ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ 62 ಕಾಡು ಹಂದಿಗಳನ್ನು ಕೊಲ್ಲಲಾಗಿದೆ-ವಿಧಾನಸಭೆಯಲ್ಲಿ ಸಚಿವ ; ಕಳೆದ ಏಳು ವರ್ಷದಲ್ಲಿ ಜಿಲ್ಲೆಯಲ್ಲಿ ಕಾಡು ಹಂದಿಗಳಿAದ 7 ಮಂದಿಗೆ ಪ್ರಾಣಹರಣ

ಕಾಸರಗೋಡು: ಕಳೆದ ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಅಕ್ರಮಣಕಾರಿಯಾದ 62 ಕಾಡುಹಂದಿ ಗಳನ್ನು ಕೊಲ್ಲಲಾಗಿದೆ ಯೆಂದು ವಿಧಾನಸಭೆಯಲ್ಲಿ ಅರಣ್ಯ ಖಾತೆ ಸಚಿವಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗೆ ಸಚಿವರು ಈ ಲೆಕ್ಕಾಚಾರ ನೀಡಿದ್ದಾರೆ. ಇದರಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಮಂಜೇಶ್ವರ-8, ಕಾಸರಗೋಡು-8, ಉದುಮ-13, ಹೊಸದುರ್ಗ-29 ಮತ್ತು ತೃಕರಿಪುರ ದಲ್ಲಿ 4 ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಕಾಡು ಹಂದಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು …

ಜೇನು ಕೃಷಿ ತರಬೇತಿ: ಆಸಕ್ತರಿಗೆ ನೋಂದಾವಣೆಗೆ ಕರೆ

ಮುಳ್ಳೇರಿಯ: ಕಾರಡ್ಕ ಬ್ಲೋಕ್ ಪಂಚಾಯತ್ನ ಅಧೀನದಲ್ಲಿರುವ ಕೃಷಿಭವನಗಳ ಕೃಷಿಕರಿಗೆ ಹಾರ್ಟಿಕೋರ್ಪ್ ಮೂಲಕ ಈ ತಿಂಗಳ 25ರಿಂದ 27ರ ತನಕ ಜೇನು ಸಾಕಣೆ ಕೃಷಿಯಲ್ಲಿ ತರಬೇತಿ ನೀಡಲಾಗುವುದು. ಜೇನು ಕೃಷಿಯಲ್ಲಿ ಆಸಕ್ತಿ ಇರುವ ಕಾರಡ್ಕ ಪಂಚಾಯತ್ ವ್ಯಾಪ್ತಿಯ ಪ್ರಥಮವಾಗಿ ನೋಂದಾಯಿಸುವ 20 ಮಂದಿ ಕೃಷಿಕರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದೆ.ತರಬೇತಿಯಲ್ಲಿ ಭಾಗವ ಹಿಸುವ ಕೃಷಿಕರಿಗೆ ವಿವಿಧ ಉಪಕರಣಗಳನ್ನು 40 ಶೇಕಡಾ ಸಬ್ಸಿಡಿಯಲ್ಲಿ ಹಾರ್ಟಿಕೋರ್ಪ್ ಲಭ್ಯ ಗೊಳಿಸಲಿದೆ. ಆಸಕ್ತಿ ಇರುವವರು 9383472273 ಎಂಬ ನಂಬ್ರವನ್ನು ಸಂಪರ್ಕಿಸಿ ಹೆಸರು, ಮಾಹಿತಿಯನ್ನು ನೀಡಬೇಕೆಂದು ಕಾರಡ್ಕ …

ಪಿ.ಎಂ. ಮತ್ಸ್ಯ ಸಂಪತ್ತು ಯೋಜನೆ ಕೇರಳದಲ್ಲಿ 1358.10 ಕೋಟಿ ರೂ.ಗಳ ಯೋಜನೆ

ಹೊಸದಿಲ್ಲಿ: ಕೇಂದ್ರ ಮೀನು ಗಾರಿಕಾ ಇಲಾಖೆ ಪ್ರಧಾನಮಂತ್ರಿ ಮತ್ಸ್ಯ ಸಂಪತ್ ಯೋಜನೆ ಮೂಲಕ ಕೇರಳದಲ್ಲಿ 1358.10 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅನುಮತಿ ನೀಡಿದೆಯೆಂದು ಕೇಂದ್ರ ಫಿಶರೀಸ್, ಮೃಗ ಸಂರಕ್ಷಣೆ, ಹೈನುಗಾರಿಕಾ ಅಭಿವೃದ್ಧಿ ಇಲಾಖೆ ಸಹ ಸಚಿವ ಜೋರ್ಜ್ ಕುರ್ಯಗನ್ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ. ಮೀನು ಉತ್ಪಾ ದನೆ ಸಂಬAಧಿ ಸಿದ ಚಟುವಟಿಕೆಗಳಿಗೆ ಸಹಕಾರ, ಮೀನುಗಾರಿಕಾ ಬಂದರುಗಳ ನವೀಕರಣ, ಇತರ ಮೂಲಭೂತ ಸೌಕರ್ಯಗಳು, ಪರಂಪರಾಗತ ಮೀನು ಕಾರ್ಮಿಕರಿಗೆ ಬೋಟ್, ಬಲೆ ವಿತರಣೆ ಮೊದಲಾದವುಗಳಿಗಾಗಿ ಈ ಮೊತ್ತ ಮಂಜೂರು ಮಾಡಲಾಗಿದೆ.ಮೀನುಗಾರಿಕೆ …

