ಕೊಳತ್ತೂರಿನಲ್ಲಿ ಬೋನಿನೊಳಗೆ ಸಿಲುಕಿದ್ದ ಹೆಣ್ಣು ಚಿರತೆ: ಅರಣ್ಯದಲ್ಲಿ ಬಿಟ್ಟ ಅಧಿಕಾರಿಗಳು

ಕಾಸರಗೋಡು: ಬೇಡಡ್ಕಕ್ಕೆ ಸಮೀಪದ ಕೊಳತ್ತೂರಿನಲ್ಲಿ  ಬೋನಿ ನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆಯವರು  ಬಳಿಕ ಜಿಲ್ಲೆಯ ವ್ಯಾಪ್ತಿಗೊಳಪಟ್ಟ ರಕ್ಷಿತಾರಣ್ಯ ದಲ್ಲಿ ತೆರೆದುಬಿಟ್ಟಿದ್ದಾರೆ. ಬೇಡಗಂ ಪಂಚಾಯತ್‌ನೊ ಳಪಟ್ಟ ಕೊಳತ್ತೂರು  ನಿಡುವೋಟಿನ ಎಂ. ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸ ಲಾಗಿದ್ದ ಬೋನಿನಲ್ಲಿ ನಿನ್ನೆ ರಾತ್ರಿ ವೇಳೆ ಚಿರತೆ ಸಿಲುಕಿತ್ತು . ಎರಡು ದಿನಗಳ ಹಿಂದೆ ಇಲ್ಲಿ ಬೋನು ಸ್ಥಾಪಿಸಲಾಗಿತ್ತು. ಅದರೊಳಗೆ ಅದರ ಇನ್ನೊಂದು ಭಾಗದಲ್ಲಿ  ನಾಯಿಯೊಂ ದನ್ನು ಕಟ್ಟಿಹಾಕಲಾಗಿತ್ತು. ನಾಯಿ ಜೋರಾಗಿ ಬೊಗಳತೊಡಗಿದಾಗ ಅದನ್ನು ಗಮನಿಸಿದ …

ಮೀನು ಕಾರ್ಮಿಕನಿಗೆ ತಂಡದಿಂದ ಹಲ್ಲೆ: ಕೈ ಎಲುಬು ಮುರಿದ ವ್ಯಕ್ತಿ ಆಸ್ಪತ್ರೆಯಲ್ಲಿ

ಕುಂಬಳೆ: 20 ಮಂದಿಯ ತಂಡವೊಂದು ಮೀನು ಕಾರ್ಮಿಕನನ್ನು  ತಡೆದು ನಿಲ್ಲಿಸಿ ಹಲ್ಲೆಗೈದು ಕೈಯ ಮೂಳೆ ಮುರಿದಿರುವುದಾಗಿ ದೂರಲಾಗಿದೆ. ಕೊಯಿಪ್ಪಾಡಿ ಕಡಪುರದ ಅಬ್ದುಲ್ಲ ಕುಂಞಿ (42) ಎಂಬವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಇವರು ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ಕೊಯಿಪ್ಪಾಡಿ  ಕಡಪ್ಪುರ ಜಂಕ್ಷನ್‌ನಲ್ಲಿ 20 ಮಂದಿ ತಂಡ ತಡೆದು ನಿಲ್ಲಿಸಿ ರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿದೆಯೆಂದೂ ಇದರಿಂದ ಕೈಯ ಮೂಳೆ ಮುರಿದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ಕುಂಬಳೆ ಪೇಟೆಯಲ್ಲಿ ಅಬ್ದುಲ್ಲ …

ಸಮುದ್ರಪಾಲಾದ ಟೈಲರ್ ಅಂಗಡಿ ಮಾಲಕನ ಮೃತದೇಹ ಮುಸೋಡಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಮಂಜೇಶ್ವರ: ಹೊಸಬೆಟ್ಟು ಕುಂಡುಕೊಳಕೆಯಲ್ಲಿ ಸಮುದ್ರಪಾಲಾದ ಟೈಲರ್ ಅಂಗಡಿ ಮಾಲಕ  ಭಾಸ್ಕರ (58)ರ ಮೃತದೇಹ ಉಪ್ಪಳ ಮುಸೋಡಿಯಲ್ಲಿ ಪತ್ತೆಯಾಗಿದೆ. ಕಡಂಬಾರು ನೀರೊಲ್ಪೆ ನಿವಾಸಿಯಾದ ಇವರು ಹೊಸಂಗಡಿಯಲ್ಲಿ ಎಸ್‌ಎ ಟೈಲರ್ಸ್ ಎಂಬ ಅಂಗಡಿ ಹೊಂದಿದ್ದರು. ಇವರು ಹಾಗೂ ಇವರ ಪತ್ನಿ ಮಾಲತಿ ಶನಿವಾರ ಸಂಜೆ 5.30 ರ ವೇಳೆಗೆ ಕುಂಡುಕೊಳಕೆ ಬೀಚ್‌ಗೆ ಸ್ಕೂಟರ್‌ನಲ್ಲಿ ತೆರಳಿದ್ದರು. ಆ ಬಳಿಕ ಪತ್ನಿ ಮಾಲತಿ ಅಸ್ವಸ್ಥ ಸ್ಥಿತಿಯಲ್ಲಿ ಸಮುದ್ರ ದಡದಲ್ಲಿ ಪತ್ತೆಯಾಗಿದ್ದರು. ಭಾಸ್ಕರರಿಗಾಗಿ ಸ್ಥಳೀಯರು ಹುಡುಕಾಟ ನಡೆಸಿದ್ದರು. ಪೊಲೀಸರು, ಕರಾವಳಿ ಪೊಲೀಸರು ಶನಿವಾರ ರಾತ್ರಿ …

ನವಂಬರ್ 1ರೊಳಗಾಗಿ ಕೇರಳ ಸಂಪೂರ್ಣ ಕಡುಬಡತನ ಮುಕ್ತ ರಾಜ್ಯವಾಗಲಿದೆ-ಮುಖ್ಯಮಂತ್ರಿ

ಕಾಸರಗೋಡು: ಕೇರಳ ಹೂಡಿಕೆ ಸೌಹಾರ್ದ ರಾಜ್ಯವಾಗಿ ಮಾರ್ಪಡು ತ್ತಿದೆ. ಹೂಡಿಕೆ ಸಾಧ್ಯತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪ ಡಿಸುವ ಗುರಿಯೊಂದಿಗೆ  ರಾಜ್ಯ ಮುಂದುವರಿಯುತ್ತಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್‌ನ ಹೊಸ ಅನೆಕ್ಸ್ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಸರಕಾರಿ ಸೇವೆಗಳು ಜನರಿಗೆ ತ್ವರಿತವಾಗಿ ಲಭಿಸುವ ರೀತಿಯ ಕ್ರಮಗಳನ್ನು ಸರಕಾರ ಆರಂಭಿಸಿದೆ. ಇದರಂತೆ 900ರಷ್ಟು ಸರಕಾರಿ ಸೇವೆಗಳನ್ನು ಈಗ ಆನ್‌ಲೈನ್ ಮೂಲಕ ಲಭಿಸುವಂತೆ ಮಾಡಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆ-ಸ್ಪೋಟ್ ಸೌಕರ್ಯ ಜ್ಯಾರಿಗೊಳಿಸಲಾಗಿದೆ. ಊರ ಅಭಿವೃದ್ಧಿಗಾಗಿ …

ಮಾರ್ಚ್ 24, 25ರಂದು ಬ್ಯಾಂಕ್ ನೌಕರರ ಮುಷ್ಕರ

ಹೊಸದಿಲ್ಲಿ: ಬ್ಯಾಂಕ್‌ಗಳ ಚಟುವಟಿಕೆಯನ್ನು ವಾರದಲ್ಲಿ ಐದು ದಿನಗಳಾಗಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಮಾರ್ಚ್ 24 ಹಾಗೂ 25ರಂದು ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ.  ಬೆಫಿ, ಎಐಬಿಇಎ, ಎಐಟಿಒಸಿ, ಎನ್‌ಸಿಬಿಇ ಸಹಿತ 9 ಸಂಘಟನೆಗಳ  ಸಂಯುಕ್ತ ಸಂಘಟನೆಯಾದ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಮುಷ್ಕರಕ್ಕೆ ನೇತೃತ್ವ ನೀಡಲಿದೆ.  ಮಾರ್ಚ್ ೩ರಂದು ಪಾರ್ಲಿಮೆಂಟ್ ಮಾರ್ಚ್, 11ರಂದು ಬ್ಯಾಂಕ್‌ನ ಕೇಂದ್ರ ಕಚೇರಿ ಮುಂದೆ ಧರಣಿ ನಡೆಯಲಿರುವುದು. 

ಬಿದ್ದು ಸಿಕ್ಕಿದ ಚಿನ್ನದ ಸರ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಗೆಳೆಯರು

ಮಂಜೇಶ್ವರ: ಬಿದ್ದು ಸಿಕ್ಕಿದ 12 ಗ್ರಾಂ ತೂಕದ ಚಿನ್ನದ ಸರವನ್ನು ಅದರ ವಾರೀಸುದಾರ ಕೋಳ್ಯೂರು ಕೊಡಂಗೆ ನಿವಾಸಿ ಸುಧೀರ್‌ರಿಗೆ ಹಸ್ತಾಂತರಿಸಿ ಮಜೀರ್ಪಳ್ಳದ ಆಟೋರಿಕ್ಷಾ ಚಾಲಕ ಅಬ್ಬಾಸ್ ಹಾಗೂ ಅವರ ಗೆಳೆಯ ಕಾಞಂಗಾಡ್ ನಿವಾಸಿ ಅಶ್ರಫ್ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಂಕದಕಟ್ಟೆಯ ಕೋಳ್ಯೂರುಪದವಿನಲ್ಲಿ ಚಿನ್ನದ ಸರ ಕಳೆದುಹೋಗಿತ್ತು. ಇದು ಲಭಿಸಿದ ಅಶ್ರಫ್ ಗೆಳೆಯ ಆಟೋರಿಕ್ಷಾ ಚಾಲಕ ಅಬ್ಬಾಸ್‌ರನ್ನು ಸಂಪರ್ಕಿಸಿದ್ದು, ಅವರಿಬ್ಬರು ಸೇರಿ ವಾರೀಸುದಾರರನ್ನು ಪತ್ತೆಹಚ್ಚಿ ಅವರಿಗೆ ಹಸ್ತಾಂತರಿಸಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮಜೀರ್ಪಳ್ಳ ಆಟೋ ಚಾಲಕರು ಅಭಿನಂದಿಸಿದ್ದಾರೆ.

ನಿಧನ

ಹೊಸಂಗಡಿ: ಇಲ್ಲಿಗೆ ಸಮೀಪದ ಕಡಂಬಾರು ಸಂಕಬೈಲು ನಿವಾಸಿ ದಿ| ಕುಂಞಣ್ಣ ಅಡಪ ತಿರುವೈಲುಗುತ್ತು ಇವರ ಪತ್ನಿ ಕಮಲ ಅಡಪ (90) ನಿಧನ ಹೊಂದಿ ದರು. ಕೃಷಿಕೆ ಯಾಗಿದ್ದರು. ಮೃತರು ಮಕ್ಕಳಾದ ಸಂಕಬೈಲು ಸುಧಾಕರ ಅಡಪ, ಪ್ರಭಾಕರ ಅಡಪ, ಸತೀಶ್ ಅಡಪ (ಯಕ್ಷಬಳಗ ಸಂಸ್ಥಾಪಕರು), ಪ್ರವೀಣ್ ಅಡಪ, ಮಂಜುನಾಥ ಅಡಪ, ಭಾಸ್ಕರ ಅಡಪ, ಸೊಸೆಯಂದಿರಾದ ಕುಸುಮ, ಸುರೇಖ, ವಿಜಯ, ಜಯಂತಿ, ಸಿಸ್ತಿಲ, ಸಹೋದರ ಜಗನ್ನಾಥ ಶೆಟ್ಟಿ ಶಿರಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಕ್ಕಳ ಪೈಕಿ ಬಾಲಕೃಷ್ಣ ಅಡಪ, …

ಜನರಲ್ ಆಸ್ಪತ್ರೆಯ ಶೋಚನೀಯ ಸ್ಥಿತಿ ಪರಿಹರಿಸಲು ಬಿಜೆಪಿ ತಂಡದಿಂದ ನಗರಸಭಾಧ್ಯಕ್ಷರ ಭೇಟಿ

ಕಾಸರಗೋಡು: ನಗರಸಭಾ ಆಡಳಿ ತದಲ್ಲಿರುವ ಕಾಸರಗೋಡು ಜನರಲ್ ಆಸ್ಪತ್ರೆಯ ಸ್ಥಿತಿ ಶೋಚನೀಯವಾಗಿದೆ ಎಂದು ಬಿಜೆಪಿ ದೂರಿದೆ. ಇಲ್ಲಿ ಸುಮಾರು 16 ತಜ್ಞವೈದ್ಯರ ಕೊರತೆ ಇದ್ದು, ಇದರಿಂದಾಗಿ ಇಲ್ಲಿಗೆ ಬರುವ ರೋಗಿಗಳು ಸಂಕಷ್ಟ ಪಡುವ ಸ್ಥಿತಿ ಇದೆ ಎಂದು ಬಿಜೆಪಿ ದೂರಿದೆ. ಸರ್ಜನ್‌ರ ಕೊರತೆ, ವಿದ್ಯುತ್ ಇಲ್ಲದ ದಿನಗಳಲ್ಲಿ ಎಕ್ಸ್‌ರೇ ತೆಗೆಯಲಾಗದ ಸ್ಥಿತಿ, ಜನರೇಟರ್ ವ್ಯವಸ್ಥೆ ಇಲ್ಲದಿರುವುದು, ರೋಗಿಗಳ ಭೇಟಿಗೆ ಬಂದವರಿಂದ 10 ರೂ. ಶುಲ್ಕ ಮಾಡುತ್ತಿರುವುದು ಮೊದಲಾ ದವುಗಳ ಬಗ್ಗೆ ಗಮನ ಸೆಳೆಯಲು ಬಿಜೆಪಿ ತಂಡ ಕಾಸರಗೋಡು …

ಅರ್ಧ ಬೆಲೆ ವಂಚನೆ: ಹಣದ ಲೆಕ್ಕಾಚಾರ ಸಂಗ್ರಹಕ್ಕೆ ತನಿಖಾ ತಂಡ ಚಾಲನೆ

ಮೂವಾಟುಪುಳ: ಅರ್ಧ ಬೆಲೆಗೆ ಸ್ಕೂಟರ್ ಮತ್ತಿತರ ಸಾಮಗ್ರಿಗಳನ್ನು ಒದಗಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಹಣ ಪಡೆದು ವಂಚಿಸಿದ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ತೀವ್ರಗೊಳಿಸಿದೆ. ದೂರುಗಾರರಿಂದ ಹೇಳಿಕೆ ಹಾಗೂ ವಂಚನೆ ನಡೆದ ಹಣದ ಲೆಕ್ಕಾಚಾರ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಮೂವಾಟುಪುಳ ಸೀಡ್ ಸೊಸೈಟಿ ಪದಾಧಿಕಾರಿಗಳಾದ ಮೂವರನ್ನು ಇಂದು ತನಿಖೆಗೊಳಪಡಿ ಸಲಾಗುವುದು.  ಸೀಡ್ ಸೊಸೈಟಿ ಮುಖಾಂತರ ಸಂಗ್ರಹಿಸಿದ ಹಣ ಹಾಗೂ ನೀಡಿದ ವಾಹನಗಳ ಲೆಕ್ಕಾಚಾರ ಸಂಗ್ರಹಿಸಲಾಗುವುದು. ವಂಚನೆಗೆ ಸಂಬಂಧಿಸಿ ಈಗಾಗಲೇ ಸೆರೆಗೀಡಾಗಿ ಮೂವಾಟುಪುಳ ಸಬ್ ಜೈಲಿನಲ್ಲಿರುವ ಅನಂತುಕೃಷ್ಣ ಎಂಬಾತನನ್ನು ಇತರ ಜಿಲ್ಲೆಗಳಿಂದ …

ಕಾಡಾನೆ ದಾಳಿಗೆ ದಂಪತಿ ಬಲಿ: ಆರಳಂ ಪಂ.ನಲ್ಲಿ ಬಿಜೆಪಿ, ಯುಡಿಎಫ್ ಹರತಾಳ

ಕಣ್ಣೂರು: ರಾಜ್ಯದಲ್ಲಿ ಕಾಡಾನೆ ದಾಳಿಯಿಂದ ಮತ್ತಿಬ್ಬರು ಸಾವಿಗೀಡಾಗಿ ದ್ದಾರೆ. ಕಣ್ಣೂರು ಆರಳಂ ಫಾರಂನ ಹದಿಮೂರನೇ ಬ್ಲೋಕ್‌ನ ವೆಳ್ಳಿ, ಪತ್ನಿ ಲೀಲಾ ಎಂಬವರು ಸಾವಿಗೀಡಾದವರು. ನಿನ್ನೆ ಸಂಜೆ ತೋಟದಲ್ಲಿ ಗೇರುಬೀಜ ಸಂಗ್ರಹಿಸುತ್ತಿದ್ದಾಗ ಇವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ಭಾಗದಲ್ಲಿ ನಿರಂತರ ಕಾಡಾನೆ ದಾಳಿ ನಡೆಸುತ್ತಿರುವು ದಾಗಿ ಹೇಳಲಾ ಗುತ್ತಿದೆ. ಜನರ ಭಾರೀ ಪ್ರತಿಭಟ ನೆಯ ಬಳಿಕ ನಿನ್ನೆ ಮಧ್ಯಾಹ್ನ   ವೆಳ್ಳಿ, ಲೀಲರ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಅಸ್ಪತ್ರೆಗೆ  ಕೊಂಡೊಯ್ಯಲಾಯಿತು. ಸಬ್ ಕಲೆಕ್ಟರ್ ಸ್ಥಳಕ್ಕೆ ತಲುಪಿದ್ದರೂ …