ತ್ಯಾಜ್ಯ ಸಮಸ್ಯೆ: ನೂರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಕಾಸರಗೋಡು:  ನೂರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಿಗೆ ಇನ್ನು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯಬೇಕು. ಮಾತ್ರವಲ್ಲ ಅಂತಹ ಕಾರ್ಯಕ್ರಮಗಳ ತ್ಯಾಜ್ಯಗಳನ್ನು ಅವರೇ ಕಡ್ಡಾಯವಾಗಿ ಸಂಸ್ಕರಿಸಬೇಕು. ಇಂತಹ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದೆಂದು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ. ತ್ಯಾಜ್ಯ ಹಾಗೂ ಮಲೀನೀಕರಣ ತಡೆಗಟ್ಟಲು ಹೈಕೋರ್ಟ್ ನೀಡಿರುವ ನಿರ್ದೇಶವನ್ನು  ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಹೈಕೋರ್ಟ್ ನೀಡಿರುವ ನಿರ್ದೇಶಗಳ ಆಧಾರದಲ್ಲಿ ಮಾತ್ರವೇ ಸಾರ್ವಜನಿಕ ಸ್ಥಳಗಳಲ್ಲಿ ಬೋರ್ಡ್ ಬ್ಯಾನರ್ ಇತ್ಯಾದಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುವುದು. ಕೇರಳವನ್ನು ಸಂಪೂರ್ಣ ತ್ಯಾಜ್ಯ …

ಏಮ್ಸ್ ಆಸ್ಪತ್ರೆ: ಕೇಂದ್ರಾನುಮತಿ ಲಭಿಸುವ ಮೊದಲೇ ಲಕ್ಷಾಂತರ ರೂ. ವ್ಯಯಿಸಿದುದಾದರೂ ಯಾತಕ್ಕಾಗಿ…?- ಹೈಕೋರ್ಟ್

ಕಾಸರಗೋಡು: ಕೇಂದ್ರ ಸರಕಾರದ ಅನುಮತಿ ಲಭಿಸುವ ಮೊದಲೇ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಕಲ್ಲಿಕೋಟೆಯ ಕಿನಾಲೂರಿನಲ್ಲಿ ಲಕ್ಷಾಂತರ ರೂ. ವ್ಯಯಿಸಿ ಜಮೀನು ಖರೀದಿಸಿದುದಾದರೂ ಯಾತಕ್ಕಾಗಿ ಎಂದು ಪ್ರಶ್ನಿಸುವ ಮೂಲಕ ಹೈಕೋರ್ಟ್ ರಾಜ್ಯ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ. ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡಿನಲ್ಲಿ ಆರಂಭಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಏಮ್ಸ್ ಕಾಸರಗೋಡು ಜನಕೀಯ ಒಕ್ಕೂಟ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಸಂಬAಧಿಸಿ ರಾಜ್ಯ ಸರಕಾರ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ, ಕಲ್ಲಿಕೋಟೆಯ ಕಿನಾಲೂರಿನಲ್ಲಿ ಏಮ್ಸ್ ಆಸ್ಪತ್ರೆಗಾಗಿ ಅಗತ್ಯದ ಜಮೀನು ಗುರಿತಿಸಲಾಗಿದೆ ಎಂದು …

ಕರ್ನಾಟಕ ಮದ್ಯ ಪತ್ತೆ

ಮಂಜೇಶ್ವರ: ಕಯ್ಯಾರು ಗ್ರಾಮದ ಪರಂಬಳ ಅಂಗನವಾಡಿ  ಸಮೀಪದಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 3.42 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವನ್ನು  ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳ ತಂಡ ನಿನ್ನೆ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಪ್ರಿವೆಂಟೀವ್ ಆಫೀಸರ್ ಪೀತಾಂಬರನ್ ಕೆ ನೇತೃತ್ವದಲ್ಲಿ  ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ಎಂ ಮತ್ತು ಚಾಲಕ ಪ್ರವೀಣ್ ಎಂಬಿವರನ್ನೊಳಗೊಂಡ ತಂಡ  ಅಬಕಾರಿ ಕಾರ್ಯಾಚರಣೆ ನಡೆಸಿದೆ.

