ಹುಚ್ಚುನಾಯಿ ಕಚ್ಚಿ 3 ಬಾರಿ ಚುಚ್ಚುಮದ್ದು ತೆಗೆದ ಬಾಲಕಿ ಮೃತ್ಯು

ತಿರುವನಂತಪುರ: ಹುಚ್ಚುನಾಯಿ ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊಲ್ಲಂ ನಿವಾಸಿಯಾದ ೭ರ ಬಾಲಕಿ ಮೃತಪಟ್ಟಳು. ಕುನ್ನಿಕ್ಕೋಡ್ ಜಾಸ್ಮಿನ್ ಮಂಜಿಲ್‌ನ ನಿಯಾ ಫೈಸಲ್ ತಿರುವನಂತಪುರ ಎಸ್‌ಎಟಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟಿದ್ದಾಳೆ. ಕಳೆದ ತಿಂಗಳ ೮ರಂದು ಮನೆ ಪರಿಸರದಲ್ಲಿ ಬಾಲಕಿಗೆ ನಾಯಿ ಕಚ್ಚಿತ್ತು. ಆ ಬಳಿಕ ಮೂರು ಬಾರಿ ಪ್ರತಿರೋಧ ಚುಚ್ಚು ಮದ್ದು ನೀಡಲಾಗಿತ್ತು. ೨೯ರಂದು ಜ್ವರ ತಗಲಿದ ಹಿನ್ನೆಲೆಯಲ್ಲಿ ಹುಚ್ಚುನಾಯಿ ಕಚ್ಚಿರುವುದನ್ನು ಖಚಿತಪಡಿಸಲಾಗಿತ್ತು. ನರದ ಮೂಲಕ ವಿಷ ತಲೆಗೆ ತಲುಪಿರುವುದು ಪತ್ತೆಹಚ್ಚಲಾಗಿತ್ತು. ಕಳೆದ ಒಂದು …

ಅನಧಿಕೃತ ಹೊಯ್ಗೆ ಸಂಗ್ರಹ: 2 ದೋಣಿಗಳ ನಾಶ

ಕುಂಬಳೆ: ಆರಿಕ್ಕಾಡಿ ಕಡವತ್‌ನಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹ ನಡೆಸುತ್ತಿದ್ದ ಎgಡು ದೋಣಿಗಳನ್ನು ಪೊಲೀಸರು ನಾಶಗೊಳಿಸಿದ್ದಾರೆ. ನಿನ್ನೆ ರಾತ್ರಿ ದೋಣಿಗಳನ್ನು ನಾಗರಿಕರು ವಶಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಕೂಡಲೇ ತಲುಪಿದ ಪೊಲೀಸರು ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಇದೇ ವೇಳೆ ವಳಯಂನಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಬಂದ್ಯೋಡಿನಿಂದ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ವಶಪಡಿಸಿಕೊಂಡಿದ್ದಾರೆ. ಲಾರಿಯ ಚಾಲಕ ಪಾವೂರು ನಿವಾಸಿ ಅಬೂಲ್ ನಿಶಾನ್ (33) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆಯಿಂದ

ಅಂಗಡಿಮೊಗರು: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆ ಆರಂಭಗೊಂಡು ಈ ತಿಂಗಳ 12ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಉಗ್ರಾಣ ಮುಹೂರ್ತ ಬಳಿಕ ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ಸತ್ಯನಾರಾಯಣ ಭಟ್‌ರಿಂದ ದೀಪ ಪ್ರಜ್ವಲನೆ, ಮದ್ಯಾಹ್ನ ಮಹಾಪೂಜೆ, ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ವಿವಿಧ ವೈದಿಕ ಕಾರ್ಯಕ್ರಮಗಳ ಜೊತೆಗೆ ರಾತ್ರಿ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜರಗಲಿದೆ.

