ಕಾರಡ್ಕದಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ: ಪ್ರಾಥಮಿಕ ಸಮೀಕ್ಷೆ ಆರಂಭ

ಮುಳ್ಳೇರಿಯ: ಕಾರಡ್ಕ ನಾರ್ಲದಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಬಾಕ್ಸೈಟ್ ಗಣಿಗಾರಿಗೆ  ಆರಂಭಿಸುವುದರ ಪೂರ್ವಭಾವಿಯಾ ಗಿ ಪ್ರಾಥಮಿಕ ಸಮೀಕ್ಷೆ ನಡೆಸಲಾ ಯಿತು.  ರಾಜ್ಯ ಮೈನಿಂಗ್ ಆಂಡ್ ಜಿಯೋಲಜಿ ಎಡಿಶನಲ್ ಡೈರೆಕ್ಟರ್ ಎಂ.ಸಿ. ಕಿಶೋರ್‌ರ ನೇತೃತ್ವದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕಂದಾ ಯ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದರು. ಇಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ ಪತ್ತೆಹಚ್ಚಲಾಗಿದೆ. ಇದರಲ್ಲಿ ಎಷ್ಟು ಭೂಮಿ ಗಣಿಗಾರಿಕೆಗೆ ಲಭ್ಯವಾಗಲಿದೆಯೆಂಬುವುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗಿದೆ. ಮುಂದಿನ ವಾರ ಸಮಗ್ರವಾದ ಸಮೀಕ್ಷಾ ಕ್ರಮಗಳನ್ನು ಆರಂಭಿಸಲಾ ಗುವುದು. ಒಂದು …

ಮಾದಕದ್ರವ್ಯ: ಅನಧಿಕೃತವಾಗಿ ವಲಸೆ ಕಾರ್ಮಿಕರು ವಾಸಿಸುವ ಕಟ್ಟಡ ಮಾಲಕರ ವಿರುದ್ಧ ಪೊಲೀಸ್ ಕ್ರಮ

ಕಾಸರಗೋಡು: ಮಾದಕ ದ್ರವ್ಯ ಮಾರಾಟ ಹಾಗೂ ಅದಕ್ಕೆ ನೇತೃತ್ವ ನೀಡುತ್ತಿರುವ ವಲಸೆ ಕಾರ್ಮಿಕರ ವಿರುದ್ಧ ಜಿಲ್ಲೆಯಲ್ಲಿ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಇಂತಹ ವಲಸೆ ಕಾರ್ಮಿಕರಿಗೆ ವಾಸಿಸಲು ಬಾಡಿಗೆಗೆ ಕ್ವಾರ್ಟರ್ಸ್ ನೀಡುತ್ತಿರುವ ಕಟ್ಟಡಗಳ ಮಾಲಕರಿಗೆ ಪೊಲೀಸರು ನೋಟೀಸು ಜ್ಯಾರಿಗೊಳಿಸುವ ಕ್ರಮಕ್ಕೂ ಚಾಲನೆ ನೀಡಿದ್ದಾರೆ. ಮಾದಕದ್ರವ್ಯ ಮಾತ್ರವಲ್ಲ ಜಿಲ್ಲೆ ಯಲ್ಲಿ ಹಲವು ವಲಸೆ ಕಾರ್ಮಿಕರು ಅನಧಿಕೃತವಾಗಿ ವಾಸಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಅವರು ವಾಸಿಸುತ್ತಿರುವ ಕ್ವಾರ್ಟರ್ಸ್‌ಗಳ ಮಾಲಕರಿಗೂ ಪೊಲೀಸರು ನೋಟೀಸ್ ಜ್ಯಾರಿಗೊಳಿಸತೊಡಗಿದ್ದಾರೆ. ಕೆಲವು ವಲಸೆ ಕಾರ್ಮಿಕರ ನೇತೃತ್ವದಲ್ಲಿ  …

ಪೊಲೀಸ್ ಇಲಾಖೆಯ ಡಿ ಡಾಟ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹೆಚ್ಚಿನವರು 14ರಿಂದ 17ರ ಮಧ್ಯೆ ಪ್ರಾಯದವರು

