ಪ್ಲಾಂಟೇಶನ್ ಕಾರ್ಪೊರೇಶನ್‌ನ ಸ್ಥಳದಲ್ಲಿ ತ್ಯಾಜ್ಯ ಸುಟ್ಟು, ಮಲಿನ ಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ ಎನ್‌ಪೋರ್ಸ್‌ಮೆಂಟ್‌ನಿಂದ ದಂಡ

ಕಾಸರಗೋಡು: ಪ್ಲಾಂಟೇಶನ್ ಕಾರ್ಪೊರೇಶನ್‌ನ ಮುಳಿಯಾರು ಡಿವಿಶನ್ ಅಧೀನದಲ್ಲಿರುವ ಬಾವಿಕ್ಕರೆ ಎಸ್ಟೇಟ್‌ಗೆ ಅಪಾರ್ಟ್ ಮೆಂಟ್‌ನಿಂದಿರುವ ಮಲಿನ ಜಲವನ್ನು ಹರಿಯ ಬಿಟ್ಟಿರುವುದಕ್ಕೆ, ತ್ಯಾಜ್ಯಗಳನ್ನು ರಾಶಿ ಹಾಕಿ ಸುಟ್ಟಿರುವ ಹಿನ್ನೆಲೆಯಲ್ಲಿ ಮುದಲಪ್ಪಾರೆಯ ಅಪಾರ್ಟ್‌ಮೆಂಟ್ ಮಾಲಕನಿಂದ ೧೫ ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಇದೇ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷಿಸಿದ ವ್ಯಕ್ತಿಯೊಬ್ಬರಿಂದ ೫ ಸಾವಿರ ರೂ.ವನ್ನು ದಂಡವಾಗಿ ವಸೂಲು ಮಾಡಲಾಗಿದೆ. ಜಲಮೂಲಗಳಿಗೆ ವಿವಾಹ ಮನೆ ಗಳಿಂದಿರುವ ಅವಶಿಷ್ಟಗಳನ್ನು ತಂದು ಹಾಕಿರುವುದು, ತ್ಯಾಜ್ಯಗಳನ್ನು ಉರಿಸಿದ ಬಗ್ಗೆ ಲಭಿಸಿದ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ …

ಎಡನಾಡು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ಚಾಲನೆ

ಸೀತಾಂಗೋಳಿ:  ಎಡನಾಡು- ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ನಿನ್ನೆ ಚಾಲನೆ ನೀಡಲಾಗಿದೆ. ಸಹಾಯಕ ರಿಜಿಸ್ಟ್ರಾರ್ ರವೀಂದ್ರ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡ ಮಾಣಿ ಅಧ್ಯಕ್ಷತೆ ವಹಿಸಿದರು. ಮಾಜಿ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜ ಹಳೆಮನೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸರ್ಕಲ್ ಕೋ-ಆಪ ರೇಟಿವ್ ಯೂನಿಯನ್ ನಿರ್ದೇಶಕರಾಗಿ ಆಯ್ಕೆಯಾದ ಬ್ಯಾಂಕ್‌ನ ನಿರ್ದೇಶಕ ಕೃಷ್ಣ ಪ್ರಸಾದ್‌ರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಜಯಂತ ಪಾಟಾಳಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಹರಿಣಿ ಜಿ.ಕೆ. ನಾಯರ್ ಸ್ವಾಗತಿಸಿ, ನಿರ್ದೇಶಕ …

ಬದಿಯಡ್ಕ ರೋಟರಿ ಕನಸಿನ ಮನೆ ಯೋಜನೆಯ ಪಲಾನುಭವಿಗೆ ಚೆಕ್ ವಿತರಣೆ

ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಮೊದಲ ಪಲಾನುಭವಿಗೆ ಮೊತ್ತ ಹಸ್ತಾಂತರಿಸಲಾಯಿತು. ಮಾನ್ಯ ಸಮೀಪ ನಿವಾಸಿಗಳಾದ ಪ್ರೇಮಲತ- ಚನಿಯಪ್ಪ ದಂಪತಿಗೆ ರೋಟರಿ ಬದಿಯಡ್ಕದ ಅಧ್ಯಕ್ಷ ಕೇಶವ ಪಾಟಾಳಿ ಬಿ. ಚೆಕ್ ವಿತರಿಸಿದರು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಇಂಜಿನಿಯರ್ ಗೋವಿಂದ ಎಂ, ರಾಘವೇಂದ್ರ ಅಮ್ಮಣ್ಣಾಯ, ಅರವಿಂದ ಪೈ ಪಾಲ್ಗೊಂಡಿದ್ದರು.

