ಬೇಕೂರು ಕುಟುಂಬ ಕ್ಷೇಮ ಕೇಂದ್ರ ಕಟ್ಟಡ ಪೂರ್ತಿಯಾದರೂ ಉದ್ಘಾಟನೆ ವಿಳಂಬ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪೂರ್ತಿ ಗೊಂಡಿದ್ದರೂ ಉದ್ಘಾಟನೆಗೆ ವಿಳಂಬವಾಗುತ್ತಿರುವುದಾಗಿ ದೂರಲಾಗಿದೆ. ಶಾಸಕರ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಗುತ್ತಿಗೆದಾರ ಬಿಟ್ಟುಕೊಟ್ಟಿದ್ದರೂ ವಯರಿಂಗ್ ಹಾಗೂ ಆವರಣಗೋಡೆ ಕೆಲಸಗಳು ಬಾಕಿ ಉಳಿದಿವೆ. ಇದಕ್ಕಾಗಿ ಪಂಚಾಯತ್ ಹಣ ಬಿಡುಗಡೆಗೊಳಿಸಿದೆ ಎಂದು ಹೇಳಲಾಗುತ್ತಿದೆ. ಹಳೆಯದಾದ ಹೆಂಚು ಹಾಕಿದ ಕಟ್ಟಡದಲ್ಲೇ ಸುಮಾರು 60 ವರ್ಷಗಳ ಕಾಲ ಈ ಕೇಂದ್ರ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಕಟ್ಟಡ ಶೋಚನೀಯ ಸ್ಥಿತಿಗೆ ತಲುಪಿದಾಗ ಸ್ಥಳೀಯರ ಹಾಗೂ …

ಮಂಜೇಶ್ವರ ಪಂಚಾಯತ್‌ನಲ್ಲಿ ವಿಇಒ ವರ್ಗಾವಣೆ: ಬಿಜೆಪಿ ಖಂಡನೆ

ಮಂಜೇಶ್ವರ: ಪಂಚಾಯತ್‌ನಲ್ಲಿ ವರ್ಗಾವಣೆಯ ಆಟ ನಡೆಯುತ್ತಿದೆ ಎಂದು ಬಿಜೆಪಿ ದೂರಿದೆ. ಇದ್ದ ಇಬ್ಬರು ವಿಇಒಗಳಲ್ಲಿ ಒಬ್ಬರನ್ನು ವರ್ಗಾವಣೆ ಗೊಳಿಸಲಾಗಿದ್ದು, ಮತ್ತೊಬ್ಬರು ಸುದೀ ರ್ಘ ರಜೆ ಪಡೆಯುವ ತೀರ್ಮಾನ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪಂಚಾಯತ್ ಆಡಳಿತೆಯ ಕೊನೆಯ ವರ್ಷ ಮತ್ತು ಆರ್ಥಿಕ ವರ್ಷದ ಅಂತಿಮ ತಿಂಗಳುಗಳಲ್ಲಿ ಸ್ಥಳೀಯಾಡಳಿತ ಪಂಚಾಯತ್ ಅಧಿಕಾರಿಗಳನ್ನು, ಕ್ಲರ್ಕ್‌ಗಳನ್ನು ವರ್ಗಾವಣೆಗೊಳಿ ಸುತ್ತಿರುವುದು ಯಾವ ಉದ್ದೇಶದಿಂದ ಎಂದು ಬಿಜೆಪಿ ಪ್ರಶ್ನಿಸಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಪಂಚಾಯತ್‌ಗೆ ಬರುವ ಸಾರ್ವಜನಿಕರು ಅಧಿಕಾರಿಗಳಿಲ್ಲ ಎಂಬ ಕಾರಣದಿಂದ ಅವಶ್ಯಕತೆಗಳನ್ನು …

ಬಾರಿನಲ್ಲಿ ಮದ್ಯ ಸೇವಿಸಿ ಗೆಳೆಯರ ಮಧ್ಯೆ ವಾಗ್ವಾದ: ಗಲಾಟೆ ಮಧ್ಯೆ ಕ್ರೀಡಾ ಅಧ್ಯಾಪಕ ಮೃತ್ಯು

ತೃಶೂರು: ಗೆಳೆಯ ಹಿಡಿದು ದೂ ಡಿದ ಕ್ರೀಡಾ ಅಧ್ಯಾಪಕ  ಬಿದ್ದು ಮೃತ ಪಟ್ಟರು. ಪೂಂಗುನ್ನಂ ಹರಿಶ್ರೀ ಶಾಲಾ ಅಧ್ಯಾಪಕ ಚಕ್ಕಮುಕ್ ನಿವಾಸಿ ಅನಿಲ್ ಮೃತಪಟ್ಟವರು. ಬುಧವಾರ ರಾತ್ರಿ ೧೧.೩೦ರ ವೇಳೆ ಘಟನೆ ನಡೆದಿದೆ. ಗೆಳೆಯ ಚೂಲಿಶ್ಶೇರಿ ನಿವಾಸಿ ರಾಜು ವನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ರೀಜನಲ್ ಥಿಯೇಟರ್ ಸಮೀಪದ ಬಾರಿನಲ್ಲಿ ರಾತ್ರಿ ಅಧ್ಯಾಪಕ, ಗೆಳೆಯ ಮದ್ಯಪಾನಗೈದಿದ್ದರು. ಬಳಿಕ ಇವರು ಥಿಯೇಟರ್‌ಗೆ ತೆರಳಿ ಥಿಯೇಟ ರ್‌ನಲ್ಲಿ ಜರಗುತ್ತಿದ್ದ ಫೆಸ್ಟಿವಲ್‌ಗೆ ತೆರಳಿದ್ದು, ಅಲ್ಲಿ ಪರಸ್ಪರ ವಾಗ್ವಾದ ಉಂಟಾಗಿದೆ. ಈ ಮಧ್ಯೆ …

