ಸ್ಕೂಟರ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರಿಗಾಗಿ ಶೋಧ: ಅಪಘಾತದಲ್ಲಿ ಅಧ್ಯಾಪಿಕೆ, ಮಗಳಿಗೆ ಗಾಯ

ಕುಂಬಳೆ: ಅಧ್ಯಾಪಿಕೆ ಹಾಗೂ ಮಗಳು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿ ಯಾದ ಕಾರಿನ ಪತ್ತೆಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.  ಮೊನ್ನೆ ಸಂಜೆ ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರನಗರದಲ್ಲಿ ಅಪಘಾತವುಂ ಟಾಗಿತ್ತು. ಭಾಸ್ಕರ ನಗರದ ಸಂತೋಷ್‌ರ ಪತ್ನಿಯೂ ಕುಂಬಳ ಸರಕಾರಿ ಸೀನಿಯರ್ ಬೇಸಿಕ್ ಶಾಲೆಯ ಅಧ್ಯಾಪಿಕೆಯಾದ ಕನಕಲಕ್ಷ್ಮಿ (45), ಮಗಳು ಸಾಹಿತ್ಯ (14) ಎಂಬಿವರು ಅಪಘಾತದಲ್ಲಿ ಗಾಯಗೊಂಡಿದ್ದರು. ಇವರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದಾಗ ಅಪಘಾತವುಂಟಾಗಿದೆ. ಓವರ್‌ಟೇಕ್ ಮಾಡಿ …

ಯುವತಿಗೆ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಕುಡಿಸಿ ಖಾಸಗಿ ಫೋಟೋ ತೆಗೆದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಮದ್ಯ ಬೆರೆಸಿದ ಜ್ಯೂಸ್ ಕುಡಿಸಿ ಯುವತಿಯ ಖಾಸಗಿ ಫೋಟೋ ತೆಗೆದ ದೂರಿ ನಂತೆ ಯುವಕನ ವಿರುದ್ಧ ಚಂದೇರಾ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಕಲ್ಲಿಕೋಟೆ  ವಡಗರ ವಿಲ್ಯಾ ಪಳ್ಳಿ ನಿವಾಸಿ ಮುಹಮ್ಮದ್ ಯಾಸಿನ್ (26) ಬಂಧಿತ ಆರೋಪಿ. ಚಂದೇರ ಪೊಲೀಸ್ ಠಾಣೆ  ವ್ಯಾಪ್ತಿಗೊಳಪಟ್ಟ ಯುವತಿಯೋರ್ವೆ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಪತಿಯಿಂದ ಬೇರ್ಪಟ್ಟು ಜೀವಿಸುತ್ತಿರುವ ಈ ಯುವತಿ  ನವ ಮಾಧ್ಯಮಗಳ ಮೂಲಕ ಆರೋಪಿಯನ್ನು ಕಳೆದ ವರ್ಷ ಪರಿಚಯಗೊಂಡಿದ್ದಳು. ಆ ಬಳಿಕ ಒಂದು …

ಮನೆಗೆ ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳವು: ಕೊಲ್ಲಿ ಉದ್ಯೋಗಿಯ 3 ಪವನ್ ಚಿನ್ನಾಭರಣ ನಾಪತ್ತೆ

ಕಾಸರಗೋಡು: ಮನೆಗೆ ಬೀಗ ಜಡಿದು ಕುಟುಂಬ ಸಂಬಂಧಿಕರ ಮನೆಗೆ ರಂಜಾನ್ ವ್ರತ ಉಪವಾಸ ಕೊನೆಗೊಳಿಸಲು ತೆರಳಿದಾಗ ಕಳವು ನಡೆಸಲಾಗಿದೆ. 3 ಪವನ್ ಚಿನ್ನಾಭರಣ ವನ್ನು ಕಳವುಗೈಯ್ಯಲಾಗಿದೆ. ಮೇಲ್ಪರಂಬ ಕೈನೋತ್ ನಿವಾಸಿ ಕೊಲ್ಲಿ ಉದ್ಯೋಗಿ ಕೆ. ಮುಜೀಬ್‌ರ ಮನೆಯಿಂದ ನಿನ್ನೆ ಕಳವು ನಡೆಸಲಾಗಿದೆ. ಸಂಜೆ ಮುಜೀ ಬ್ ಹಾಗೂ ಕುಟುಂಬ ಮನೆಗೆ ಬೀಗ ಹಾಕಿ ಪಳ್ಳಿಕ್ಕರೆಯಲ್ಲಿ ರುವ ಸಂಬಂಧಿಕರ ಮನೆಗೆ ತೆರಳಿದ್ದರು.  ರಾತ್ರಿ 11 ಗಂಟೆಗೆ ಹಿಂತಿರುಗಿದಾಗ ಕಪಾಟಿನಲ್ಲಿರಿಸಿದ್ದ ಮೂರು ಪವನ್ ತೂಕದ ಚಿನ್ನಾಭರಣಗಳು ನಾಪತ್ತೆಯಾಗಿದೆ. ಸ್ಥಳಕ್ಕೆ ಮೇಲ್ಪರಂಬ …

