ರಿಪ್ಪರ್ ಮಾದರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಐದು ಮಂದಿಯ ಭೀಕರ ಕಗ್ಗೊಲೆ

ತಿರುವನಂತಪುರ: ರಿಪ್ಪರ್ ಮಾದರಿಯಲ್ಲಿ ಎರಡು ತಾಸುಗಳೊಳಗೆ ಮೂರು ಕಡೆಗಳಲ್ಲಾಗಿ ಸುತ್ತಿಗೆಯಿಂದ ಹೊಡೆದು ಸಹೋದರ, ಪ್ರಿಯತಮೆ ಸೇರಿದಂತೆ ಸ್ವಂತ ಕುಟುಂಬದ 5 ಮಂದಿಯನ್ನು ಯುವಕ ಸುತ್ತಿಗೆಯಿಂದ ಹೊಡೆದು ಬೀಭತ್ಸ ರೀತಿಯಲ್ಲಿ ಸರಣಿ ಕಗ್ಗೊಲೆ ನಡೆಸಿದ ಘಟನೆ ರಾಜ್ಯರಾಜಧಾನಿಯಾದ ತಿರುವನಂ ತಪುರದಲ್ಲಿ ನಡೆದಿದೆ.ತಿರುವನಂತಪುರ ವೆಂuಟಿಜeಜಿiಟಿeಜರ ಮೂಡ್ ಪೆರುಮಲ ನಿವಾಸಿ ಸಲಾಸಿಲ್ ಹಾಸ್ನ ಎ.ಆರ್ .ಅಫ್ನಾಸ್ (23) ಈ ಸರಣಿ ಕೊಲೆ ನಡೆಸಿದ ಆರೋಪಿ. ತನ್ನ ಅಜ್ಜಿ ಪಾಂuಟಿಜeಜಿiಟಿeಜಟ್ಟ್ನ ಸಲ್ಮಾ ಬೀವಿ (95)ಳನ್ನು ಆರೋಪಿ ಮೊದಲು ಆಕೆಯ ಮನೆಯಲ್ಲೇ ಕೊಲೆಗೈದು ನಂತರ …

ಕೊಳತ್ತೂರಿನಿಂದ ಸೆರೆಹಿಡಿದ ಚಿರತೆಯನ್ನು ಬೆಳ್ಳೂರು-ಎಣ್ಮಕಜೆ ಪಂ. ವ್ಯಾಪ್ತಿಯಲ್ಲಿ ಬಿಟ್ಟಿರುವುದಾಗಿ ಆರೋಪ; ಚಿರತೆ ಸೆರೆಗೆ ಒತ್ತಾಯಿಸಿ ಡಿಎಫ್‌ಒ ಕಚೇರಿಯಲ್ಲಿ ಬೆಳ್ಳೂರು ಪಂ. ಜನಪ್ರತಿನಿಧಿಗಳು, ನಾಗರಿಕರಿಂದ  ಧರಣಿ

ಮುಳ್ಳೇರಿಯ: ಕೊಳತ್ತೂರು ಆಲವುಂಗಾಲ್‌ನಿಂದ ಅರಣ್ಯ ಅಧಿಕಾರಿಗಳು ಗೂಡು ಸ್ಥಾಪಿಸಿ ಸೆರೆಹಿಡಿದ ಚಿರತೆಯನ್ನು ಬೆಳ್ಳೂರು-ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಜನವಾಸ  ಕೇಂದ್ರದಲ್ಲಿ ಬಿಡಲಾಗಿದೆ ಎಂಬ ಆರೋಪವುಂಟಾಗಿದೆ. ಅರಣ್ಯ ಅಧಿಕಾರಿಗಳ ಈ ಕ್ರಮವನ್ನು ಪ್ರತಿಭಟಿಸಿ ಬೆಳ್ಳೂರು ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ನಾಗರಿಕರು  ಡಿಎಫ್‌ಒ ಕಚೇರಿಯಲ್ಲಿ ನಿನ್ನೆ ಧರಣಿ ನಡೆಸಿದರು.   ಡಿಎಫ್‌ಒ ಕೆ. ಅಶ್ರಫ್   ಧರಣಿ ನಿರತರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ಚಿರತೆಯನ್ನು  ಆ ಪ್ರದೇಶದಿಂದ ಸೆರೆಹಿಡಿಯಬೇಕೆಂಬ ಬೇಡಿಕೆಯನ್ನು ಪ್ರತಿಭಟನೆಗಾರರು ಮುಂದಿರಿಸಿದರು. ಅಲ್ಲದೆ ಚಿರತೆಯನ್ನು ಸೆರೆಹಿಡಿಯು …

