ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಆಸ್ಪತ್ರೆ ಸ್ಥಾಪಿಸಲು ಆಗ್ರಹಿಸಿ ರಾಜೀವ್ ಚಂದ್ರಶೇಖರ್‌ಗೆ ಏಮ್ಸ್ ಒಕ್ಕೂಟ ಮನವಿ

ಕಾಸರಗೋಡು: ಸಾಕಷ್ಟು ಚಿಕಿತ್ಸಾ ಸೌಕರ್ಯವಿಲ್ಲದ ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಅಧೀನದ ಏಮ್ಸ್, ಜಿಪ್‌ಮೆರ್, ಇಎಸ್‌ಐ ಮೆಡಿಕಲ್ ಕಾಲೇಜಿ ನಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಲಭ್ಯಗೊಳಿಸುವುದಕ್ಕೆ ಕೇಂದ್ರದಲ್ಲಿ ಒತ್ತಡ ಹಾಕಬೇಕೆಂದು, ಎಂಡೋಸಲ್ಫಾನ್ ಸಂತ್ರಸ್ತರಾದ ರೋಗಿಗಳಿಗೆ ಉಪಕಾರಪ್ರದವಾಗುವ ರೀತಿಯಲ್ಲಿ ಚಿಕಿತ್ಸೆ, ರಿಸರ್ಚ್ ನಡೆಸಲು ಒದಗುವ ರೀತಿಯ ಮೆಡಿಕಲ್ ವ್ಯವಸ್ಥೆಗಳನ್ನು ಜಿಲ್ಲೆಗೆ ತರಲು ನೇತೃತ್ವ ನೀಡಬೇಕೆಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್‌ರಲ್ಲಿ ಏಮ್ಸ್ ಕಾಸರಗೋಡು ಜನಪರ ಒಕ್ಕೂಟ ಆಗ್ರಹಿಸಿದೆ. ನಿನ್ನೆ ಕಾಸರಗೋಡಿಗೆ ತಲುಪಿದ ಅವರನ್ನು …

ಜಿಲ್ಲಾ ಪೊಲೀಸ್ ಅಸೋಸಿಯೇಶನ್ ಸಮಾವೇಶ ಸಮಾಪ್ತಿ: ಕರ್ತವ್ಯ ನಿರತ ವೇಳೆ ಆಕ್ರಮಣಕ್ಕೆ ತುತ್ತಾಗುವ ಪೊಲೀಸರ ರಕ್ಷಣೆಗೆ ಆಗ್ರಹ

ಕಾಸರಗೋಡು: ಪೊಲೀಸ್ ಅಸೋಸಿಯೇಶನ್ ಜಿಲ್ಲಾ ಸಮಾವೇಶ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಸಭಾಂಗಣದಲ್ಲಿ ಜರಗಿತು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ದರು. ಎಸ್.ಪಿ ಬಿ.ವಿ. ವಿಜಯ್ ಭಾರತ್ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ. ರಾಜ್ ಕುಮಾರ್ ಧ್ವಜಾ ರೋಹಣಗೈದರು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು,  ಹುತಾತ್ಮ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ. ಸುನಿಲ್ ಕುಮಾರ್, ಇ.ವಿ. ಪ್ರದೀಪನ್, ಪಿ.ಪಿ. ಮಹೇಶ್, ಪಿ. ರವೀಂದ್ರನ್, ಟಿ. …