ಸೋಂಕಾಲ್ ನಿವಾಸಿ ಅಲ್ತಾಫ್‌ನನ್ನು ಅಪಹರಿಸಿ ಕೊಲೆ : ತಲೆಮರೆಸಿಕೊಂಡಿದ್ದ ದ್ವಿತೀಯ ಆರೋಪಿ ಸೆರೆ

ಉಪ್ಪಳ: ಸೋಂಕಾಲ್‌ನ ಅಲ್ಪಾಫ್ (52)ನನ್ನು ಅಪಹರಿಸಿ ಕೊಂಡು ಹೋಗಿ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಜಾಮೀನು ಲಭಿಸಿ ತಲೆಮರೆಸಿಕೊಂಡಿದ್ದ ದ್ವಿತೀಯ ಆರೋಪಿ ಸೆರೆಯಾಗಿದ್ದಾನೆ. ಕುಬಣೂರಿನ ರಿಯಾಸ್ ಯಾನೆ ಪಡಪ್ಪ್ ರಿಯಾಸ್ (32)ನನ್ನು ಕುಂಬಳೆ ಎಸ್‌ಐ ಕೆ. ರಾಜೀವ್ ಹಾಗೂ ತಂಡ ಬಂಧಿಸಿದೆ. 2019 ಜೂನ್ 23ರಂದು ಅಲ್ತಾಫ್‌ನನ್ನು ಅಪಹರಿಸಲಾಗಿತ್ತು. ಕೊಲೆಗೀಡಾದ ಅಲ್ತಾಫ್‌ನ ಪತ್ನಿಗೆ ಮೊದಲ ಪತಿಯಲ್ಲಿ ಹುಟ್ಟಿದ ಪುತ್ರಿ ಆಮಿನತ್ ಸರೀನಳ ಪತಿ, ಸೋಂಕಾಲ್ ನಿವಾಸಿಯಾದ ಶಬೀರ್ ಮೊಯ್ದೀನ್, ಈತನ ಗೆಳೆಯರಾದ ಲತೀಫ್, ರಿಯಾಸ್ ಸಹಿತ ಐದು ಮಂದಿ …

ಮುಂದುವರಿದ ಅಬಕಾರಿ ಕಾರ್ಯಾಚರಣೆ: ಮದ್ಯ, ಗಾಂಜಾ ವಶ

ಕಾಸರಗೋಡು: ಅಬಕಾರಿ ದಳ ಆರಂಭಿಸಿರುವ ದಾಳಿ ಇನ್ನೂ ಮುಂದು ವರಿಯುತ್ತಿದೆ. ಅದರಂತೆ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ಮತ್ತು ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಲಾಗಿದೆ.ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಸಿ.ಕೆ.ವಿ ಸುರೇಶ್ ನೇತೃತ್ವದ ತಂಡ ಬೇಳ ಉಳ್ಳೋಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 546 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬAಧಿಸಿ ಉಳ್ಳೋಡಿಯ ಕೃತಿಗುರು (32) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆ ವೇಳೆ ಇಬ್ಬರು ಪರಾರಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಈ ಕಾರ್ಯಾಚರಣೆ ನಡೆಸಿದ …

ಬಿದ್ದು ಸಿಕ್ಕಿದ ಪರ್ಸ್ ವಾರಿಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ಶಾಲಾ ವಿದ್ಯಾರ್ಥಿನಿಯರು