20ರ ಅಖಿಲ ಭಾರತ ಮುಷ್ಕರ: ನೌಕರರ ಸಂಘಟನೆಗಳಿಂದ ತಹಶೀಲ್ದಾರ್‌ರಿಗೆ ನೋಟೀಸ್

ಮಂಜೇಶ್ವರ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಆರೋಪಿಸಿ ಕೇಂದ್ರ ಟ್ರೇಡ್ ಯೂನಿಯನ್‌ಗಳು, ಸ್ವತಂತ್ರ ಫೆಡರೇಶನ್‌ಗಳು, ಸರ್ವೀಸ್ ಸಂಘಟನೆಗಳು ಜಂಟಿಯಾಗಿ ಈ ತಿಂಗಳ ೨೦ರಂದು ನಡೆಸುವ ಅಖಿಲ ಭಾರತ ಕೆಲಸ ಸ್ಥಗಿತ ಮುಷ್ಕರದಂಗವಾಗಿ ಅಧ್ಯಾಪಕರು, ನೌಕರರ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ ಎಂಲಪ್ಲೋಯಿಸ್ ಆಂಡ್ ಟೀಚರ್ಸ್ ನೇತೃತ್ವದಲ್ಲಿ ಮಂಜೇಶ್ವರ ತಾಲೂಕು ತಹಶೀಲ್ದಾರ್‌ರಿಗೆ ಮುಷ್ಕರ ನೋಟೀಸ್ ನೀಡಲಾಯಿತು.  ಈ ಬಗ್ಗೆ ನಡೆಸಿದ ಮೆರವಣಿಗೆಯಲ್ಲಿ ರತೀಶ್ ಪಿ.ಟಿ., ಯು. ಶ್ಯಾಮ್ ಭಟ್, ಎಂ.ಎಸ್. ಜೋಸ್, ಶರೀಫ್ ಪಿ.ಎ., ಎಂ. ಕೃಷ್ಣನ್, …

ಕಾರುಗಳು ಮುಖಾಮುಖಿ: ಯುವಕ ಮೃತ್ಯು; ನಾಲ್ಕು ಮಂದಿಗೆ ಗಾಯ

ಕಾಸರಗೋಡು: ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯಲ್ಲಿ  ಇಂದು ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಗಾಯ ಗೊಂಡಿದ್ದಾರೆ.  ಗಾಯ ಗೊಂಡವರಲ್ಲಿ  ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಉಳಿದ ಇಬ್ಬರನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲ್ಲಿ ದಾಖಲಿಸಲಾಗಿದೆ. ಬೇಕಲ ಮಲಾಂಕುನ್ನು ತಲ್ಲಾಣಿ ನಿವಾಸಿ ಅಶೋಕ್‌ರ  ಪುತ್ರ ಎ. ಅನಂತು (26) ಮೃತಪಟ್ಟವರು.  ಪ್ರಣವ್ (26), ಅಕ್ಷಯ್ (26) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಸೌರವ್ (26), ಅಶ್ವಿನ್ (25) ಎಂಬಿವರನ್ನು ನುಳ್ಳಿಪ್ಪಾಡಿ ಆಸ್ಪತ್ರೆಯಲ್ಲೂ ದಾಖಲಿ ಸಲಾಗಿದೆ. ಕಾಸರಗೋಡಿನಿಂದ …

ಮಾದಕದ್ರವ್ಯ ವಿರುದ್ಧ ಅಭಿಯಾನ, ಕಿಕ್ ಡ್ರಗ್ಸ್: ರಾಜ್ಯ ಮಟ್ಟದ ಯಾತ್ರೆಗೆ ಕ್ರೀಡಾಸಚಿವರಿಂದ ಚಾಲನೆ

ಕಾಸರಗೋಡು: ರಾಜ್ಯ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಮಾದಕದ್ರವ್ಯ ವಿರೋಧಿ ಅಭಿಯಾನವಾದ ಕಿಕ್ ಡ್ರಗ್ಸ್‌ನ  ರಾಜ್ಯ ಮಟ್ಟದ ಉದ್ಘಾಟನೆಯನ್ನು ಕ್ರೀಡಾ ಸಚಿವ ಅಬ್ದುಲ್ ರಹಿಮಾನ್ ಇಂದುಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು. ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಸ್ಪೋಟ್ಸ್ ಕೌನ್ಸಿಲ್ …

ವ್ಯಾಪಾರಿಗೆ ಹಲ್ಲೆ ನಡೆಸಿ ಹಣ, ಮೊಬೈಲ್ ಎಗರಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್ ಫೋನ್ ಎಗರಿಸಿದ ಪ್ರಕರಣದ ಆರೋಪಿಯನ್ನು  ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಶಾಸ್ತಾನಗರದ ಅಮಾನ್ ಸಜಾದ್ (22) ಬಂಧಿತ ಆರೋಪಿ. ವಿದ್ಯಾನಗರದಲ್ಲಿ ಶವರ್ಮ ವ್ಯಾಪಾರ ನಡೆಸುತ್ತಿರುವ ಮೊಯ್ದೀನ್ ರಂಶೀದ್ ಎಂಬವರ ಮೇಲೆ ಎಪ್ರಿಲ್ 22ರಂದು ಹಲ್ಲೆ ನಡೆಸಿ 16,000 ರೂ. ನಗದು ಹಾಗೂ ಮೊಬೈಲ್ ಫೋನ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ಮೇಲ್ನೋಟದಲ್ಲಿ ಡಿವೈಎಸ್ಪಿ …