ಕಾಸರಗೋಡು: ಆನ್‌ಲೈನ್ ಗೇಮ್ಸ್ ನವ ಮಾಧ್ಯಮಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿ ದೈನಂದಿನ ಅದನ್ನೇ ವೀಕ್ಷಿಸಿ ಬಳಿಕ ಅದರ ದಾಸರನ್ನಾಗಿಸುವ ಮಕ್ಕಳನ್ನು ಅದರಿಂದ ಮುಕ್ತಗೊಳಿಸಲು  ಪೊಲೀಸ್ ಇಲಾಖೆ ಆರಂಭಿಸಿರುವ ಡಿ ಡಾಟ್ (ಡಿಜಿಟಲ್ ಡಿ ಅಡಿಕ್ಷನ್ ಸೆಂಟರ್)ಗಳಲ್ಲಿ ಚಿಕಿತ್ಸೆ ಪಡೆಯುತ್ತಿರು ವವರಲ್ಲಿ ಹೆಚ್ಚಿನವರು 14ರಿಂದ 17ರ ಮಧ್ಯೆ ಪ್ರಾಯದವರಾಗಿದ್ದಾರೆ. ಇದರಲ್ಲಿ  ಗಂಡು ಹಾಗೂ ಹೆಣ್ಮಕ್ಕಳೂ ಒಳಗೊಂಡಿದ್ದಾರೆ.  ಮೊಬೈಲ್ ಫೋನ್ ಮೂಲಕ ಆನ್‌ಲೈನ್  ಗೇಮ್ಸ್ ಇತ್ಯಾದಿಗಳನ್ನು ನಿರಂತರವಾಗಿ ವೀಕ್ಷಿಸುವ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಪರಿಣಾ ಮಗಳು ಬೀರುತ್ತವೆ. …

ಕೇರಳದಲ್ಲಿ ಹವಾಲಾ ಹಣ ಈಗ ಕ್ರಿಪ್ಟೋ ಕರೆನ್ಸಿ ಮೂಲಕ ರವಾನೆ

ತಿರುವನಂತಪುರ: ಕೇರಳದಲ್ಲಿ ಭರಪೂರವಾಗಿ ನಡೆಯುತ್ತಿರುವ ಹವಾಲಾ ಹಣದ ವ್ಯವಹಾರವನ್ನು ಈಗ ಕ್ರಿಫ್ಟೋ ಕರೆನ್ಸಿ ಮೂಲಕ ನಡೆಸುವ ಹೊಸ ದಾರಿಯನ್ನು ಹವಾಲಾ ದಂಧೆಯವರು ಅನುಸರಿಸತೊಡಗಿದ್ದಾರೆಂಬ ಮಾಹಿತಿ ಕೇಂದ್ರ ಗೃಹ ಸಚಿವಾಲಯಕ್ಕೆ ಲಭಿಸಿದೆ. ಇಂಟರ್‌ನೆಟ್‌ನ ಭೂಗತ ಡಾರ್ಕ್ ವೆಬ್ ಮೂಲಕ ಕಳೆದ ಮೂರು ವರ್ಷದಲ್ಲಿ ಸುಮಾರು 25 ಕೋಟಿ ರೂ.ಗಳ ಕಾಳಧನವನ್ನು ಕರೆನ್ಸಿ ಮೂಲಕ ಅತ್ತಿತ್ತ ರವಾನಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿಯೂ ಕೇಂದ್ರ ತನಿಖಾ ತಂಡ ನಡೆಸಿದ ತನಿಖೆಯಲ್ಲಿ  ಪತ್ತೆಹಚ್ಚಲಾಗಿದೆ. ಹವಾಲಾ ವ್ಯವಹಾರ ನಡೆಸುತ್ತಿರುವವರ ಮೇಲೆ ಕೇಂದ್ರ ತನಿಖಾ ತಂಡಗಳು …