ವಾಣೀನಗರ ಪರಿಸರದಲ್ಲಿ ಚಿರತೆ ಭೀತಿ: ಶಾಲೆಯಲ್ಲಿ ಹಾಜರಿ ಕುಸಿತ

ಪೆರ್ಲ: ಕೊಳತ್ತೂರು ಬಳಿ ಬೋನಿನಲ್ಲಿ ಸಿಲುಕಿದ ಹುಲಿಯನ್ನು  ಬಂಟಾಜೆ ಬಳಿ ಕಾಡಿಗೆ ಬಿಟ್ಟಿರುವುದಾಗಿ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭೀತಿ ಸೃಷ್ಟಿಯಾಗಿದೆ. ಇದರಿಂದ ವಾಣೀನಗರ ಸರಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವುಂಟಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳ ಹೆತ್ತವರು ನಿರಂತರ ಪಂಚಾಯತ್ ಜನಪ್ರತಿನಿಧಿಗಳನ್ನು, ಸಮಾಜಸೇವಕರನ್ನು ಸಂಪರ್ಕಿಸಿ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸದಸ್ಯರಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ, ಮಾಜಿ ಸದಸ್ಯ ರವಿ ವಾಣೀನಗರ ಸಹಿತ …

ಮಂಜೇಶ್ವರ ತಾಲೂಕಿಗೆ ದಶಕ: ಕಚೇರಿ ಚಟುವಟಿಕೆ ಇನ್ನೂ ಬಾಡಿಗೆ ಕಟ್ಟಡದಲ್ಲೇ: ಜನಪರವೇದಿ ಆಂದೆಲನದತ್ತ

ಉಪ್ಪಳ: ಮಂಜೇಶ್ವರ ತಾಲೂಕು ಚಾಲ್ತಿಗೆ ಬಂದು ದಶಕವಾದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿ ಸುವ ತಾಲೂಕು ಕಚೇರಿಗೆ ಸ್ವಂತ ವಾಗಿ ಕಟ್ಟಡ ಮಂಜೂರುಗೊಳಿಸಲು ಸಾಧ್ಯವಾಗದಿರುವುದು ಸರಕಾರ ಹಾಗೂ ಜನಪ್ರತಿನಿಧಿಗಳ ಸಂ ಪೂರ್ಣ ಅನಾಸ್ಥೆ ಎಂದು ಮಂಗ ಲ್ಪಾಡಿ ಜನಪರ ವೇದಿಕೆ ಪದಾ ಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ತಾಲೂಕು ಕಚೇರಿ ಹಾಗೂ ಸಂಬಂಧಪಟ್ಟ ಕಚೇರಿಗಳನ್ನು ಮಂಜೂರುಗೊಳಿಸದೆ ಭಾಷಾ ಅಲ್ಪಸಂಖ್ಯಾತರಲ್ಲಿ ಸರಕಾರ ತೀವ್ರ ಅವಗಣನೆಯನ್ನು ತೋರು ತ್ತಿದೆ. ಮಂಜೂರು ಮಾಡಿದ ಕಚೇರಿಗಳೆಲ್ಲಾ ಬಾಡಿಗೆ ಕಟ್ಟಡದಲ್ಲಿದ್ದು, ಇದರ ವಿರುದ್ಧ ಜನರನ್ನು ಸೇರಿಸಿ ತೀವ್ರ …

ಸಿಪಿಎಂನಿಂದ ಶ್ರೀಮಂತವರ್ಗದ ಓಲೈಕೆ- ಪಿ.ಕೆ. ಫೈಸಲ್

ಬಾಯಾರು: ಶ್ರೀಮಂತ ವರ್ಗವನ್ನು ಓಲೈಸುವ ಉದ್ದೇಶದಿಂದ ಸಿಪಿಎಂ ನಾಯಕರು ಆಡಳಿತ ನಡೆಸುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಆರೋಪಿಸಿದರು. ಹತಾಷ ಮನೋಭಾವ ಹೊಂದಿರುವ ಸಿಪಿಎಂ ನಾಯಕರಿಗೆ ಬಡವರ ಭವಣೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು. ಬಾಯಾರಿನಲ್ಲಿ ನಡೆದ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ಏಕದಿನ ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಸೋಮಶೇಖರ ಜೆ.ಎಸ್, ಸುಂದರ ಆರಿಕ್ಕಾಡಿ, ಸೇವಾದಳ …

ಆನೆಕಲ್ಲು ಶ್ರೀ ಸಂತಾನ ಗೋಪಾಲಕೃಷ್ಣ ವಾರ್ಷಿಕ ಜಾತ್ರೆ ಆರಂಭ

ಆನೆಕಲ್ಲು: ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಗೊAಡಿತು. ಬೆಳಿಗ್ಗೆ ಗಣಪತಿ ಹೋಮ, ನವಕ ಕಲಶ, ಕಲಶಾಭಿಷೇಕ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ 6ರಿಂದ ದೀಪಾರಾಧನೆ, 6.30ರಿಂದ ರಂಗಪೂಜೆ, 7ಕ್ಕೆ ಕುಣಿತ, ರಾತ್ರಿ 8 ಗಂಟೆಗೆ ಶ್ರೀ ದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, 9.30ಕ್ಕೆ ಅನ್ನ ಸಂತರ್ಪಣೆ, 10ಕ್ಕೆ ತುಳು ನಾಟಕ ‘ಅಷ್ಟೆಮಿ’ ಪ್ರದರ್ಶನಗೊಳ್ಳಲಿದೆ.

ದ.ಕ. ಜಿಲ್ಲೆಯ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ 5000ದಷ್ಟು ಮಕ್ಕಳಿಗೆ ದೃಷ್ಟಿ ಸಮಸ್ಯೆ ಪತ್ತೆಹಚ್ಚಲಾಗಿದೆ. 4000ಕ್ಕೂ ಅಧಿಕ ಮಕ್ಕಳು ದಿನವೂ ಕನ್ನಡಕ ಧರಿಸಬೇಕಾಗಿದೆ. 1376 ಶಾಲೆಗಳಲ್ಲಿ ಆರೋಗ್ಯ ಇಲಾಖೆ ನೇತ್ರ ತಪಾಸಣೆ ನಡೆಸಿತ್ತು. ಇದರಲ್ಲಿ ಸರಕಾರಿ ಶಾಲೆಗಳ 1,01,592 ವಿದ್ಯಾರ್ಥಿಗಳನ್ನು ಹಾಗೂ ಅನುದಾನಿತ ಶಾಲೆಗಳ 44,359 ವಿದ್ಯಾರ್ಥಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 660 ವಿದ್ಯಾರ್ಥಿಗಳು ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಪತ್ತೆಹಚ್ಚಲಾಗಿದೆ.

ಕಾರ್ಮಾರು: ಬ್ರಹ್ಮಕಲಶೋತ್ಸವ ವಾಹನ ಪ್ರಚಾರಕ್ಕೆ ಚಾಲನೆ

ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ ೧ರಿಂದ ಆರಂಭಗೊಳ್ಳಲಿದ್ದು, ಇದರ ಪ್ರಚಾರಾರ್ಥ ಹಮ್ಮಿಕೊಂಡ ವಾಹನ  ಸಂಚಾರಕ್ಕೆ ನಿನ್ನೆ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ, ಪ್ರಚಾರ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸರಳಿ ಅವರಿಗೆ ಧ್ವಜ ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಉಪಾಧ್ಯಕ್ಷ …

ಸರ್ವೆ ನಡೆಸುತ್ತಿದ್ದ ವೇಳೆ ಹೊಳೆ ನೀರಿಗೆ ಬಿದ್ದು ಸರ್ವೇಯರ್ ದಾರುಣ ಸಾವು

ಅಡೂರು: ಸರ್ವೇ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅಕಸ್ಮಾತ್ ಜಾರಿ ಹೊಳೆ ನೀರಿಗೆ ಬಿದ್ದು ಸರ್ವೇಯರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಅಡೂರು ಬಳಿ ನಡೆದಿದೆ. ಆಲಪ್ಪುಳ ಚೆರಿಯನಾಡು ಮಾಂಬ್ರ ತುಂಬಿನಾಲ್ ವೀಟಿಲ್‌ನ ಟಿ.ಆರ್. ತುಳಸೀಧರನ್- ಶೀಲಾ ದಂಪತಿ ಪುತ್ರ ಟಿ. ನಿಖಿಲ್ (28) ಸಾವನ್ನಪ್ಪಿದ ದುರ್ದೈವಿ ಯುವಕ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಒಳಪಡಿಸಿ ರಾಜ್ಯ ಕಿರು ನೀರಾವರಿ ಇಲಾಖೆ ಅಡೂರಿಗೆ ಸಮೀ ಪದ ಪಳ್ಳಂಗೋಡಿನಲ್ಲಿ ರೆಗ್ಯುಲೇಟರ್ (ಅಣೆಕಟ್ಟು) ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಅದರಂತೆ ಪ್ರಸ್ತುತ ಯೋಜನೆಗಾಗಿ ಪಳ್ಳಂಗೋಡು ಪಯ …