ಹಲವು ಮಾದಕವಸ್ತು ಪ್ರಕರಣಗಳಲ್ಲಿ ಆರೋಪಿಯಾದ ಪತ್ವಾಡಿ ನಿವಾಸಿ ಬಂಧನ

ಮಂಜೇಶ್ವರ; ಹಲವು ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಯಾದ ಮುಳಿಂಜ ಪತ್ವಾಡಿಯ ಅಸ್ಕರ್ ಅಲಿ (27) ಎಂಬಾತನನ್ನು ಪಿಟ್ ಎನ್‌ಡಿಪಿಎಸ್ ಪ್ರಕಾರ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದಲ್ಲಿ 3.407 ಕಿಲೋ ಗ್ರಾಂ ಎಂಡಿಎಂಎ, 642.65  ಗ್ರಾಂ ಗಾಂಜಾ, 96.96 ಗ್ರಾಂ ಕೊಕೈನ್ ವಶಪಡಿಸಿದ ಪ್ರಕರಣ ಹಾಗೂ ಮೇಲ್ಪರಂಬ ಪೊಲೀಸರು 49.30 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಅಸ್ಕರ್ ಅಲಿ ಮುಖ್ಯ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಕೇರಳ ಹಾಗೂ ಕರ್ನಾಟಕ ಕೇಂದ್ರೀಕರಿಸಿ ಕಾರ್ಯಾಚರಿಸುವ ಮಾದಕ ವಸ್ತು ದಂಧೆಯ ಮುಖ್ಯ …

ಮನೆ ಬಾಡಿಗೆಗೆ ಪಡೆದು ಮಾದಕವಸ್ತು ವ್ಯಾಪಾರ: ಇಬ್ಬರ ಬಂಧನ

ಬದಿಯಡ್ಕ: ಲೈಫ್ ವಸತಿ ಯೋಜನೆ ಪ್ರಕಾರ ಲಭಿಸಿದ ಮನೆಯನ್ನು ಬಾಡಿಗೆಗೆ ಪಡೆದು ಮಾದಕವಸ್ತು ಮಾರಾಟ ನಡೆಸುತ್ತಿದ್ದ ತಂಡದ ಇಬ್ಬರನ್ನು ಬದಿಯಡ್ಕ ಸಿಐ ಕೆ. ಸುಧೀರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲ್‌ನ ಮುಹಮ್ಮದ್ ಆಸಿಫ್ (35), ಚೌಕಿ ಆಜಾದ್‌ನಗರದ ಮುಹಮ್ಮದ್ ಇಕ್ಭಾಲ್ (38) ಎಂಬಿವರನ್ನು ಬಂಧಿಸಲಾಗಿದೆ. ಇವರ ಕೈಯಿಂದ 26.100 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಸರಕಾರ ನೀಡಿದ ಸ್ಥಳದಲ್ಲಿ ಲೈಫ್ ವಸತಿ ಯೋಜನೆ ಪ್ರಕಾರ ನಿರ್ಮಿಸಿದ 5೦ ಮನೆಗಳ ಪೈಕಿ ಒಂದು ಮನೆಯನ್ನು  ಬಾಡಿಗೆಗೆ ಪಡೆದು ತಂಡ ಮಾದಕವಸ್ತು …

ಎಂಡಿಎಂಎ ಸಹಿತ ಓರ್ವ ಸೆರೆ: ಬೈಕ್ ವಶ

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ಯಲ್ಲಿ 4.09 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೆರ್ವತ್ತೂರು ಕೈದಕ್ಕಾಡ್ ಮಸೀದಿ ಪರಿಸರ  ನಿವಾಸಿ  ಇಲ್ಯಾಸ್ ಅಬೂಬಕರ್ (24) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಈತ ಮಾರಾಟಕ್ಕಾಗಿ ಈ ಮಾಲನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.  ಬೈಕ್‌ನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ನಿರ್ದೇಶ ಪ್ರಕಾರ ಎಸ್‌ಐ ರವೀಂದ್ರನ್, ಸಿಪಿಒಗಳಾದ ಸನಲ್, ಗುರುರಾಜ್, ಉಣ್ಣಿಕೃಷ್ಣನ್, ಡಿವೈಎಸ್ಪಿ …