ಐಕ್ಯರಂಗದ ಆಹೋರಾತ್ರಿ ಮುಷ್ಕರ ಎ.4ರಂದು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ  ಬಜೆಟ್ ಪಾಲು ನೀಡದೆ ಫಂಡ್ ಕಡಿತಗೊಳಿಸಿದ ಎಡರಂಗ ಸರಕಾರದ ಪ್ರಜಾಪ್ರಭುತ್ವ ವಿರುದ್ಧ ಕ್ರಮವನ್ನು ಪ್ರತಿಭಟಿಸಿ ಎಪ್ರಿಲ್ ೪ರಂದು ಐಕ್ಯರಂಗ ರಾಜ್ಯವ್ಯಾಪಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಮುಂಭಾಗದಲ್ಲಿ ನಡೆಸುವ ಆಹೋರಾತ್ರಿ ಮುಷ್ಕರವನ್ನು ಯಶಸ್ವಿಗೊಳಿಸಲು ಕಾಸರಗೋಡು ನಗರಸಭಾ ಯುಡಿಎಫ್ ಲೈಸನ್ ಸಮಿತಿ ತೀರ್ಮಾನಿಸಿದೆ. ಅಧ್ಯಕ್ಷ ಕೆ.ಎಂ. ಬಶೀರ್ ಅಧ್ಯಕ್ಷತೆ ವಹಿಸಿದರು. ವಿಧಾನಸಭಾ ಮಂಡಲ ಸಂಚಾಲಕ ಕೆ. ಖಾಲಿದ್, ಜಿ. ನಾರಾಯಣನ್, ಹಮೀದ್, ಮನಾಫ್, ಕೆ.ಟಿ. ಸುಭಾಷ್ ಮಾತನಾಡಿದರು

ಕನಿಲ ಕ್ಷೇತ್ರ ಬಳಿ ಚಿರತೆ ಪತ್ತೆ ವದಂತಿ : ವಿವಿಧೆಡೆ ಶೋಧ; ನಾಗರಿಕರಲ್ಲಿ ಆಶ್ಚರ್ಯ, ಆತಂಕ

ಉಪ್ಪಳ: ಕನಿಲದಲ್ಲಿ ಚಿರತೆಯೊಂ ದು ಕಾಣಿಸಿಕೊಂಡ ಬಗ್ಗೆ ವದಂತಿಯಾಗುವುದರೊಂದಿಗೆ ಸ್ಥಳೀಯರಲ್ಲಿ ಆಶ್ಚರ್ಯದ ಜೊತೆಗೆ ಆತಂಕವೂ ಮೂಡಿಸಿದೆ.  ಕನಿಲದಲ್ಲಿ ನವೀಕರಣಗೊಳ್ಳುತ್ತಿರುವ ಶ್ರೀ ಭಗವತೀ ಕ್ಷೇತ್ರ ಸಮೀಪ ಮೂರು ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಸಂಜೆ 7 ಗಂಟೆ ವೇಳೆ ಆಟೋ ರಿಕ್ಷಾವೊಂದು ಆ ಭಾಗಕ್ಕೆ ಬಾಡಿಗೆಗೆ ತೆರಳಿದ ಸಂದರ್ಭದಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಕ್ಷೇತ್ರ ಸಮೀಪ ಕಂಡುಬಂದಿ ರುವುದಾಗಿ ಚಾಲಕ ತಿಳಿಸಿದ್ದನು. ಆ ಕೂಡಲೇ ಸ್ಥಳೀಯರು  ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ವಿವಿಧೆಡೆ ಹುಡುಕಾಟ …

ಅಡಿಕೆ ಕೃಷಿಕರ ಸಮಸ್ಯೆ ಪರಿಹರಿಸಲು ತಜ್ಞ ತಂಡದ  ನೇಮಕ-ಕೃಷಿ ಸಚಿವ

ತಿರುವನಂತಪುರ: ಕಾಸರಗೋಡು ಜಿಲ್ಲೆಯ ವಿವಿಧೆಡೆ ಅಡಿಕೆ ಕೃಷಿಗೆ ಬಾಧಿಸುವ ರೋಗಗಳ ಕುರಿತು ಅಧ್ಯಯನ ನಡೆಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಹಾಗೂ ನಾಶನಷ್ಟಗಳನ್ನು ಅಂದಾಜಿಸಲು ತಜ್ಞ ತಂಡವನ್ನು ರೂಪೀಕರಿಸಿ ಸಮಗ್ರ ಯೋಜನೆ ಜ್ಯಾರಿಗೊಳಿಸುವುದಾಗಿ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ. ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ ಎಂಬಿಡೆಗಳ ವಿಜ್ಞಾನಿಗಳು ಒಳಗೊಂಡ ತಂಡ ಪ್ರತಿರೋಧ ಚಟುವಟಿಕೆಗಳಿಗೆ ಮೇಲ್ನೋಟ ವಹಿಸುವುದಾಗಿಯೂ ಸಚಿವ ತಿಳಿಸಿದರು.  ಕೃಷಿಕರ ಆತಂಕಗಳನ್ನು ತಿಳಿಸಿ ಅಡಿಕೆ ಕೃಷಿ ವಲಯದ ಜನಪ್ರತಿನಿಧಿಗಳ …