ಖ್ಯಾತ ಮಲೆಯಾಳ ಸಿನಿಮಾ ನಟ ರವಿ ಕುಮಾರ್ ನಿಧನ

ಚೆನ್ನೈ: 1970 ಮತ್ತು 80ರ ಅವಧಿಯಲ್ಲಿ ಮಲೆಯಾಳಂ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಹಿರಿಯ ನಾಯಕನಟ ರವಿ ಕುಮಾರ್ (71) ನಿಧನಹೊಂದಿದರು. ಇವರು ಅರ್ಬುದ ರೋಗದ ನಿಮಿತ್ತ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿ ದ್ದರು. ಅದು ಫಲಕಾರಿಯಾಗದೆ ನಿನ್ನೆ ನಿಧನಹೊಂದಿದರು.ತೃಶೂರು ನಿವಾಸಿಯಾದ ಕೆ.ಎಂ.ಕೆ. ಮೆನೋನ್-ಆರ್. ಭಾರತಿ ದಂಪತಿ ಪುತ್ರನಾಗಿ 1954ರಲ್ಲಿ ಜನಿಸಿದ ರವಿ ಕುಮಾರ್ ನೂರಕ್ಕೂ ಹೆಚ್ಚು ಮಲೆ ಯಾಳಂ ಸಿನಿಮಾದಲ್ಲಿ ಅಭಿನಯಿಸಿ ದ್ದರು. 1967ರಲ್ಲಿ ತೆರೆಕಂಡ ‘ಇಂಧುಲೇಖ’ ಎಂಬ ಚಿತ್ರz ಮೂಲಕ ಇವರು ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು. ನಟ …

ಮಂಜೇಶ್ವರ ಲೆವೆಲ್ ಕ್ರಾಸಿಂಗ್ 2ರಿಂದ ಮುಚ್ಚುಗಡೆ

ಮಂಜೇಶ್ವರ: ದುರಸ್ತಿ ಹಿನ್ನೆಲೆಯಲ್ಲಿ ಮಂಜೇಶ್ವರ ಲೆವೆಲ್ ಕ್ರಾಸಿಂಗ್ ರೈಲ್ವೇ ಯಾರ್ಡ್ ಈ ತಿಂಗಳ 9ರಿಂದ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಮುಚ್ಚಲಾಗು ವುದೆಂದು ಪಾಲಕ್ಕಾಡ್ ಡಿವಿಶನ್ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಎಡರಂಗ ಸರಕಾರದ ವಿರುದ್ಧ ಬೆಳ್ಳೂರಿನಲ್ಲಿ ಐಕ್ಯರಂಗದಿಂದ ಆಹೋರಾತ್ರಿ ಧರಣಿ

ಬೆಳ್ಳೂರು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಜೆಟ್ ಪಾಲು ಕೂಡಾ ನೀಡದೆ ಫಂಡ್ ಕಡಿತಗೊಳಿಸಿದ ಎಡರಂಗ ಸರಕಾರದ ನಿಲುವನ್ನು ಪ್ರತಿಭಟಿಸಿ ಐಕ್ಯರಂಗದ ನೇತೃತ್ವದಲ್ಲಿ ನಡೆದ ಅಹೋರಾತ್ರಿ ಪ್ರತಿಭಟನೆ ಯಂಗವಾಗಿ ಬೆಳ್ಳೂರು ಪಂ. ಸಮಿತಿ ನೇತೃತ್ವದಲ್ಲಿ ನಡೆದ ಧರಣಿಯನ್ನು ಕಾಸರಗೋಡು ಐಕ್ಯರಂಗ ಮಂಡಲ ಸಂಚಾಲಕ ಕೆ. ಖಾಲಿದ್ ಉದ್ಘಾಟಿಸಿದರು. ಎಸ್.ಕೆ. ಅಬ್ಬ ಸಲಿ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಕುಂಞಂಬು ನಂಬ್ಯಾರ್, ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ನೂರುದ್ದೀನ್ ಬೆಳಿಂಜ, ಪಂ. ಸಮಿತಿ …

ವಿಷು: ಕಲ್ಯಾಣ ಪಿಂಚಣಿ ಮುಂಗಡವಾಗಿ ವಿತರಣೆ

ತಿರುವನಂತಪುರ: ವಿಷು ಹಬ್ಬದ ಪ್ರಯುಕ್ತ ಎಪ್ರಿಲ್ ತಿಂಗಳ ಸಾಮಾ ಜಿಕ ಕಲ್ಯಾಣ ಪಿಂಚಣಿಯನ್ನು ಮುಂಗ ಡವಾಗಿ ಮಂಜೂರು ಮಾಡಿದೆ. ಸಾಧಾರಣವಾಗಿ ಎಪ್ರಿಲ್ ತಿಂಗಳ ಪಿಂಚಣಿಯನ್ನು ಎಪ್ರಿಲ್ 25ರ ನಂ ತರ ವಿತರಿಸಲಾ ಗುತ್ತಿದೆ. ಈಗ ಮಂ ಜೂರು ಮಾಡಲಾಗಿ ರುವ ಪಿಂಚಣಿ ಯನ್ನು ವಿಷು ಹಬ್ಬದ ಮೊದಲೇ ವಿತರಿಸಲು ಸರಕಾರ ತೀರ್ಮಾ ನಿಸಿದ್ದು, ಇಧಕ್ಕಾಗಿ ಸರಕಾರ 820 ಕೋಟಿ ರೂ. ಮಂಜೂರು ಮಾಡಿದೆ.

