ಲಾರಿ ರಸ್ತೆ ಡಿವೈಡರ್‌ಗೆ ಢಿಕ್ಕಿ  : ಚಾಲಕ ಅಪಾಯದಿಂದ ಪಾರು

ಕುಂಬಳೆ: ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದುನಿಂತ ಘಟನೆ ನಡೆದಿದೆ. ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ೮ ಗಂಟೆಗೆ ಈ ಅಪಘಾತ ವುಂಟಾಗಿದೆ. ಚಾಲಕ ಕಲ್ಲಿಕೋಟೆಯ ಸಿರಿಲ್ ಎಂಬವರು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಗೋವಾದಿಂದ ಕಲ್ಲಿಕೋಟೆಗೆ ಪಾರ್ಸಲ್ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಒಂದು ವಾರ ಹಿಂದೆಯಷ್ಟೇ …

1624 ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಸೂಪರ್ ಮಾರ್ಕೆಟ್ ಮಾಲಕ  ಸೆರೆ

ಕಾಸರಗೋಡು: ಭಾರೀ ಪ್ರಮಾಣದ  ತಂಬಾಕು ಉತ್ಪನ್ನಗಳ ಸಹಿತ ಸೂಪರ್ ಮಾರ್ಕೆಟ್ ಮಾಲಕನನ್ನು ಬಂಧಿಸಲಾಗಿದೆ. ಕಾಞಂಗಾಡ್ ಮಡಿಯಾನ್‌ನ ಸೂಪರ್ ಮಾರ್ಕೆಟ್ ಮಾಲಕನಾದ ಕಾಸರಗೋಡು ತಳಂಗರೆ ಕೊರಕೋಡು ರೈಹಾನ ಮಂಜಿಲ್‌ನ ಕೆ.ಎಂ. ಜಾಬಿರ್ (4೦) ಎಂಬಾತನನ್ನು ಹೊಸದುರ್ಗ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ತಂಬಾಕು  ಉತ್ಪನ್ನ ಮಾರಾಟ ಗೈಯ್ಯಲಾಗುತ್ತಿದೆಯೆಂಬ ಸೂಚನೆ ಮೇರೆಗೆ ಸೂಪರ್ ಮಾರ್ಕೆಟ್ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ನಿನ್ನೆ ಸಂಜೆ ೭ ಗಂಟೆಗೆ ಇನ್‌ಸ್ಪೆಕ್ಟರ್ ಹಾಗೂ ತಂಡ ಸೂಪರ್ ಮಾರ್ಕೆಟ್‌ಗೆ ತಲುಪಿದ್ದರು.  ಈ …

ಮೂರೇ ಗಂಟೆಯಲ್ಲಿ ಎಂಬುರಾನ್ ಸಿನಿಮಾದ ನಕಲಿ: ಸೈಬರ್ ಪೊಲೀಸರಿಂದ ಕ್ರಮ

ಕೊಚ್ಚಿ: ಸಿನಿಮಾ ರಿಲೀಸ್ ಆಗಿ 3 ಗಂಟೆಗಳು ಕಳೆದಾಗ ಟೆಲಿಗ್ರಾಮ್ ಸಹಿತ ಇರುವ ಸೈಟ್‌ಗಳಲ್ಲಿ ನಕಲಿ  ಸಿನಿಮಾ ಬಿಡುಗಡೆಯಾಗಿದೆ. ಥಿಯೇಟರ್‌ಗಳಿಂದ ರೆಕಾರ್ಡ್ ಮಾಡಿದ ಸಿನಿಮಾಗಳನ್ನು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದು ಗಮನಕ್ಕೆ ಬಂದ ಸೈಬರ್ ಪೊಲೀಸರು ಕ್ರಮ ಆರಂಭಿಸಿದ್ದಾರೆ. ವೆಬ್‌ಸೈಟ್‌ಗಳಿಂದ ಸಿನಿಮಾದ ನಕಲಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದೇ ವೇಳೆ ಸಿನಿಮಾ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿಲ್ಲ. ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೈಬರ್ ಪೊಲೀಸರು ತಿಳಿಸಿದ್ದಾರೆ. ಡೌನ್ ಲೋಡ್ ಮಾಡಿದ ವರ …

