ನಟ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸು ಜ್ಯಾರಿ

ಕೊಚ್ಚಿ: ಎಂಬುರಾನ್ ಸಿನಿಮಾ ಭಾರೀ ವಿವಾದದಲ್ಲಿ ಸಿಲುಕಿರುವ ವೇಳೆಯಲ್ಲೇ ಈ ಚಿತ್ರದ ನಿರ್ದೇಶಕ ಹಾಗೂ ನಟನಾಗಿರುವ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆ ನೋಟೀಸು ಜ್ಯಾರಿಗೊಳಿಸಿದೆ. ಕಡುವ , ಜನಗಣಮನ, ಗೋಲ್ಡ್ ಎಂಬೀ  ಚಿತ್ರದಲ್ಲಿ  ಎಷ್ಟು ಸಂಭಾವನೆ ಪಡೆಯಲಾಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ನೋಟೀಸಿನಲ್ಲಿ ಆದಾಯ ತೆರಿಗೆ ಇಲಾಖೆ ಪೃಥ್ವೀರಾಜ್‌ಗೆ ನಿರ್ದೇಶ ನೀಡಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ಪೃಥ್ವೀರಾಜ್ ಯಾವುದೇ ಸಂಭಾವನೆ ಪಡೆದಿರಲಿಲ್ಲ ಎನ್ನಲಾಗಿದೆ. ಆದರೆ ಅದರ ಸಹ ನಿರ್ಮಾಪಕ ಎಂಬ ನೆಲೆಯಲ್ಲಿ ಅವರು ೪೦ …

ಅಡೂರಿನ ವ್ಯಾಪಾರಿ ನಿಧನ ಅನಿರೀಕ್ಷಿತ ಆಘಾತದಿಂದ ಸ್ಥಳೀಯರಲ್ಲಿ ಶೋಕ

ಕಾಸರಗೋಡು: ಮನೆಯಿಂದ ಅಂಗಡಿಗೆಂದು ತೆರಳಲು ಸಿದ್ಧತೆಯಲ್ಲಿದ್ದಾಗ ಅಸ್ವಸ್ಥಗೊಂಡು ವ್ಯಾಪಾರಿ ಮೃತಪಟ್ಟ ಘಟನೆ ಅಡೂರಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಡೂರು ಬಸ್ ನಿಲ್ದಾಣ ಬಳಿಯ ರೋಯಲ್ ಮಾರ್ಟ್ಸ್ ಸುಪರ್ ಮಾರ್ಕೆಟ್ ಮಾಲಕ ಸಿರಾಜುದ್ದೀನ್ (38) ಮೃತಪಟ್ಟಿದ್ದು, ನಿನ್ನೆ ಬೆಳಿಗ್ಗೆ ೭ ಗಂಟೆಗೆ ಘಟನೆ ನಡೆದಿದೆ. ಅಂಗಡಿಗೆ ತೆರಳಲು ಸಿದ್ಧತೆಯಲಿ ರುವಾಗ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಮನೆ ಮಂದಿ  ವೈದ್ಯರನ್ನು ಮನೆಗೆ ಕರೆಸಿದ್ದು, ಅವರು ಬಂದು ಪರಿಶೀಲಿಸಿ ನಿಧನ ಸಂಭವಿಸಿ ರುವುದನ್ನು ಖಚಿತಪಡಿಸಿದರು. ವೋಯ್ಸ್ ಆಫ್ ಅಡೂರು ಕ್ಲಬ್‌ನ ಅಧ್ಯಕ್ಷರಾಗಿದ್ದರು. ದಿ| …

ಸ್ನೇಹಿತೆಯ ಮನೆಗೆಂದು ತಿಳಿಸಿ ಹೋದ ಯುವತಿಯರು ಲಾಡ್ಜ್ ಕೊಠಡಿಯಲ್ಲಿ ಮಾದಕವಸ್ತು ಬಳಕೆ ; ಕೊನೆಗೆ ಯುವಕರೊಂದಿಗೆ ಸೆರೆ

ಕಾಸರಗೋಡು:     ಸ್ನೇಹಿತೆಯ ಮನೆಗೆಂದು ತಿಳಿಸಿ ಮನೆಗಳಿಂದ ಹೋದ ಯುವತಿಯರು ಇಬ್ಬರು ಯುವಕರೊಂದಿಗೆ ಮಾದಕವಸ್ತು ಬಳಸುತ್ತಿದ್ದ ವೇಳೆ ಲಾಡ್ಜ್ ಕೊಠಡಿಯಲ್ಲಿ  ಅಬಕಾರಿ ಅಧಿಕಾರಿಗಳ ಸೆರೆಗೀಡಾಗಿದ್ದಾರೆ. ಮಟ್ಟನ್ನೂರು ಮರುದಾಯಿ ನಿವಾಸಿ ಮುಹಮ್ಮದ್ ಶಮ್ನಾದ್ (23), ವಳಪಟ್ಟಣದ ಮುಹಮ್ಮದ್ ಜಂಶೀಲ್ (37), ಇರಿಕ್ಕೂರ್‌ನ ರಫೀನ (24), ಕಣ್ಣೂರಿನ ಜಸೀನ (22) ಎಂಬಿವರನ್ನು ತಳಿಪರಂಬ ಅಬಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ ಕುಮಾರ್ ನೇತೃತ್ವದ ತಂಡ ಸೆರೆಹಿಡಿದಿದೆ. ಪರಶ್ಶಿನಿ ಕೋಲ್‌ಮೊಟ್ಟದಲ್ಲಿರುವ ಲಾಡ್ಜ್‌ನಲ್ಲಿ ನಡೆಸಿದ ತಪಾಸಣೆ ವೇಳೆ  ಯುವಕರು ಹಾಗೂ ಯುವತಿಯರು ಸೆರೆಗೀಡಾಗಿದ್ದಾರೆ. ಇವರಿಂದ 490 …

ಕಾರಿನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ

ಕಾಸರಗೋಡು: ಶಿರಿಬಾಗಿಲು ಸಮೀಪದ ಮಾಯಿಪ್ಪಾಡಿಯಲ್ಲಿ ಕಾಸರಗೋಡು ಅಬಕಾರಿ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆಯವರ ನೇತೃತ್ವದ ತಂಡ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಿAದ ಮಾದಕ ವಸ್ತುವಾದ 2.419 ಗ್ರಾಂ ಎಂಡಿಎAಎ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬAಧಿಸಿ ನೆಕ್ರಾಜೆ, ಪೈಕ, ಬಾಲಡ್ಕ ನಿವಾಸಿ ಕೆ.ಪಿ. ಹೌಸ್ನ ಅಷ್ರೀನ್ ಅನ್ವಾಸ್ ಪಿ.ಎಂ.(32) ಹಾಗೂ ನೀರ್ಚಾಲ್ ಕನ್ಯಪ್ಪಾಡಿಯ ಕರಿಕಟ್ಟಪಳ್ಳ ಹೌಸ್ನ ಹಮೀರ್ ಎನ್(29) ಎಂಬವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ …

ಯುವಕನೋರ್ವ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಯುವಕನೋರ್ವ ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕಾಸರಗೋಡು ಕಸಬಾ ಹಾರ್ಬರ್ ರಸ್ತೆ ಬಳಿಯ ಮೀನು ಕಾರ್ಮಿಕ ಸುರೇಂದ್ರನ್ ಎಂಬವರ ಪುತ್ರ ಧನ್‌ಶ್ಯಾಂ (25) ಸಾವನ್ನಪ್ಪಿದ ಯುವಕ. ಈ ಹಿಂದೆ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದ ಈತ ಈಗಷ್ಟೇ ಊರಿಗೆ ಹಿಂತಿರುಗಿದ್ದನು. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.  ಮೃತರು ತಂದೆಯ ಹೊರತಾಗಿ ತಾಯಿ ಬಿಂದು, ಸಹೋದರ ಶಿವನ್, ಸಹೋದರಿ ಶ್ಯಾಮಿಲಿ ಹಾಗೂ ಅಪಾರ …

ರೈಲಿನಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಯುವತಿ

ಕಾಸರಗೋಡು: ರೈಲಿನಲ್ಲಿ ಅನುಚಿತವಾದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯನ್ನು ಯುವತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ತಿರುವನಂತಪುರ-ಮಂಗಳೂರು ಮಲಬಾರ್ ಎಕ್ಸ್‌ಪ್ರೆಸ್ ರೈಲುಗಾಡಿ ಯಲ್ಲಿ ಈ ಬೆಳವಣಿಗೆ ನಡೆದಿದೆ. ಕೆಲಸದ ನಿಮಿತ್ತ ರೈಲಿನಲ್ಲಿ ನೀಲೇಶ್ವರಕ್ಕೆ ಬರುತ್ತಿದ್ದ ಯುವತಿ ನೀಲೇಶ್ವರದಲ್ಲಿ ಇಳಿಯುತ್ತಿದ್ದ ವೇಳೆ ರೈಲಿನ ಬಾಗಿಲಿನಲ್ಲಿ ಕಣ್ಣೂರು ಚೊವ್ವಾ ನಿವಾಸಿಯಾಗಿರುವ ವ್ಯಕ್ತಿ ಜ್ಯೋತಿಷ್ ಎಂಬಾತ ಆಕೆಯೊಂದಿಗೆ ಅನುಚಿತ ವಾಗಿ ವರ್ತಿಸಿದನೆಂದು ಆರೋಪಿಸ ಲಾಗಿದೆ.  ನಂತರ ಆ ವ್ಯಕ್ತಿಯನ್ನು ಯುವತಿ ಹಿಂಬಾಲಿಸಿ ಆತನನ್ನು ಹಿಡಿದು ನೀಲೇಶ್ವರ ಪೊಲೀಸರಿಗೆ  ಒಪ್ಪಿಸಿದ್ದಾಳೆ. ನಂತರ ಆತನನ್ನು …

