ರಾಷ್ಟ್ರೀಯ ಹೆದ್ದಾರಿ 66: ತಲಪ್ಪಾಡಿ-ಚೆಂಗಳ ಸಹಿತ ನಾಲ್ಕು ರೀಚ್‌ಗಳಲ್ಲಿ ಮೇ 31ರಿಂದ ವಾಹನ ಸಂಚಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆ ಈಗ ಭರದಿಂದ ಸಾಗುತ್ತಿದ್ದು, ಆಪೈಕಿ ತಲಪ್ಪಾಡಿ-ಚೆಂಗಳ (39 ಕಿ.ಮೀ) ಸೇರಿದಂತೆ ನಾಲ್ಕು ರೀಚ್ಗಳ ನಿರ್ಮಾಣ ಕೆಲಸ ಈಗ ಅಂತಿಮ ಹಂತದಲ್ಲಿದೆ. ಅವುಗಳನ್ನು ಮೇ 31ರಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸೂಚನಾ ಫಲಕ ಗಳನ್ನು ಅಳವಡಿಸಲಾಗುವುದು. ಅಂದರೆ ತಿರುವು, ವೇಗಮಿತಿ ಪ್ರದೇಶಗಳಲ್ಲಿ ಅಪಾಯಸೂಚನಾ ಫಲಕಗ ಳನ್ನು ಸ್ಥಾಪಿಸಲಾಗುವುದು. ತಲಪ್ಪಾಡಿ-ಚೆಂಗಳದ ಹೊರತಾಗಿ ವೆಂಙಳA(ಕಲ್ಲಿಕೋಟೆ …

ಅಸೌಖ್ಯ ಬಾಧಿಸಿ ಯುವತಿ ಮೃತ್ಯು

ನೀರ್ಚಾಲು: ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಅಸೌಖ್ಯ  ಮೃತಪಟ್ಟ ಘಟನೆ ನಡೆದಿದೆ ಮಾಡತ್ತಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಧೀರಜ್ ಎಂಬವರ ಪತ್ನಿ ಜ್ಯೋತಿ ಬಿ.ಎನ್. (27) ಮೃತಪಟ್ಟ ಯುವ ತಿ. ಅಲ್ಪ ಕಾಲದಿಂದ ಇವರಿಗೆ  ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿತ್ತೆನ್ನಲಾ ಗಿದೆ. ನಿನ್ನೆ ಇವರಿಗೆ ಅಸೌಖ್ಯ ಉಲ್ಬ ಣಗೊಂಡಿದ್ದು, ಇದರಿಂದ ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಬಂಬ್ರಾಣ ಚೂರಿತ್ತಡ್ಕ  ಸಂತೋಷ್ ನಗರದ ದಿ| ನಾರಾಯಣ- ರುಕ್ಮಿಣಿ ದಂಪತಿಯ ಪುತ್ರಿಯಾದ ಮೃತರು …

ಮತ್ತೆ ದಾಖಲೆಯತ್ತ ನೆಗೆದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಇಂದು ಚಿನ್ನದ ದರ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ. ನಿನ್ನೆಗಿಂತ ಇಂದು ಏಕಾಏಕಿ ಪವನ್ಗೆ 2200 ರೂಪಾಯಿಗಳ ಹೆಚ್ಚಳವಾಗಿದೆ. ಈ ಮೂಲಕ ಒಂದು ಪವನ್ ಚಿನ್ನದ ದರ ಇಂದು 74320 ರೂ.ಗೆ ತಲುಪಿದೆ. ಒಂದು ಗ್ರಾಂ ಚಿನ್ನದ ಮೇಲೆ ಇಂದು 275 ರೂ.ಗಳ ಏರಿಕೆಯಾಗಿದೆ. ಇತಿಹಾಸದಲ್ಲೇ ಇದು ಗರಿಷ್ಠ ದಾಖಲೆಯಾಗಿದೆಯೆಂದು ತಿಳಿಸಲಾಗಿದೆ. ಅಮೆರಿಕನ್ ಹಾಗೂ ಚೀನಾ ಮಧ್ಯೆಗಿನ ವ್ಯಾಪಾರ ಯುದ್ಧ ಇನ್ನಷ್ಟು ತೀವ್ರಗೊಂಡುದರಿAದ ಸುರಕ್ಷತೆ ದೃಷ್ಟಿಯಿಂದ ಚಿನ್ನ ಖರೀದಿಸಲು ಮುಂದಾಗಿರುವುದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಗೆ ಕಾರಣವಾಗಿದೆ.

ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 65 ಲೀಟರ್ ಮದ್ಯ ವಶ: ಇಬ್ಬರ ಸೆರೆ

ಕಾಸರಗೋಡು: ಅನಧಿಕೃತವಾಗಿ ಮಾರಾಟ ನಡೆಸಲು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೬೫ ಲೀಟರ್ ವಿದೇಶಿ ಮದ್ಯ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ತಿರುಮೇನಿ ಕೊಕ್ಕಡತ್ ಮಂಟಪ ಎಂಬಲ್ಲಿನ ಎಂ.ವಿ. ಜೋಬಿನ್ಸ್ (38), ಚಿಟ್ಟಾರಿಕಲ್ ಕಾಟಾಂಕವಲ ಕಿಳಕ್ಕೇ ಕುಡಿಯಿಲ್ ಹೌಸ್‌ನ ಕೆ.ಪಿ. ಶಿಬು (48) ಎಂಬವರನ್ನು ಬೇಡಗಂ ಎಸ್‌ಐ ಎಂ. ಅgವಿಂದನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಡಗಂ ಇನ್‌ಸ್ಪೆಕ್ಟರ್  ರಾಜೀವನ್‌ರ ನಿರ್ದೇಶ ಮೇರೆಗೆ ನಿನ್ನೆ ರಾತ್ರಿ 9.30ರ ವೇಳೆ ಬಂದಡ್ಕ ಕೋಳಿಚ್ಚಾಲ್ ರಸ್ತೆಯಲ್ಲ್ಲಿ ಕಾರ್ಯಾಚರಣೆ ನಡೆಸಿ …

ಪೋಪ್ ಫ್ರಾನ್ಸಿಸ್ ನಿಧನ: ಭಾರತದಲ್ಲಿ ಮೂರು ದಿನ ಶೋಕಾಚರಣೆ

ನವದೆಹಲಿ: ನಿಧನರಾದ ಪೋಪ್ ಫ್ರಾನ್ಸಿಸ್‌ರಿಗೆ  ಗೌರವ ಸಲ್ಲಿಸಲು ಭಾರತ, ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ತಮ್ಮ ವಿನಮ್ರ ಶೈಲಿ ಮತ್ತು ಬಡವರ ಬಗ್ಗೆ ಕಾಳಜಿಯಿಂದ ಇಡೀ ಜಗತ್ತನ್ನೇ ಮೋಡಿ ಮಾಡಿದ  ಪೋಪ್ ಧರ್ಮಗುರು ಫ್ರಾನ್ಸಿಸ್ ತಮ್ಮ 88ನೇ ವಯಸ್ಸಿನಲ್ಲಿ    ನಿಧನಹೊಂದಿದರು.  ಅವರ ನಿಧನಕ್ಕೆ ಸಂತಾಪ ಸೂಚಿಸಿ ಕೇಂದ್ರ ಗೃಹ ಸಚಿವಾಲಯ ಭಾರತದಲ್ಲಿ ಇಂದಿನಿಂದ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಮಾತ್ರವಲ್ಲದೆ ಪೋಪ್‌ರ ಅಂತ್ಯಕ್ರಿಯೆ ದಿನದಂದೂ ಶೋಕ ಆಚರಿಸಲಾಗುವುದೆಂದು  ಗೃಹ ಸಚಿವಾಲಯ ತಿಳಿಸಿದೆ. ಇದರಂತೆ ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ …

ಮಾದಕವಸ್ತು ಪತ್ತೆ: ಆರೋಪಿ ಸೆರೆ

ಮಂಜೇಶ್ವರ: ಉಪ್ಪಳಕ್ಕೆ ಸಮೀಪದ ಬೇಕೂರಿನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ  ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ   ನಡೆಸಿದ ತಪಾಸಣೆಯಲ್ಲಿ ಮಾದಕವಸ್ತುವಾದ 0.1405 ಗ್ರಾಂ ಮೆಥಾಫಿಟಮಿನ್‌ನ್ನು ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಉಪ್ಪಳ ಬೇಕೂರು ಅಸ್ಮಾಬಿ ಮಂಜಿಲ್‌ನ ಅಹಮ್ಮದ್ ಕಬೀರ್ ಎಂ (30) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ ಗಳಾದ ಮುರಳಿ ಕೆ.ವಿ, ಪ್ರಮೋದ್ ಕುಮಾರ್ ವಿ, ಗ್ರೇಡ್ …

