ಕಾರ್ಮಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ನಾಳೆ

ನೀರ್ಚಾಲು: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ನಾಳೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿದೆ. ಬೆಳಿಗ್ಗೆ 7.30ಕ್ಕೆ ಪೂಜೆ, ೮ಕ್ಕೆ 12 ತೆಂಗಿನಕಾಯಿ ಗಣಪತಿ ಹವನ, 9.30ರಿಂದ ತುಳುವ ಮಹಾಸಭೆ ಕಾಸರಗೋಡು ತಾಲೂಕು ಇವರಿಂದ ಮಂದಾರ ರಾಮಾಯಣ  ನಡೆಯಲಿದೆ. ಮಂಗಳೂರು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್ ಭಟ್ ಮಂದಾರ ಉದ್ಘಾಟಿಸುವರು. ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಅಧ್ಯಕ್ಷತೆ ವಹಿಸು ವರು. ಸುಗಿಪು-ದುನಿಪು …

14ರ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ: ತಂದೆಗೆ ರಿಮಾಂಡ್

ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸೆರೆಗೀಡಾದ ತಂದೆಗೆ ರಿಮಾಂಡ್ ವಿಧಿಸಲಾಗಿದೆ. ಕರ್ನಾಟಕದ ಕೊಡಗು ನಿವಾಸಿಯೂ, ಕಾಞಂಗಾಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ 48ರ ಹರೆಯದ ವ್ಯಕ್ತಿ ರಿಮಾಂಡ್‌ಗೊಳಗಾದ ಆರೋಪಿಯಾಗಿ ದ್ದಾನೆ. ಈತ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ಈ ಮಧ್ಯೆ ಬಾಲಕಿ ಕಿರುಕುಳಕ್ಕೊಳಗಾಗಿದ್ದಾಳೆ. ಆದರೆ ಈಕೆ ಗರ್ಭಿಣಿಯಾಗಿ ದ್ದಾಳೆಂದು ಮನೆಯವರಿಗೊ, ಶಾಲಾ ಅಧಿಕಾರಿಗಳಿಗೊ ತಿಳಿದು ಬಂದಿರಲಿಲ್ಲ. ಕೆಲವು ದಿನಗಳ ಹಿಂದೆ ಬಾಲಕಿ ವಾಸಸ್ಥಳದಲ್ಲಿ ಮಗುವಿಗೆ ಜನ್ಮ …

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ: ಓರ್ವ ಸೆರೆ

ಉಪ್ಪಳ: ಕಾರಿನಲ್ಲಿ ಬಚ್ಚಿಟ್ಟಿದ್ದ 4.27 ಗ್ರಾಂ ಎಂಡಿಎಂಎಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕೊಡ್ಲ ಮೊಗರು ಪಳ್ಳತ್ತುಪದವು ಜುಮೈಲ ಮಂಜಿಲ್‌ನ ಮೊಹಮ್ಮದ್ ಜಲಾಲ ದ್ದೀನ್ (24) ಎಂಬಾತನನ್ನು ಮಂಜೇಶ್ವರ ಎಸ್‌ಐ ಅಜಯ್ ಎಸ್ ಮೆನೋನ್ ಬಂಧಿಸಿದ್ದಾರೆ. ನಿನ್ನೆ ಸಂಜೆ ಎಸ್‌ಐ ನೇತೃತ್ವದ ಪೊಲೀಸರು ಕಳಿಯೂರು ಬಳಿಯ ಉಜಿರೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತ್ತಿದ್ದ ವೇಳೆ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹ್ಯಾಂಡ್ ಬ್ರೇಕ್ ಬಳಿ  ಮಾದಕವಸ್ತು ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ …

1.800 ಕಿಲೋ ಗಾಂಜಾ ವಶ: ಓರ್ವ ಸೆರೆ; ಸ್ಕೂಟರ್ ವಶ

ಕುಂಬಳೆ: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 1.800 ಕಿಲೋ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಬಂದ್ಯೋಡು ಪೊರಿಕ್ಕೋಡ್ ಎಂಬಲ್ಲಿನ  ಮುಹಮ್ಮದ್ ಅಲಿ (51) ಎಂಬಾತನನ್ನು ಕುಂಬಳೆ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ಹಾಗೂ ತಂಡ ಬಂಧಿಸಿದೆ. ಮೊನ್ನೆ ರಾತ್ರಿ ೮.೩೦ಕ್ಕೆ ಶಿರಿಯದಲ್ಲಿ ಕುಂಬಳೆ  ಅಬಕಾರಿ ರೇಂಜ್ ಅಧಿಕಾರಿಗಳು, ಕಾಸರಗೋಡು  ಅಬಕಾರಿ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆ ವೇಳೆ ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ …

ಮದ್ಯದಮಲಿನಲ್ಲಿ ತಂದೆಯ ಕೊಲೆಗೈದು ಪುತ್ರ ಪರಾರಿ

ತೃಶೂರು: ಮುಳಯಂಕೂಟ ಲಾಯಿಯಲ್ಲಿ ತಂದೆಯನ್ನು ಪುತ್ರ ಕೊಲೆಗೈದಿದ್ದಾನೆ. ಮೃತದೇಹವನ್ನು ಗೋಣಿಯಲ್ಲಿ ಕಟ್ಟಿ ಸಮೀಪದ ಹಿತ್ತಿಲಲ್ಲಿ ಉಪೇಕ್ಷಿಸಲಾಗಿದೆ. ಕೂಟಾಲ ನಿವಾಸಿ ಮುತ್ತೇಡತ್ ಸುಂದರನ್ ನಾಯರ್ (80)ನನ್ನು ಪುತ್ರ ಸುಮೇಶ್ ಕೊಲೆಗೈದಿದ್ದ ಘಟನೆಯಲ್ಲಿ ಪುತ್ತೂರಿನ ಸಂಬಂಧಿಕರ ಮನೆಯಿಂದ ಸುಮೇಶ್‌ನನ್ನು ಮಣ್ಣುಟ್ಟಿ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ವೇಳೆ ಈತ ಮದ್ಯಪಾನ ಗೈದಿದ್ದನೆನ್ನಲಾಗಿದೆ. ತಂದೆಯನ್ನು ಕೊಲೆಗೈದ ಬಳಿಕ ಗೋಣಿಯಲ್ಲಿ ಕಟ್ಟಿ ಸಮೀಪದ ಹಿತ್ತಿಲಲ್ಲಿ ಉಪೇಕ್ಷಿಸಿದ್ದನು. ನಿನ್ನೆ ಸಂಜೆ ಸಂಬಂ ಧಿಕರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಕೂಟಾಲ ಹಾಲು ಸೊಸೈಟಿ ಪರಿಸರದಲ್ಲಿ ಮನೆಗೆ ಹೊಂದಿಕೊಂಡಿರುವ …

25ರ ಯುವಕನ ಮೂತ್ರ ಚೀಲದೊಳಗಿತ್ತು ಮೂರು ಮೀಟರ್ ವಿದ್ಯುತ್ ವಯರ್

ತಿರುವನಂತಪುರ: 25ರ ಹರೆಯದ ಯುವಕನ ಮೂತ್ರಚೀಲ ದೊಳಗಿಂದ 3 ಮೀಟರ್ ಇಲೆಕ್ಟ್ರಿಕ್ ಇನ್ಸುಲೇಶನ್ ವಯರನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ  ಯಶಸ್ವಿಯಾಗಿ ಹೊರತೆಗೆದಿದ್ದಾರೆ.  ಅಸಹನೀಯವಾದ ನೋವು ಅನುಭವಗೊಂಡ ತಿರುವನಂತಪುರ ನಿವಾಸಿಯಾದ ಯುವಕ  ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿದ್ದನು. ಆತನನ್ನು ಎಕ್ಸ್‌ರೇಗೊಳಪಡಿಸಿದಾಗ ಮೂತ್ರ ಚೀಲ ದೊಳಗೆ 3 ಮೀಟರ್ ವಿದ್ಯುತ್ ವಯರ್ ಸುತ್ತಿಕೊಂ ಡಿರುವುದು ಪತ್ತೆಯಾಗಿದೆ. ವೈದ್ಯರು ತಕ್ಷಣ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ವಯರ್‌ನ್ನು ಹಲವು ತುಂಡುಗಳಾಗಿಸಿ ಹೊರತೆಗೆದು ಯುವಕನನ್ನು ಜೀವಾಪಾಯದಿಂದ …

ಕೋಹಿನೂರ್ ಬಸ್ ನೌಕರ ನಿಧನ

ಬದಿಯಡ್ಕ: ಮಾರ್ಪನಡ್ಕ ಬಳಿಯ ಪದ್ಮಾರು ನಿವಾಸಿಯೂ  ಕೋಹಿನೂರ್  ಬಸ್ ನೌಕರನಾದ ಕುಂಞಿರಾಮ ಯಾನೆ ನಾರಾಯಣ ಮಣಿಯಾಣಿ (55) ನಿಧನಹೊಂದಿ ದರು. ನಿನ್ನೆ ಸಂಜೆ ಅಸೌಖ್ಯ ಕಾಣಿಸಿ ಕೊಂಡ ಇವರನ್ನು ಕೂಡಲೇ ಮುಳ್ಳೇ ರಿಯಾದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಊರಿನಲ್ಲಿ ಸಾಮಾಜಿಕ ಚಟುವಟಿP ಗಳಲ್ಲೂ ಇವರು ಸಕ್ರಿಯರಾಗಿದ್ದರು. ದಿವಂಗತರಾದ ಕೃಷ್ಣ ಮಣಿಯಾಣಿ-ಸೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಶ್ರೀಜ, ಅಕ್ಷತ, ಅಶ್ವತಿ, ಮನೋಹರ ಯಾನೆ ವಿನು (ವಂದೇ ಭಾರತ್ ರೈಲ್ವೇ ಉದ್ಯೋಗಿ), ಸಹೋದರ-ಸಹೋದರಿಯರಾದ …

ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣ:  ಸೆರೆಗೀಡಾದ ಮಂಜೇಶ್ವರ ನಿವಾಸಿಯನ್ನು ತನಿಖೆಗೊಳಪಡಿಸಿದ ಕ್ರೈಂ ಬ್ರಾಂಚ್

ಕಾಸರಗೋಡು:  ಸೀತಾಂ ಗೋಳಿ ಮುಗುರೋಡ್‌ನ ನಿವಾಸಿ ಅಬೂಬಕರ್ ಸಿದ್ದಿಕ್ ರನ್ನು ಅಪಹರಿಸಿ ಹಲ್ಲೆಗೈದು ಕೊಲೆ ನಡೆಸಿದ ಪ್ರಕರಣದಲ್ಲಿ ಸೆರೆಗೀ ಡಾದ ಮುಖ್ಯ ಆರೋಪಿಯನ್ನು ಕ್ರೈಂಬ್ರಾಂಚ್ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ತನಿಖೆ ಗೊಳಪಡಿಸಿದ್ದಾರೆ.  ಮಂಜೇಶ್ವರ ಆಚೆಕರೆ ನಿವಾಸಿಯಾದ ಅಶರ್ ಅಲಿ (27) ಎಂಬಾತನನ್ನು ಕ್ರೈಂಬ್ರಾಂಚ್‌ನ ಕಾಸರಗೋಡು ಕಚೇರಿಯಲ್ಲಿ ಸಮಗ್ರವಾಗಿ ತನಿಖೆಗೊಳಪಡಿ ಸಲಾಯಿತು.  ಊರಿಗೆ ಮರಳುತ್ತಿದ್ದ ಮಧ್ಯೆ ಈತನನ್ನು ಮೊನ್ನೆ ಸಂಜೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ  ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್ ನೇತೃತ್ವದ ತಂಡ ಸೆರೆಹಿಡಿದಿತ್ತು. 2022 ಜೂನ್ …

ಟ್ರೋಲಿಂಗ್ ನಿಷೇಧಕ್ಕೆ ನಾಳೆ ರಾತ್ರಿ ತೆರೆ

ಕಾಸರಗೋಡು: ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದ್ದು, ಅದರಿಂದಾಗಿ ಮತ್ಸ್ಯ ಸಂಪತ್ತನ್ನು ಸಂರಕ್ಷಿಸಿ ಅದನ್ನು ಹೆಚ್ಚಿಸುವ ಸಲುವಾಗಿ ಈ ಋತುವಿನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವ ಕ್ರಮದಂತೆ ಈ ವರ್ಷ ಜ್ಯಾರಿಗೊಳಿಸಲಾಗಿರುವ ಟ್ರೋಲಿಂಗ್ ನಿಷೇಧದ ಅವಧಿ ನಾಳೆ ರಾತ್ರಿ 12 ಗಂಟೆಗೆ ಕೊನೆಗೊಳ್ಳಲಿದೆ. 52 ದಿನಗಳ ತನಕ ಪ್ರತೀ ವರ್ಷ ಟ್ರೋಲಿಂಗ್ ನಿಷೇಧ ಹೇರಲಾಗುತ್ತಿದೆ.ಇದರಂತೆ ಈ ವರ್ಷ ಜೂನ್ ೯ರಿಂದ ರಾಜ್ಯದ ಆಳ ಸಮುದ್ರದಲ್ಲಿ ಟ್ರೋಲಿಂಗ್ ನಿಷೇಧ ಜ್ಯಾರಿಗೊಳಿಸಲಾಗಿತ್ತು.  ಮಂಜೇಶ್ವರ, ಕಾಸರಗೋಡು ಕಸಬಾ ಮತ್ತು ಚೆರ್ವತ್ತೂರು ಮಡಕ್ಕರ …

ದೇವಸ್ಥಾನದಿಂದ 20 ಪವನ್‌ನ ಚಿನ್ನದೊಡವೆ ಕಳವು: ಮುಖ್ಯ ಅರ್ಚಕ ಸೆರೆ

ಪರವೂರು: ದೇವಸ್ಥಾನದಿಂದ 20 ಪವನ್‌ನ ಚಿನ್ನದ ಒಡವೆ ಕಳವುಗೈದ ಮುಖ್ಯ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ಪರವೂರು ಚೆರುಂಬಳ ಯಕ್ಷಿಕಾಮ ದೇವಿ ಕ್ಷೇತ್ರದ ಮುಖ್ಯ ಅರ್ಚಕ ತಳಿಪರಂಬ ನಿವಾಸಿ ಹಾಗೂ ಮೂಲತಃ ಪಾರಿಪಳ್ಳಿ ಕಿಳಕ್ಕೇನೆಲ ಪುದಿಯಡತ್ ಇಲ್ಲತ್ತ್‌ನಲ್ಲಿ ವಾಸಿಸುತ್ತಿರುವ ಈಶ್ವರನ್ ನಂಬೂದಿರಿ (42) ಬಂಧಿತ ಆರೋಪಿ. ಈತ 11ತಿಂಗಳ ಹಿಂದೆಯಷ್ಟೇ ಶ್ರೀ ಕ್ಷೇತ್ರದ ಮುಖ್ಯ ಅರ್ಚಕನಾಗಿ ಸೇರ್ಪಡೆಗೊಂ ಡಿದ್ದನು. ದೇವರ ವಿಗ್ರಹದ ಚಿನ್ನದ ಒಡವೆಗಳನ್ನು ಕದ್ದು ಅದರ ಬದಲು  ನಕಲಿ ಚಿನ್ನದ ಒಡವೆಗಳನ್ನು ವಿಗ್ರಹಕ್ಕೆ ತೊಡಿಸಿದ್ದನೆಂದು ಪೊಲೀಸರು …