ಎಡರಂಗ ಸರಕಾರದಿಂದ ದುಂದುವೆಚ್ಚ-ಕಾಂಗ್ರೆಸ್ ಆರೋಪ
ಪೈವಳಿಕೆ: ಕೇರಳದ ಎಡರಂಗ ಸರಕಾರ ಜನಸಾಮಾನ್ಯರನ್ನು ಮರೆತು ಆಡಳಿತ ನಡೆಸುತ್ತಿದ್ದು ದುಂದುವೆಚ್ಚ ಹಾಗೂ ಸ್ವಜನಪಕ್ಷಪಾತದಿಂದ ಕೂಡಿದ ಆಡಳಿತ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಯು ಡಿ ಎಫ್ ವಿಧಾನಸಭಾ ಕ್ಷೇತ್ರ ಸಂಚಾಲಕ ಮಂಜುನಾಥ ಆಳ್ವ ನುಡಿದರು. ಯು ಡಿ ಎಫ್ ರಾಜ್ಯ ಸಮಿತಿ ಆಹ್ವಾನದಂತೆ ರಾಜ್ಯದಾದ್ಯಂತ ಪಂಚಾಯತು ಮಟ್ಟದಲ್ಲಿ ನಡೆದ ಅಹೋ ರಾತ್ರಿ ಮುಷ್ಕರವನ್ನು ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತುಗಳ ಅನುದಾನವನ್ನು ಕಡಿತಗೊಳಿಸಿ ಪಂ. ಆಡಳಿತದ ಕತ್ತು ಹಿಸುಕುವ ಕೆಲಸ ರಾಜ್ಯ ಸರಕಾರ ನಡೆಸುತ್ತಿದೆ ಎಂದು ಅವರು …