500 ರೂ.ಗಳ ನಕಲಿ ನೋಟುಗಳು ವ್ಯಾಪಕ: ಜಾಗ್ರತೆ ಪಾಲಿಸಲು ಕರೆ

ಹೊಸದಿಲ್ಲಿ: ಅಸಲಿ ನೋಟನ್ನೇ ಹೋಲುವ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ವ್ಯಾಪಕವಾಗಿ ಚಲಾವಣೆಯಲ್ಲಿದ್ದು, ಅದರಿಂದ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಎಂದು ನಮೂದಿಸಿರುವಲ್ಲಿ ರಿಸರ್ವ್ ಎಂಬ ಶಬ್ದದಲ್ಲಿ ಇ ಎಂಬ ಅಕ್ಷರದ ಬದಲು ಎ ಎಂದು ದಾಖಲಾಗಿರುವ ನೋಟುಗಳು ಇದಾಗಿವೆ. ಬೇರೆ ಯಾವುದೇ ತಪ್ಪುಗಳು ನಕಲಿ ನೋಟಿನಲ್ಲಿ ಕಾಣಿಸುತ್ತಿಲ್ಲ. ಆದ್ದರಿಂದ ಲಭಿಸುವ 500 ರೂಪಾಯಿ ನೋಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದು ಗೃಹ ಸಚಿವಾಲಯ ತಿಳಿಸಿದೆ. ನಕಲಿ …

ಹುಳಿರಸ ಪತ್ತೆ

ಮಧೂರು:  ಮಧೂರು ಗ್ರಾಮದ ಮಲಂಗರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ  ತೊಡಿನ ಬಳಿ ಬಚ್ಚಿಡಲಾಗಿದ್ದ 30 ಲೀಟರ್ ವಾಶ್ (ಹುಳಿರಸ) ಪತ್ತೆಹಚ್ಚಿ ವಶಪಡಿಸಲಾಗಿದೆ. ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ವಿನೋದನ್ ಕೆ.ವಿ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ  ಅನುರಾಗ್ ಎಂ ಮತ್ತು ನಿಖಿಲ್ ಎ  ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ಮಾದಕವಸ್ತು ಸಾಗಾಟಗಾರರಿಗೆ ಕಡಿವಾಣ: 25 ಮಂದಿ ಮುಂಜಾಗ್ರತಾ ಬಂಧನಕ್ಕೆ ಅಬಕಾರಿ ಇಲಾಖೆ ಶಿಫಾರಸು

ಕಾಸರಗೋಡು: ರಾಜ್ಯದಲ್ಲಿ ಮಾದಕವಸ್ತು ಸಾಗಾಟಕ್ಕೆ ಪೂರ್ಣವಾಗಿ ಕಡಿವಾಣ ಹಾಕುವ ಉದ್ದೇಶದಿಂದ ಅಬಕಾರಿ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ಅನುಸರಿಸಲಿದೆ. ಇದರ ಭಾಗವಾಗಿ ನಿರಂತರ ಮಾದಕವಸ್ತು ಸಾಗಾಟದಲ್ಲಿ ತೊಡಗಿಕೊಂಡ 25 ಮಂದಿಯನ್ನು ಮುಂಜಾಗ್ರತಾ ಕ್ರಮದಂಗವಾಗಿ ಬಂಧನದಲ್ಲಿರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಅಬಕಾರಿ ಇಲಾಖೆ ಗೃಹಖಾತೆ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಮೇಲೆ ಗೃಹ ಕಾರ್ಯದರ್ಶಿ ಕೈಗೊಳ್ಳುವ ನಿರ್ಧಾರವನ್ನು ಹೈಕೋರ್ಟ್ನ ನ್ಯಾಯಾಧೀಶರು ಒಳಗೊಂಡ ಸಮಿತಿ ಪರಿಶೀಲಿಸಿದ ಬಳಿಕ ಅಂತಿಮ ಅನುಮತಿ ನೀಡಲಿದ್ದಾರೆ.ಸೆರೆಗೀಡಾದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಎರಡು ವರ್ಷವರೆಗೆ ಜೈಲಿನಲ್ಲಿರಬೇಕಾಗಿ ಬರಲಿದೆ. ಪಿಟ್ಎನ್ಡಿಪಿಎಸ್ …

ರಿಕ್ಕಿ ರೈ ವಿರುದ್ಧ ಗುಂಡಿನ ದಾಳಿ: ಮುತ್ತಪ್ಪ ರೈ ದ್ವಿತೀಯ ಪತ್ನಿ ಅನುರಾಧಾ ರೈ ಅಮೆರಿಕಕ್ಕೆ ಪರಾರಿ

ಬೆಂಗಳೂರು: ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ವಿರುದ್ಧ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದ್ವಿತೀಯ ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ರೈ ಅಮೆರಿಕಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ರಿಕ್ಕಿ ರೈ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಆಧಾರದ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಅನುರಾಧಾ ರೈ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆಯಂಗವಾಗಿ ಪೊಲೀಸರು ಅನುರಾಧಾ ರೈಗೆ ನೋಟೀಸು ನೀಡಲು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ …