ಹಂದಿಗೆ ಇರಿಸಿದ ಸ್ಫೋಟಕ ವಸ್ತು ಸಿಡಿದು ನಾಯಿ ಸಾವು: . ಬೇಟೆಗಾರ ತಂಡದ ಓರ್ವ ಸೆರೆ; ಮದ್ದು ಗುಂಡುಗಳು, ಜೀಪು ವಶ . ಆಟೋ ರಿಕ್ಷಾ ಸಹಿತ ಹಲವರು ಪರಾರಿ

ಕುಂಬಳೆ: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದು ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ. ಈ ವಿಷಯ ತಿಳಿದು ನಾಗರಿಕರು ಸ್ಥಳಕ್ಕೆ ತಲುಪುತ್ತಿದ್ದಂತೆ ಬೇಟೆಗಾರರು ಓಡಿ ಪರಾರಿಯಾ ಗಿದ್ದಾರೆ. ಇದೇ ವೇಳೆ ಬೇಟೆಗಾರರು ತಲುಪಿದ ಜೀಪನ್ನು ನಾಗರಿಕರು ತಡೆದು ನಿಲ್ಲಿಸಿ ಅದರ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂಡಂಕುಳಿ   ನಿವಾಸಿ ಉಣ್ಣಿಕೃಷ್ಣನ್ (48) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.  ಈತನನ್ನು ಪೊಲೀಸರು ತನಿಖೆಗೊಳ ಪಡಿ ಸುತ್ತಿದ್ದಾರೆ. ಹೇರೂರು ಮೀಪಿರಿ ಎಂಬಲ್ಲಿ ನಿನ್ನೆ ರಾತ್ರಿ ಈ …

ಚೆರ್ಕಳ ಪೇಟೆಯಲ್ಲಿ ಘರ್ಷಣೆ: ಮೊಬೈಲ್ ಫೋನ್ ಅಂಗಡಿ ಹಾನಿ; ನಾಲ್ವರಿಗೆ ಗಾಯ

ಚೆರ್ಕಳ: ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಅಲ್ಲಿಂದ ತೆರವುಗೊಳಿಸುವ ವಿಷಯದಲ್ಲಿ  ಯುವಕರ ಮಧ್ಯೆ ಉಂಟಾದ ಮಾತಿನ ಚಕಮಕಿ ಬಳಿಕ ಹಿಂಸೆಗೆ ತಿರುಗಿ  ತಲ್ವಾರ್ ಬೀಸಿದ ಪರಿಣಾಮ ನಾಲ್ವರು ಗಾಯ ಗೊಂಡು, ಮೊಬೈಲ್ ಅಂಗಡಿಯ ಮೇಲೂ ದಾರಿ ನಡೆಸಿ ಹಾನಿಗೊಳಿಸಿದ ಘಟನೆ ಚೆರ್ಕಳದಲ್ಲಿ ನಡೆದಿದೆ. ಚೆರ್ಕಳ ಬಾಲನಡ್ಕದ ಬಿ.ಎ. ಹಕೀಂ ಎಂಬವರ  ಅಂಗಡಿಯನ್ನು ಆಕ್ರಮಿಗಳ ತಂಡ ಹೊಡೆದು ಹಾನಿಗೊಳಿಸಿದೆ. ಚೆರ್ಕಳ ಪೇಟೆಯ ಮಸೀದಿ ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಹಕೀಂರ ಮಾಲಕತ್ವದಲ್ಲಿರುವ ಮಸೀದಿ ಸಮೀಪದ ಎಬಿಸಿಡಿ …

ಸಮುದ್ರದಲ್ಲಿ ಅನಧಿಕೃತ ಮೀನುಗಾರಿಕೆ: ಕರ್ನಾಟಕ ಬೋಟ್ ವಶಕ್ಕೆ

ಕಾಸರಗೋಡು: ಕೇರಳದ ಸಮುದ್ರ ಕರಾವಳಿ ಪ್ರದೇಶಕ್ಕೆ ಒಳಪಟ್ಟ ಕಾಸರಗೋಡು ಸಮುದ್ರ ದಡದಿಂದ 12 ನೋಟಿಕ್ಕಲ್ ದೂರದ ಸಮು ದ್ರದಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕದ ಎರಡು ಬೋಟ್‌ಗಳನ್ನು ಕೇರಳ ಮೀನುಗಾರಿಕಾ ಇಲಾಖೆಯ ಮರೈನ್ ಎನ್‌ಫೋರ್ಸ್‌ಮೆಂಟ್ ಮತ್ತು ಕರಾವಳಿ ಠಾಣೆಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚ ರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆ ಎರಡೂ ಬೋಟ್‌ಗಳಿಗೆ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಎ. ಲಬೀಬ್ ಐದು ಲಕ್ಷ ರೂ. ಜುಲ್ಮಾನೆ ವಿಧಿಸಿದ್ದಾರೆ.

ಯುವಕ ನೇಣುಬಿಗಿದು

ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಕುಂಬಳೆ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಪೈವಳಿಕೆ ಬಳಿಯ ಬಾಯಿಕಟ್ಟೆ ಪಾಂಡ್ಯಡ್ಕ ನಿವಾಸಿ ಕೊರಗ ಎಂಬವರ ಪುತ್ರ ಶೀನ (39) ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಅಪರಾಹ್ನ ಮನೆ ಬಳಿಯ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದರು. ಕೂಡ ಲೇ ಸ್ಥಳೀಯರು ಅವರನ್ನು ಮಂಗಲ್ಪಾ ಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಹಿಂದೆ ಕೆಎಸ್‌ಇಬಿಯಲ್ಲಿ ದಿನಕೂಲಿ ನೌಕರನಾಗಿದ್ದ ಶೀನ ಕಳೆದ ಎರಡು ವರ್ಷಗಳಿಂದ ಅಸೌಖ್ಯ ಬಾಧಿಸಿ …

ಜಿಲ್ಲೆಯ ವಿವಿಧೆಡೆಗಳಲ್ಲಿ ದಾಳಿ: ಗಾಂಜಾ, ಮಾದಕದ್ರವ್ಯ ವಶ; ಹಲವರ ಸೆರೆ

ಕಾಸರಗೋಡು: ಕೇರಳದಲ್ಲಿ ಇತ್ತೀಚಿಗಿನಿಂದ ಮಾದಕದ್ರವ್ಯ ಪಿಡುಗು ಹೆಚ್ಚಾಗುತ್ತಿರುವಂತೆಯೇ ಅದನ್ನು ಸಮಗ್ರವಾಗಿ ತಡೆಗಟ್ಟಿ ಆರೋಪಿಗಳನ್ನು ಸೆರೆ ಹಿಡಿಯಲು ಅಬಕಾರಿ ಇಲಾಖೆ ‘ಆಪರೇಷನ್ ಕ್ಲೀನ್ ಸ್ಟೇಟ್’ ಎಂಬ ಹೆಸರಲ್ಲಿ ಹೊಸ ಕಾರ್ಯಾಚರಣೆ ಆರಂಭಿಸಿದೆ. ಇಂದಿನಿAದ ಆರಂಭಗೊA ಡ ಈ ಕಾರ್ಯಾಚರಣೆ ಈ ತಿಂಗಳ 12ರ ತನಕ ಮುಂದುವರಿಯಲಿದೆ.ಇದರAತೆ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸೇರಿದಂತೆ ಭಾರೀ ಪ್ರಮಾಣದ ಮಾದಕ ದ್ರವ್ಯ ಪತ್ತೆಹಚ್ಚೆ ವಶಪಡಿಸಲಾಗಿದೆ. ಇದಕ್ಕೆ ಸಂಬAಧಿಸಿ ಹಲವರನ್ನು ಬಂಧಿಸಲಾಗಿದೆ.ಈ ಕಾರ್ಯಾಚರಣೆಯಂತೆ ತಳಂಗರೆ ಬಾಂಗೋಡ್ನಲ್ಲಿ …

16ರ ಬಾಲಕಿಯೊಂದಿಗೆ ಮದುವೆಗೆ ಒತ್ತಾಯ: ಯುವಕ ಸೆರೆ

ಮಂಜೇಶ್ವರ: 16ರ ಹರೆಯದ ಬಾಲಕಿಯನ್ನು  ಮದುವೆ ಮಾಡಿಕೊ ಡಬೇಕೆಂದು ಒತ್ತಾಯಿಸಿದ ಆರೋಪ ದಂತೆ ಯುವಕನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಕರ್ನಾಟಕ ಬಂಟ್ವಾಳ ನಿವಾಸಿ ವಿಕ್ರಮ (22) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯ ನಿವಾಸಿಯಾದ 16ರ ಬಾಲಕಿಯನ್ನು ವಿಕ್ರಮ ಪ್ರೀತಿಸಿದ್ದನೆನ್ನಲಾಗಿದೆ. ಇತ್ತೀಚೆಗೆ ಬಾಲಕಿಯ ಮನೆಗೆ ತಲುಪಿದ ವಿಕ್ರಮ ಬಾಲಕಿಯನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಆಕೆಯ ಹೆತ್ತವರನ್ನು ಒತ್ತಾಯಿಸಿದ್ದಾನೆನ್ನ ಲಾಗಿದೆ. ಈ ಬಗ್ಗೆ ಬಾಲಕಿಯ ಹೆತ್ತವರು ಮಂಜೇಶ್ವರ …

