ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ ನಿಧನ
ಚೆನ್ನೈ: ತಮಿಳುನಾಡಿನ ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ (92) ಎಂಬವರು ನಿಧನಹೊಂದಿದರು.ಕನ್ಯಾಕುಮಾರಿ ಜಿಲ್ಲೆಯ ಕುಮರಿಮಂಗಲದಲ್ಲಿ ಜನಿಸಿದ ಆನಂದನ್ ಅವರು ಕಾಮರಾಜ್ರ ನೀತಿಯಿಂದ ಆಕರ್ಷಿತರಾಗಿ ಕಾಂಗ್ರೆಸ್ ಸೇರಿದ್ದರು. 1977ರಲ್ಲಿ ನಾಗರಕೋವಿಲ್ ಮಂಡಲ ದಿಂದ ಗೆಲುವು ಸಾಧಿಸಿ ಸಂಸತ್ಗೆ ತಲುಪಿದ್ದರು. ಮೊಟ್ಟಮೊದಲ ಬಾರಿಗೆ ಲೋಕಸಭೆಯಲ್ಲಿ ತಮಿಳಿನಲ್ಲಿ ಭಾಷಣ ಮಾಡಿದ ಸಂಸದ ಇವರಾಗಿದ್ದರು. 1980ರಲ್ಲಿ ಗಾಂಧಿ ಕಾಮರಾಜ್ ರಾಷ್ಟ್ರೀ ಯ ಕಾಂಗ್ರೆಸ್ ಪಾರ್ಟಿ ರೂಪೀಕರಿಸಿ ದರು.1980, 1984ರ ಚುನಾವಣೆಯಲ್ಲಿ ಈ ಪಕ್ಷದಿಂದ ಗೆಲುವುಸಾಧಿಸಿ ವಿಧಾನ ಸಭೆಗೆ ತಲುಪಿದ್ದರು. ಅನಂತರ ಕಾಂಗ್ರೆಸ್ಗೆ …