ಅಸೌಖ್ಯ: ಗೃಹಿಣಿ ನಿಧನ

ಪೈವಳಿಕೆ: ಇಲ್ಲಿಗೆ ಸಮೀಪದ ಏದಾರು ನಿವಾಸಿ ಸರೋಜಿನಿ [48] ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮಂಗಳೂರಿನ ಸಹೋದ ರನ ಮನೆಯಲ್ಲಿ ನಿಧನರಾದರು. ಇವರು ಸುಳ್ಯ ನಿವಾಸಿ ನವೀನ್ ಕುಮಾರ್ ರವರ ಪತ್ನಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಶ್ರದ್ಧ, ಶರಣ್ಯ, ಸಹೋದರ, ಸಹೋದರಿಯರಾದ ಕೃಷ್ಣ ಕುಮಾರ್, ಸುರೇಶ್ ಕುಮಾರ್, ದೇವಕಿ, ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಮುಂಡ, ತಾಯಿ ದೆಯ್ಯು, ಸಹೋದರರಾದ ಗೋಪಾಲಕೃಷ್ಣ, ಶಂಕರ, ಸಂಜೀವ ಈ ಹಿಂದೆ ನಿಧನಹೊಂದಿದ್ದಾರೆ. ಅಂತ್ಯಸAಸ್ಕಾರ ಏದಾರು ಮನೆ …

ರಾಜ್ಯ ಸರಕಾರ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯ- ಎನ್.ಜಿ.ಒ. ಸಂಘ್

ಕಾಸರಗೋಡು: ರಾಜ್ಯದ ಸರಕಾರಿ ನೌಕರರ ಬಗ್ಗೆ ಎಡರಂಗ ಸರಕಾರ ಹೊಂದಿರುವ ನೀತಿ ವಿರುದ್ಧ ಅನಿರ್ದಿಷ್ಟಕಾಲ ಕೆಲಸ ಸ್ಥಗಿತ ಮುಷ್ಕರ ಅನಿವಾರ್ಯವೆಂದು ಎನ್‌ಜಿಒ ಸಂಘ್ ರಾಜ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟರು. ಕೇರಳ ಎನ್‌ಜಿಒ ಸಂಘ್ ೪೦ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನೌಕರರ ವೇತನ ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಇಂದು ರಾಜ್ಯಾಡಳಿತ ನಡೆಸುತ್ತಿರುವ ಎಡರಂಗ ಸರಕಾರ ಕಸಿದುಕೊಂಡಿದೆ. ಸಹಭಾಗಿತ್ವ ಪಿಂಚಣಿಯನ್ನು ಹಿಂತೆಗೆಯಲಿಲ್ಲ. ಮಾತ್ರವಲ್ಲದೆ ಇದನ್ನು ಇನ್ನಿತರ ವಲಯಗಳಿಗೂ ವಿಸ್ತರಿಸಿದೆ. 7 ಕಂತು ಕ್ಷಾಮಭತ್ತೆ ಬಾಕಿ …

ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಪ್ರತಿಷ್ಠಾ ದಿನಾಚರಣೆ 6ರಂದು

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಬಿಂಬ ಪ್ರತಿಷ್ಠಾ ದಿನಾಚರಣೆ ಎಪ್ರಿಲ್ 6ರಂದು ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 8ರಿಂದ ಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ನಾಗ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಹೂಮುಡಿ ಉತ್ಸವ ಇಂದು

ಮಂಗಲ್ಪಾಡಿ: ಬಂದ್ಯೋಡು ಬಳಿಯ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಆರಂಭಗೊAಡ ಕಳಿಯಾಟ ಮಹೋತ್ಸವ ಇಂದು ಸಮಾಪ್ತಿ ಗೊಳ್ಳಲಿದೆ. ಇಂದು ಪ್ರಾತಕಾಲ ಗುಳಿಗ ದೈವದ ಕೋಲ, ಕಾಳಪುಲಿಯನ್ ದೈವ, ಪುಲ್ಲೂರಾಳಿ ದೈವಗಳು ನಡೆಯಿತು. ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ಮತ್ತು ಹೂಮುಡಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಭಂಡಾರ ಅವರೋಹಣ ನಡೆಯಲಿದೆ.

