ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿದ್ದ ವೃದ್ದ ನಿಧನ

ಅಡೂರು: ಇಲ್ಲಿಗೆ ಸಮೀಪದ ಕಾಟಿಪ್ಪಾರ ಪುದುಚ್ಚೇರಿ ನಿವಾಸಿ ಮಾಧವನ್ ನಾಯರ್ (79) ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಿನ್ನೆ ಸಂಜೆ ಇವರು ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಚೆರ್ಕಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮಾನಸಿಕ ಅಸ್ವಸ್ಥತೆ ವಿಷ ಸೇವಿಸಲು ಕಾರಣವೆಂದು ಹೇಳಲಾಗುತ್ತಿದೆ. ಸಿಪಿಎಂ ಕಾಟಿಪ್ಪಾರ ಬ್ರಾಂಚ್ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಮುಂಙತ್ ಸರೋಜಿನಿ, ಮಕ್ಕಳಾದ ಎಂ. ಶ್ರೀಜ, ಎಂ. ರತೀಶ್, …

ಮಧೂರಿನಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಂಭ್ರಮದ ಸಮಾಪ್ತಿ: ಮೂಡಪ್ಪ ಸೇವೆಗೆ ಚಾಲನೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ದಂಗವಾಗಿ ಶ್ರೀ ದೇವರಿಗೆ ಬ್ರಹ್ಮಕಲಶಾ ಭಿಷೇಕ, ಬ್ರಹ್ಮಕುಂಭಾಭಿಷೇಕ ನಿನ್ನೆ ಸಂಭ್ರಮದಿಂದ ಜರಗಿತು. ಇದೇ ವೇಳೆ ಶ್ರೀ ಮಹಾಗಣಪತಿ ದೇವರ ಮೂಡಪ್ಪ ಸೇವೆಗೂ ಚಾಲನೆ ನೀಡಲಾಯಿತು. ಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾ ರೋಹಣ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ನಡೆಯಿತು. ಎಪ್ರಿಲ್ ೫ರಂದು ಮಹಾ ಗಣಪತಿ ಮೂಡಪ್ಪ ಸೇವೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಧ್ವಜಾರೋಹಣ, ಬಲಿ ಉತ್ಸವ ನಡೆಯಿತು. ೫ರಂದು ಬೆಳಿಗ್ಗೆ ೫ಕ್ಕೆ ದೀಪ ಬಲಿ, …

ಕೇಂದ್ರ, ಕೇರಳ ಸರಕಾರಗಳಿಂದ ಪಿಂಚಣಿದಾರರಿಗೆ ವಂಚನೆ- ನೀಲಕಂಠನ್

ಕಾಸರಗೋಡು: ಕೇಂದ್ರ, ಕೇರಳ ಸರಕಾರಗಳು ಪಿಂಚಣಿದಾರರೊಂದಿಗೆ ತೋರುವ ವಂಚನೆ ಕೊನೆಗೊಳಿಸಬೇ ಕೆಂದು ಕೆಪಿಸಿಸಿ ಕಾರ್ಯದರ್ಶಿ ನೀಲಕಂಠನ್ ಆಗ್ರಹಿಸಿದ್ದಾರೆ. ಕೆಎಸ್‌ಎಸ್‌ಪಿಎ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿಯ ನೇತೃತ್ವದಲ್ಲಿ ಹಕ್ಕು ನಿಷೇಧ ವಿರುದ್ಧ ಕಾಸರಗೋಡು ಸಬ್ ಟ್ರಷರಿ ಕಚೇರಿ ಮುಂಭಾಗ ನಡೆಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.  ವಿಧಾನಸಭಾ ಮಂಡಲ ಅಧ್ಯಕ್ಷ ಎಂ.ಕೆ.ಸಿ. ನಾಯರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಪಿ.ಪಿ. ಬಾಲಚಂದ್ರನ್ ಕುರಿಕ್ಕಳ್ ಪ್ರಧಾನ ಭಾಷಣ ಮಾಡಿದರು. ಕೆ.ಪಿ. ಬಾಲರಾಮನ್ ನಾಯರ್, ಪುರುಷೋತ್ತಮನ್ ಕಾರಡ್ಕ, ವಿ.ವಿ. ಜಯಲಕ್ಷ್ಮಿ, …

ವಕ್ಫ್ ಕಾನೂನು ಅಪಾಯಕಾರಿಯಾಗಿ ಪರಿವರ್ತಿಸಿರುವುದು ಯುಪಿಎ ಸರಕಾರ- ಕೆ. ಶ್ರೀಕಾಂತ್

ಕಾಸರಗೋಡು: ಡಾ. ಮನ್ ಮೋಹನ್ ಸಿಂಗ್‌ರ ನೇತೃತ್ವದಲ್ಲಿರುವ ಯು.ಪಿ.ಎ ಸರಕಾರವಾಗಿದೆ ವಕ್ಫ್ ಕಾನೂನನ್ನು ಸಾಮಾನ್ಯರ ಭೂಮಿ ಕಸಿಯುವ ರೀತಿಯಲ್ಲಿ ಅಪಾಯ ಕರವಾಗಿ ಪರಿವರ್ತಿಸಿರುವುದೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್  ಆರೋಪಿಸಿದ್ದಾರೆ. ವಕ್ಫ್ ಕಾನೂನು ತಿದ್ದುಪಡಿ ವಿರುದ್ಧ ಯುಡಿಎಫ್- ಎಲ್‌ಡಿಎಫ್‌ನ ನಿಲುವನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರ ಕ್ಯಾಂಪ್ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು. ವಕ್ಫ್ ಬೋರ್ಡ್‌ಗೆ ಪರಮಾಧಿ ಕಾರ ನೀಡಿರುವುದು ಯುಪಿಎ ಸರಕಾರವಾಗಿದೆ. ಅಲಹಾಬಾದ್ …

ಕಾಲುವೆಗೆ ತ್ಯಾಜ್ಯ ಎಸೆದ ಗಾಯಕ ಎಂ.ಜಿ. ಶ್ರೀಕುಮಾರ್‌ಗೆ 25,000 ರೂ. ದಂಡ: ಮಾಹಿತಿ ನೀಡಿದ ವ್ಯಕ್ತಿಗೆ ಬಹುಮಾನ

ಕೊಚ್ಚಿ: ನೀರು ಹರಿಯುವ ಕಾಲುವೆಗೆ ತ್ಯಾಜ್ಯ ಎಸೆದ ಸಿನಿಮಾ ಹಿನ್ನೆಲೆಗಾಯಕ ಎಂ.ಜಿ. ಶ್ರೀಕುಮಾರ್ ವಿರುದ್ಧ ದಂಡ ಹೇರಲಾಗಿದೆ. ಕೊಚ್ಚಿಯಲ್ಲಿ ಕಾಲುವೆಗೆ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಮುಳುವಕಾಡ್ ಪಂಚಾಯತ್ ಅಧಿಕಾರಿಗಳು ಗಾಯಕನಿಗೆ 25,000 ರೂ. ದಂಡ ನೀಡಲು ನೋಟೀಸು ಕಳುಹಿಸಿದ್ದಾರೆ.ನೋಟೀಸು ಲಭಿಸಿದ ಹಿನ್ನೆಲೆ ಯಲ್ಲಿ ನಿನ್ನೆ ಎಂ.ಜಿ. ಶ್ರೀಕುಮಾರ್ ದಂಡ ಪಾವತಿಸಿದ್ದಾರೆ. ಮುಳುವ ಕಾಡ್ನಲ್ಲಿರುವ ಮನೆಯೊಂದರಿAದ ತ್ಯಾಜ್ಯ ಬೀಳುತ್ತಿರುವುದನ್ನು ಓರ್ವ ಪ್ರವಾಸಿ ಮೊಬೈಲ್ನಲ್ಲಿ ಚಿತ್ರೀಕರಿ ಸಿದ್ದು, ಅದನ್ನು ಸಚಿವ ಎಂ.ಬಿ. ರಾಜೇಶ್ರಿಗೆ ಕಳುಹಿಸಿಕೊಟ್ಟಿದ್ದಾನೆ. ವೀಡಿಯೋ ಹಾಗೂ ದೃಶ್ಯ, ದಿವಸ, …

ಕೈಕಂಬದ ಕ್ಲಿನಿಕ್ನಿಂದ 45,000ರೂ. ಕಳವು

ಮಂಜೇಶ್ವರ: ಉಪ್ಪಳದ ಕೈಕಂಬದಲ್ಲಿ ಕಾರ್ಯಾಚರಿಸುತ್ತಿರುವ ಇರಾನಿ ಕ್ಲಿನಿಕ್ನಿಂದ 45,000 ರೂ. ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಾರ್ಚ್ 27ರಂದು ಸಂಜೆ 3ರಿಂದ 29ರ ರಾತ್ರಿ 8.30ರ ಮಧ್ಯೆ ಕಳವು ನಡೆದಿರಬೇಕೆಂದು ಅಂದಾಜಿಸಲಾಗಿದೆ. ಬೀಗ ಮುರಿದು ಒಳ ನುಗ್ಗಿದ ಕಳ್ಳರು ಡ್ರವರ್ನಲ್ಲಿದ್ದ ಹಣವನ್ನು ದೋಚಿದ್ದಾರೆ. ಕೈಕಂಬದ ಮೊಹಮ್ಮದ್ ಸಮೀಪ್ ಎಂಬವರ ಪತ್ನಿ ಕೆ.ಪಿ. ಶಬನಂ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯ: ಕೇಸು ದಾಖಲು

ಕಾಸರಗೋಡು: ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಗಾಯಗೊಳಿಸಿದ ದೂರಿ ನಂತೆ ಕಾಸರಗೋಡು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಬೋವಿಕ್ಕಾನ ಕೊಡವಂಜಿ ನಿವಾಸಿ ಪ್ರಕಾಶನ್ (45) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಬೋವಿಕ್ಕಾನದ ಮುನೀರ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾರ್ಚ್ 31ರಂದು ರಾತ್ರಿ ನೆಲ್ಲಿಕುಂಜೆ ಜಂಕ್ಷನ್ ರಸ್ತೆಯಲ್ಲಿರುವ ಬಾರ್‌ನ ಬಳಿ ಆರೋಪಿ ತನ್ನೊಂದಿಗೆ ಜಗಳಕ್ಕಿಳಿದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ.

ಉದ್ಯೋಗ ಆಮಿಶವೊಡ್ಡಿ ಆನ್ಲೈನ್ ಮೂಲಕ 14 ಲಕ್ಷ ರೂ. ಎಗರಿಸಿದ ಬಗ್ಗೆ ದೂರು

ಕಾಸರಗೋಡು: ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ ನಂಬಿಸಿ ಆನ್ಲೈನ್ ಮೂಲಕ 14,08,835 ರೂ. ಲಪಟಾಯಿಸಿದ ಬಗ್ಗೆ ಯುವಕನೋರ್ವ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರ.ಚೆಂಬರಿಕ ನಿವಾಸಿಯಾಗಿರುವ 32ರ ಹರೆಯದ ಯುವಕ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.ಪಾರ್ಟ್ ಟೈಂ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವಂಚನೆಗಾರರು ತನ್ನಿಂದ ಡಿಸೆಂಬರ್ 25ರಿಂದ ಜನವರಿ 16ರ ನಡುವಿನ ಅವಧಿಯಲ್ಲಿ ಆನ್ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆದು ಬಳಿಕ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ …

ನೌಕಾ ಪಡೆಯ ಕಾರ್ಯಾಚರಣೆ: 2507 ಕಿಲೋ ಗ್ರಾಂ ಮಾದಕವಸ್ತು ಪತ್ತೆ

ಕೊಚ್ಚಿ: ಭಾರತೀಯ ನೌಕಾಪಡೆ ಸಮುದ್ರದಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಬೋಟುಗಳ ಮೂಲಕ ವಿದೇಶದಿಂದ ಭಾರತಕ್ಕೆ ಸಾಗಿಸುತ್ತಿದ್ದ 2507 ಕಿಲೋ ಗ್ರಾಂ ಮಾದಕವಸ್ತು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ವಶಪಡಿಸಿದ ಈ ಅಮಲು ಪದಾರ್ಥ ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕೋಟ್ಯಂತರ ರೂ. ಬೆಲೆ ಹೊಂದಿದೆ.ವಶಪಡಿಸಲಾದ ಮಾಲಿನಲ್ಲಿ 2386 ಕಿಲೋ ಹ್ಯಾಶಿಶ್ ಮತ್ತು 121 ಕಿಲೋ ಹೆರೋಯ್ನ್ ಒಳಗೊಂಡಿದೆ. ಹೆರೋಯ್ನ್ಗೆ ಕಿಲೋವೊಂದಕ್ಕೆ ಐದು ಕೋಟಿ ರೂ. ಬೆಲೆ ಹಾಗೂ ಹ್ಯಾಶಿಶ್ ಆಯಿಲ್ಗೆ ಕಿಲೋವೊಂದಕ್ಕೆ 10ರಿಂದ 15 ಲಕ್ಷ ರೂ. ತನಕ ಬೆಲೆ …

ಹಾನಿಗೀಡಾದ ಯಂತ್ರ ದುರಸ್ತಿ ವೇಳೆ ಶಾಕ್ ತಗಲಿ ಯುವಕ ಮೃತ್ಯು

ಸೀತಾಂಗೋಳಿ: ಹಾನಿಗೀಡಾದ ವಾಟರ್ ಕಂಪ್ರೆಶರ್ ಮೆಶಿನ್ ದುರಸ್ತಿ ನಡೆಸುತ್ತಿದ್ದಾಗ ಯುವಕ ಶಾಕ್ ತಗಲಿ ಸಾವಿಗೀಡಾದ ಘಟನೆ ನಡೆದಿದೆ. ಅನಂತಪುರ ಇನ್ಫ್ರಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಚಿಕನ್ ಪ್ರೋಟೀನ್ ಮಿಲ್‌ನಲ್ಲಿ ಈ ಘಟನೆ ನಡೆದಿದೆ. ಒಡಿಸ್ಸಾದ ಕಂದಮಾನ್ ನಿವಾಸಿ ಸುಜಿತ್ ಕುಮಾರ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಮುಂಜಾನೆ 3.30ರ ವೇಳೆ ಈ ದುರ್ಘಟನೆ ಉಂಟಾಗಿದೆ. ಸುಜಿತ್ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಮುಂಜಾನೆ ಕೆಲಸ ಮುಗಿದ ಬಳಿಕ ಯಂತ್ರವನ್ನು ಶುಚಿಗೊಳಿಸುತ್ತಿದ್ದ ಸುಜಿತ್ ಕುಮಾರ್ ಹಾನಿಗೀಡಾದ ವಾಟರ್ ಕಂಪ್ರೆಶರ್ …