ಬಂದೂಕು ತೋರಿಸಿ ಬೆದರಿಸಿ ಕ್ರಷರ್ ಮೆನೇಜರ್ರ 12.30 ಲಕ್ಷ ರೂ. ಲಪಟಾವಣೆ ; ಘಟನೆ ನಡೆದ ತಾಸುಗಳೊಳಗಾಗಿ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು

ಕಾಸರಗೋಡು: ಕ್ರಷರ್ ಮೆನೇ ಜರ್ಗೆ ಬಂದೂಕು ತೋರಿಸಿ ಬೆದರಿಸಿ ಅವರ ಕೈಯಲ್ಲಿದ್ದ 12.30 ಲಕ್ಷ ರೂ. ಒಳಗೊಂಡ ಬ್ಯಾಗ್ನ್ನು ಎಗರಿಸಿ ಪರಾರಿಯಾದ ಆರೋಪಿಗ ಳಾದ ನಾಲ್ವರನ್ನು ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಘಟನೆ ನಡೆದ ತಾಸುಗಳೊಳಗಾಗಿ ಬಂಧಿಸ ಲಾಗಿದೆ.ಬಿಹಾರ ಕತ್ಯಾರ್ ಜಿಲ್ಲೆಯ ಸಿಮರ್ಪುರ್ ಗ್ರಾಮದ ಬಂಕ್ ನಿವಾಸಿ ಇಬ್ರಾನ್ ಅಸ್ಲಾಂ (21), ಇದೇ ಗ್ರಾಮದ ಮೊಹಮ್ಮದ್ ಫಾರೂಕ್ (30), ಸಿಮರ್ಪುರ್ ಬರಾರಿ ಪೊಲೀಸ್ ಠಾಣೆಗೊಳಪಟ್ಟ ಹಕೀಂ ಟೋಲ್ ನಿವಾಸಿ ಮೊಹಮ್ಮದ್ ಮಾಲೀಕ್ ಅಲಿಯಾಸ್ ಎಂ.ಡಿ. ಮಾಲೀಕ್ (21) …

ಅಡುಗೆ ನಿರತ ವೇಳೆ ಬೆಂಕಿ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತ್ಯು

ನೀರ್ಚಾಲು: ಅಡುಗೆ ಮಾಡುವಾಗ ಧರಿಸಿದ ಬಟ್ಟೆಗೆ ಬೆಂಕಿ ತಗಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟರು. ನೀರ್ಚಾಲು ಪೂವಾಳೆ ನಿವಾಸಿ ಜಗನ್ನಿವಾಸ ಆಳ್ವರ ಪುತ್ರಿ ರೇಖಾ (45) ನಿನ್ನೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ ಫೆಬ್ರವರಿ ೯ರಂದು ಮನೆಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದಾಗ ಬಟ್ಟೆಗೆ ಬೆಂಕಿ ತಗಲಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ, ಸಹೋದರರಾದ ಶಿವಪ್ರಸಾದ್, ಹರಿಪ್ರಸಾದ್, ಗಣೇಶ್ ಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಪತ್ರ ಬರೆದಿಟ್ಟು ಪತಿ ಯುವತಿಯೊಂದಿಗೆ ಪರಾರಿ: ಪತ್ನಿ ದೂರು

ಕಾಸರಗೋಡು:  ಪತ್ನಿಗೆ ಪತ್ರ ಬರೆದಿಟ್ಟ ಬಳಿಕ ಪತಿ ಯುವತಿಯೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿ ವಾಸಿಸುವ ಇಡುಕ್ಕಿ ಕಟ್ಟಪ್ಪನ ಕೊಚ್ಚು ವೀಟಿಲ್ ಎಸ್. ಸರಸ್ವತಿ (32)ರ ದೂರಿನಂತೆ  ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.  ಈ ತಿಂಗಳ 3ರಂದು ಮುಂಜಾನೆ 2.30ರಿಂದ 5ರಂದು ಬೆಳಿಗ್ಗೆ 9.30ರ ಮಧ್ಯೆಗಿನ ಸಮಯದಲ್ಲಿ ಪತಿ ಕುಮಾರವೇಲ್ (38) ನಾಪತ್ತೆಯಾಗಿರುವುದಾಗಿ ಸರಸ್ವತಿ ದೂರಿದ್ದಾರೆ. ಕಟ್ಟಪ್ಪನದಲ್ಲಿರುವ ಮನೆ ಬಳಿಯಲ್ಲಿರುವ ಸ್ನೇಹ ಎಂಬ ಯುವತಿಯ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿಯೂ ಪತ್ನಿ ದೂರಿನಲ್ಲಿ …

ಲಂಡನ್‌ನಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮೇಲೆ ಖಾಲಿಸ್ತಾನಿ ಉಗ್ರರಿಂದ ದಾಳಿಗೆ ಯತ್ನ

ಲಂಡನ್: ಭಾರತದ ವಿದೇ ಶಾಂಗ ಸಚಿವ ಎಸ್. ಜೈಶಂಕರ್‌ರ ಮೇಲೆ ಲಂಡನ್‌ನಲ್ಲಿ ಖಾಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಲಂಡನ್‌ನ ಸ್ವತಂತ್ರ ನೀತಿ ಸಂಸ್ಥೆಯಾದ ಚೌಥಮ್ ಹೌಸ್‌ನಲ್ಲಿ ನಡೆಸಿದ ಚರ್ಚೆಯಲ್ಲಿ ಭಾಗವಹಿಸಿ ಜೈಶಂಕರ್ ಹೊರ ಬರುತ್ತಿರುವ ವೇಳೆ ಅವರ ಮೇಲೆ ಖಾಲಿಸ್ತಾನಿ ಉಗ್ರಗಾ ಮಿಗಳು ದಾಳಿ ನಡೆಸಲೆತ್ನಿಸಿದ್ದಾರೆ. ಖಾಲಿಸ್ತಾನಿ ಉಗ್ರರು ಜೈಶಂಕರ್‌ರ ವಾಹನದ ಕಡೆ  ಧಾವಿಸಿ  ಅದರಲ್ಲಿ ಅಳವಡಿಸಲಾಗಿದ್ದ ಭಾರತೀಯ ರಾಷ್ಟ್ರಧ್ವಜವನ್ನು ಕಿತ್ತೆಸೆದು ಅದನ್ನು ಹರಿದು ಹಾಕಿದ್ದಾರೆ.  ಜೈಶಂಕರ್‌ರ ಮೇಲೆ ದಾಳಿಗೂ ಯತ್ನಿಸಿದ್ದಾರೆ. ಇದೇ …

ಮಾನ್ಯ: ಹಟ್ಟಿಯಲ್ಲಿದ್ದ ಹಸುವಿನ ಬೆನ್ನಲ್ಲೇ ಕೋಳಿ ಮೇಲೆ ಅಜ್ಞಾತಜೀವಿಯ ದಾಳಿ

ಮಾನ್ಯ: ಮಾನ್ಯ ಬಳಿಯ ಉಳ್ಳೋಡಿಯಲ್ಲಿ ಹಟ್ಟಿಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿದ ಅಜ್ಞಾತ  ಜೀವಿ ಯಾವುದೆಂದು ಇದುವರೆಗೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದೇ ವೇಳೆ ನಿನ್ನೆ ರಾತ್ರಿಯೂ ಇದೇ ಪರಿಸರದಲ್ಲಿ ಅಜ್ಞಾತ ಜೀವಿ ಕೋಳಿಯೊಂದರ ಮೇಲೆ ದಾಳಿ ನಡೆಸಿದೆ. ಉಳ್ಳೋಡಿಯ ದೈವ ಕಲಾವಿದ ಗಣೇಶ್ ಎಂಬವರ ಮನೆ ಬಳಿಯ ಹಟ್ಟಿಯಲ್ಲಿದ್ದ ಹಸುವಿನ ಮೇಲೆ ಮೊನ್ನೆ ರಾತ್ರಿ ಅಜ್ಞಾತ ಜೀವಿದಾಳಿ ನಡೆಸಿತ್ತು. ಕರುವಿನ ದೇಹದಲ್ಲಿ ಪರಚಿದ ಗಾಯಗಳು ಕಂಡುಬಂದಿತ್ತು. ಆದರೆ ದಾಳಿ ನಡೆಸಿದ ಜೀವಿ ಯಾವುದೆಂದು ತಿಳಿದುಬಂದಿಲ್ಲ. ಇದರಿಂದ ಮನೆಯವರು …

ರಾಷ್ಟ್ರೀಯ ಹೆದ್ದಾರಿ ತಡೆ : ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಕೇಸು

ಮಂಜೇಶ್ವರ: ವಾಮಂಜೂರು ಚೆಕ್‌ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಕ್ಬರ್, ಬಿ.ಎಂ. ಮುಹಮ್ಮದ್, ಮುಹಮ್ಮದ್ ಇಕ್ಭಾಲ್, ಅಹಮ್ಮದ್ ಕಬೀರ್, ಅಬ್ದುಲ್ ನಾಸರ್, ಅಬ್ದುಲ್ ಸಲಾಂ, ಅನ್ವರ್ ಹುಸೈನ್, ತಾಜುದ್ದೀನ್, ಮುಹಮ್ಮದ್ ಶರೀಫ್, ಅಬ್ದುಲ್ ರಜಾಕ್ ಎಂಬೀ  ಕಾರ್ಯಕರ್ತರು ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ೩೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪೊಲೀಸರ ನಿರ್ದೇಶವನ್ನು ಅವಗಣಿಸಿ ಸಾರಿಗೆ ಅಡಚಣೆ ಸೃಷ್ಟಿಸಿ, ಧ್ವನಿವರ್ಧಕ ಬಳಸಿ ಘೋಷಣೆ ಮೊಳಗಿಸಿದುದಕ್ಕೆ ಕೇಸು ದಾಖಲಿಸಲಾಗಿದೆ. …

ಕುಂಬಳೆಯಿಂದ ಕಳವಿಗೀಡಾದ ಬೈಕ್‌ಗಾಗಿ ಆರೋಪಿಗಳ ಸಹಾಯದಿಂದ ಶೋಧ ವಿಫಲ

ಕುಂಬಳೆ: ಕುಂಬಳಯಿಂದ ಕಳವಿಗೀಡಾದ ಬೈಕ್‌ನ ಪತ್ತೆಗಾಗಿ ಆರೋಪಿಗಳ ಸಹಾಯದಿಂದ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಇದ ರಿಂದ ಕಸ್ಟಡಿಯಲ್ಲಿರುವ ಆರೋಪಿಗಳ ನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಮತ್ತೊಮ್ಮೆ ಕಸ್ಟಡಿಗೆ ತೆಗೆಯಲು ಪೊಲೀಸರು ಆಲೋಚಿಸುತ್ತಿದ್ದಾರೆ. ಕಳೆದ ನವಂಬರ್ ೧ರಂದು ರಾತ್ರಿ ಕುಂಬಳೆ ಪೈ ಕಂಪೌಂಡ್‌ನಲ್ಲಿ ವಾಸಿಸುವ ಸಚಿನ್ ಎಂಬವರ ಬೈಕ್ ಕಳವಿಗೀಡಾಗಿತ್ತು. ಈ ಸಂಬಂಧ ಬಂಬ್ರಾಣ ನಿವಾಸಿ ರವೀಂದ್ರ ಡಬ್ಬಿ ರವಿ(32), ಮೊಗ್ರಾಲ್ ಮೈಮೂನ್‌ನಗರದ ಮುಹಮ್ಮದ್ ಮನ್ಸೂರ್ (27) ಎಂಬಿವರನ್ನು ಕುಂಬಳೆ ಪೊಲೀಸರು ನಾಲ್ಕು ತಿಂಗಳ  ಬಳಿಕ ಸೆರೆಹಿಡಿದಿದ್ದರು. …

ಕೊಲೆ ಪ್ರಕರಣ: ಯುಎಇಯಲ್ಲಿ ಕಾಸರಗೋಡು, ಕಣ್ಣೂರಿನ ಇಬ್ಬರಿಗೆ ಮರಣದಂಡನೆ ಶಿಕ್ಷೆ ಜ್ಯಾರಿ

ಕಾಸರಗೋಡು: ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಹಾಗೂ ಕಣ್ಣೂರು ನಿವಾಸಿಗಳಾದ ಗಲ್ಫ್ ರಾಷ್ಟ್ರವಾದ ಯುಎಇ ಸರಕಾರ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಿದೆ. ಕಾಸರಗೋಡು ಜಿಲ್ಲೆಯ ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವಳಪ್ಪಿಲ್ ಮುರಳೀಧರನ್ (43) ಮತ್ತು ಕಣ್ಣೂರು ತಲಶ್ಶೇರಿ ನೆಟ್ಟೂರು ಅರಂಙಲೋಟ್ ತೆಕ್ಕೆಪರಂಬಿಲ್ ಮೊಹಮ್ಮದ್ ಅನಾಷ್ (43) ಎಂಬವರಿಗೆ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಲಾಗಿದೆ. ಮುರಳೀಧರನ್ ಕುಟುಂಬ ಕಣ್ಣೂರು ತೈಯಿಲ್ ಪೆರುಂತಟ್ಟ ವಳಪ್ಪಿಲ್‌ನಲ್ಲಿ  ವಾಸಿಸುತ್ತಿದೆ. ಮುರಳೀಧರನ್ ೨೦ ವರ್ಷದಿಂದಲೇ ಯುಎಇಯಲ್ಲಿ ದುಡಿಯುತ್ತಿದ್ದರು. 2009ರಲ್ಲಿ ಮಲಪ್ಪುರಂ ತಿರೂರು ನಿವಾಸಿ ಮೊದೀನ್ ಎಂಬವರನ್ನು …

ಕಾರು- ಬಸ್ ಢಿಕ್ಕಿ ಮಂಡೆಕಾಪು ನಿವಾಸಿಗೆ ಗಾಯ

ಉಪ್ಪಳ: ಕಾರು-ಬಸ್ ಮಧ್ಯೆ ಉಂಟಾದ ಅಪಘಾತದಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕುಡಾಲುಮೇರ್ಕಳ ಮಂಡೆಕಾಪು ನಿವಾಸಿ ದಿ| ಬಾಲಕೃಷ್ಣರ ಪುತ್ರ, ಗ್ಯಾರೇಜ್ ಮಾಲಕ ವಿಶ್ವನಾಥ ಯಾನೆ ವಿಷ್ಣು (32) ಗಾಯಗೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ವೇಳೆ ಬಿ.ಸಿ ರೋಡ್ ಬಳಿಯ ಪಾಣೆ ಮಂಗಳೂರಿನಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರÀÄ ಮಂಗಳೂರಿನಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕನ್ಯಾನ ಹಾಗೂ ಪೆರ್ಮುದೆ ಯಲ್ಲಿ …

ತೃಶೂರು: ರೈಲು ಹಳಿ ಮೇಲೆ ಸರಳು ಇರಿಸಿ ಬುಡಮೇಲು ಕೃತ್ಯ ಯತ್ನ

ತೃಶೂರು: ರೈಲು ಹಳಿ ಮೇಲೆ ಕಬ್ಬಿಣದ ಸರಳು ಇರಿಸಿ ಬುಡ ಮೇಲು ಕೃತ್ಯಕ್ಕೆ  ಯತ್ನಿಸಿದ ಘಟನೆ ತೃಶೂರಿನಲ್ಲಿ ನಡೆದಿದೆ. ಇಂದು ಮುಂಜಾನೆ 4.55ರ ವೇಳೆ ಸರಕು ರೈಲು ಈ ಹಳಿ ಮೇಲೆ ಸಂಚರಿಸಿ ದಾಗಲೇ ಘಟನೆ ಅರಿವಿಗೆ ಬಂದಿದೆ.ತೃಶೂರು-ಎರ್ನಾಕುಳಂ  ಡೌನ್ ಲೈನ್ ಹಳಿಯಲ್ಲಿ ಸರಳು ಇರಿಸಲಾಗಿತ್ತು. ಸರಳನ್ನು ರೈಲು ದೂಡಿಕೊಂಡು ಮುಂದೆ ಸಾಗಿದ್ದು, ಬಳಿಕ ಸರಳು ಹಳಿಯಿಂದ ಹೊರಕ್ಕೆಸೆಯಲ್ಪಟ್ಟಿತ್ತು. ಇದರಿಂದ ಭಾರೀ ಅಪಾಯ ತಪ್ಪಿದೆ. ಈ ಬಗ್ಗೆ ಲೋಕೋ ಪೈಲಟ್ ನೀಡಿದ ಮಾಹಿತಿಯಂತೆ ಅಧಿಕಾರಿಗಳು ತಲುಪಿ ಪರಿಶೀಲನೆ …