ತಂಜಾವೂರು ವಾಸ್ತುಶೈಲಿಯ ಕಾರ್ಮಾರು ಕ್ಷೇತ್ರದ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ

ಮಾನ್ಯ: ಇಲ್ಲಿಗೆ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ ಹಾಗೂ ರಾಜಗೋಪುರ ನವೀಕರಣ ಗೊಂಡಿದ್ದು, ಮಾರ್ಚ್ 1ರಿಂದ 9ರ ವರೆಗೆ ನಡೆಯುವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ತಂಜಾವೂರು ವಾಸ್ತುಶೈಲಿಯ ಆಳೆತ್ತರದ ಮಹಾವಿಷ್ಣುಮೂರ್ತಿ ಇಲ್ಲಿ ಕಂಗೊಳಿಸುತ್ತಿದೆ ಎಂದು ಬ್ರಹ್ಮಕಲ ಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ನಿನ್ನೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ ೧ರಂದು ಕೆಡೆಂಜಿ …

ಆಶಾ ವರ್ಕರ್‌ಗಳ ಮುಷ್ಕರಕ್ಕೆ ಬೆಂಬಲ: ಪೈವಳಿಕೆಯಲ್ಲಿ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

ಪೈವಳಿಕೆ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕಳೆದ 14 ದಿನಗಳಿಂದ ತಿರುವನಂತಪುರದಲ್ಲಿ ಸೆಕ್ರೆಟರಿಯೇಟ್ ಮುಂಭಾಗ ಮುಷ್ಕರ ನಡೆಸುತ್ತಿರುವ ಆಶಾ ವರ್ಕರ್‌ಗಳ ಬೇಡಿಕೆ ಬಗ್ಗೆ ಮೌನ ವಹಿಸಿರುವ ಪಿಣರಾಯಿ ಸರಕಾರದ ವಿರುದ್ಧ ಹಾಗೂ ಆಶಾವರ್ಕರ್‌ಗಳ ಮುಷ್ಕರಕ್ಕೆ ಬೆಂಬಲ ಸೂಚಕವಾಗಿ ಕೆಪಿಸಿಸಿ ನಿರ್ದೇಶದಂತೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ನೇತೃತ್ವ ವಹಿಸಿದರು. ರಾಘವೇಂದ್ರ ಭಟ್, ನಾರಾಯಣ ಏದಾರ್, ಶಾಜಿ ಎನ್.ಸಿ, ನೌಶಾದ್ ಕಯ್ಯಾರ್, ಶಿವರಾಮ ಶೆಟ್ಟಿ, ಮುಸ್ತಫ, ಎಡ್ವರ್ಡ್, ಜೋಯ್, …

ಮಹಾ ಶಿವರಾತ್ರಿ ನಾಳೆ: ವಿವಿಧ ಶಿವ ಕ್ಷೇತ್ರಗಳಲ್ಲಿ ವೈವಿಧಮಯ ಕಾರ್ಯಕ್ರಮಗಳು

ಕಾಸರಗೋಡು: ಜಿಲ್ಲೆಯ ವಿವಿಧ ಶಿವ ಕ್ಷೇತ್ರಗಳಲ್ಲಿ ನಾಳೆ ಮಹಾ ಶಿವರಾತ್ರಿಯಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶಿವಪಂಚಾಕ್ಷರಿ ಜಲ ಲಿಪಿ ಅಭಿಯಾನ, ಪುಸ್ತಕ ಬಿಡುಗಡೆ ಸಮಾರಂಭ ಕ್ಷೇತ್ರದ ಉಮಾಮಹೇಶ್ವರ ಸಭಾಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಮಾತೃಸಮಿತಿ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸುವರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಸ್ತಾಪಿಸುವರು. ಮಲ್ಲಿಕಾ ಪ್ರಶಾಂತ್ ಪುಸ್ತಕ ಬಿಡುಗಡೆಗೊಳಿಸುವರು. ಹಲವರು ಭಾಗವಹಿಸುವರು. ಶಿರಿಯ ಶ್ರೀ …

