ಚಿನ್ನಾಭರಣಕ್ಕಾಗಿ ತಾಯಿಗೆ ಹಲ್ಲೆಗೈದು ಕೊಲೆ : ಸ್ವಾಭಾವಿಕ ಸಾವೆಂದು ತಿಳಿಸಿದ ಪುತ್ರ ಸೆರೆ

ಕಲ್ಲಿಕೋಟೆ: ಪೇರಂಬ್ರ ಕೂತಾಳಿಯಲ್ಲಿ ಗೃಹಿಣಿಯೋರ್ವೆಯ ಸಾವು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕೂತಾಳಿ ನಿವಾಸಿ ಹಾಗೂ ೬೫ರ ಹರೆಯದ ಪದ್ಮಾವತಿ ಅಮ್ಮರನ್ನು ಪುತ್ರ ಲಿಜೀಶ್ ಕೊಲೆಗೈದಿರುವುದಾಗಿ ಪತ್ತೆಹಚ್ಚಲಾಗಿದೆ. ಪ್ರಕರಣದಲ್ಲಿ ಲಿಜೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೇರಂಬ್ರ ಪೂತಾಳಿಯಲ್ಲಿ ಈ ತಿಂಗಳ ೫ರಂದು ಪದ್ಮಾವತಿ ಅಮ್ಮ ಮೃತಪಟ್ಟಿದ್ದರು. ಪ್ರಜ್ಞಾಹೀನೆಯಾಗಿ ಮಲಗಿರುವುದನ್ನು ಕಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಎಂದು ಅಂದು ಆರೋಪಿ ತಿಳಿಸಿದ್ದನು. ಪೇರಂಬ್ರ ಎಂ.ಇ.ಎಸ್. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಪದ್ಮಾವತಿ ಅಮ್ಮ …

ಅನಧಿಕೃತ ಹೊಯ್ಗೆ ಸಾಗಾಟ ಲಾರಿ ವಶ

ಮಂಜೇಶ್ವರ: ಕಳಾಯಿ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಚಾಲಕನನ್ನು ಬಂಧಿಸಿದ್ದಾರೆ.  ಬಡಾಜೆ ಕನಿಲ ನಿವಾಸಿ ಶೇಕ್ ಅಬ್ದುಲ್ಲ (31) ಬಂಧಿತ ಲಾರಿ ಚಾಲಕನಾಗಿದ್ದಾನೆ. ಮಂಜೇಶ್ವರ ಎಸ್‌ಐ  ರಾಜನ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ಬಾಯಿಕಟ್ಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನಧಿಕೃತವಾಗಿ ಹೊಯ್ಗೆ  ಸಹಿತ ಲಾರಿ ತಲುಪಿತ್ತು.

ಅರಸುಸಂಕಲ ದೈವಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಮೀಯಪದವು: ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಉಪಖಂಡ ಸಮಿತಿ ಸಂತಡ್ಕ ಮತ್ತು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಸಹಯೋಗ ದಲ್ಲಿ 22ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಅರಸು ಸಂಕಲ ಭವನದಲ್ಲಿ ಜರಗಿತು. ಧಾರ್ಮಿಕ ಸಭೆ ಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಬಾಲಸಂಸ್ಕಾರ ಪ್ರಮುಖ್ ಸೌಮ್ಯ ಪ್ರಕಾಶ್ ಮದಂಗಲ್ಲುಕಟ್ಟೆ ಧಾರ್ಮಿಕ ಪ್ರವಚನ ನೀಡಿದರು. ಅರಸುಸಂಕಲ ದೈವಕ್ಷೇತ್ರದ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಉಪಸ್ಥಿತ ರಿದ್ದರು. ಆಶಾ ಬಿ.ಎಂ. …

ಏಣಿಯರ್ಪು ಲೈಫ್ ಹೌಸ್ ವಿಲ್ಲಾಕ್ಕೆ ದಾರಿ ಸೌಕರ್ಯ: ಕಾಲನಿ ನಿವಾಸಿಗಳಿಗೆ ನೆಮ್ಮದಿ

ನೀರ್ಚಾಲು: ಏಣಿಯರ್ಪು ಲೈಫ್ ಹೌಸ್ ವಿಲ್ಲಾದ ೫೮ ಮನೆಗಳಿಗೆ ಜಿಲ್ಲಾಧಿಕಾರಿಯ ನಿರ್ದೇಶ ಪ್ರಕಾರ ದಾರಿ ಖಚಿತಪಡಿಸಲಾ ಯಿತು. ವರ್ಷಗಳ ಹಿಂದೆ ಸರಕಾರಿ ಸ್ಥಳವನ್ನು ಮಂಜೂರುಮಾಡಿ ಅದರಲ್ಲಿ ಮನೆ ನಿರ್ಮಿಸಿ ನೀಡುವು ದರೊಂದಿಗೆ  ಸ್ಥಳ, ಮನೆಯಿಲ್ಲದ ಕುಟುಂಬಗಳು ಸಂತೋಷಪಟ್ಟಿದ್ದರು. ಆದರೆ ಹೆಚ್ಚು ಕಾಲವಾಗುವುದರೊಳಗೆ ಕಾಲನಿ ನಿವಾಸಿಗಳು ನಡೆದು ಹೋಗುತ್ತಿದ್ದ ದಾರಿಯನ್ನು ಕೆಲವು ವ್ಯಕ್ತಿಗಳು ತಮ್ಮದೆಂದು ತಿಳಿಸಿ ಸಂಚಾರಕ್ಕೆ ಅಡಚಣೆಯೊಡ್ಡಿದ್ದರು. ಇದರ ವಿರುದ್ಧ  ಕಾಲನಿ ನಿವಾಸಿಗಳು ಸಿಪಿಎಂನ ನೇತೃತ್ವದಲ್ಲಿ ಬೇಳ ಗ್ರಾಮ ಕಚೇರಿಗೆ ಇತ್ತೀಚೆಗೆ ಮಾರ್ಚ್ ನಡೆಸಿದ್ದರು. ಕಾಲನಿ ನಿವಾಸಿಗಳಿಗೆ …

ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕ ಅಧ್ಯಕ್ಷರಾಗಿ ಡಾ. ಮಲ್ಲಿಕಾರ್ಜುನ ಎಸ್. ನಾಸಿ ಆಯ್ಕೆ

ಕಾಸರಗೋಡು: ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ. ಮಲ್ಲಿಕಾರ್ಜುನ ಎಸ್. ನಾಸಿಯವರನ್ನು ಕೇಂದ್ರ ಸಮಿತಿ ಅಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ ಆಯ್ಕೆ ಮಾಡಿ ಆದೇಶಿಸಿದ್ದಾರೆ. ಮೂಲತಃ ಕಲಬುರ್ಗಿ ಜಿಲ್ಲೆಯವರಾದ ಮಲ್ಲಿಕಾರ್ಜುನ ನಾಸಿ 2004ರಲ್ಲಿ ಕೇರಳದ ಕೊಚ್ಚಿಗೆ ತೆರಳಿದ್ದರು. 2019ರಲ್ಲಿ ಪೋತನಿ ಕ್ಕಾಡ್ ಸೈಂಟ್‌ಮೇರೀಸ್ ಎಂಬಲ್ಲಿ ಆಸ್ಪತ್ರೆ ಆರಂಭಿಸಿ ಜನಾನುರಾಗಿಯಾ ಗಿದ್ದರು. ಈ ಪ್ರದೇಶದ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ಭಾಷೆ ಸಂಸ್ಕೃತಿ ಬೆಳೆಸಲು ನಿರಂತರ ಪ್ರೋತ್ಸಾಹ ನೀಡಿದ್ದಾರೆ. …

ಹೃದಯಾಘಾತದಿಂದ ವ್ಯಕ್ತಿ ನಿಧನ

ಕುಂಬಳೆ: ಪೆರುವಾಡ್ ಇರ್ಫಾನ ಮಂಜಿಲ್‌ನ ಬಶೀರ್ ಎಚ್.ಐ. (57) ಹೃದ ಯಾಘಾ ತದಿಂದ ನಿಧನ ಹೊಂದಿದರು. ಇಂದು ಮುಂಜಾನೆ 2 ಗಂಟೆಗೆ ನಿದ್ದೆಯಿಂದ ಎಚ್ಚೆತ್ತ ಇವರು ಎದೆನೋವು ಅನುಭವಗೊಂಡ ಬಗ್ಗೆ ಮನೆಯವರಲ್ಲಿ ತಿಳಿಸಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ ನಿಧನ ಸಂಭವಿಸಿದೆ. ಬಶೀರ್ ಈ ಹಿಂದೆ ಗಲ್ಫ್ ಉದ್ಯೋಗಿ ಯಾಗಿದ್ದರು. ಮೃತರು ಪತ್ನಿ ರಮ್ಲ, ಮಕ್ಕಳಾದ ಇರ್ಫಾನ, ರಹಿಯಾನ, ಪರ್ಹಾನ, ಅಳಿಯಂದಿರಾದ ರಿಯಾಸ್, ಅಶ್ರಫ್, ಸುಬೈರ್, ಸಹೋದರ- ಸಹೋದರಿಯ ರಾದ ಮೊಹಮ್ಮದ್, ಇಬ್ರಾಹಿಂ, ಹಮೀದ್, ಅಬುಸಾಲಿ, …

ಬೀದಿಬದಿ ವ್ಯಾಪಾರಿಗಳ ಮಾರುಕಟ್ಟೆ ಕಟ್ಟಡ ಉದ್ಘಾಟನೆ

ಕಾಸರಗೋಡು: ನಗರಸಭೆ ಕುಟುಂಬಶ್ರೀ, ರಾಷ್ಟ್ರೀಯ ನಗರ ಉಪಜೀವನ ಮಿಷನ್ ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಿಸಿದ ಬೀದಿಬದಿ ವ್ಯಾಪಾರ ಮಾರುಕಟ್ಟೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಕುಟುಂಬಶ್ರೀ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಚ್. ದಿನೇಶನ್ ಮುಖ್ಯ ಅತಿಥಿಯಾಗಿದ್ದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ಆರ್. ರೀತಾ, ಖಾಲಿದ್ ಪಚ್ಚಕ್ಕಾಡ್, ಆರ್. ರಜನಿ, ಯೋಜನಾ ಸಮಿತಿ ಉಪಾಧ್ಯಕ್ಷ ಎ. ಅಬ್ದುಲ್ ರಹ್ಮಾನ್, ಕೌನ್ಸಿಲರ್‌ಗಳಾದ ಕೆ.ಜಿ. ಪವಿತ್ರ, ಪಿ. ರಮೇಶ್, …