ನಿವೃತ್ತ ಯೋಧ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಭಾರತೀಯ ಸೇನಾ ಪಡೆಯ ನಿವೃತ್ತ ಯೋಧ ಕಾಲಿಕಡವು ಅನ್ನೂರಿನ ಸಿ.ವೇಲಾಯುಧನ್ (55) ಎಂಬವರು ಪಿಲಿಕ್ಕೋಡ್ ಮನಾಯಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ದಿ. ಸಿ. ಕೃಷ್ಣನ್-ಪಿ. ನಾರಾಯಣಿ ದಂಪತಿ ಪುತ್ರನಾದ ಮೃತರು ಪತ್ನಿ ಸಿ. ಶೈಲಜ, ಮಕ್ಕಳಾದ ವನಜ, ವಿಶಾಲ್, ಅಳಿಯ ನಿಧೀಶ್, ಸಹೋದರಿಯರಾದ ಪದ್ಮಾವತಿ, ಶಾಂತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರ ಕಳಿಯಾಟದಲ್ಲಿ ದೈವಕೋಲವಿಲ್ಲ: ಕಾರ್ಯಕ್ರಮಗಳು ಸುಸೂತ್ರ

ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಈ ವರ್ಷದ ಕಳಿಯಾಟ ಮಹೋತ್ಸವದಲ್ಲಿ ದೈವಕೋಲಗಳು ಇರುವುದಿಲ್ಲವೆಂದು, ಆದರೆ ಸಂಪ್ರದಾಯ ರೀತಿಯ ಕಾರ್ಯಕ್ರಮಗಳು ನಡೆಯುತ್ತದೆ ಎಂದು ಪದಾಧಿಕಾರಿಗಳಾದ ಪಾರಂಪರ್ಯ ಖಾಯಂಟ್ರಸ್ಟಿ ಸಿ.ವಿ. ಮೋಹನ್‌ದಾಸ್ ರೈ, ದೈವ ಕಲಾವಿದರಾದ ಕುಂಬ್ಯ ತರವಾಡಿನ  ರಾಜೇಶ್ ರಾಮಚಂದ್ರನ್, ಇಚ್ಲಂಪಾಡಿ ತರವಾಡಿನ ಶ್ರೀಧರ ಪಣಿಕರ್, ಬಲ್ಲಂಪಾಡಿ ತರವಾಡಿನ ಮೋಹನನ್, ಕೋರಿಕಂಡ   ತರವಾಡಿನ ನಾಗೇಶ್, ನ್ಯಾಯವಾದಿ ಭಾಗ್ಯಶ್ರೀ ರೈ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೈವಕೋಲಗಳು ಇಲ್ಲದಿದ್ದರೂ ಉಳಿದ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಕುಂಡಂಕುಳಿ ಬಳಿ ಯುವಕ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಮೃತದೇಹ ಬಳಿ ರಕ್ತದ ಕಲೆಗಳು ; ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ 

ಕಾಸರಗೋಡು: ಯುವಕ ನೋರ್ವ ನಿಗೂಢ ರೀತಿಯಲ್ಲಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕುಂಡಂಕುಳಿ ಕಾರಕ್ಕಾಡ್ ನಿವಾಸಿ ದಿನೇಶನ್ (38) ಮೃತಪಟ್ಟ ಯುವಕ. ಸಾರಣೆ ಕಾರ್ಮಿಕನಾದ ದಿನೇಶನ್ ಮನೆ ಯಲ್ಲಿ ನಿನ್ನೆ ಒಬ್ಬರೇ ಇದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಸಂಬಂಧಿಕನಾದ ಒಬ್ಬರು ಮನೆಗೆ ತೆರಳಿ ನೋಡಿದಾಗ ದಿನೇಶನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಸಮೀಪ ರಕ್ತದ ಕಲೆಗಳು ಕಂಡುಬಂ ದಿದೆ. ಅಲ್ಲದೆ ದಿನೇಶನ್‌ರ ತಲೆಯಲ್ಲೂ ಗಾಯಗಳಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಬೇಡಗಂ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು  ಸ್ಥಳಕ್ಕೆ ತಲುಪಿ  …