ಕರ್ನಾಟಕ ಮದ್ಯ ಪತ್ತೆ

ಮಂಜೇಶ್ವರ: ಕುಡಾಲ್‌ಮೇರ್ಕಳ ಮಾಣಿತ್ತಡ್ಕದ ಬಸ್ ತಂಗುದಾಣ ಸಂಕದ ಬಳಿಯ ಪೊದೆಯಲ್ಲಿ ಬಚ್ಚಿಡಲಾಗಿದ್ದ ೬.೩ ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿದೆ. ಕುಂಬಳೆ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಅನೀಶ್ ಕುಮಾರ್ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರತಿಜನ್, ಜಿತಿನ್ ಚಾಲಕ ಪ್ರವೀಣ್ ಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಮನೆಯಿಂದ ಚಿನ್ನ ಕಳವು

ಕಾಸರಗೋಡು: ಮನೆಯಿಂದ ಆರೂವರೆ ಪವನ್ ಚಿನ್ನ ಕಳವುಗೈದ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀ ಡಲಾಗಿದೆ. ಪನಯಾಲ್ ಕುದಿರ ಕ್ಕೋಡ್ ಕಾಲಿಚ್ಚಾರಂ ಮಣಿಕಾಯದ ಕೆ. ನಾರಾಯಣರ ಮನೆಯಲ್ಲಿ  ಕಳವು ನಡೆದಿದೆ. ಮನೆ ಕಪಾಟಿನೊಳಗೆ ಇರಿಸಲಾಗಿದ್ದ ಚಿನ್ನವನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಆಟೋ ರಿಕ್ಷಾ ಬಾಡಿಗೆಗೆ ಕರೆದ ಯುವತಿಯ ಬ್ಯಾಗ್‌ನಿಂದ ಚಿನ್ನದ ಬಳೆ ಕಳವು: ಚಾಲಕನ ಬಂಧನ

ಉಪ್ಪಳ: ಆಟೋ ರಿಕ್ಷಾವನ್ನು ಬಾಡಿಗೆಗೆ ಕರೆದೊಯ್ದು ಮಹಿಳೆಯ ಬ್ಯಾಗ್‌ನಿಂದ ಒಂದು ಮುಕ್ಕಾಲು ಪವನ್ ಚಿನ್ನದ ಬಳೆಗಳನ್ನು ಕಳವು ನಡೆಸಿದ ಚಾಲಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಆಟೋ ರಿಕ್ಷಾ ಚಾಲಕನಾದ ಉಪ್ಪಳ ಮಣ್ಣಂಗುಳಿಯ ಮೊಹ ಮ್ಮದ್ ಸಾಕೀಬ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಉಪ್ಪಳ ಕೋಡಿಬೈಲು ನಿವಾಸಿ ಆಯಿಷತ್ ಮಿಯಾಸ ಎಂಬವರ ಬ್ಯಾಗ್‌ನಿಂದ ಚಿನ್ನದ ಬಳೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಸಾಕೀಬ್‌ನನ್ನು ಬಂಧಿಸಲಾಗಿದೆ.  …

ಸಲಾಲದಲ್ಲಿ ವಾಹನ ಅಪಘಾತ ಜೂನ್‌ನಲ್ಲಿ ವಿವಾಹವಾಗಲಿದ್ದ ಯುವಕ ಮೃತ್ಯು

ಕಾಸರಗೋಡು: ಸಲಾಲದಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟ ಕಳನಾಡು ನಿವಾಸಿಯಾದ ಯುವಕನ ಮೃತದೇಹವನ್ನು ಊರಿಗೆ ತಂದು ಸಂಸ್ಕರಿಸಲಾಯಿತು. ಇಡುವುಂಗಾಲ್ ನೆರಪ್ಪನಾಡಿಯ ಎಂ. ಜಿತಿನ್ ಮಾವಿಲ (30)ರ ಮೃತದೇಹ ನಿನ್ನೆ ಮಧ್ಯಾಹ್ನ ಊರಿಗೆ ತರಲಾಗಿದೆ. ಮಂಗಳವಾರ ಸಂಜೆ ೬ ಗಂಟೆ ವೇಳೆಗೆ ವಾಹನಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಜಿತಿನ್ ಮೃತಪಟ್ಟಿದ್ದರು. ಅಲ್ಲಿನ ಸುಲ್ತಾನ್  ಬಬೂಸ್ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್‌ನಲ್ಲಿ ವಿವಾಹ ನಡೆಯಲಿರುವ ಮಧ್ಯೆ ಸಾವು ಸಂಭವಿಸಿದೆ. ಕರಿಚ್ಚೇರಿ …