ಮೀಯಪದವು: ವಾಹನ ಸಂಚಾರ ನಿಷೇಧ

ಮೀಯಪದವು: ಮೀಯಪದವಿನಿಂದ ದೈಗೋಳಿ ಮೂಲಕ ಪೊಯ್ಯತ್ತಬೈಲ್ ಆಗಿ ನಂದಾರ್‌ಪದವು ವರೆಗಿನ ರಸ್ತೆಯಲ್ಲಿ ಎಫ್‌ಡಿಆರ್ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ  ಮಾರ್ಚ್ 1ರಿಂದ ಡಾಮರೀಕರಣ ಕೆಲಸ ಪೂರ್ತಿಯಾಗುವವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ಅಣಂಗೂರಿನ ಪ್ಲೈವುಡ್ ಮಾಲ್‌ನಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಗರದ ಅಣಂಗೂರಿ ನಲ್ಲಿರುವ ಎಂ.ಆರ್.ಸಿ. ಪ್ಲೈವುಡ್ ಮಾಲ್ ನಲ್ಲಿ ನಿನ್ನೆ ಬಾರೀ ಬೆಂಕಿ ಅನಾಹುತ ಸಂಭವಿಸಿದೆ. ಈ ಮಾಲ್‌ನೊಳಗಿದ್ದ ಪಿವಿಸಿ ಬೋರ್ಡ್ ಗಳು ಜಿಪ್ಸಂ ಬೋರ್ಡ್‌ಗಳು, ಪ್ಲೈವುಡ್ ಹಾಗೂ ಇತರ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿ ಯಾಗಿವೆ. ಈ ಬಗ್ಗೆ ನೀಡಲಾದ ಮಾಹಿತಿ ಯಂತೆ ಕಾಸರಗೋಡು ಅಗ್ನಿಶಾಮಕ ದಳದ ಎರಡು ಯೂನಿಟ್ ತಂಡ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸತತವಾಗಿ ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾ …

ಜಾನುವಾರುಗಳಿಗೆ ವಿಮಾ ಯೋಜನೆ: ಮೃಗಾಸ್ಪತ್ರೆ ಸಂಪರ್ಕಿಸಲು ಕರೆ

ಕಾಸರಗೋಡು: ಗೋ ಸಮೃದ್ಧಿ ಎನ್ಎಲ್ಎಂ ಯೋಜನೆಗಳಲ್ಲಿ ಸೇರಿಸಿ ಜಿಲ್ಲೆಯಲ್ಲಿ ಜಾನುವಾರು ಗಳಿಗೆ ವಿಮೆ ಯೋಜನೆ ಈ ತಿಂಗಳಲ್ಲಿ ಜ್ಯಾರಿಗೊಳಿಸಲಾಗುವುದು. ಯೋಜನೆಯಲ್ಲಿ ದನದ ಮಾಲಕನಿಗೂ ಇನ್ಶೂರೆನ್ಸ್ ಸಂರಕ್ಷಣೆ ಲಭಿಸುವುದು. ಒಂದು ವರ್ಷ, ಮೂರು ವರ್ಷ ಎಂಬೀ ರೀತಿಯಲ್ಲಿರುವ ಕಾಲಾವಧಿಗೆ ವಿಮೆ ಮಾಡಬಹುದಾಗಿದೆ. 65,000 ರೂ.ವರೆಗಿನ ಮೌಲ್ಯದ ಏಳು ಲೀಟರ್ ಹಾಲು ಉತ್ಪಾದಿಸುವ, 2ರಿಂದ 10 ವರ್ಷದ ವರೆಗೆ ಪ್ರಾಯದ, ಗರ್ಭಾವಸ್ಥೆಯಲ್ಲಿರುವ ದನ, ಎಮ್ಮೆ ಮೊದಲಾದ ಜಾನುವಾರುಗಳನ್ನು ವಿಮೆ ಯೋಜನೆಯಲ್ಲಿ ಸೇರಿಸಬಹು ದಾಗಿದೆ. 1 ವರ್ಷಕ್ಕೆ 4.48 ಶೇಕಡಾ, 3 …

ಪುಂಡಿಕಾಯಿಯಲ್ಲಿ ನವೀಕೃತ ರಸ್ತೆಗಳ ಉದ್ಘಾಟನೆ

ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಎರಡನೇ ವಾರ್ಡ್ ಪುಂಡಿಕಾಯಿಯಲ್ಲಿ ನವೀಕರಿಸಿದ ಎರಡು ರಸ್ತೆಗಳ ಉದ್ಘಾಟನೆ ನಿನ್ನೆ ಜರಗಿತು. ಬ್ಲೋಕ್ ಪಂಚಾಯತ್‌ನ ಜನರಲ್ ಫಂಡ್, ಎಸ್‌ಸಿ ನಿಧಿ ಉಪಯೋಗಿಸಿ ನಿರ್ಮಿಸಿದ ರಸ್ತೆಯನ್ನು ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಕಾರಡ್ಕ ಪಂಚಾಯ ತ್‌ನ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆ ಯಂತೆ ನವೀಕರಿಸಿದ ರಸ್ತೆಯನ್ನು ವಾರ್ಡ್ ಪ್ರತಿನಿಧಿ ಪುಷ್ಪಾ ಸುರೇಶ್ ಉದ್ಘಾಟಿಸಿದರು. ಕಾರ್ಯಕ್ರಮಗಳಲ್ಲಿ ಮುಂಡೋಳು ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ್ ಬಲ್ಲಾಳ್ ಎ.ಬಿ, ವಸಂತ ಕುಮಾರ್ ಕಾರ್ಲೆ, ಕಾರಡ್ಕ ಬ್ಲೋಕ್ ಪಂ. …

ಫೋನ್ ಕರೆ ಬಂದ ತಕ್ಷಣ ಪತ್ನಿ ಮನೆಯಿಂದ ಹೊರಹೋದ ಯುವಕ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ : ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ ಸಂಬಂಧಿಕರು

ಅಡೂರು: ವ್ಯಕ್ತಿಯೊಬ್ಬನಿಂದ ಫೋನ್ ಕರೆ ಬಂದ ಕೂಡಲೇ ಪತ್ನಿ ಮನೆಯಿಂದ ಹೊರಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದ ಯುವಕ  ಪಯಸ್ವಿನಿ ಹೊಳೆಯ ಅತ್ತನಾಡಿಯಲ್ಲಿ ನಿಗೂಢ ವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ. ಕುತ್ತಿಕ್ಕೋಲ್ ವೆಳ್ಳಾಲದ  ನಾರಾಯಣನ್ ಎಂಬವರ ಪುತ್ರ ರಾಜೇಶ್ (25) ಮೃತಪಟ್ಟ ವ್ಯಕ್ತಿ. ಪಾಂಡಿ ನಾಗತ್ತುಮೂಲೆಯಲ್ಲಿರುವ ಪತ್ನಿ ಮನೆಗೆ ಇವರು ತೆರಳಿದ್ದರೆನ್ನಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆ ವೇಳೆ ರಾಜೇಶ್‌ರಿಗೆ ಒಂದು ಫೋನ್ ಕರೆ ಬಂದಿದ್ದು, ಅನಂತರ ಅವರು ಮನೆಯಿಂದ ಹೊರಗೆ ತೆರಳಿದ್ದರೆಂದು ಪತ್ನಿಯ ತಾಯಿ ತಿಳಿಸಿದ್ದಾರೆ. …