ಕಳಮಶ್ಶೇರಿ ಪಾಲಿಟೆಕ್ನಿಕ್ ಹಾಸ್ಟೆಲ್ ಗಾಂಜಾ ಪ್ರಕರಣ: ಇನ್ನೂ ಇಬ್ಬರ ಸೆರೆ

ಕೊಚ್ಚಿ: ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಸುಮಾರು ಎರಡು ಕಿಲೋ ಗಾಂಜಾ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ಗೆ ಗಾಂಜಾ ತಲುಪಿಸಿದ ಆರೋಪದಂತೆ ಆಲುವಾ ನಿವಾಸಿ ಆಶಿಕ್ ಮತ್ತು ಆತನ ಜತೆಗಿದ್ದ ಶಾರಿಮುಖ್ ಎಂಬವರು ಪೊಲೀಸರ ವಶಕ್ಕೊಳಗಾದ ಇತರ ಇಬ್ಬರು ಶಂಕಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಆಶಿಕ್ ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿದ್ದಾನೆ. ಈತನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಸ್ತುತ …

ರಸ್ತೆ ಬದಿ ಹೊಂಡ ತೋಡಿ ಮುಚ್ಚಲು ಕ್ರಮವಿಲ್ಲ: ನಗರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ, ಜಲ ಪ್ರಾಧಿಕಾರದ ನಿರ್ಲಕ್ಷ್ಯ- ಆರೋಪ

ಕಾಸರಗೋಡು: ನಗರದ ನಾಯಕ್ಸ್ ರಸ್ತೆಯಲ್ಲಿ ನೀರಿನ ಪೈಪು ಅಳವಡಿಸಲು ತೋಡಿದ ಹೊಂಡ  ಮುಚ್ಚುಗಡೆಗೊಳಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಹಲವು ದಿನಗಳ ಹಿಂದೆ ಜಲ ಪ್ರಾಧಿಕಾರ ರಸ್ತೆ ಬದಿ ಹೊಂಡ ತೋಡಿತ್ತು. ಅರ್ಧ ಭಾಗ ಪೈಪ್ ಅಳವಡಿಸಿದ್ದು, ಬಹುತೇಕ ಭಾಗ ಇನ್ನೂ ಬಾಕಿಯಿದೆ. ಈ ಕೆಲಸ ಪೂರ್ತಿಗೊಳಿಸಿ ಹೊಂಡ ಮುಚ್ಚುಗಡೆಗೊಳಿಸಲು  ಕ್ರಮ ಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವೆನ್ನಲಾಗಿದೆ. ರಸ್ತೆ ಬದಿ ಹೊಂಡ ತೋಡಿರುವುದರಿಂದ ಒಂದೆಡೆ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ.  ಅಲ್ಲದೆ ರಸ್ತೆ ಬದಿಯಲ್ಲಿರುವ ವ್ಯಾಪಾರ ಸಂಸ್ಥೆಗಳಿಗೆ ಗ್ರಾಹಕರಿಗೆ ತೆರಳಲು ಸಾಧ್ಯವಾಗದ …

ಗಾಂಜಾ, ಮದ್ಯ ವಶ: ಮತ್ತೆ ಮೂವರ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳ ಲ್ಲಾಗಿ ನಡೆಸಿದ ಮೂರು ಕಾರ್ಯಾ ಚರಣೆಗಳಲ್ಲಾಗಿ ಗಾಂಜಾ ಮತ್ತು ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಮೂವರನ್ನು ಬಂಧಿಸಲಾಗಿದೆ.ಕುAಬಳೆಗೆ ಸಮೀಪದ ಕಿದೂರಿ ನಲ್ಲಿ ಕುಂಬಳೆ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಮ್ಯಾಥ್ಯು ಕೆ.ಡಿ.ರ ನೇತೃತ್ವದ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ 42 ಗ್ರಾಂ ಗಾಂಜಾ ಕೈವಶವಿರಿಸಿಕೊಂಡಿದ್ದ ಆರೋಪದಂತೆ ಕಿದೂರು ಅಂಬಿಲಡ್ಕ ಬಜಪೆ ನಿವಾಸಿ ಗಿರಿರಾಜ್ ಕೃಷ್ಣ ವಾಹ್ (45) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ …

ತಾಯಿ ಜೊತೆ ನಿದ್ರಿಸಿದ್ದ 51ದಿನದ ಮಗು ಮೃತ್ಯು

ಕಾಸರಗೋಡು: ತಾಯಿ ಜೊತೆ ನಿದ್ರಿಸಿದ್ದ 51 ದಿನ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಮಧೂರು ಜುಮಾ ಮಸೀದಿ ಬಳಿಯ ಕಲ್ಲಕಟ್ಟ ಹೌಸ್‌ನ ಕಬೀರ್- ಸಫೀರ ನಸ್ನಿ ದಂಪತಿಯ ಗಂಡು ಮಗು ಸಾವಿಗೀಡಾಗಿದೆ. ಕಳೆದ ದಿನ ರಾತ್ರಿ ಹಾಲು ನೀಡಿ ಮಗುವನ್ನು ಮಲಗಿಸಲಾಗಿತ್ತು. ಬೆಳಿಗ್ಗೆ ವೇಳೆ ಮಗು ಮೃತಪಟ್ಟ ಸ್ಥಿತಿಯಲ್ಲ್ಲಿ ಕಂಡು ಬಂದಿದೆ. ಘಟನೆ ಬಗ್ಗೆ ಸಫೀರ ನಸ್ನಿಯ ತಂದೆ ಅಬ್ದುಲ್ ರಹ್ಮಾನ್ ಫೈಸಲ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಅಪೂರ್ವ …

