ಶಿರಿಯ ಅಂಗನವಾಡಿ ಮದ್ರಸ ಬಳಿ ಮುರಿದು ಬೀಳುತ್ತಿರುವ ರೆಂಬೆಗಳಿಂದ ಆತಂಕ; ತೆರವುಗೊಳಿಸಲು ನೀಡಿದ ಮನವಿಗೆ ಅಧಿಕಾರಿಗಳ ಮೌನ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿ ಇರುವ ಬೃಹತ್ ಮರಗಳು ಇಲ್ಲಿ ಕಾರ್ಯಾಚರಿ ಸುತ್ತಿರುವ ಅಂಗನವಾಡಿ ಹಾಗೂ ಮದ್ರಸಕ್ಕೆ ಅಪಾಯಕಾರಿಯಾಗಿ ಮಾರ್ಪಾಡುಗೊಂಡಿದೆ. ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮರದ ರೆಂಬೆಗಳು ಅಪಾಯ ಆಹ್ವಾನಿಸುತ್ತಿದೆ. ಕಳೆದ ಶನಿವಾರ ಮುಂಜಾನೆ ಭಾರೀ ಗಾಳಿ, ಮಳೆಗೆ ರೆಂಬೆ ಕಟ್ಟಡದ ಮೇಲೆ ಬಿದ್ದು, ಬಾಗಿಲು, ನೀರಿನ ಟ್ಯಾಂಕ್, ಆವರಣ ಗೋಡೆ ಹಾನಿಗೊಂಡಿದೆ. ಇದು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನ ವಾಡಿ …