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 40 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 40 ವರ್ಷ ಕಠಿಣ ಸಜೆ ಹಾಗೂ 2 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 8 ತಿಂಗಳ ಹೆಚ್ಚುವರಿ ಸಜೆ ಅನು ಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.ಇಡುಕ್ಕಿ ಜಿಲ್ಲೆಯ ಉಡುಂಬಚ್ಚಾಲದ ಕಲ್ಲುಂಕ್ಲಾಕಲ್ ನಿವಾಸಿ ಶಾಮಿಲ್ ಕೆ. ಮ್ಯಾಥ್ಯು (37) ಎಂಬಾತನಿಗೆ ಈ ಶಿಕ್ಷೆ …

ಕೊಲ್ಲಿ ಉದ್ಯೋಗಿಯ ಪತ್ನಿಯನ್ನು ವಶೀಕರಿಸಿ ದೌರ್ಜನ್ಯ: ಪತಿಯ ಗೆಳೆಯನ ವಿರುದ್ಧ ಕೇಸು

ಕಾಸರಗೋಡು: ಕೊಲ್ಲಿ ಉದ್ಯೋಗಿಯ ಪತ್ನಿಯನ್ನು ವಶೀಕರಿಸಿ ಕಲ್ಲಿಕೋಟೆ ವಸತಿಗೃಹಕ್ಕೆ ತಲುಪಿಸಿ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. 25ರ ಹರೆಯದ ಯುವತಿ ನೀಡಿದ ದೂರಿನಂತೆ ಪತಿಯ ಗೆಳೆಯ ಹಾಗೂ ಕಾಸರಗೋಡು ನಗರ ಠಾಣೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾದ ಯುವಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನಭಂಗ ಪ್ರಕರಣದಲ್ಲಿ ಕೇಸು ದಾಖಲಿಸಲಾಗಿದೆ. 2024 ಡಿಸೆಂಬರ್‌ನಲ್ಲಿ ಘಟನೆ ನಡೆದ ಬಗ್ಗೆ ತಿಳಿದು ಬಂದಿದೆ. ಪತಿಯ ಗೆಳೆಯ ಹಾಗೂ ಸಂಬಂಧಿಕನಾದ ಯುವಕ ದೂರುದಾರೆಯಾದ ಯುವತಿಯನ್ನು ಕಲ್ಲಿಕೋಟೆಯ ವಸತಿಗೃಹದಲ್ಲಿ ಮಾನಭಂಗ ಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯ …

ಅಸೌಖ್ಯದಿಂದ ಬಳಲುತ್ತಿದ್ದ ಶ್ರೇಯಸ್ ನಿಧನ

ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಪಾರ್ಥಕೊಚ್ಚಿಯ ಶ್ರೇಯಸ್ (11) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದನು. ಈತನ ಚಿಕಿತ್ಸೆಗಾಗಿ ಊರವರು ಸಮಿತಿ ರೂಪೀಕರಿಸಿ  ಚಿಕಿತ್ಸಾನಿಧಿ ಸಂಗ್ರಹ ನಡೆಸುತ್ತಿದ್ದಂತೆ ಶ್ರೇಯಸ್ ಇಹಲೋಕ ತ್ಯಜಿಸಿದ್ದಾನೆ. ಈತನ ನಿಧನ ಸ್ಥಳೀಯರಲ್ಲಿ ಶೋಕಸಾಗರ ಸೃಷ್ಟಿಸಿದೆ. ಪಾರ್ಥಕೊಚ್ಚಿ ನಿವಾಸಿ ಶರತ್- ಅನುಪಮಾ ದಂಪತಿ ಪುತ್ರನಾದ ಶ್ರೇಯಸ್ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇತ್ತೀಚೆಗೆ ಈತನಿಗೆ ಅಸೌಖ್ಯ ಕಂಡು ಬಂದಿದ್ದು, ತಜ್ಞವೈದ್ಯರನ್ನು ಭೇಟಿಯಾದಾಗ ಕಿಡ್ನಿ ಸಂಬಂಧ ಖಾಯಿಲೆ ಬಗ್ಗೆ ತಿಳಿದು ಬಂದಿದೆ. …