ಮುಂಬೈ ದಾಳಿ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿದ ಉದ್ದೇಶ: ಸಮಗ್ರ ತನಿಖೆಗೆ ಎನ್ಐಎ ನಿರ್ಧಾರ
ಕೊಚ್ಚಿ: ಅಮೆರಿಕಾದಿಂದ ಮೊನ್ನೆ ಭಾರತಕ್ಕೆ ತಲುಪಿಸಿದ ಮುಂಬೈ ದಾಳಿ ಪ್ರಕರಣದ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಆ ಕುರಿತಾಗಿ ತನಿಖೆ ನಡೆಸಲು ಎನ್ಐಎ ನಿರ್ಧರಿಸಿದೆ. ತಹವೂರ್ ರಾಣನನ್ನು ಸಮಗ್ರ ತನಿಖೆಗೊಳಪಡಿಸಿದರೆ ನಿರ್ಣಾಯಕ ಮಾಹಿತಿ ಲಭಿಸಬ ಹುದೆಂದು ತನಿಖಾ ತಂಡ ನಿರೀಕ್ಷೆಯಿರಿಸಿದೆ. ಮುಂಬೈ ಭಯೋತ್ಪಾದನಾ ದಾಳಿಯ ಒಂದು ವಾರಹಿಂದೆಯಷ್ಟೇ ರಾಣ ಕೊಚ್ಚಿಗೆ ತಲುಪಿದ್ದನು. 2008 ನವಂಬರ್ 26ರಂದು ಮುಂಬೈಯಲ್ಲಿ ಉಗ್ರರ ದಾಳಿ ನಡೆದಿದ್ದು, ಇದರಲ್ಲಿ 170ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ನವಂಬರ್ 26ರಂದು …
Read more “ಮುಂಬೈ ದಾಳಿ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿದ ಉದ್ದೇಶ: ಸಮಗ್ರ ತನಿಖೆಗೆ ಎನ್ಐಎ ನಿರ್ಧಾರ”