ಜನರಲ್ ಆಸ್ಪತ್ರೆಯ  ಕನ್ನಡ ಬಳಗದಿಂದ ಇಂದು ಸಂಜೆ ‘ಇಲಿಪುರಾಣ’ ಕಿರು ನಾಟಕ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ಕನ್ನಡ ಸಿಬ್ಬಂದಿಗಳ ನೇತೃತ್ವದಲ್ಲಿ ಕಾಸರಗೋಡು ಪುರಭವನದಲ್ಲಿ ಇಂದು ಸಂಜೆ ಇಲಿ ಪುರಾಣ ಎಂಬ ಹಾಸ್ಯಮಯ ಕಿರು ನಾಟಕ ಪ್ರದರ್ಶನ ನಡೆಯಲಿದೆ.  ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ| ಜನಾರ್ದನ ನಾಯ್ಕ್ ಸಿ.ಎಚ್ ಇದರ ನಿರ್ದೇಶಕರಾಗಿದ್ದಾರೆ. ಮಾತ್ರವಲ್ಲದೆ ಅವರು ಸೇರಿದಂತೆ ನಾರಾಯಣ ಬಾರಡ್ಕ, ನಯನ ಮೊದಲಾದವರು ಇದರಲ್ಲಿ ಕಲಾವಿದರಾಗಿ ಅಭಿನಯಿಸುವರು.

ರೈನೋಕ್ರಾಫ್ಟ್ ಲೈವ್ ರೈನೋ ಪ್ಲಾಸ್ಟಿ ಸರ್ಜಿಕಲ್ ಕಾರ್ಯಾಗಾರ

ಕಣ್ಣೂರು: ಕಣ್ಣೂರು ಬೇಬಿ ಸ್ಮಾರಕ ಆಸ್ಪತ್ರೆಯಲ್ಲಿ ಇಎನ್‌ಟಿ ಮತ್ತು ಹೆಡ್ ಆಂಡ್ ನೆಕ್ ಸರ್ಜರಿ ವಿಭಾಗದ ನೇತೃತ್ವದಲ್ಲಿ ‘ರೈನೋಕ್ರಾಫ್ಟ್ ೧.೦ ಎಂಬ ಲೈವ್ ರೈನೋಪ್ಲಾಸ್ಟಿ ಸರ್ಜಿಕಲ್ ವರ್ಕ್ ಶಾಪ್ ಯಶಸ್ವಿಯಾಗಿ ನಡೆಸಲಾಯಿತು. ಮೂಗಿನ ಶಸ್ತ್ರಚಿಕಿತ್ಸೆಯಲ್ಲಿ ಗಮನ ಕೇಂದ್ರೀಕರಿಸಿ ನಡೆದ ಉತ್ತರ ಮಲಬಾರ್‌ನ ಮೊದಲ ಲೈವ್ ರೈನೋಪ್ಲಾಸ್ಟಿ ಸರ್ಜಿಕಲ್ ವರ್ಕ್ ಶಾಪ್ ಇದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಭಾರತದ ವಿವಿಧ ಭಾಗಗಳ ಪ್ರಸಿದ್ಧರಾದ ವೈದ್ಯರುಗಳು ಈ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದರು. ಮೂರು ಶಸ್ತ್ರಚಿಕಿತ್ಸೆ ಈ ವೇಳೆ ನಡೆಸಲಾಯಿತು. ಡಾ| ಜಾಬಿರ್ ಬಿನ್ …

ವರ್ಕಾಡಿ ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್, ಶ್ರೀಮಾತಾ ಸೇವಾಶ್ರಮದ ದಶಮಾನೋತ್ಸವ

ವರ್ಕಾಡಿ: ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಮಾತಾ ಸೇವಾಶ್ರಮ ವರ್ಕಾಡಿ ಇದರ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಸಂಕೀರ್ತನೆ ಇದೇ ವೇಳೆ ಜರಗಿತು. ಪುರೋಹಿತ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಗಣಹೋಮ, ಚಂಡಿಕಾಯಾಗ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರು ಇದರ ನಿವೃತ್ತ ಪ್ರಾಂಶುಪಾಲ ಚಂದ್ರ ಕುಮಾರ್.ಕೆ ಅಧ್ಯಕ್ಷತೆ ವಹಿಸಿದ್ದರ. ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಇದರ ಸಂಚಾಲಕಿಯಾದ ಡಾ. ಶಾರದಾ ಉದಯಕುಮಾರ್ ಉದ್ಘಾಟಿಸಿದರು. ಡಾ| …

ಹಿಂದೂ ಜಾಗೃತ ಸಮಾವೇಶಕ್ಕೆ ದೈಗೋಳಿ ಶ್ರೀ ರಾಮಕೃಷ್ಣ ಮಂದಿರದಲ್ಲಿ ಸಿದ್ಧತಾ ಸಭೆ  ಇಂದು

ವರ್ಕಾಡಿ: ಕಾಶ್ಮೀರದ ಹುತಾತ್ಮರಿಗೆ ನುಡಿನಮನ ಕಾರ್ಯಕ್ರಮ ಹಾಗೂ ವಿರಾಟ್ ಹಿಂದೂ ಜಾಗೃತ ಸಮಾವೇಶ ಮೇ 4ರಂದು ಸಂಜೆ 4 ಗಂಟೆಗೆ ಐಲ ಮೈದಾನದಲ್ಲಿ ನಡೆಯಲಿದ್ದು, ಇದರ ಯಶಸ್ವಿಗೆ ವರ್ಕಾಡಿ ಪಂಚಾಯತ್ ಗೊಳಪಟ್ಟ ದೇವಸ್ಥಾನ, ಭಜನಾ ಮಂದಿರ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಸಭೆ  ಇಂದು ಸಂಜೆ 6.30ಕ್ಕೆ ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಾರ್ಗದಶನ ನೀಡುವರು.

ಬಿಜೆಪಿಯ ವಿಕಸಿತ್ ಕೇರಳ ಸಮಾವೇಶ ಕಾಸರಗೋಡಿನಲ್ಲಿ ಆರಂಭ: ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಕೇರಳದ ಅಭಿವೃದ್ಧಿ ಸಾಧ್ಯ-ರಾಜೀವ್ ಚಂದ್ರಶೇಖರ್

ಕಾಸರಗೋಡು: ಬಿಜೆಪಿಯ ವಿಕ ಸಿತ್ ಕೇರಳ ಸಮಾವೇಶ ಇಂದು ಬೆಳಿಗ್ಗೆ ಕಾಸರಗೋಡಿನಲ್ಲಿ ಆರಂಭಗೊಂಡಿತು.  ನಗರದ ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಾಲ್ ಸಭಾಂಗಣದಲ್ಲಿ ನಡೆಯುವ ಸಮಾವೇಶವನ್ನು  ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇ ಖರ್ ಉದ್ಘಾಟಿಸಿದರು.  ಅವರು ಮಾತನಾಡಿ, ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ  ಮಾತ್ರ ಕೇರಳದ ಅಭಿವೃದ್ಧಿ ಸಾಧ್ಯ. ಅದು ಬಿಜೆಪಿಯ ಗುರಿಯಾಗಿದೆ ಎಂದು ತಿಳಿಸಿದರು. ಬಿಜೆಪಿಯ ಅಭಿವೃದ್ಧಿ ಯೋಜನೆ ಕೇವಲ ಭರವಸೆಯಲ್ಲ. ಅದು  ಜನರ ಕಷ್ಟಗಳಿಗೆ ಪರಿಹಾರ ಕಾಣುವ ಉದ್ದೇಶವಾಗಿದೆ. ಮಾತ್ರವಲ್ಲದೆ ಯುವಕರ …

ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ.ನಷ್ಟು ಕಾಳಧನ ಪತ್ತೆ: ಓರ್ವ ವಶ

ಕಾಸರಗೋಡು: ದೀರ್ಘ ಕಾಲದ ಬಿಡುವಿನ ನಂತರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ   ಕಾರೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಕಾಳಧನ ಪತ್ತೆಹಚ್ಚಿದ್ದಾರೆ. ಇಂದು ಬೆಳಿಗ್ಗೆ ಸುಮಾರು ೮.೩೦ರ ವೇಳೆ ಕಾಸರಗೋಡು- ಹೊಸದುರ್ಗ ಕೆಎಸ್‌ಟಿಪಿ ರಸ್ತೆಯಲ್ಲಿ ಬೇಕಲಕ್ಕೆ ಸಮೀಪದ ತೃಕ್ಕನ್ನಾಡ್‌ನಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್ಪಿ  ಎ.ವಿ.ಮನೋಜ್, ಬೇಕಲ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎ.ಶೈನ್, ಎಸ್‌ಐಗಳ ನೇತೃತ್ವದಲ್ಲಿ ತೃಕ್ಕನ್ನಾಡ್ ಬಳಿ …