ಕಾಲ್ಚೆಂಡು ಆಟಗಾರ ನಿಧನ

ಕಾಸರಗೋಡು: ಬದುಕಿಗೆ ಕೈ ಹಿಡಿದು ಮುನ್ನಡೆಸಲು ನಾಡಿನ ಜನರು ಒಂದಾಗಿಯೂ ಫಲಪ್ರಾಪ್ತಿ ಉಂಟಾಗಿಲ್ಲ. ಕಾಲ್ಚೆಂಡು ಆಟಗಾರನಾಗಿದ್ದ ವಲಿಯಪ ರಂಬ್ ನಿವಾಸಿ ಟಿ.ಕೆ. ಅನಿಲ್ ಕುಮಾರ್ (54) ಕೊನೆಗೂ ನಿಧನ ಹೊಂದಿದರು. ಕ್ಯಾನ್ಸರ್ ತಗಲಿ ಅನಿಲ್ ಕುಮಾರ್ ಚಿಕಿತ್ಸೆಯಲ್ಲಿದ್ದು, ಇವರ ಚಿಕಿತ್ಸೆಯ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ಸ್ಥಳೀಯರ ನೇತೃತ್ವದಲ್ಲಿ ಚಿಕಿತ್ಸಾ ಸಹಾಯಸಮಿತಿ ರೂಪೀಕರಿಸಲಾ ಯಿತು. ನಿನ್ನೆ ಮರಣ ಸಂಭವಿಸಿದೆ. ವಲಿಯಪರಂಬ್ ಕೆಜಿಎಂ ಸ್ಪೋರ್ಟ್ಸ್ ಕ್ಲಬ್‌ನ ಉತ್ತಮ ಕಾಲ್ಚೆಂಡು ಆಟಗಾರನಾಗಿ ದ್ದರು. ಕ್ಲಬ್‌ನ ಕಾರ್ಯದರ್ಶಿಯಾಗಿದ್ದರು. ರಾಜ್ಯ ರೆಫರೀಸ್ ಬೋರ್ಡ್ ಸದಸ್ಯನಾಗಿಯೂ …

ಮಂಜೇಶ್ವರ ಪಂಚಾಯತ್‌ನ ನೂತನ ಕಾಂಪ್ಲೆಕ್ಸ್‌ಗೆ ಶಿಲಾನ್ಯಾಸ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ಆಡಳಿತ ಮಂಡಳಿ, ಸ್ಥಳೀಯರ ನಿರೀಕ್ಷೆಯಾಗಿದ್ದ ಪಂಚಾಯತ್ ಕಾಂಪ್ಲೆಕ್ಸ್‌ಗೆ ಶಂಕು ಸ್ಥಾಪನೆ ನಡೆಸಲಾಯಿತು. ಮೂರು ಅಂತಸ್ತಿನ ಕಟ್ಟಡವನ್ನು ಮಂಜೇಶ್ವರ ಮೀನು ಮಾರುಕಟ್ಟೆ ಬಳಿ ನಿರ್ಮಿಸಲಾಗುತ್ತಿದೆ. 1,30,86,923 ರೂ. ವೆಚ್ಚ ನಿರೀಕ್ಷಿಸಲಾಗಿದೆ. ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ ಶಿಲಾನ್ಯಾಸ ನೆರವೇರಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್, ಸದಸ್ಯರಾದ ಮುಮ್ತಾಸ್ ಸಮೀರ, ಯಾದವ ಬಡಾಜೆ, ರಾಧಾ, ಸುಪ್ರಿಯ, ಜಯಂತಿ, ರೇಖಾ, ಲಕ್ಷ್ಮಣ, ಕಾರ್ಯದರ್ಶಿ ಜೋರ್ಜ್ ಸಹಿತ ಹಲವರು ಉಪಸ್ಥಿತರಿದ್ದರು.

ಮುಳ್ಳೇರಿಯ ವಿದ್ಯಾಶ್ರೀಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿದರು. ನಿವೃತ್ತ ಉಪ ತಹಶೀಲ್ದಾರ್ ನಾರಾಯಣ ಗೋಸಾಡ ಮಾಹಿತಿ ನೀಡಿದರು. ವ್ಯಾಪಾರಿ ಘಟಕ ಅಧ್ಯಕ್ಷ ಗಣೇಶ್ ವತ್ಸ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ರಾಜೇಶ್ವರಿ ಉಪಸ್ಥಿತರಿದ್ದರು. ಮೇಲ್ವಿಚಾರಕ ಸುರೇಶ್ ಸ್ವಾಗತಿಸಿ, ವಲಯ …