ಬಿಜೆಪಿ ಮಂಜೇಶ್ವರ ಮಂಡಲ ಸಭೆ

ಮಂಜೇಶ್ವರ :ಬಿಜೆಪಿ ಇಂದು ಜಗತ್ತಿನ ಅತೀ ದೊಡ್ಡ ಪಕ್ಷ, ಕಾರ್ಯ ಕರ್ತರು ಬಿಜೆಪಿಯ ಶಕ್ತಿ ಮತ್ತು ಜೀವಾಳ. ನರೇಂದ್ರ ಮೋದಿ ನೇತೃತ್ವ ದಲ್ಲಿ ಬಿಜೆಪಿ ವೈಭವ ಹಂತದಲ್ಲಿದೆ. ಇದು ಪಕ್ಷದ ಅನೇಕ ಹಿರಿಯ ನೇತಾರರ ತ್ಯಾಗ ಹಾಗೂ ಸಮರ್ಪ ಣೆಯ ಫಲ ಎಂದು ಬಿಜೆಪಿ ಹಿರಿಯ ನೇತಾರ ವಿ. ರವೀಂದ್ರನ್ ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ. ಎಂ. ಅಧ್ಯಕ್ಷತೆ ವಹಿಸಿದ್ದರು. …

ಕೋರ್ಟ್ ಶುಲ್ಕ ಹೆಚ್ಚಳ ಹಿಂತೆಗೆಯಲು ಆಗ್ರಹಿಸಿ ಅಭಿಭಾಷಕ ಪರಿಷತ್ ಪ್ರತಿಭಟನೆ

ಕಾಸರಗೋಡು: ಕೋರ್ಟ್ ಶುಲ್ಕ ಹೆಚ್ಚಿಸಿದ ಕೇರಳ ಸರಕಾರದ ಕ್ರಮವನ್ನು ಕೂಡಲೇ ಹಿಂತೆಗೆಯಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಆಗ್ರಹಿಸಿದೆ. ನ್ಯಾಯಕ್ಕಾಗಿ ನ್ಯಾಯಾ ಲಯಕ್ಕೆ ತಲುಪುವ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುವ ಸರಕಾರದ ತೀರ್ಮಾನ ಸಂಪೂರ್ಣ ಅನೀತಿ ಯಾಗಿದೆ. ಉಚಿತವಾಗಿ ನ್ಯಾಯ ಲಭ್ಯಗೊಳಿಸಬೇಕಾದ ಸರಕಾರ ನ್ಯಾಯಾಲಯಗಳನ್ನು ಆದಾಯ ಮಾರ್ಗವಾಗಿ ಕಂಡುಕೊಳ್ಳುತ್ತಿದ್ದು, ಇದು ಜನಸಾಮಾನ್ಯರಿಗೆ ನ್ಯಾಯ ನಿಷೇಧಿಸು ವುದಕ್ಕೆ ಸಮಾನವಾಗಿದೆಯೆಂದು ಅಭಿಪ್ರಾಯಪಟ್ಟಿದೆ. ಶುಲ್ಕ ಹೆಚ್ಚಳವನ್ನು ಪ್ರತಿಭಟಿಸಿ ಭಾರತೀಯ ಅಭಿಭಾಷಕ ಪರಿಷತ್ ನೇತೃತ್ವದಲ್ಲಿ ನ್ಯಾಯವಾದಿ ಗಳು ಪ್ರತಿಭಟನಾ ಧರಣಿ ನಡೆಸಿದರು. ಗಜೆಟ್ ವಿಜ್ಞಾಪನೆಯ ಪ್ರತಿಯನ್ನು …