ಯುವಕನಿಗೆ ಹಲ್ಲೆ: ನರಹತ್ಯಾ ಯತ್ನ ಕೇಸು ದಾಖಲು

ಉಪ್ಪಳ: ಯುವಕನನ್ನು ತಡೆದು ನಿಲ್ಲಿಸಿ ದೊಣ್ಣೆಯಿಂದ ಹೊಡೆದು ಗಾಯ ಗೊಳಿಸಿದ ಸಂಬಂಧ ಪೊಲೀಸರು ನರ ಹತ್ಯಾಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕುರುಡಪದವು ಕುರಿಯ ನಿವಾಸಿ ಯತೀಶ್ ಕೆ. (41) ಅವರಿಗೆ ಈ ತಿಂಗಳ ೧೩ರಂದು ಬೆಳಿಗ್ಗೆ ಕೊಮ್ಮಂಗಳದಲ್ಲಿ ಆರೋಪಿ ಬಾಲಕೃಷ್ಣ ಶೆಟ್ಟಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಬಾಲಕೃಷ್ಣ ಶೆಟ್ಟಿ ವಿರುದ್ಧ ಕರ್ನಾಟಕದ ಪೊಲೀಸರಿಗೆ ಮಾಹಿತಿ ನೀಡಿದ ದ್ವೇಷದಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಅರಣ್ಯದ ಕೆರೆಯಿಂದ ಕೊಳವೆ ಮೂಲಕ ತೋಟಕ್ಕೆ ನೀರು ಪೂರೈಸುತ್ತಿದ್ದ ಇಬ್ಬರ ಸೆರೆ

ಕಾಸರಗೋಡು: ಅರಣ್ಯದ ಕೆರೆಯಿಂದ ಅನಧಿಕೃತವಾಗಿ ಕೊಳವೆ ಮೂಲಕ ಅಡಿಕೆ ತೋಟಕ್ಕೆ ನೀರು ಪೂರೈಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಅಡಿಕೆ ತೋಟದ ಮ್ಯಾನೇಜರ್ ಆಗಿರುವ ಕೊನ್ನಕ್ಕಾಡ್‌ನ ಥೋಮಸ್ (59) ಮತ್ತು ಎಡಕಾನದ ಬಿನೊ (46) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಹೊಸದುರ್ಗ ಅರಣ್ಯ ರೇಂಜ್‌ನ ಮರುದೋಂ ಸೆಕ್ಷನ್‌ನ ವ್ಯಾಪ್ತಿಗೊಳಪಟ್ಟ ಸರಕಾರಿ ಅರಣ್ಯಕ್ಕೆ ಅನಧಿಕೃತವಾಗಿ ನುಗ್ಗಿ ಅಲ್ಲಿನ ಕೆರೆಗೆ ಕೊಳವೆ ಅಳವಡಿಸಿ ಅಡಿಕೆ ತೋಟಕ್ಕೆ ನೀರು ಪೂರೈಸುತ್ತಿದ್ದ ದೂರಿನಂತೆ ಈ ಇಬ್ಬರ ವಿರುದ್ಧ ಕೇಸು ದಾಖಲಿಸ ಲಾಗಿದೆ. …

ಹೆದ್ದಾರಿ ನಿರ್ಮಾಣ ಪ್ರಗತಿ: ಕುಂಬಳೆ ಪೇಟೆಯ ಬಾಗಿಲು ಮುಚ್ಚದಿರಿ; ಸ್ಥಳೀಯರಿಂದ ವಿವಿಧ ಮನವಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಹೆದ್ದಾರಿ ಬದಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಕುಂಬಳೆಗೆ ದಾರಿ ಮೊಟಕ ಗೊಳಿಸಬಾರದೆಂಬ ಬೇಡಿಕೆಯೊಂದಿಗೆ ಜನಪ್ರತಿನಿಧಿಗಳು, ರಾಜಕೀಯದವರು, ಸ್ಥಳೀಯರು, ವ್ಯಾಪಾರಿಗಳು ರಂಗಕ್ಕಿಳಿದಿದ್ದಾರೆ. ಕುಂಬಳೆ ಪೇಟೆಯ ಮೂಲಕ ಸಾಗುವ ಷಟ್ಪಥ ಪೂರ್ತಿಗೊಂಡರೆ ಪೇಟೆಗಿರುವ ದಾರಿ ಮುಚ್ಚಲಿದೆ ಎಂದು ಸ್ಥಳೀಯರು ಹಾಗೂ ವ್ಯಾಪಾರಿಗಳು ಈ ಮೊದಲೇ ದೂರಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭಗೊಂಡಾಗಿನಿಂದ ಸ್ಥಳೀಯರು ಹಾಗೂ ವ್ಯಾಪಾರಿಗಳು ಈ ಆತಂಕವನ್ನು ವ್ಯಕ್ತಪಡಿಸಿದ್ದು, ಆದರೆ ಸಂಬಂಧಪಟ್ಟವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಆರೋಪವಿದೆ. ಜಿಲ್ಲೆಯಲ್ಲಿ ಯಾವುದೇ ಪೇಟೆಯನ್ನು …