ಸಂಚರಿಸುತ್ತಿದ್ದ ಬೈಕ್‌ನ ಮೇಲೆ ಕಾಡುಹಂದಿ ದಾಳಿ: ಮಸೀದಿ ಖತೀಬ್‌ರಿಗೆ ಗಂಭೀರ ಗಾಯ

ಕುಂಬಳೆ: ಸಂಚರಿಸುತ್ತಿದ್ದ ಬೈಕ್‌ನ ಮೇಲೆ ಕಾಡು ಹಂದಿಗಳು ದಾಳಿ ನಡೆಸಿದ್ದು, ಇದರಿಂದ ಸವಾರ  ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಆಲಂಪಾಡಿ ನಿವಾಸಿಯೂ, ಅಂಗಡಿಮೊಗರು ಕಂಬಾರ್ ಜುಮಾ ಮಸೀದಿಯ ಖತೀಬ್ ಆಗಿರುವ ಅಬ್ದುಲ್ ಸಲಾಂ ಇರ್ಫಾನಿ (40) ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು ೫ ಗಂಟೆ ವೇಳೆ ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ಇರ್ಫಾನಿ ಬೈಕ್‌ನಲ್ಲಿ ಮನೆಯಿಂದ ಮುಂಜಾನೆ ವೇಳೆ ಮಸೀದಿಗೆ ತೆರಳುತ್ತಿದ್ದರು. ಬೈಕ್ ಎ.ಕೆ.ಜಿ ನಗರಕ್ಕೆ …

ಮುಳಿಯಾರು ಪಾಂಡಿಕಂಡದಲ್ಲಿ ಚಿರತೆ ದೃಶ್ಯ ಪತ್ತೆ

ಬೋವಿಕ್ಕಾನ: ಮುಳಿಯಾರು ಪಂಚಾಯತ್‌ನ ಪಾಂಡಿಕಂಡದ ಹೊಳೆ ಬದಿಯಲ್ಲಿ ಮುಂಜಾನೆ ಚಿರತೆ ದೃಶ್ಯ ಅರಣ್ಯ ಇಲಾಖೆ ಸ್ಥಾಪಿಸಿದ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಚಿರತೆ ದೃಶ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖ ಹೊಸ ಬೋನು ಸ್ಥಾಪಿಸಲು ಮುಂದಾಗಿದೆ.  ಪಾಂಡಿ ಕಂಡದಲ್ಲಿ ವಿಶೇಷ ರೀತಿಯ ಆಮೆಗಳ ದೃಶ್ಯ ಚಿತ್ರೀಕರಿಸಲು  ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಆ ಕ್ಯಾಮರಾದಲ್ಲಿ ಚಿರತೆ ದೃಶ್ಯ ಪತ್ತೆಯಾಗಿದೆ. ಚಿರತೆ ಹೊಳೆ ಬದಿ ನಡೆದುಕೊಂಡು ಹೋಗಿ ಅಲ್ಲಿ ಅಲ್ಪ ವಿಶ್ರಾಂತಿ ಪಡೆದ ಬಳಿಕ ಅಲ್ಲಿಂದ …

ಬಿಜೆಪಿ ಅಧ್ಯಕ್ಷರ ಆಯ್ಕೆ 24ರಂದು: ಕೆ. ಸುರೇಂದ್ರನ್ ಮುಂದುವರಿಯುವ ಸಾಧ್ಯತೆ

ತಿರುವನಂತಪುರ: ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಕೆ. ಸುರೇಂದ್ರನ್ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೆ  ಕೆ. ಸುರೇಂದ್ರನ್ ಮುಂದುವರಿಯುವ ಬಗ್ಗೆ ರಾಷ್ಟ್ರೀಯ ನಾಯಕತ್ವ ನಿರ್ಧಾರ ಕೈಗೊಂಡಿರು ವುದಾಗಿ ಹೇಳಲಾಗುತ್ತಿದೆ. ನೂತನ ಅಧ್ಯಕ್ಷರ ಕುರಿತು  ನಿರ್ಧರಿಸುವ ಅಂಗ ವಾಗಿ 24ರಂದು ರಾಜ್ಯ ಕೌನ್ಸಿಲ್ ಸಭೆ ನಡೆಯಲಿದೆ.  ಇದರಂಗವಾಗಿ ಇದರ ಜವಾಬ್ದಾರಿಯುಳ್ಳ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಾಳೆ ರಾಜ್ಯಕ್ಕೆ ಆಗಮಿಸುವರು.

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಗುರಿ: ಕಾರಿನಲ್ಲಿ ಸಾಗಿಸುತ್ತಿದ್ದ 90 ಗ್ರಾಂ ಎಂಡಿಎಂಎ ಸಹಿತ ಯುವತಿ ಸೆರೆ

ಕೊಲ್ಲಂ: ರಾಜ್ಯದಲ್ಲಿ ಮಾದಕ ವಸ್ತು ಸಾಗಾಟ, ಮಾರಾಟ ದಂಧೆ ಮತ್ತಷ್ಟು ತೀವ್ರಗೊಂಡಿದ್ದು, ಇದರ ವಿರುದ್ಧ ಪೊಲೀಸ್, ಅಬಕಾರಿ ಕಾರ್ಯಾಚರಣೆ ವ್ಯಾಪಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಮಾದಕವಸ್ತುಗಳ ಸಹಿತ ಹಲವು ಮಂದಿ ಸೆರೆಗೀಡಾಗಿದ್ದ್ದಾರೆ. ಇದರಿಂದ ವಿವಿಧ ರೀತಿಯ ಮಾರಕ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಸಹಿತ ಯುವ ಜನತೆ ಯನ್ನು ಗುರಿಯಿರಿಸಿ ರಾಜ್ಯದಲ್ಲಿ ಮಾದಕ ವಸ್ತು ಮಾಫಿಯಾಗಳು ಕಾರ್ಯಾಚರಿಸುತ್ತಿರುವುದಾಗಿ ಈಗಾಗಲೇ ತನಿಖೆಯಲ್ಲಿ ತಿಳಿದು ಬಂದಿದೆ. ಕೊಲ್ಲಂ ನಗರದಲ್ಲಿ ನಿನ್ನೆ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ 90 …

ಕರ್ನಾಟಕ ಬಂದ್: ನೀರಸ ಪ್ರತಿಕ್ರಿಯೆ

ಬೆಂಗಳೂರು: ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ,  ಮರಾಠಿ ತಂಡದಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆ ಜ್ಯಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿರುವ  ಅಖಂಡ ಕರ್ನಾಟಕ ಬಂದ್‌ಗೆ ಹಲವೆಡೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂದ್ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಎಂದಿನಂತೆ ನಡೆಯುತ್ತಿದೆ. ಸರಕಾರಿ ಕಚೇರಿಗಳ ಮೇಲೆ ಹಾಗೂ ಜನಜೀವನ ಇಂದು …

ಆನ್ಲೈನ್ ವ್ಯಾಪಾರದ ಹೆಸರಲ್ಲಿ 19.85 ಲಕ್ಷ ರೂ. ಲಪಟಾವಣೆ : ಕೇಸು ದಾಖಲು

ಕಾಸರಗೋಡು: ಆನ್ಲೈನ್ ಮೂಲಕ ವ್ಯಾಪಾರದ ಹೆಸರಲ್ಲಿ ಯುವಕನೋರ್ವನಿಂದ 19.85 ಲಕ್ಷ ರೂ. ಪಡೆದು ಬಳಿಕ ವಂಚಿಸಿದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.ಮಧೂರು ಸಮೀಪದ ಅಲ್ತಾಫ್ ಮಹಲ್ನ ಅಬೂಬಕರ್ ಅನಸ್ (23) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಕೇಸು ದಾಖಲಿಸಿ ಸೈಬರ್ ಸೆಲ್ ಪೊಲೀಸರ ಸಹಾಯದೊಂದಿಗೆ ತನಿಖೆ ಆರಂಭಿಸಿದ್ದಾರೆ. ವಾಟ್ಸಪ್, ಇನ್ಸ್ಟಾಗ್ರಾಂ ಇತ್ಯಾದಿ ನವಮಾ ಧ್ಯಮಗಳ ಮೂಲಕ ಪರಿಚಯ ಗೊಂಡ ಆನ್ಲೈನ್ ವಂಚಕರು ಆನ್ಲೈನ್ ಕ್ರಿಫ್ಟೋ ಟ್ರೇಡಿಂಗ್ ಮಾರ್ಕೆಟಿಂಗ್ ಮೂಲಕ ಭಾರೀ ಲಾಭ …