ಪರೀಕ್ಷೆ ಆರಂಭಕ್ಕೆ ನಿಮಿಷಗಳು ಬಾಕಿ: ಪರೀಕ್ಷಾರ್ಥಿಯ ಕೈಯಿಂದ ಹಾಲ್‌ಕಿಟ್ ಕಸಿದು ಹಾರಿದ ಹದ್ದು

ಕಾಸರಗೋಡು: ಪರೀಕ್ಷೆ ಆರಂಭಗೊಳ್ಳಲು ಕೇವಲ ನಿಮಿಷಗಳು ಮಾತ್ರವೇ ಬಾಕಿ ಇರುವಾಗಲೇ ಪರೀಕ್ಷಾ ಕೊಠಡಿಗೆ ತಲುಪಿದ ಹದ್ದು ಪರೀಕ್ಷಾರ್ಥಿಯ ಕೈಯಿಂದ ಹಾಲ್‌ಟಿಕೆಟ್ ಕಸಿದು ಕಚ್ಚಿಕೊಂಡು ಹಾರಿದ ವಿಸ್ಮಯಕಾರಿ ಘಟನೆ ನಡೆಯಿತು. ಇದರಿಂದ ಪರೀಕ್ಷಾರ್ಥಿಯಾದ ಅಧ್ಯಾಪಿಕೆ ಅಲ್ಪ ಹೊತ್ತು ಇನ್ನೇನು ಮಾಡುವುದೆಂದು ತಿಳಿಯದೆ ಗೊಂದಲದಲ್ಲಿ ಸಿಲುಕುವಂತಾಯಿತು. ಆದರೆ ಪುನಃ ಪರೀಕ್ಷಾ ಕೊಠಡಿಯತ್ತ ತಲುಪಿದ  ಹದ್ದು ತನ್ನ ಕಾಲುಗಳಲ್ಲಿ ಬಂಧಿಸಿಟ್ಟಿದ್ದ ಹಾಲ್ ಟಿಕೆಟನ್ನು ಕೆಳಕ್ಕೆ ಹಾಕಿದ್ದು, ಕೂಡಲೇ ಅದನ್ನು ಕೈಗೆತ್ತಿಕೊಂಡ ಅಧ್ಯಾಪಿಕೆ ನಿಟ್ಟುಸಿರು ಬಿಟ್ಟು ಪರೀಕ್ಷೆ ಬರೆದರು.  ಕಾಸರಗೋಡು ಟೌನ್ ಯುಪಿ …

ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿರುವವರ ಯಾದಿ ತಯಾರಿಸಲು ಪೊಲೀಸ್ ಇಲಾಖೆ ತೀರ್ಮಾನ

ಕಾಸರಗೋಡು: ರಾಜ್ಯದಲ್ಲಿ ಅಮಲು ಪದಾರ್ಥ ಸೇವನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವವರ ಯಾದಿ ತಯಾರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಜನಮೈತ್ರಿ ಪೊಲೀಸರು ಈ ಯಾದಿ ತಯಾರಿಸುವ ಕೆಲಸದಲ್ಲಿ ಈಗಾಗಲೇ ತೊಡಗಿದ್ದಾರೆ. ಹೀಗೆ ಮಾದಕದ್ರವ್ಯ ಸೇವನೆ ವೇಳೆ ಸಿಲುಕಿಕೊಂಡಿ ರುವವರ ಈಗಿನ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯವೆನಿಸಿದ್ದಲ್ಲಿ ಅವರನ್ನು ಕೌನ್ಸಿಲಿಂಗ್‌ಗೊಳಪಡಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ರಾಜ್ಯದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಜನಮೈತ್ರಿ ಪೊಲೀಸ್ ವಿಭಾಗಕ್ಕೆ ಇದರ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ವಿಶೇಷವಾಗಿ 21ಕ್ಕಿಂತ ಕೆಳ ಪ್ರಾಯದ ಅಮಲು ಪದಾರ್ಥ ವ್ಯಸನಿಗಳ ಯಾದಿಯನ್ನು ಇದರಂತೆ …

ಅಪರಿಮಿತ ಮೊಬೈಲ್ ಫೋನ್ ವೀಕ್ಷಣೆ: ಆಗುತ್ತಿದೆ ವಿಲ್ಲನ್: ಪ್ರತೀ 10 ಮಕ್ಕಳಲ್ಲಿ ಓರ್ವರಿಗೆ ದೃಷ್ಟಿ ದೋಷ ಪತ್ತೆ

ಕಾಸರಗೋಡು: ಅಪರಿಮಿತವಾದ ರೀತಿಯಲ್ಲಿ ಮೊಬೈಲ್ ಫೋನ್ ವೀಕ್ಷಣೆ ಈಗ ಮಕ್ಕಳಿಗೆ  ಮಾರಕವಾಗಿ ಪರಿಣಮಿಸುತ್ತಿದೆ. ಹೀಗೆ ಅಮಿತವಾದ ರೀತಿಯಲ್ಲಿ ಮೊಬೈಲ್ ಫೋನ್ ವೀಕ್ಷಿಸುವ ಪ್ರತೀ ಹತ್ತು ಮಕ್ಕಳಲ್ಲಿ ತಲಾ ಓರ್ವನಿಗೆ ಅತೀ ವೇಗದಲ್ಲಿ ದೃಷ್ಟಿ ದೋಷ ಉಂಟಾಗುತ್ತಿರುವುದನ್ನು ನೇತ್ರ ತಪಾಸಣೆಯೂ ಪತ್ತೆಹಚ್ಚಲಾಗಿದೆ. ರಾಷ್ಟ್ರೀಯ ಆಯುಷ್ಯ ಮಿಷನ್ ಆಶ್ರಯದಲ್ಲಿ ಜ್ಯಾರಿಗೊಳಿಸಲಾ ಗಿರುವ ದೃಷ್ಟಿ ಯೋಜನೆ ಪ್ರಕಾರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳ ದೃಷ್ಟಿ ಪರೀಕ್ಷಾ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದರಂತೆ ಜಿಲ್ಲೆಯಲ್ಲಿ ಈ ತನಕ 16 ಶಿಬಿರಗಳನ್ನು ನಡೆಸಲಾಗಿದ್ದು, ಅದರಲ್ಲಿ ೧೪೪ ವಿದ್ಯಾರ್ಥಿಗಳಲ್ಲಿ …

ಅಕ್ರಮ ಸಾರಾಯಿ ಪತ್ತೆ

ಕಾಸರಗೋಡು:  ನೀಲೇಶ್ವರ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಎಸ್.ಎನ್. ವೈಶಾಖ್ ನೇತೃತ್ವದ ಅಬಕಾರಿ ತಂಡ ಚೀಮೇನಿ ಮಾನ ಳಂನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಐದು ಲೀಟರ್ ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.  ಅದನ್ನು ಅಲ್ಲಿ ಬಚ್ಚಿಟ್ಟವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಣೂರಿನಲ್ಲಿ ಅತ್ಯಾಧುನಿಕ ಚಲನವೈಕಲ್ಯ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆ

ಕಣ್ಣೂರು:  ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಪಾರ್ಕಿಸನ್ಸ್, ಜನಿಟಿಕಲ್ ಡಿಸ್ಟೋನಿಯ ಮೊದಲಾದ ಚಲನ ವೈಕಲ್ಯಗಳು ತಗಲಿದ ವ್ಯಕ್ತಿಗಳಿಗೆ ಸಮಗ್ರ ಹಾಗೂ ಸಂಯೋಜಿತ  ಚಿಕಿತ್ಸೆ  ನೀಡುವುದಕ್ಕಾಗಿ ಆರಂಭಿಸಿದ ಪ್ರತ್ಯೇಕ ಪಾರ್ಕಿಸನ್ಸ್ ಆಂಡ್ ಮೂವ್‌ಮೆಂಟ್ ಡಿಸೋರ್ಡರ್ಸ್ ಸೆಂಟರ್‌ನ ಉದ್ಘಾಟನೆ ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನ ಕ್ಲಸ್ಟರ್  ಸಿಇಒ ನಿರೂಪ್ ಮುಂಡಯಾ ಡನ್ ನಿರ್ವಹಿಸಿದರು. ಈ ರೀತಿಯ ರೋಗಕ್ಕೆ ಉತ್ತರ ಮಲಬಾರ್‌ನಲ್ಲಿ ಚಿಕಿತ್ಸೆ ನೀಡುವ ಮೊದಲ ಅತ್ಯಾಧುನಿಕ ಕೇಂದ್ರವಿದಾಗಿ ದೆಯೆಂದು ಅವರು ತಿಳಿಸಿದ್ದಾರೆ.  ನ್ಯೂರೋಲೋಜಿಸ್ಟ್‌ಗಳು, ನ್ಯೂರೋ ಫಿಸಿಯೋ ತೆರಾಫಿಸ್ಟ್‌ಗಳು, ಸೈಕೋ ಲಾಜಿಸ್ಟ್‌ಗಳು, ಡಯಾಟೀಶಿ ಯನ್ …

ಕುಂಜತ್ತೂರು ಬಳಿ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ: ಕೊಲೆ ಎಂಬ ಶಂಕೆ

ಮಂಜೇಶ್ವರ: ಕುಂಜತ್ತೂರು ಬಳಿ ಬಾವಿಯೊಳಗೆ ಆಟೋ ಚಾಲಕರೊ ಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಮೃತದೇಹವನ್ನು ಇಂದು ಬೆಳಿಗ್ಗೆ ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಮೃತದೇಹದಲ್ಲಿ ತಲೆ, ಕೈ ಸಹಿತ ವಿವಿಧೆಡೆ ಇರಿತದ ಗಾಯಗಳು ಕಂಡುಬಂದಿದ್ದು ಇದೊಂದು  ಕೊಲೆ ಕೃತ್ಯವೆಂದು ಸಂಶಯಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.   ಕುಂಜತ್ತೂರು ಬಳಿಯ ಅಡ್ಕಪಳ್ಳ ಮಾನಿಗುಡ್ಡೆ ಎಂಬಲ್ಲಿನ ಹಿತ್ತಿಲಲ್ಲಿರುವ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಮಂಗಳೂರು ಮುಲ್ಕಿ ಕೊಲ್ನಾಡು ನಿವಾಸಿ ಮೊಹಮ್ಮದ್ ಶರೀಫ್ (52) ಎಂಬವರು ಮೃತ ಪಟ್ಟ ವ್ಯಕ್ತಿಯೆಂದು ದೃಢೀಕರಿಸಲಾಗಿದೆ. ನಿನ್ನೆ ರಾತ್ರಿ ೭ ಗಂಟೆ …

ಇತಿಹಾಸ ಸೃಷ್ಟಿಸುತ್ತಾ ಮುಂದುವರಿಯುತ್ತಿರುವ ಚಿನ್ನದ ದರ: ಇಂದು ಗ್ರಾಂಗೆ 1480 ರೂ. ಹೆಚ್ಚಳ

ತಿರುವನಂತಪುರ: ರಾಜ್ಯದಲ್ಲಿ ಚಿನ್ನದ ಬೆಲೆ ಇತಿಹಾಸದಲ್ಲೇ ಪ್ರಥಮವಾಗಿ ಪವನ್ಗೆ 69,000 ರೂ. ದಾಟಿದೆ. 70,000 ರೂ.ಗೆ ಇನ್ನು 40 ರೂಪಾಯಿಯಷ್ಟೇ ಕಡಿಮೆಯಿದೆ. ಇಂದು ಬೆಳಿಗ್ಗೆ 1480 ರೂ. ಗ್ರಾಂನಲ್ಲಿ ಹೆಚ್ಚಾಗಿ ಪವನ್ಗೆ 69,960 ರೂ.ಗೆ ತಲುಪಿದೆ. ನಿನ್ನೆ 8560 ರೂ. ಗ್ರಾಂಗೆ ಹಾಗೂ 68,480 ರೂ. ಎಂಬ ದಾಖಲೆ ಇವತ್ತು ಮುರಿದಿದೆ.ಕಳೆದ ಮೂರು ದಿನದ ಮಧ್ಯೆ ರಾಜ್ಯದಲ್ಲಿ 1 ಪವನ್ ಚಿನ್ನಕ್ಕೆ 4160 ರೂ. ಹೆಚ್ಚಾಗಿದೆ. ಗ್ರಾಂ ಲೆಕ್ಕದಲ್ಲಿ 520 ರೂ. ಏರಿದೆ. ಮಜೂರಿ ಹಾಗೂ ಜಿಎಸ್ಟಿ, …

ಅಪಘಾತಕ್ಕೀಡಾದ ಕಾರಿನಲ್ಲಿ ಕದ್ದ  ಮಾಲು ಪತ್ತೆಯಾದ ಪ್ರಕರಣ: ಸೂತ್ರಧಾರನೆಂದು ಶಂಕಿಸಲಾಗುತ್ತಿರುವ ಯಾಸಿನ್ ಖಾನ್ 80ಕ್ಕೂ

ಹೆಚ್ಚು ಪ್ರಕರಣಗಳ ಕುಖ್ಯಾತ ಅಂತಾರಾಜ್ಯ ಕಳವು ಆರೋಪಿ ಮುಳ್ಳೇರಿಯ: ಮುಳ್ಳೇರಿಯದಲ್ಲಿ ಎಪ್ರಿಲ್ 6ರಂದು ಮುಂಜಾನೆ ಅಪಘಾತಕ್ಕೀಡಾದ ಕಾರಿನಲ್ಲಿ ಚಿನ್ನ, ಬೆಳ್ಳಿ, ನಗದು ಹಾಗೂ  ಮಾರಕಾಯು ಧಗಳು ಪತ್ತೆಯಾದ ಪ್ರಕರಣದ ತನಿಖೆಯನ್ನು ಆದೂರು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಈ ಕಳವು ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು  ಅದರ ಸೂತ್ರಧಾರ ಎಂದು ಪೊಲೀ ಸರು ಶಂಕಿಸುತ್ತಿರುವ ಯಾಸಿನ್‌ಖಾನ್ (35) ಕುಖ್ಯಾತ ಅಂತಾರಾಜ್ಯ ಕಳವು ಆರೋಪಿಯಾಗಿದ್ದಾನೆ. ಮೂಲತಃ ಮೈಸೂರು ರಾಜೀವ್‌ನಗರ ನಿವಾಸಿಯಾಗಿರುವ ಆತ ಈಗ ಬೆಂಗಳೂರಿನ ಕೆ.ಜೆ.ಹಳ್ಳಿಯಲ್ಲಿ …