ಕಾಸರಗೋಡು ಸಹಿತ ರಾಜ್ಯದ ಹತ್ತು ಜಿಲ್ಲೆಗಳ 74 ಪ್ರದೇಶಗಳ ಕುಡಿಯುವ ನೀರು ಮಲಿನ

ನವದೆಹಲಿ: ಕಾಸರಗೋಡು ಸೇರಿದಂತೆ ಕೇರಳದ ಹತ್ತು ಜಿಲ್ಲೆಗಳ 74 ಪ್ರದೇಶಗಳ ಜನರು ಕುಡಿಯಲು ಬಳಸುತ್ತಿರುವ ಜಲ ಸಂಪನ್ಮೂಲಗಳಲ್ಲಿ ಮಲಿನ ಪತ್ತೆಯಾಗಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಂಸದೀಯ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.ಕಾಸರಗೋಡು ಜಿಲ್ಲೆಯ ಎgಡು, ಆಲಪ್ಪುಳದಲ್ಲಿ 12, ಇಡುಕ್ಕಿ 3, ಕಲ್ಲಿಕೋಟೆ 15, ಮಲಪ್ಪುರಂ-8, ಪಾಲಕ್ಕಾಡ್ 2, ತಿರುವನಂತಪುರ 1, ತೃಶೂರು 2 ಮತ್ತು ವಯನಾಡು ಜಿಲ್ಲೆಯ 8 ಪ್ರದೇಶಗಳ ಕುಡಿಯಲು ಉಪಯೋಗಿಸುವ ಜಲ ಸಂಪನ್ಮೂಲ ಗಳಲ್ಲಿ ಮಲಿನ ಪತ್ತೆಯಾಗಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.ಕೇರಳದ ಹೊರತಾಗಿ ದೇಶದ ಏಳು ರಾಜ್ಯ …

ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ ಪ್ರಾದೇಶಿಕ ಸಮಿತಿಗಳ ಪೂರ್ವಭಾವಿ ಸಭೆ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲ ಶೋತ್ಸವ ಮತ್ತು ಮೂಡಪ್ಪ ಸೇವೆಯ ಪ್ರಯುಕ್ತ ಕಾಸರಗೋಡು ನಗರದ 22 ಪ್ರಾದೇಶಿಕ ಸಮಿತಿಯ ವತಿಯಿಂದ ಮಾರ್ಚ್ 29 ರಂದು ಸಂಜೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸಾಂಸ್ಕೃತಿಕ ವೈಭವದೊಂದಿಗೆ ಹೊರಡುವ ಹೊರೆ ಕಾಣಿಕೆ ಸಮರ್ಪಣೆಯ ಪೂರ್ವಭಾವಿ ಸಭೆ ಕಾಸರಗೋಡು ನಗರ ಸಮಿತಿಯ ಅಧ್ಯಕ್ಷ ಮೂಡುಮನೆ ಬಾಲಕೃಷ್ಣ ನಾಯ್ಕ್ರ ಅಧ್ಯಕ್ಷತೆಯಲ್ಲಿ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು. ನಗರ ಸಮಿತಿ ಉಪಾಧ್ಯಕ್ಷ, ಎಸ್.ವಿ.ಇ. ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ …

ಇಲಿ ವಿಷ ಸೇವಿಸಿದ ವ್ಯಕ್ತಿ ಮೃತ್ಯು

ಹೊಸದುರ್ಗ: ಇಲಿವಿಷ ಸೇವಿಸಿದ ಹಿನ್ನೆಲೆಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ ಹೊಂದಿದರು. ಮಡಿಕೈ ಕೋತೋಟುಪ್ಪಾರ ನಿವಾಸಿ ಎ. ಕುಂಞಿಕೃಷ್ಣನ್ (63) ಮೃತರಾದವರು. ಆತ್ಮಹತ್ಯೆಗೈದಿ ರಬೇಕೆಂದು ಶಂಕಿಸಲಾಗಿದ್ದು, ಆದರೆ ಕಾರಣ ಸ್ಪಷ್ಟವಾಗಿಲ್ಲ. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇದೇ ವೇಳೆ ಎರಡೂವರೆ ತಿಂಗಳಲ್ಲಿ ಇಲಿ ವಿಷ ಸೇವಿಸಿ ಜಿಲ್ಲೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರ ಹೊರತಾಗಿ ಈಗಲೂ ಕೆಲವರು ಚಿಕಿತ್ಸೆಯಲ್ಲಿದ್ದಾರೆ. ನಿಧಾನ ವಿಷವಾದ …