ಪಿಟ್ ಎನ್‌ಡಿಪಿಎಸ್ ಆಕ್ಟ್: ಮಂಜೇಶ್ವರ ನಿವಾಸಿ ಬಂಧನ, 1 ವರ್ಷ ಜೈಲಿಗೆ

ಮಂಜೇಶ್ವರ: 1ಕ್ಕಿಂತ ಹೆಚ್ಚು ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಆರೋಪಿಗಳಾಗುವವರನ್ನು ಸೆರೆ ಹಿಡಿದು ಜೈಲಿಗಟ್ಟಲು ಕೇರಳ ಪೊಲೀಸ್ ಇಲಾಖೆ ಜ್ಯಾರಿಗೊಳಿಸಿರುವ ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಮಂಜೇಶ್ವರ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಬಂಧಿಸಲ್ಪಡುವ ಮೊದಲ ವ್ಯಕ್ತಿಯಾಗಿದ್ದಾನೆ ಈತ. ಮಂಜೇಶ್ವರ ಬಡಾಜೆ ನಿವಾಸಿ ಸೂರಜ್ ರೈ (27) ಬಂಧಿತ ಆರೋಪಿ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್, ಎಸ್‌ಐ ಕೆ. ನಾರಾಯಣನ್ ನಾಯರ್‌ರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ರಾಜ್ಯ ಸರಕಾರದ …

ಗುಂಡೇಟು ತಗಲಿ ಯುವಕ ಗಾಯಗೊಂಡ ಪ್ರಕರಣ: ಬಾಕ್ರಬೈಲಿನಲ್ಲಿ ಶ್ವಾನದಳ, ಫಾರೆನ್ಸಿಕ್ ತಜ್ಞರಿಂದ ತಪಾಸಣೆ ; ಗುಂಡು ಹಾರಿಸಲು ಬಳಸಿದ ಇನ್ನೊಂದು ಉಪಕರಣ ಪತ್ತೆ

ಉಪ್ಪಳ: ಬಾಕ್ರಬೈಲಿನಲ್ಲಿ ಯುವಕ ಗುಂಡೇಟು ತಗಲಿ  ಗಾಯಗೊಂಡ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೊಲೀಸರ ನೇತೃತ್ವದಲ್ಲಿ ಶ್ವಾನದಳ, ಫಾರೆನ್ಸಿಕ್ ತಜ್ಞರು ನಿನ್ನೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ. ಬಾಕ್ರಬೈಲಿನ ಕಾಡಿನಲ್ಲಿ ನಡೆಸಿದ ಶೋಧ ವೇಳೆ ಗುಂಡು ಹಾರಿಸಲು ಬಳಸಿದ ಮತ್ತೊಂದು ಉಪಕರಣ ಪತ್ತೆಯಾಗಿದೆ. ಇಲಿಗಳನ್ನು ಕೊಲ್ಲಲು ಬಳಸುವ ಉಪಕರಣ ಬಳಸಿ ಬಂದೂಕಿನ ರೀತಿಯಲ್ಲಿ ನಿರ್ಮಿಸಿದ ಉಪ ಕರಣ ಇದಾಗಿದೆ. ಕಾಡು ಹಂದಿಯನ್ನು ಕೊಲ್ಲಲು ಯಾರೋ ಇರಿಸಿದ ಉಪಕರಣ ಇದಾಗಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಈ …