ ಆರಂಭಗೊಂಡಿತ್ತೆನ್ನಲಾಗಿದೆ. ಈ ಮಧ್ಯೆ ಮಗ ತಂದೆಗೆ ಕಡಿದು ಗಾಯಗೊಳಿಸಿದ್ದನು. ಎದೆಗೆ ಆಳವಾದ ಗಾಯವುಂಟಾದ ಬೇಬಿಯನ್ನು ಮಾನಂತವಾಡಿ ಮೆಡಿಕಲ್ ಕಾಲೇಜು …

ಮೊಳಗಿತು ಸೈರನ್‌ಗಳು: ಜಿಲ್ಲೆಯ ಮೂರು ಕಡೆಗಳಲ್ಲಿ ಆಪರೇಶನ್ ಅಭ್ಯಾಸ್ ಅಣಕು ಕವಾಯತು

ಕಾಸರಗೋಡು: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಭಾರತೀಯ ಸೇನಾ ಪಡೆ ಆಪರೇಷನ್ ಸಿಂಧೂರ್ ಎಂಬ ಹೆಸರಲ್ಲಿ ನಿನ್ನೆ ನಸುಕಿನ ಜಾವ ಕ್ಷಿಪಣಿ ದಾಳಿ ನಡೆಸಿ ಅದು ಇಡೀ ವಿಶ್ವವನ್ನೇ ಚಕಿತಗೊಳಿಸಿದ ಬೆನ್ನಲ್ಲೇ  ದೇಶದ ೩೦೦ ಕಡೆಗಳಲ್ಲಿ ಆಪರೇಶ್  ಅಭ್ಯಾಸ್ ಎಂಬ ಹೆಸರಲ್ಲಿ ನಿನ್ನೆ ಸಂಜೆ ನಡೆದ ಅಣಕು ಕವಾಯತಿನಂಗವಾಗಿ ಕಾಸರಗೋಡು ಜಿಲ್ಲೆಯ  ಮೂರು ಕಡೆಗಳಲ್ಲಿ ಇಂತಹ   ನಾಗರಿಕರ ಸುರಕ್ಷಾ ತಾಲೀಮು ನಡೆಸಲಾಯಿತು.  ಅರ್ಧ ಗಂಟೆ ತನಕ ಈ ಸುರಕ್ಷಾ ತಾಲೀಮು ಮುಂದುವರಿ ಯಿತು. ಕಾಸರಗೋಡು ಸಿವಿಲ್ ಸ್ಟೇಶನ್ ಸಮುಚ್ಛಯದಲ್ಲಿರುವ …

ಓಣಂ, ಕ್ರಿಸ್‌ಮಸ್ ಪರೀಕ್ಷೆ ಬೇಡ : ಪ್ರತಿ ತಿಂಗಳ ಪರೀಕ್ಷೆಗೆ ತಜ್ಞಸಮಿತಿ ನಿರ್ದೇಶ

ತಿರುವನಂತಪುರ: ಶಿಕ್ಷಣ ಕ್ಯಾಲೆಂಡರ್ ಪರಿಷ್ಕರಣೆ ತಜ್ಞ ಸಮಿತಿಯ ಶಿಫಾರಸು ಅಂಗೀಕರಿಸಿದರೆ ಶಾಲೆಗಳಲ್ಲಿ ಇನ್ನು ಎಲ್ಲಾ ತಿಂಗಳೂ ಕ್ಲಾಸ್ ಪರೀಕ್ಷೆ ಉಂಟಾಗಲಿದೆ. ಓಣಂ ಹಬ್ಬದ ವೇಳೆ ಕಾಲು ವಾರ್ಷಿಕ ಪರೀಕ್ಷೆ, ಕ್ರಿಸ್‌ಮಸ್ ವೇಳೆ ಅರ್ಧ ವಾರ್ಷಿಕ ಪರೀಕ್ಷೆ, ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ ಎಂಬೀ ರೀತಿಯ ಮೂರು ಪರೀಕ್ಷೆಗಳು ಪ್ರಸ್ತುತ ಇದೆ. ಇದಕ್ಕೆ ಬದಲಾಗಿ ಅಕ್ಟೋಬರ್‌ನಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ಹಾಗೂ ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ ಎಂಬೀ ರೀತಿಯಲ್ಲಿ ಎರಡು ಪರೀಕ್ಷೆಗೆ ಸೀಮಿತಗೊಳಿಸಲು ಶಿಫಾರಸು ಮಾಡಲಾಗಿದೆ. ಪರೀಕ್ಷೆ ಸಂದರ್ಭದಲ್ಲಿ ತರಗತಿಗಳು …

ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ನೂತನ ಪ್ರಧಾನ ಮಹಾದ್ವಾರ ಲೋಕಾರ್ಪಣೆ

ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದಲ್ಲಿ ಸುಮಾರು 11 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನವಾಗಿ ನಿರ್ಮಿಸಿದ ಪ್ರಧಾನ ಮಹಾದ್ವಾರದ ಉದ್ಘಾಟನೆ ಹಾಗೂ ಕಾಣಿಕೆ ಡಬ್ಬಿ ಮತ್ತು ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಿನ್ನೆ ಬೆಳಗ್ಗೆ ನಡೆಯಿತು. ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ದೀಪ ಬೆಳಗಿಸಿದರು. ಕೇರಳ ಮಲಬಾರ್ ದೇವಸ್ವಂ ಮಂಡಳಿಯ ಆಯುಕ್ತÀ ಟಿ.ಸಿ. ಬಿಜು ಉದ್ಘಾಟಿಸಿದರು. ಈ ವೇಳೆ ಕ್ಷೇತ್ರದ ಅರ್ಚಕರು, ಆಚಾರ ಪಟ್ಟವರು, ಗುರಿಕಾರರು ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು. ಬಳಿಕ …

ರಾಷ್ಟ್ರಪತಿ ಶಬರಿಮಲೆ ದರ್ಶನ: ಪಂಪಾದಿಂದ ಸನ್ನಿಧಾನಕ್ಕೆ ಎರಡು ದಾರಿಗಳ ಸಿದ್ಧತೆ

ಪತ್ತನಂತಿಟ್ಟ: ರಾಷ್ಟ್ರಪತಿ ದ್ರೌಪದಿ ಮುರ್ಮು ಈ ತಿಂಗಳ ೧೮ರಂದು ಶಬರಿಮಲೆ ಕ್ಷೇತ್ರ ದರ್ಶನ ನಡೆಸುವರು. ಅವರಿಗೆ ಪಂಪಾದಿಂದ ಮಲೆಯೇರಲು ಪರಂಪರಾಗತ ದಾರಿ ಹಾಗೂ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ಸಿದ್ಧತೆ ನಡೆಸಲಾಗುವುದು. ಹವಾಮಾನ ಹಾಗೂ ವಿಶ್ರಾಂತಿ ಸೌಕರ್ಯವನ್ನು ಪರಿಗಣಿಸಿ ಪರಂಪರಾಗತ ದಾರಿ ಮೂಲಕ ಮಲೆ ಮೆಟ್ಟುವುದು ಸೂಕ್ತವೆಂದು ರಾಷ್ಟ್ರಪತಿಯವರ ಭದ್ರತೆ ಹೊಣೆಗಾರಿಕೆಯುಳ್ಳ ಎಸ್.ಪಿ.ಜಿ ತಂಡಕ್ಕೆ ಪೊಲೀಸರು ತಿಳಿಸಿದ್ದಾರೆ. ಅಗತ್ಯ ಸೇವೆಯೆಂಬ ನೆಲೆಯಲ್ಲಿ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಎಮರ್ಜೆನ್ಸಿ ಆಂಬುಲೆನ್ಸ್ ಸೇವೆಯನ್ನೂ ಏರ್ಪಡಿಸಲಾಗುವುದು.  ಯಾವ ದಾರಿ ಮೂಲಕ ರಾಷ್ಟ್ರಪತಿ …

ಚಕ್ರವರ್ತಿ ಹೊಸಂಗಡಿ ವಾರ್ಷಿಕೋತ್ಸವ

ಹೊಸಂಗಡಿ: ಚಕ್ರವರ್ತಿ ಹೊಸಂಗಡಿ ಇದರ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರತಿಷ್ಠಾ ದಿನಾಚರಣೆ ಇತ್ತೀಚೆಗೆ ಜರಗಿತು.ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಭಜನೆ, ತುಪ್ಪಾಭಿಷೇಕ ಹಾಗೂ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಕ್ಲಬ್‌ನ ವಾರ್ಷಿಕೋತ್ಸವ, ಕುಣಿತ ಭಜನೆ, ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಸಭಾ ಕಾರ್ಯಕ್ರಮ, ನಾಟಕ ಪ್ರದರ್ಶನಗೊಂಡಿತು. ಸಭೆಯಲ್ಲಿ  ಕ್ಲಬ್‌ನ ಅಧ್ಯಕ್ಷ ಶಿವಪ್ರಸಾದ್ ಪೆಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ …

ಪಾಕಿಸ್ತಾನದ 9 ಉಗ್ರಾಮಿ ಶಿಬಿರಗಳ ಮೇಲೆ ಸೇನೆಯಿಂದ ಕ್ಷಿಪಣಿ ದಾಳಿ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಪ್ರಿಲ್ 22ರಂದು ಪಾಕ್ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ  ಆಪರೇಶನ್ ಸಿಂಧೂರ್ ಎಂಬ ಹೆಸರಲ್ಲಿ ಭಾರತೀಯ ಸೇನೆ ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ನೆಲೆಗಳಿಗೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ 50 ಉಗ್ರರೂ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.  ಭಾರತೀಯ ಸೇನಾ ಪಡೆ, ನೌಕಾಪಡೆ ಮತ್ತು ವಾಯುಪಡೆಗಳು ಸಂಯುಕ್ತವಾಗಿ ಈ  ದಾಳಿ ನಡೆಸಿದೆ. ಆ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ …

ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಯುವಕನ ಮೃತ್ಯುವಿನಿಂದ ನಾಡಿನಲ್ಲಿ ಶೋಕಸಾಗರ

ಮಂಜೇಶ್ವರ: ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ  ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಐಲ ಮೈದಾನ ಬಳಿಯ ನಿವಾಸಿ ಉಮೇಶ-ಸರಯೂ ಟೀಚರ್ ದಂಪತಿಯ ಪುತ್ರ ಕಲ್ಪೇಶ್ ಉಚ್ಚಿಲ್ (35) ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಲ್ಪೇಶ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ  ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಕರ್ನಾಟಕದ ಕೆ.ಸಿ. ರೋಡ್‌ನಲ್ಲಿ ರುವ ಪೇಪರ್ ಮಿಲ್‌ನಲ್ಲಿ ಇವರು ಉದ್ಯೋಗಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಇವರು ಸ್ಕೂಟರ್‌ನಲ್ಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ …

ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ ಗಾಯ

ಮಂಜೇಶ್ವರ: ಚಲಿಸುತ್ತಿದ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕನೆÆÃರ್ವ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಜಂಕ್ಷನ್‌ನಲ್ಲಿ ರಾತ್ರಿ ನಡೆದಿದೆ. ಕುಂಜತ್ತೂರು ಸನ್ನಡ್ಕ ಪರಿಸರದ ಶಿವರಾಜ್ ಎಂಬವರು ಗಾಯಗೊಂ ಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು-ಕಾಸರ ಗೋಡು ಮಧ್ಯೆ ಸಂಚರಿಸುತ್ತಿರುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಇವರÀÄ ಪ್ರಯಾಣಿಸು ತ್ತಿದ್ದ ಬಸ್ ತೂಮಿನಾಡು ತಲು ಪುತ್ತಿದ್ದಂತೆ ಬಾಗಿಲ ಬಳಿ ನಿಂತಿದ್ದ ಶಿವರಾಜ್ ದಿಡಿsÃರನೆ ರಸ್ತೆಗೆ ಎಸೆ ಯಲ್ಪಟ್ಟಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂ ಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಈ …

ಎಂಡಿಎಂಎ ವಶ : ಇಬ್ಬರ ವಿರುದ್ಧ ಕೇಸು

ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಅಬ್ಬಾಸ್ ಪಿ.ಕೆ.ಯವರ ನೇತೃತ್ವದ ಪೊಲೀಸರ ತಂಡ ಮುಟ್ಟತ್ತೋಡಿ ಪನ್ನಿಪ್ಪಾರೆಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ವಾದ 0.18 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ ಪನ್ನಿಪಾರೆಯ ಹಾಶಿಂ ಎನ್. ಎಂ.(54) ಮತ್ತು ಉಳಿಯತ್ತಡ್ಕ ಪಳ್ಳಂರಸ್ತೆ ಟರ್ಫ್‌ನ ಎದುರುಗಡೆ ನಿವಾಸಿ ಮೊಹಮ್ಮದ್ ಇಬ್ರಾಹಿಂ ಫಿರೋಜ್ (47) ಎಂಬಿಬ್ಬರ ವಿರುದ್ಧ ಕೇಸು ದಾಖಲಿಸಿ ಅವರಿಗೆ ನೋಟೀಸು ಜ್ಯಾರಿಗೊಳಿಸಿ ದ್ದಾರೆ. ಈ ಆರೋಪಿಗಳಲ್ಲೋರ್ವನಾದ ಹಾಶಿಂನ ಮನೆಯಿಂದ ಈ ಮಾಲು ಪತ್ತೆಹಚ್ಚಲಾಗಿದೆ ಎಂದು …