ಮಂಜೇಶ್ವರದ ಯುವತಿ ನಾಪತ್ತೆ: ತನಿಖೆ ಆರಂಭ

ಉಪ್ಪಳ: ಮಂಜೇಶ್ವರ ನಿವಾಸಿಯಾದ ಯುವತಿಯೋರ್ವೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮಂಜೇಶ್ವರ ಕೆ.ಜಿ.ಎಂ. ರಸ್ತೆಯ ಸುನೈನ ಕೋಟೇಜ್‌ನಲ್ಲಿ ವಾಸಿಸುವ ರಮ್ಲ ಎಂಬವರ ಪುತ್ರಿ ರೈಶಾನ (20) ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ನಿನ್ನೆ ತಳಿಪರಂಬದಲ್ಲಿ ರುವ ಪತಿಯ ಮನೆಯಿಂದ ಈಕೆ ನಾಪತ್ತೆಯಾಗಿದ್ದಾಳೆ. ಮಧ್ಯಾಹ್ನ 1.30ರ ವೇಳೆ ಪುತ್ರಿ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪತಿ ಮನೆಯಿಂದ ಹೊರಗೆ ತೆರಳಿದ ಪುತ್ರಿ ಕುಂಬಳೆಯ ಮುಸ್ತಫ ಎಂಬಾತನೊಂದಿಗೆ ಹೋಗಿರುವುದಾಗಿ ಶಂಸಯಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನಿಧನ

ಎಡನೀರು: ಪೆರಡಾಲಮೂಲೆ ನಿವಾಸಿ ಕೆ. ಗೋವಿಂದ ಭಟ್ (68) ನಿಧನ ಹೊಂದಿದರು.  ಮೃತರು ಪತ್ನಿ ಶಾರದಾ ಅಡೆಕೋಡ್ಲು, ಪುತ್ರ ಆದರ್ಶ, ಪುತ್ರಿ ಅಂಜಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಟೋರಸ್ ಲಾರಿ ಸ್ಕೂಟರ್‌ಗೆ ಢಿಕ್ಕಿ: ಯುವಕ ದಾರುಣ ಮೃತ್ಯು

ಕಾಸರಗೋಡು: ಟೋರಸ್ ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೇಲ್ಪರಂಬ ಒರವಂಕರದ ಶರೀಫ್ ಹಾಗೂ ಖೈರುನ್ನಿಸಾರ ಪುತ್ರ ಮುಹಮ್ಮದ್ ಹನೀಫ್ (26) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 8.40ರ ವೇಳೆ ಚೆಮ್ನಾಡ್ ಜಮಾಅತ್ ಹೈಸ್ಕೂಲ್ ಸಮೀಪ ರಾಜ್ಯ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಹೊಂಡಕ್ಕೆ ಸಿಲುಕಿಕೊಂಡ ಸ್ಕೂಟರ್‌ನ ಹಿಂದೆ ಬಂದ ಲಾರಿ ಢಿಕ್ಕಿ ಹೊಡೆದು ಹನೀಫ್ ರಸ್ತೆಗೆಸೆಯಲ್ಪಟ್ಟಿದ್ದರೆಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈದುಲ್ ಫಿತ್ ಹಬ್ಬಕ್ಕಾಗಿ ಗಲ್ಫ್‌ನಿಂದ ಊರಿಗೆ …

ಶಬರಿಮಲೆ: ಎಲ್ಲಾ ತೀರ್ಥಾಟಕರಿಗೂ ವಿಮಾ ಸಂರಕ್ಷಣೆ

ಶಬರಿಮಲೆ: ಶಬರಿಮಲೆ ತೀರ್ಥಾಟನೆಗೆ ಆಗಮಿಸುವ ಎಲ್ಲಾ ತೀರ್ಥಾಟಕರಿಗೂ ವಿಮೆ ಸಂರಕ್ಷಣೆ ಒದಗಿಸಲು ತಿರುವಿದಾಂಕೂರ್ ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಈ ತನಕ ಶಬರಿಮಲೆ ತೀರ್ಥಾಟನೆಗೆ ಆಗಮಿಸುವ ತೀರ್ಥಾಟಕರು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದರೆ ಅವರಿಗೆ ಅಥವಾ ಅವರ ಆಶ್ರಿತರಿಗೆ ವಿಮೆ ಸಂರಕ್ಷಣೆ ಲಭಿಸುತ್ತಿತ್ತು. ಈ ವಿಮಾ ಸಂರಕ್ಷಣೆಯನ್ನು ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ತೀರ್ಮಾನ ಮಂಡಳಿ ಈಗ ಕೈಗೊಂಡಿದೆ. ಇದರಂತೆ ಶಬರಿಮಲೆ ತೀರ್ಥಾಟನೆಗಾಗಿ ಆಗಮಿಸುವ ಭಕ್ತರು ರಾಜ್ಯದ ಅದ್ಯಾವುದೇ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದರೆ ಅವರ ಆಶ್ರಿತರಿಗೆ ಐದು …