ರಾಜ್ಯದಲ್ಲಿ 40 ಇಲೆಕ್ಟ್ರಿಕ್ ಸೂಪರ್ ಚಾರ್ಜರ್ ಕೇಂದ್ರ ಸ್ಥಾಪಿಸಲು ಯೋಜನೆ

ಕಾಸರಗೋಡು: ವಿವಿಧ ಜಿಲ್ಲೆಗಳ ಲ್ಲಾಗಿ 40 ಇಲೆಕ್ಟ್ರಿಕ್  ಚಾರ್ಜರ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಗೆ ರಾಜ್ಯ ಸರಕಾರ ರೂಪು ನೀಡಿದೆ. ತಿರುವನಂತಪುರವನ್ನು ಪ್ರಧಾನ ಕೇಂದ್ರವನ್ನಾಗಿಸಿ ಕಾರ್ಯವೆಸಗು ತ್ತಿರುವ  ಪ್ಲಾಸ್ ಚಾರ್ಜ್ ಎನರ್ಜಿ ಸೊಲ್ಯೂ ಶನ್ ಈ ಕೇಂದ್ರಗಳನ್ನು ಸ್ಥಾಪಿಸಲಿದೆ. ಇದು 180 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿರುವ ಅತೀ ಶೀಘ್ರ ಚಾರ್ಜ್ ಮಾಡಬ ಹುದಾದ ಕೇಂದ್ರಗಳಾಗಲಿದೆ. ಕೇರಳದ  ಖ್ಯಾತ ಇಂಧನ ತಂತ್ರಜ್ಞಾನ ಸಂಸ್ಥೆಯ ಚಾರ್ಜ್ ಮೇಡ್‌ನ ಸಹಕಾರದೊಂದಿಗೆ ಇದನ್ನು ಸ್ಥಾಪಿಸಲಾಗುವುದು. ಇದು ಫ್ಲಾಶ್ ಚಾರ್ಜರ್ಸ್ ಎನರ್ಜಿ ಸೊಲ್ಯೂಶನ್‌ನ ಮೊದಲ …

ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಸಂಬಂಧ ವಾಗ್ವಾದಆಕ್ರಮಣ: ಇಬ್ಬರು ಆಸ್ಪತ್ರೆಗೆ ದಾಖಲು

ಕುಂಬಳೆ:  ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ಇಬ್ಬರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ನಿನ್ನೆ ರಾತ್ರಿ ಉಳುವಾರು ಜುಮಾ ಮಸೀದಿ ಬಳಿ ಆಕ್ರಮಣ ಉಂಟಾಗಿದೆ. ಬಂಬ್ರಾಣ ನಿವಾಸಿಗಳಾದ ಮುವೈಸ್ (20), ಸಹೋದರ ಮುಹಮ್ಮದ್ ರಿಯಾನ್(10) ಆಕ್ರಮಣದಿಂದ ಗಾಯಗೊಂಡಿದ್ದಾರೆ. ಇವರು ಘಟನೆ ಬಗ್ಗೆ ಈ ರೀತಿ ತಿಳಿಸಿದ್ದಾರೆ. ಮುವೈಸ್‌ನ ಚಿಕ್ಕಮ್ಮನ ಪುತ್ರ ಉಳುವಾರು ದರ್ಸ್‌ನಲ್ಲಿ ಕಲಿಯುತ್ತಿದ್ದು, ಈತನನ್ನು ನೋಡಲು ಸ್ಕೂಟರ್‌ನಲ್ಲಿ ಮುವೈಸ್ ಹಾಗೂ ಮುಹಮ್ಮದ್ ರಿಯಾನ್ ತೆರಳಿದ್ದರು. ಈ ವೇಳೆ ಸ್ಕೂಟರ್ ನಿಲ್ಲಿಸಿ ಮಸೀದಿಗೆ ತೆರಳಿದ್ದರು. ಇದೇ …

ತಲಪಾಡಿ ಆರ್‌ಟಿಒ ಚೆಕ್‌ಪೋಸ್ಟ್‌ನಿಂದ ಜನರೇಟರ್ ಕಳವು

ಮಂಜೇಶ್ವರ: ತಲಪಾಡಿ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿದ್ದ ಎರಡು ಜನರೇಟರ್‌ಗಳನ್ನು ಕಳವುಗೈಯ್ಯಲಾಗಿದೆ. ಚೆಕ್‌ಪೋಸ್ಟ್‌ನ ಹಿಂಭಾಗದಲ್ಲಿಟ್ಟಿದ್ದ ಎರಡು ಜನರೇಟರ್‌ಗಳು ಕಳವುಹೋದ ಬಗ್ಗೆ ಇಲ್ಲಿನ ಅಧಿಕಾರಿ ಅಭಿಲಾಷ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ ೧ರಂದು ಸಂಜೆಯಿಂದ ನಿನ್ನೆ ಬೆಳಿಗ್ಗೆ 9 ಗಂಟೆ ಮಧ್ಯೆ ಕಳವು ನಡೆದಿರಬೇಕೆಂದು ಶಂಕಿಸ ಲಾಗಿದ್ದು, 80,000 ರೂ. ನಷ್ಟ ಅಂದಾಜಿಸಲಾಗಿದೆ. ಪರಿಸರದ ಸಿಸಿ ಟಿವಿಯನ್ನು ಕೇಂದ್ರೀಕರಿಸಿ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಂದು ವಾರದ ಹಿಂದೆ ನಾಪತ್ತೆಯಾಗಿ ಪತ್ತೆಯಾದ ಯುವತಿ ಮತ್ತೆ ನಾಪತ್ತೆ ಕುಂಬಳೆ ಪೊಲೀಸರಿಂದ ತೀವ್ರ ತನಿಖೆ

ಕುಂಬಳೆ: ಒಂದು ವಾರದ ಹಿಂದೆ ನಾಪತ್ತೆಯಾಗಿ ಕರ್ನಾಟಕ ದಿಂದ ಪತ್ತೆಹಚ್ಚಿದ ಯುವತಿ ಮತ್ತೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬಂದ್ಯೋಡಿನ ೨೧ರ ಹರೆಯದ ಯುವತಿ ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ನಾಪತ್ತೆಯಾಗಿ ದ್ದಾಳೆ. ತಾಯಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಒಂದು ವಾರದ ಹಿಂದೆ ಈ ಯುವತಿ ನಾಪತ್ತೆಯಾ ಗಿದ್ದಳೆಂದು ಹೇಳಲಾಗು ತ್ತಿದೆ. ಆ ವೇಳೆ ನಡೆಸಿದ ತನಿಖೆ ಯಲ್ಲಿ ಕರ್ನಾಟಕ ದಿಂದ ಯುವತಿ ಯನ್ನು ಪತ್ತೆಹಚ್ಚಲಾಗಿತ್ತು. ಈಗ ಮತ್ತೆ ನಾಪತ್ತೆಯಾದ ಹಿನ್ನೆಲೆಯಲ್ಲಿ …

ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಉಪ್ಪಳ: ಉಪ್ಪಳ ಸಮೀಪದ ಪುಳಿಕುತ್ತಿಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಆರು ಲೀಟರ್ ಕರ್ನಾಟಕ ಬಿಯರ್ ಮತ್ತು 3.06 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪುಳಿಕುತ್ತಿಯ ರಮೇಶ್ ಪಿ (42) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ನೇತೃತ್ವದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್, ಸಿಇಒ ಅಶ್ವತಿ ಮತ್ತು …

ಕಾರುಣ್ಯ ಚಟುವಟಿಕೆ ಫಲಪ್ರಾಪ್ತಿ ಲಭಿಸಿಲ್ಲ: ಚಿಕಿತ್ಸೆ ಮಧ್ಯೆ ಅಧ್ಯಾಪಕ ನಿಧನ

ಬದಿಯಡ್ಕ: ಕ್ಯಾನ್ಸರ್ ತಗಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ, ಪಿಲಾಂಕಟ್ಟೆ ನಿವಾಸಿ ಪ್ರಶಾಂತ್ ರೈ (41) ಮೃತಪಟ್ಟರು. ಇವರ ಚಿಕಿತ್ಸೆಗಾಗಿ ಊರಿವರು ಹಣ ಸಂಗ್ರಹಿಸಿದ್ದರು. ಆಟೋರಿಕ್ಷಾ ಚಾಲ ಕರು, ಬಸ್ ಸಿಹಬ್ಬಂದಿಗಳು ಕಾರುಣ್ಯ ಯಾತ್ರೆ ನಡೆಸಿ ಹಣ ಸಂಗ್ರಹಿಸಲಾಗಿ ದ್ದರೂ ಜೀವ ಉಳಿಸಲು ಸಾಧ್ಯವಾಗದಿ ರುವುದು ಈ ಭಾಗದಲ್ಲಿ ಶೋಕಸಾಗರಕ್ಕೆ ಕಾರಣವಾಗಿದೆ. ಮುಂಡಿತ್ತಡ್ಕ ಶಾಲೆಯಲ್ಲಿ ಅಧ್ಯಾಪಕರಾಗಿರುವ ಪ್ರಶಾಂತ್ ರೈ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ತಂದೆ ರಾಮ ಮಾಸ್ತರ್, …

ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕರ ಬಾಲಕಿ ಕುಸಿದು ಬಿದ್ದು ಮೃತ್ಯು

ಉಪ್ಪಳ:  ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಧ್ಯೆ ಅಪಸ್ಮಾರ ರೋಗದಿಂದಾಗಿ ಕುಸಿದು ಬಿದ್ದ ಬಾಲಕಿ ಮೃತಪಟ್ಟಳು. ಬಾಯಾರು ಬಳಿಯ ಧರ್ಮತ್ತಡ್ಕ ಕಕ್ವೆ ನಿವಾಸಿ ರಮೇಶ್‌ರ ಪುತ್ರಿ ನಿಶಾ (5) ಮೃತಪಟ್ಟ ಬಾಲಕಿ. ನಿನ್ನೆ ಬೆಳಿಗ್ಗೆ ಈಕೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಕುಂಬಳೆಯ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು.  ಆ ವೇಳೆಗೆ ಬಾಲಕಿ ಮೃತಪಟ್ಟಿದ್ದಳು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹದ   ಮರಣೋತ್ತರ …