 ಕುಂಬಳೆ: ಬಿದ್ದು ಸಿಕ್ಕಿದ  ಪರ್ಸ್ ನ್ನು ವಾರಸುದಾರರಿಗೆ ಹಸ್ತಾಂತರಿಸಿ ಶಾಲಾ ವಿದ್ಯಾರ್ಥಿನಿಯರು ಮಾದರಿ ಯಾದರು.  ಕುಂಬಳೆ ಸರಕಾರಿ ಸೀನಿಯರ್ ಬೇಸಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಅಲ್ಫೋನ್ಸ್ ಹಾಗೂ ೬ನೇ ತರಗತಿಯ ಏಂಜಲ್ ಎಂಬಿವರಿಗೆ  ಶಾಲಾ ಪರಿಸರದಲ್ಲಿ  ನಿನ್ನೆ ಹಣ, ದಾಖಲೆಪತ್ರಗಳಿದ್ದ ಪರ್ಸ್  ಬಿದ್ದುಸಿಕ್ಕಿತ್ತು. ಅದನ್ನು ವಿದ್ಯಾರ್ಥಿ ನಿಯರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ನೀಡಿದ್ದರು. ಪೊಲೀಸರು ಪರ್ಸ್‌ನಲ್ಲಿದ್ದ ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಅದು ಬಂಬ್ರಾಣ ದಿಡುಮೆಯ ಹುಸೈನಾರ್ ಎಂಬವ ರದ್ದೆಂದು ತಿಳಿದುಬಂತು. ಕೂಡಲೇ ಪೊಲೀಸರು ಹುಸೈನಾರ್‌ರನ್ನು …

ನಿಧನ

ಪೆರ್ಲ: ಪಡ್ರೆ ಎಡಮಲೆ ನಿವಾಸಿ ದಿ| ಮಾಧವ ಭಟ್‌ರ ಪತ್ನಿ ಗಿರಿಜ (83) ನಿಧನ ಹೊಂದಿದರು. ಶೋಬಾನೆ ಹಾಡುವುದರಲ್ಲಿ ಪ್ರವೀಣೆಯಾಗಿದ್ದರು. ಹಲವಾರು ಶೋಬಾನೆ ಹಾಡುಗಳನ್ನು ಅಭ್ಯಸಿಸಿದ್ದರು. ಮೃತರು ಮಕ್ಕಳಾದ ವೆಂಕಟ್ರಮಣ ಭಟ್ (ಕಾಸರಗೋಡು ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಸದಸ್ಯ), ಅರವಿಂದ ಭಟ್ (ನಿವೃತ್ತ ಅಧ್ಯಾಪಕ), ಉಷಾ, ಶ್ರೀನಿವಾಸ, ಸಂಧ್ಯಾಗೀತಾ, ಸಚ್ಚಿದಾನಂದ, ಅಳಿಯಂದಿರಾದ ಮಾಧವ ಭಟ್, ಗೋವಿಂದ ಭಟ್, ಸೊಸೆಯಂದಿರಾದ ವಿದ್ಯಾ, ಊರ್ಮಿಳ, ರಾಧಿಕ, ಮಮತಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಶಾಸಕ ಎಕೆಎಂ ಅಶ್ರಫ್, ಪ್ರದೀಪ್ …

ಕಡಲ್ಕೊರೆತ ಭೀತಿ: ಸಮುದ್ರ ತೀರದಲ್ಲಿ ಟೆಟ್ರೋಪೋಡ್ ಉಪಯೋಗಿಸಿ ತಡೆಗೋಡೆ ನಿರ್ಮಾಣಕ್ಕೆ ಪ್ರೊಪೋಸಲ್

ಕಾಸರಗೋಡು: ನೀರಾವರಿ ಉಪ ವಿಭಾಗದ ಅಧೀನದಲ್ಲಿರುವ ಜಿಲ್ಲೆಯ ತಲಪಾಡಿಯಿಂದ ತೃಕ್ಕನ್ನಾಡ್‌ವರೆಗಿನ ೮೭.೬೫ ಕಿಲೋ ಮೀಟರ್ ಸಮುದ್ರ ತೀರದಲ್ಲಿ ಮಳೆಗಾಲದಲ್ಲಿ ಕಂಡು ಬರುವ ತೀವ್ರ ಕಡಲ್ಕೊರೆತವನ್ನು ಎದುರಿ ಸುವುದಕ್ಕಾಗಿ ಟೆಟ್ರೋಪೋಡ್ ಉಪಯೋಗಿಸಿಕೊಂಡಿರುವ ಕಾಮಗಾರಿಗಳನ್ನು ನಡೆಸುವುದಕ್ಕಾಗಿ ತೀರ ವಲಯದ ವಿವಿಧ ಪ್ರದೇಶಗಳಿಗಿರುವ ಪ್ರೊಪೋಸಲ್ ಉನ್ನತಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ಕಾಸರಗೋಡು ನೀರಾವರಿ ಉಪ ವಿಭಾಗ ಎಕ್ಸಿ ಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರಕಾರದ ತಾಲೂಕು ಮಟ್ಟದ ಅದಾಲತ್‌ನಲ್ಲಿ ಮೊಗ್ರಾಲ್ ದೇಶೀಯವೇದಿ ನೀಡಿದ ದೂರಿನಂತೆ ಸಮುದ್ರ ತೀರ ವಲಯದಲ್ಲಿ ವೈಜ್ಞಾನಿಕವಾದ ರೀತಿಯ …

