ಮಂಜೇಶ್ವರ ಠಾಣೆ ಪರಿಸರದಲ್ಲಿ ತುಕ್ಕು ಹಿಡಿದು ನಾಶವಾಗುವ ವಾಹನಗಳು: ವಾರೀಸುದಾರರಿಗೆ ನೀಡಲು ಕಾನೂನು ಕ್ರಮ ತೊಡಕು
ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ಪರಿಸರದಲ್ಲಿ ತಂದು ನಿಲ್ಲಿಸಿರುವ ನೂರಾರು ವಾಹನಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿದ್ದು, ಇದರಲ್ಲಿ ಸುಮಾರು 10 ವರ್ಷದ ಹಿಂದಿನ ವಾಹನಗಳು ಒಳಗೊಂಡಿದೆ. ಠಾಣೆಯ ಸುತ್ತಮುತ್ತ ವಾಹನಗಳನ್ನು ನಿಲ್ಲಿಸಲಾಗಿದೆ. ಅನಧಿಕೃತ ಮದ ಸಾಗಾಟ, ಮರಳು ಸಾಗಾಟ, ಅಪಘಾತವಾದ ವಾಹನಗಳು, ದಾಖಲೆಪತ್ರಗಳಿಲ್ಲದೆ ಸಂಚರಿಸಿದ ವಾಹನಗಳು ಇದರಲ್ಲಿ ಒಳಗೊಂಡಿವೆ. ಕಾರು, ಆಟೋರಿಕ್ಷಾ, ಟೆಂಪೋ, ಲಾರಿ, ಬೈಕ್ ಸಹಿತ ಹಲವು ವಾಹನಗಳು ಇಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಕೆಲವೊಂದು ಬಿಸಿಲು ಮಳೆಗೆ ತುಕ್ಕು ಹಿಡಿದು ನಾಶವಾಗುತ್ತಿದೆ. ಸುತ್ತುಮುತ್ತು ಕಾಡುಪೊದೆಗಳಾವರಿಸಿದ್ದು, …