ಶುದ್ಧ ಹೃದಯದ ನಾಮಸ್ಮರಣೆ ಭಗವಂತನ ಆರಾಧನಾ ರೂಪ- ಅದಮಾರುಶ್ರೀ

ಮಧೂರು: ಶುದ್ಧ ಹೃದಯದ ನಾಮಸ್ಮರಣೆಯೇ ಭಗದಂತನ ಪ್ರೀತಿಯ ಆರಾಧನಾ ರೂಪವಾಗಿದ್ದು, ಅಚಲ ಭಕ್ತಿಗೆ ದೈವಾನುಗ್ರಹ ನಿರೀಕ್ಷೆಗೂ ಮೀರಿ ಒದಗಿಬರುತ್ತದೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು.ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಿನ್ನೆ ಆರಂಭಗೊAಡ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಹರಸಿದರು.ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ಆನಂದ ಆಂತರAಗಿಕವಾದುದಾಗಿದ್ದು, ಸಂತೋಷ ಬಾಹ್ಯ ಭಾವ ಸ್ಪುರಣವಾಗಿದೆ. ನಮ್ಮಲ್ಲಿರಬೇಕಾದುದು ಶಾಶ್ವತ, ಒಳಭಾವಗಳ …

ರಂಜಾನ್ ಪ್ರಯುಕ್ತ 500ಕ್ಕೂ ಹೆಚ್ಚು ಭಾರತೀಯ ಖೈದಿಗಳಿಗೆ ಯು.ಎ.ಇಯಿಂದ ಕ್ಷಮಾದಾನ

ಅಬುದಾಬಿ: ಪವಿತ್ರ ರಂಜಾನ್ ತಿಂಗಳಲ್ಲಿ ಯುಎಇ 500 ಭಾರತೀಯ ಖೈದಿಗಳಿಗೆ ಕ್ಷಮಾದಾನ ಘೋಷಿಸಿದೆ. ಇವರನ್ನು ಶೀಘ್ರ ಬಿಡುಗಡೆ ಮಾಡುವುದೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ ಯ ವಿವಿಧ ಜೈಲುಗಳಲ್ಲಾಗಿ ಕಳೆಯು ತ್ತಿರುವ  ಖೈದಿಗಳ ಪೈಕಿ  1295 ಖೈದಿ ಗಳನ್ನು ಬಿಡುಗಡೆ ಮಾಡಲು  ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆದೇಶ ನೀಡಿದ್ದರು.  ಇದರ ಬೆನ್ನಲ್ಲೇ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತೌಮ್ ಅವರು 1518 ಖೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಹೀಗೆ …

ಮಾದಕದ್ರವ್ಯ ವ್ಯಸನ: ರಾಜ್ಯದಲ್ಲಿ ಹತ್ತು ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆ

ಕಾಸರಗೋಡು: ರಾಜ್ಯದಲ್ಲಿ ಮಾದಕದ್ರವ್ಯ ವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಸಾಗುತ್ತಿದೆ. ಇನ್ನೊಂದೆಡೆ ಅದು ರಾಜ್ಯದ ಆರೋಗ್ಯ ರಂಗ ವಲಯದ ಮೇಲೂ  ಗಂಭೀರ ಪರಿಣಾಮ ಬೀರತೊಡಗಿದೆ. ಮಾದಕದ್ರವ್ಯ ಸೇವನೆ ಮಾತ್ರವಲ್ಲ ಮಾದಕದ್ರವ್ಯವನ್ನು ದೇಹಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಿಸಿಕೊಳ್ಳುವವರ ಸಂಖ್ಯೆಯೂ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹವರು  ಹಾಗೂ  ಇತರ ಮಾದಕವ್ಯಸನಿಗಳನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗಾಗಿ ಮಲಪ್ಪುರಂ ವಳಾಂಚೇರಿಯಲ್ಲಿ  ಕೇರಳ ಏಡ್ಸ್ ಸೊಸೈಟಿ ನೇತೃತ್ವದಲ್ಲಿ ನಡೆಸಲಾದ ಸ್ಕ್ರೀನಿಂಗ್‌ನಲ್ಲಿ ಹತ್ತು   ಮಾದಕದ್ರವ್ಯ ವ್ಯಸನಿಗಳಲ್ಲಿ  ಮಾರಕ ರೋಗವಾದ ಎಚ್‌ಐವಿ  ಸೋಂಕು …