ತೀವ್ರಗೊಂಡಿರುವ ಮಾದಕವಸ್ತು ದಂಧೆ:  ಮಂಜೇಶ್ವರದಲ್ಲಿ 25 ಗ್ರಾಂ ಎಂಡಿಎಂಎ ಸಹಿತ ನಾಲ್ಕು ಮಂದಿ ಸೆರೆ

ಮಂಜೇಶ್ವರ: ಜಿಲ್ಲೆಯಲ್ಲಿ ವಿವಿಧ ರೀತಿಯ ಮಾದಕವಸ್ತು ಸಾಗಾಟ, ಮಾರಾಟ ವ್ಯಾಪಕಗೊಂಡಿದ್ದು, ಇದರ ವಿರುದ್ದ ಪೊಲೀಸ್, ಅಬಕಾರಿದಳದಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮಂಜೇಶ್ವರ ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ 25 ಗ್ರಾಂ  ಎಂಡಿಎಂಎ ವಶಪಡಿಸಲಾಗಿದೆ. ಈ ಸಂಬಂಧ  ಓರ್ವ ಕರ್ನಾಟಕ ನಿವಾಸಿ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ೭ ಲಕ್ಷ ರೂಪಾಯಿ ಹಾಗೂ ವಾಹನ ವಶಕ್ಕೆ ತೆಗೆಯಲಾಗಿದೆ. ಕುಂಜತ್ತೂರು ಉದ್ಯಾವರ ಮಾಡ ಹೌಸ್‌ನ ಅಲ್ಲಾಂ ಇಕ್ಬಾಲ್, ಉಪ್ಪಳ ಶಾರದಾನಗರ ಮಣಿಮುಂಡ ಹೌಸ್‌ನ ಮುಹಮ್ಮದ್ ಫಿರೋಸ್ (22), ಕುಂಜತ್ತೂರು …

ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೂಲತಃ ಮೀಯಪದವು ಕುಳಬೈಲು ನಿವಾಸಿಯೂ, ಪ್ರಸ್ತುತ ಮಂಜೇಶ್ವರ ಬಳಿ ಕೆದುಂಬಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಜಯಂತ (48) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕರಾಗಿದ್ದರು. ನಿನ್ನೆ ಸಂಜೆ ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಅಪಘಾತವುಂಟಾಗಿದೆ. ಯಾವುದೋ ಅಗತ್ಯಕ್ಕಾಗಿ ಹೊಸಂಗಡಿಗೆ ಹೋಗಿದ್ದ ಜಯಂತ ಅಲ್ಲಿಂದ ಬಸ್‌ನಲ್ಲಿ ಮರಳಿ ಮಂಜೇಶ್ವರದಲ್ಲಿ ಇಳಿದಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕಾಸರಗೋಡು ಭಾಗದಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು …

ಭಾರತಕ್ಕೆ ಅಪ್ಪಳಿಸಿದ ಬಿಸಿಗಾಳಿ: ಕೇರಳ ಸಹಿತ ಒಂಭತ್ತು ರಾಜ್ಯಗಳಲ್ಲಿ ಜಾಗ್ರತಾ ನಿರ್ದೇಶ

ನವದೆಹಲಿ: ಭಾರತಕ್ಕೆ ಬಿಸಿ ಗಾಳಿ ಅಪ್ಪಳಿಸಿದ್ದು, ಇದರಿಂದಾಗಿ ಕೇಂದ್ರ ಹವಾಮಾನ ಇಲಾಖೆ ದೇಶದ ಒಂಭತ್ತು ರಾಜ್ಯಗಳಲ್ಲಿ ಭಾರೀ ಜಾಗ್ರತಾ ನಿರ್ದೇಶ ನೀಡಿದೆ. ಭಾರತದ ವಿವಿಧ ಭಾಗಗಳಲ್ಲಿ  ತಾಪಮಾನ ಮಟ್ಟ 40 ಡಿಗ್ರಿ ಸೆಲ್ಶಿಯಸ್ ದಾಟಿದೆ. ಇಷ್ಟೊಂದು ಪ್ರಮಾಣಕ್ಕೆ ತಾಪಮಾನ ಮಟ್ಟ ಏರಿರುವುದು 1901ರ ಬಳಿಕ ಇದು ಮೊದಲ ಬಾರಿಯಾಗಿದೆ. ಕೇರಳ, ಒಡಿಶಾ, ಕರ್ನಾಟPದ ಕೆಲವು ಭಾಗಗಳು, ರಾಜಸ್ಥಾನ, ಗುಜರಾತ್, ಝಾರ್ಖಂಡ್, ಛತ್ತೀಸ್‌ಗಡ್, ಪಶ್ಚಿಮ ಬಂಗಾಲ ಹಾಗೂ ಉತ್ತರ ತೆಲಂಗಾನದಲ್ಲಿ ಈ ಜಾಗ್ರತಾ ನಿರ್ದೇಶ ನೀಡಲಾಗಿದೆ.  ಈ ರಾಜ್ಯಗಳಲ್ಲಿ  …

ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಬೆಳ್ಳೂರು ಪಂಚಾ ಯತ್‌ನ ಐತ್ತನಡ್ಕ ಮಣ್ಣಾಪು ಕಾಲನಿಯ ಚೋಮ ಎಂಬವರ ಪುತ್ರ ಮಲ್ಲೇಶ್ (26) ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ಕೆಲಸಕ್ಕೆ ಹೋಗಬೇಕಾದ ಸಮಯವಾದರೂ ಕಾಣದ ಹಿನ್ನೆಲೆ ಯಲ್ಲಿ ಹುಡುಕಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ತಂದೆ, ತಾಯಿ ರಾಜೀವಿ, ಸಹೋದರರಾದ ಹರೀಶ, ಗಿರೀಶ, ಸಹೋದರಿ ಲೀಲಾವತಿ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೆಥಾಫಿಟ್‌ಮಿನ್ ಸಹಿತ ಓರ್ವ ಸೆರೆ: ಬೈಕ್ ವಶ

ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 6.024 ಗ್ರಾಂ ಮೆಥಾಫಿಟ್‌ಮಿನ್  ಸಹಿತ ಓರ್ವ ನನ್ನು ಬಂಧಿಸಿದೆ.  ನೆಕ್ರಾಜೆ ಗ್ರಾಮದ ನೆಲ್ಲಿಕಟ್ಟೆ ಪೊಡಿಪಳ್ಳ ಚೆನ್ನಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಮುಹಮ್ಮದ್ ಹನೀಫಾ.ಕೆ (38) ಬಂಧಿತ ಆರೋಪಿ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಕುಂಬಳೆ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್  ಮ್ಯಾಥ್ಯು ಕೆ.ಡಿಯವರ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಈ ಮಾಲು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ಮೇಲೆ ಅಬಕಾರಿ ತಂಡ ಹಲವು ದಿನಗಳಿಂದ …

ತೆರುವತ್ತ್‌ನಲ್ಲಿ ಯುವಕರ ಮಧ್ಯೆ ಘರ್ಷಣೆ

ಕಾಸರಗೋಡು: ನಗರದ ತೆರು ವತ್ತ್‌ನಲ್ಲಿ ಯುವಕ ಮಧ್ಯೆ ಘರ್ಷಣೆ ನಡೆದು ಓರ್ವ ಗಾಯಗೊಂಡ ಘಟನೆ ನಡೆದಿದೆ.  ಚೆಂಗಳ ಎರಿಯಪ್ಪಾಡಿಯ ನಿಜಾಮುದ್ದೀನ್ (25) ಘರ್ಷಣೆ ಯಲ್ಲಿ ಗಾಯಗೊಂಡಿದ್ದು, ಅದರಂತೆ ಮೂವರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮಾರ್ಚ್ 18ರಂದು ಸಂಜೆ ಘಟನೆ ನಡೆದಿದೆ. ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು  ತೆರವು ಗೊಳಿಸುವಂತೆ ಹೇಳಿದ ದ್ವೇಷದಿಂದ ಮೂವರ ತಂಡ ತನ್ನ ಮೇಲೆ ಹಲ್ಲೆ ನಡೆಸಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಿಜಾಮುದ್ದೀನ್ ಆರೋಪಿಸಿದ್ದಾರೆ.

ನಿಲ್ಲಿಸಿದ್ದ ಕಾರಿನಿಂದ 40.25 ಲಕ್ಷರೂ. ಕಳವು

ಕಲ್ಲಿಕೋಟೆ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಗೋಣಿ ಚೀಲದಲ್ಲಿ ಕಟ್ಟಿ ಇರಿಸಿದ್ದ 40.25 ಲಕ್ಷರೂ. ವನ್ನು ಕಳವುಗೈದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕಲ್ಲಿಕೋಟೆ ಪೂವಾಟ್ಟುಪರಂಬು ಕೇರ್ ಲ್ಯಾಂಡ್ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಅನಕುಳ ನಿವಾಸಿ ರಹೀಸ್ ಎಂಬವರ ಹಣವನ್ನು ಕಾರಿನ ಗಾಜು ಪುಡಿಗೈದು  ಕಳ್ಳರು ದೋಚಿದ್ದಾರೆ. ಮಾರ್ಚ್ ೧೯ರಂದು  ಅಪರಾಹ್ನ   ಈ ಕಳವು ನಡೆದಿದೆ. ಕಾರಿನ ಎದುರುಗಡೆಯ ಗಾಜನ್ನು ಹೊಡೆದು ಪುಡಿಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ರಹೀಸ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ  …