ಇಲೆಕ್ಟ್ರೋನಿಕ್ಸ್ ಸರ್ವೀಸ್ ಅಂಗಡಿಯಲ್ಲಿ ಬೆಂಕಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕಾರ್ಯವೆಸಗುತ್ತಿರುವ ಇಲೆಕ್ಟ್ರೋನಿಕ್ಸ್ ಸರ್ವೀಸ್ ಅಂಗಡಿಗೆ ಇಂದು ಮುಂಜಾನೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ. ಮೊಹಮ್ಮದ್ ಪೆರಡಾಲ ಎಂಬವರ ಅಂಗಡಿಗೆ ಬೆಂಕಿ ತಗಲಿದೆ. ಅಂಗಡಿಯೊಳಗಿದ್ದ ಫ್ಯಾನ್, ಮಿಕ್ಸಿ, ಟಿ.ವಿ, ಕುಕ್ಕರ್, ಸ್ಪೇರ್‌ಪಾರ್ಟ್ಸ್ ಇತ್ಯಾದಿಗಳು ಸೇರಿ ಹೆಚ್ಚಿನ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಸಿವಿಲ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸತೀಶನ್ ವಿ.ಎಂ.ರ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಉಮೇಶನ್ ಎಂ, …

ಜೀವ ಕೈಯಲ್ಲಿ ಹಿಡಿದು ಹತ್ತಿದ್ದು ವಿದ್ಯುತ್ ಕಂಬ ಬೆಕ್ಕನ್ನು ಪಾರು ಮಾಡಿದ ಇಲೆಕ್ಟ್ರೀಶ್ಯನ್

ಕುಂಬಳೆ: ಜೀವ ಉಳಿಸಿಕೊಳ್ಳಲು ಬೇಕಾಗಿ ಓಡಿ ಹತ್ತಿದ ವಿದ್ಯುತ್ ಕಂಬದಿಂದ ಬೆಕ್ಕಿನ ಜೀವಹಾನಿ ಉಂಟಾಗುವ ಸಂದರ್ಭದಲ್ಲಿ ಸ್ಥಳೀಯ ಇಲೆಕ್ಟ್ರೀಶ್ಯನ್ ಒಬ್ಬರು ಬೆಕ್ಕನ್ನು ಸಂರಕ್ಷಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ. ಬೀದಿ ನಾಯಿಗಳು ತಿರುಗಾಡುತ್ತಿರುವ ಪೇಟೆಯಲ್ಲಿ ಬೆಕ್ಕೊಂದನ್ನು ನಾಯಿ ಬೆನ್ನಟ್ಟಿದ್ದು, ಈ ವೇಳೆ ಬೆಕ್ಕು ವಿದ್ಯುತ್ ಕಂಬವೇರಿ ಕುಳಿತಿತ್ತು. ಇದನ್ನು ಕಂಡ ಕಡವತ್ ನಿವಾಸಿ ಇಲೆಕ್ಟ್ರೀಶ್ಯನ್ ಆರೀಫ್ ವಿದ್ಯುತ್ ಕಂಬದ ಫ್ಯೂಸ್ ತೆಗೆದು ಕಂಬವೇರಿ ಬೆಕ್ಕನ್ನು ಪಾರು ಮಾಡಿದ್ದಾರೆ.  ಕುಂಬಳೆ ಮೀನು ಮಾರ್ಕೆಟ್ ರಸ್ತೆಯ ವಿದ್ಯುತ್ ಕಂಬಕ್ಕೆ ಬೆಕ್ಕು ಇಂದು …

ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು

ಪುತ್ತೂರು: ಹಲವು ದಶಕಗಳ ಬೇಡಿಕೆಯಾದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ಸಿ.ಎಂ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಶಾಸಕ ಅಶೋಕ್ ರೈ ಈ ಬಗ್ಗೆ ಪ್ರಯತ್ನಿಸಿದ್ದು, ಅವರ ಕಾರ್ಯಕ್ಕೆ ಯಶಸ್ವಿ ಲಭಿಸಿದೆ. ಈಗ ಇರುವ ನೂರು ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಅಣಂಗೂರು ನಿವಾಸಿ ದುಬಾಯಿಯಲ್ಲಿ ನಿಧನ

ಕಾಸರಗೋಡು: ಅಣಂಗೂರು ಬೆದಿರ ನಿವಾಸಿ ಕೊಲ್ಲಿಯಲ್ಲಿ ನಿಧನ ಹೊಂದಿದ್ದಾರೆ. ಬಂಬ್ರಾಣಿ ಅಬ್ದುಲ್ಲ ಹಾಜಿ- ಖದೀಜ ದಂಪತಿ ಪುತ್ರ ಹುಸೈನ್ ಬಂಬ್ರಾಣಿ (55) ನಿಧನ ಹೊಂದಿದವರು.  ಮೃತರು ಪತ್ನಿ ಮೆಹ ರುನ್ನಿಸ, ಮಕ್ಕಳಾದ ಮೈಮೂನ, ಮುಹ ಮ್ಮದ್, ಫಾತಿಮ, ಆಮಿನ, ಅಳಿಯಂ ದಿರಾದ ಹಾಶಿಫ್, ಬಾಶಿದ್, ಸಹೋ ದರ, ಸಹೋದರಿಯರನ್ನು ಅಗಲಿದ್ದಾರೆ.