ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿದ ವ್ಯಕ್ತಿಯಿಂದ ಗುಪ್ತಾಂಗ ಪ್ರದರ್ಶನ: ಸೆರೆ

ಮುಳ್ಳೇರಿಯ: ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿ ಪ್ಯಾಂಟ್‌ನ ಜಿಪ್ ತೆಗೆದು ನೌಕರೆಯಾದ ೩೦ರ ಯುವತಿಗೆ  ಗುಪ್ತಾಂಗ ತೋರಿಸಿದ ಬಗ್ಗೆ ದೂರಲಾಗಿದೆ. ಕಾರಡ್ಕ ಎರಿಂಜೇರಿ ನಿವಾಸಿಯಾದ ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಉದುಮ ಬೇವೂರಿ ಪಡಿಂಞಾರ್ ನಿವಾಸಿ ಮುಹಮ್ಮದ್ ಸುಲ್ಫೀಕರ್ ಅಲಿ (25) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಬಳಿಕ ಈತನನ್ನು ಸೆರೆ ಹಿಡಿಯಲಾಗಿದೆ. ಆದರೆ ಈತನಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ನಿನ್ನೆ ಅಪರಾಹ್ನ ೨.೩೦ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಈತ …

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಎಂಟು ಮಂದಿ ಪೊಲೀಸ್ ಕಸ್ಟಡಿಗೆ: ತೀವ್ರ ವಿಚಾರಣೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ  ಕಿನ್ನಿಪದವಿನ ಸುಹಾಸ್ ಶೆಟ್ಟಿ (36)ಯವರನ್ನು ಮೊನ್ನೆ ರಾತ್ರಿ ಮಾರಕಾಯುಧಗಳಿಂದ ನಡುರಸ್ತೆಯಲ್ಲೇ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣದ ಆರೋಪಿ ಗಳೆಂದು ಶಂಕಿಸಲಾಗುತ್ತಿರುವ ಎಂಟು ಮಂದಿಯನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರನ್ನು ತನಿಖಾ ತಂಡ ತೀವ್ರ ವಿಚಾರಣೆಗೊ ಳಪಡಿಸುತ್ತಿದೆ. ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದ ಆರೋಪಿಗಳು ತಕ್ಷಣ ಅಲ್ಲಿಂದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.  ನಂತರ ಆ ಕಾರನ್ನು ಅಲ್ಲೇ ಅಲ್ಪ ದೂರದ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಕೊಲೆಗೆ ಬಳಸಿದ ಮಾರಕಾಯುಧಗಳನ್ನು ಕಾರಿನಲ್ಲೇ  ಬಿಸಾಡಿದ …

ನಮಾಜು ಮಧ್ಯೆ ಬಿದ್ದು ಗಾಯಗೊಂಡಿದ್ದ ವೃದ್ದೆ  ಚಿಕಿತ್ಸೆ ಮಧ್ಯೆ ನಿಧನ

ಕುಂಬಳೆ: ಮನೆಯಲ್ಲಿ ನಮಾಜು ಮಾಡುತ್ತಿದ್ದ ಮಧ್ಯೆ ಬಿದ್ದು ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತ ಪಟ್ಟರು. ಬಂದ್ಯೋಡು ಮುಟ್ಟಂ ಬಂಗರೆ ನಿವಾಸಿ ಬಿಫಾತಿಮ (89) ಮೃತಪಟ್ಟವರು. ಒಂದು ತಿಂಗಳ ಹಿಂದೆ ಇವರು ಬಿದ್ದು ಗಾಯಗೊಂಡಿದ್ದರು. ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿರುವ ಮಧ್ಯೆ ಸಾವು ಸಂಭವಿಸಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ಮುಹಮ್ಮದ್, ಇಬ್ರಾಹಿಂ, ಆಮಿನ, ಮರಿಯುಮ್ಮ, ಸಲ್ಮಾ, ಸಫಿಯ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆಯಿಂದ ಚಿನ್ನದ ಸರ ಕದ್ದ ಪ್ರಕರಣ: ಆರೋಪಿ ಬಂಧನ

ಕಾಸರಗೋಡು: ಮನೆಯಿಂದ ಚಿನ್ನದ ಸರ ಕದ್ದ ಪ್ರಕರಣದ ಆರೋಪಿಯಾದ ಮಹಿಳೆಯನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ತುರುತ್ತಿ ಅಸೈನಾರ್ ಮುಕ್ ನಿವಾಸಿ ಬಿಂದು ಕೆ (44) ಬಂಧಿತ ಆರೋಪಿ. ಎಪ್ರಿಲ್ ೨೭ರಂದು ಚೆರ್ವತ್ತೂರು ಪಯಂಗಿ  ನಿವಾಸಿಯ ಮನೆಯಿಂದ ಕಪಾಟಿನೊಳಗಿನಿಂದ 3.5 ಪವನ್‌ನ ಚಿನ್ನದ ಒಡವೆ ಕದ್ದ ಪ್ರಕರಣಕ್ಕೆ ಸಂಬಂ ಧಿಸಿ ಈಕೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಕಳವು ನಡೆದ ಮನೆಯವರ ಸಂಬಂಧಿಕೆಯಾಗಿದ್ದಾಳೆ.  ಮನೆಯ ಕೀಲಿ ಗೊಂಚಲನ್ನು ಉಪಯೋಗಿಸಿ ಆರೋಪಿ ಈ ಕಳವು ನಡೆಸಿದ್ದಳು.  ಆ …

ಬಂಜರು ಭೂಮಿಯನ್ನು ಹಸನಾಗಿಸಿ ಕೃಷಿಕನ ಸಾಧನೆ

ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ದೈಗೋಳಿ ಸುಣ್ಣಂಗುಳಿ ಯಲ್ಲಿ ೨೫ ಎಕ್ರೆ ಸ್ಥಳದಲ್ಲಿ ಕೃಷಿ ಕೈಗೊಂಡು ರವಿಶಂಕರ್ ಭಟ್ ಸುಣ್ಣಂಗುಳಿ ಸಾಧನೆ ಮೆರೆದಿದ್ದಾರೆ. ಕಾಡು, ಕುರುಚಲು ಪೊದೆ, ಮುಳ್ಳುಗಳಿಂದ ಕೂಡಿದ ಕಲ್ಲು ಭೂಮಿಯನ್ನು ಹದಗೊಳಿಸಿ ಇವರು ಕೃಷಿ ಕೈಗೊಂಡಿದ್ದಾರೆ. ಹೆಚ್ಚಿನವರು ಕೃಷಿಯನ್ನು ಕೈಬಿಡುತ್ತಿರುವ ಸಂದರ್ಭದಲ್ಲಿ ಲಾಭೇಚ್ಛೆಯನ್ನು ಪರಿಗಣಿಸದೆ ಕೃಷಿಯಲ್ಲಿ ಆಸಕ್ತಿ ಮೂಡಿ ವಿವಿಧ ಕೃಷಿಗಳನ್ನು ಕೈಗೊಂಡು ಯುವಕರಿಗೆ ಮಾದರಿ ಯಾಗಿದ್ದಾರೆ. ಬಾಳೆ, ಅಡಿಕೆ, ಕರಿ ಮೆಣಸು, ಹಲಸು, ಡ್ರ್ಯಾಗನ್‌ಫ್ರೂಟ್, ರಂಬೂಟಾನ್ ಸಹಿತ ೩೦೦ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಟ್ಟು …

ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ : ಐದು ಮಂದಿ ಸಾವು; ಹಲವರಿಗೆ ಗಾಯ

ಕಲ್ಲಿಕೋಟೆ: ಕಲ್ಲಿಕೋಟೆ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾತ್ರಿ  ಬೆಂಕಿ ಅನಾಹುತ ಸಂಭವಿಸಿದೆ. ಇದರಲ್ಲಿ ಐದು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ನಡೆದಿದೆ. ಅಸಮರ್ಪಕ   ಯುಪಿಎಸ್ ವ್ಯವಸ್ಥೆಯಿಂದ ಶೋರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಎದ್ದು ಇತರೆಡೆಗಳಿಗೆ ಪಸರಿಸಿ ರಬಹುದೆಂದು ಶಂಕಿಸಲಾಗಿದೆ. ಈ ಅನಾಹುತದಿಂದ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಸಿಬ್ಬಂದಿಗಳನ್ನು  ಭೀತಿಗೊಳಪಡಿಸಿದೆ.  ಹೊಗೆ ವಾರ್ಡ್‌ನಾದ್ಯಂತ ಹರಡಿತ್ತು. ಇದರಿಂದ ಹಲವು ಮಂದಿ ಉಸಿರಾಟ ತೊಂದರೆ ಎದುರಿಸಬೇಕಾಗಿಬಂತು. ಬೆಂಕಿ ಕಾಣಿಸಿಕೊಂಡಾಕ್ಷಣ ಅಗ್ನಿ ಶಾಮಕದಳ, ಪೊಲೀಸರು, ವಿಪತ್ತು ನಿರ್ವಹಣಾ ಪಡೆಗಳು ಆಗಮಿಸಿ  …

ಗುಜರಾತ್‌ನಲ್ಲಿ ಭಾರೀ ಭೂಕಂಪ

ಅಹಮದಾಬಾದ್: ಉತ್ತರ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಾವ್ ಬಳಿ ಇಂದು ಮುಂಜಾನೆ 3.35ಕ್ಕೆ ಭೂಕಂಪ ಸಂಭವಿಸಿದೆಯೆಂದು ಭೂಕಂಪ ಶಾಸ್ತ್ರ ಸಂಶೋಧನಾ ಸಂಸ್ಥೆ ತಿಳಿಸಿದೆ.  ವಾವ್‌ನಿಂದ 27 ಕಿ.ಮೀ. ದೂರದಲ್ಲಿ 4.9 ಕಿ.ಮೀ ಆಳದಲ್ಲಿ ಭೂಕಂಪ ದಾಖಲಾಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಗುಜರಾತ್ ಅತೀ ಹೆಚ್ಚಿನ ಭೂಕಂಪ-ಅಪಾಯ ಪ್ರದೇಶವಾಗಿದ್ದು, ಕಳೆದ 200 ವರ್ಷಗಳಲ್ಲಿ 9ಪ್ರಮುಖ ಭೂಕಂಪಗಳಿಗೆ ಈ ಪ್ರದೇಶ ತುತ್ತಾಗಿದೆಯೆಂದು ಸಂಬಂಧಪಟ್ಟ  ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಅಡಿಕೆ ಕೃಷಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಲು ಆಗ್ರಹಿಸಿ ಕೃಷಿಕರ ಸಮ್ಮೇಳನ 5ರಂದು

ಬದಿಯಡ್ಕ: ಜಿಲ್ಲೆಯ ಅಡಕೆ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಉಂಟಾಗದ ಹಿನ್ನೆಲೆಯಲ್ಲಿ ಹಾಗೂ ಕಾಲಾವಸ್ಥೆ ಬದಲಾವಣೆಯಿಂದ ಕೃಷಿಕರು ತೀವ್ರ ಸಂದಿಗ್ಧತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಕ್ಕಾಗಿ ಜಿಲ್ಲೆಯ ಕಂಗು ಕೃಷಿಕರ ಸಮ್ಮೇಳನ ಈ ತಿಂಗಳ 5ರಂದು ಬದಿಯಡ್ಕದಲ್ಲಿ ನಡೆಸುವುದಾಗಿ ಕಿಸಾನ್ ಸೇನೆ ಜಿಲ್ಲಾ ಪದಾಧಿಕಾರಿಗಳು ಸುದ್ಧಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ೩ ಗಂಟೆ ವರೆಗೆ ಸಮ್ಮೇಳನ ನಡೆಯಲಿದ್ದು, ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ …

ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಅಭಿವೃದ್ಧಿ ಆಗ್ರಹಿಸಿ ಕಾಂಗ್ರೆಸ್‌ನಿಂದ ಪ್ರತಿಭಟನಾ ಧರಣಿ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಕಾಲ ಚಿಕಿತ್ಸೆ ಮತ್ತೆ ಆರಂಭಿಸಬೇಕು, ಎಲ್ಲಾ ಜೌಷಧಿಗಳನ್ನು ನೀಡಬೇಕು, ವೈದ್ಯರ ಕ್ಷಾಮವನ್ನು ನೀಗಿಸಬೇಕು ವೆÆದ ಲಾದ ಹಲವಾರು ಬೇಡಿಕೆಯನ್ನು ಮುಂದಿಟ್ಟು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಪ್ರತಿಭಟನಾ ಧರಣಿ ನಿನ್ನೆ ನಡೆಯಿತು. ಡಿ.ಸಿ.ಸಿ ಜನರಲ್ ಕಾರ್ಯದರ್ಶಿ ಜೆ.ಎಸ್ ಸೋಮಶೇಖರ ಉದ್ಘಾಟಿಸಿದರು. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ನೇತಾರರಾದ ಬಿ.ಎಂ ಖÁದರ್ ಹಾಜಿ, ಮೊಹಮ್ಮದ್ ಸೀಗಂದಡಿ, ಫಾರೂಕ್, ನೆಬಿನ್ …

ಬಾಯಾರು ಆಶಿಫ್ ಸಾವಿನ ಬಗ್ಗೆ ತನಿಖೆ ಬುಡಮೇಲು ಷಡ್ಯಂತ್ರ- ಕಾಂಗ್ರೆಸ್ ಆರೋಪ

ಪೈವಳಿಕೆ: ಬಾಯಾರು ಗಾಳಿಯಡ್ಕದ ಮೊಹಮ್ಮದ್ ಆಶಿಫ್ ಕಳೆದ ಜನವರಿ ೧೫ರಂದು ಅನುಮಾನಾ ಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ಜಿಲ್ಲಾ ಕ್ರೈಮ್ ಬ್ರಾಂಚ್ ನಡೆಸುತ್ತಿರುವ ತನಿಖೆಯನ್ನು ಬುಡಮೇಲುಗೊಳಿಸಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸುತ್ತಿವೆ ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಕಳೆದ ಮೂರೂ ವರೆ ತಿಂಗಳಿಂದ ತನಿಖೆ ನಡೆಸುತ್ತಿರುವ ಕ್ರೈಮ್‌ಬ್ರಾಂಚ್ ಅಧಿಕಾರಿಗಳಿಗೆ ಈ ವರೆಗೆ ಸಾವಿಗೆ ಕಾರಣ ದೃಢೀಕರಿಸಲು ಸಾಧ್ಯವಾಗದಿರುವುದು ಖಂಡನೀ ಯವೆಂದು ಸಭೆ ಅಭಿಪ್ರಾಯ ಪಟ್ಟಿದೆ. ಆಶಿಫ್‌ನ ಕುಟುಂಬಕ್ಕೆ ಸರಕಾರ ಕೂಡಲೇ ಆರ್ಥಿಕ ಸಹಾಯ ಒದಗಿಸುವಂತೆ  …