ಹೆದ್ದಾರಿ ನಿರ್ಮಾಣ ಕಾಮಗಾರಿ: ವಿವಿಧ ಕಡೆಗಳಲ್ಲಿ ಅಂಡರ್‌ಪಾಸ್, ಫೂಟ್‌ಓವರ್ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ೬೬ರ ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಲು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾದರು. ಕುಣಿಯದಲ್ಲಿ ಪ್ರತ್ಯೇಕ ಫೂಟ್‌ಓವರ್ ಬ್ರಿಡ್ಜ್ ಸ್ಥಾಪಿಸಬೇಕೆಂದು, ಉಪ್ಪಳದಲ್ಲಿ ಫ್ಲೈಓವರ್‌ನ ದೂರವನ್ನು ಹೆಚ್ಚಿಸಬೇಕೆಂದು, ಚೇರುಂಬದಲ್ಲೂ, ನುಳ್ಳಿಪ್ಪಾಡಿಯಲ್ಲೂ ಅಂಡರ್ ಪಾಸ್ ಮಂಜೂರು ಮಾಡಬೇಕೆಂದು, ಶಿರಿಯದಲ್ಲಿ ಓವರ್ ಬ್ರಿಡ್ಜ್ ಹಾಗೂ ಮುಳಿಕ್ಕಲ್‌ನಲ್ಲಿ ಫೂಟ್ ಓವರ್ ಬ್ರಿಡ್ಜ್ ಮಂಜೂರು ಮಾಡಬೇಕೆಂದು ಮನವಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ತಿಗೊಂಡು ಸಂಚಾರ …

ಪ್ರಾಥಮಿಕ ಸಹಕಾರಿ ಸಂಘಗಳೊಂದಿಗೆ ಕೇರಳ ಬ್ಯಾಂಕ್‌ನ ಅವಗಣನೆ ಕೊನೆಗೊಳಿಸಬೇಕು: ತಾಲೂಕು ಮಟ್ಟದಲ್ಲಿ ಸಹಕಾರಿ ಧರಣಿ

ಮಂಜೇಶ್ವರ: ಸಹಕಾರಿ ಪ್ರಜಾ ಪ್ರಭುತ್ವ ವೇದಿ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಹಕಾರಿ ಧರಣಿ ನಡೆಯಿತು. ಪ್ರಾಥಮಿಕ ಸಹಕಾರಿ  ಸಂಘಗಳೊಂದಿಗೆ ಕೇರಳ ಬ್ಯಾಂಕ್ ತೋರಿಸುವ ಅವಗಣನೆ ಕೊನೆಗೊಳಿಸಬೇಕು, ಸಹಕಾರಿ ವಲ ಯದ ಪ್ರಜಾಪ್ರಭುತ್ವವನ್ನು ಇಲ್ಲದಾ ಗಿಸುವ ಸರಕಾರದ ನೀತಿಯನ್ನು ತಿದ್ದ ಬೇಕು, ಜಪ್ತಿ ಕ್ರಮಗಳ ವಿರುದ್ಧ ನೀಡಿದ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂತೆಗೆಯಬೇಕು, ಸಂಘಗಳ ಫಂಡ್‌ಗಳನ್ನು ಕಸಿಯಲಿರುವ ಸರಕಾರದ ಯತ್ನವನ್ನು ಕೊನೆಗೊಳಿಸಬೇಕು, ಸಹಕಾರಿ ಸಂಸ್ಥೆಗಳೊಂದಿಗೆ ಸರಕಾರ ಹಾಗೂ ಕೇರಳ ಬ್ಯಾಂಕ್ ತೋರಿಸುವ ಭೇದ ಭಾವ ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ …