68.317 ಗ್ರಾಂ ಮಾದಕವಸ್ತು, ನಗದು ಪತ್ತೆ: ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ಕಳನಾಡು ದೇಳಿ ಕುನ್ನುಪಾರದಲ್ಲಿ ನಿನ್ನೆ ಮನೆಯೊಂದರಲ್ಲಿ ನಡೆಸಿದ ತಪಾಸಣೆಯಲ್ಲಿ 68.317 ಗ್ರಾಂ ಮಾದಕದ್ರವ್ಯವಾದ ಮೆಥಾಫಿ ಟಾಮಿನ್ ಹಾಗೂ 40,000 ರೂ. ನಗದು ವಶಪಡಿಸಿದೆ. ಇದಕ್ಕೆ ಸಂಬAಧಿಸಿ ಪ್ರಸ್ತುತ ಮನೆಯ ಮಹಮ್ಮದ್ ರೈಸ್ ಎಂಬಾತನನ್ನು ಬಂಧಿಸಲಾಗಿದೆ.ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಸರ್ಕಲ್ ಇನ್ ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ಗಳಾದ ನೌಶಾದ್ ಕೆ, ಅಜೀಶ್, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಸೆಬಾಸ್ಟಿನ್, ಅತುಲ್ …

ಅನಧಿಕೃತ ಹೊಯ್ಗೆ ಸಾಗಾಟ ಎರಡು ಲಾರಿಗಳ ವಶ; ಚಾಲಕ ಸೆರೆ

ಕುಂಬಳೆ: ಶಿರಿಯ ಹೊಳೆಯ ವಳಯಂನಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟ ತಡೆಗೆ ಪೊಲೀಸರು ಕೈಗೊಳ್ಳುವ ಎಲ್ಲಾ ಕ್ರಮಗಳೂ ವಿಫಲಗೊಳ್ಳುತ್ತಿ ರುವುದಾಗಿ ದೂರಲಾಗಿದೆ. ಇಂದು ಮುಂಜಾನೆ ಹೊಳೆಯಿಂದ ಸಂಗ್ರಹಿಸಿದ ಹೊಯ್ಗೆ  ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಕುಂಬಳೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಂದು ಲಾರಿಯ ಚಾಲಕನಾದ ಮಂಗಲ್ಪಾಡಿಯ ಮೊಹಮ್ಮದ್ ಸಮೀರ್ (41) ಎಂಬಾತನನ್ನು ಸೆರೆಹಿಡಿಯಲಾಗಿದೆ. ಇನ್ನೊಂದು ಲಾರಿಯ ಚಾಲಕ ಓಡಿ ಪರಾರಿಯಾಗಿದ್ದಾನೆಂದು ಪೊಲೀಸರು  ತಿಳಿಸಿದ್ದಾರೆ. ಇತ್ತೀಚೆಗಷ್ಟೇ ವಳಯಂನಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ …

ಅಸೌಖ್ಯ ಬಾಧಿಸಿ ಮೃತ್ಯು

ಕಾಸರಗೋಡು: ನೆಲ್ಲಿಕುಂಜೆ ಬೀರಂತಬೈಲು ನಿವಾಸಿ ಪಿ. ಎಸ್. ಗುಡ್ಡೆ ನಿವಾಸಿ ರಾಮ ಯಾನೆ ಸಂಜೀವ ಕೊಪ್ಪಳ ಎಂಬವರ ಪುತ್ರ ಪಿ.ಎಸ್. ಚಂದ್ರ (51) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಹಿಂದೆ ಕೆಎಸ್‌ಇಬಿಯಲ್ಲಿ ತಾತ್ಕಾಲಿಕ ನೌಕರನಾಗಿದ್ದ ಇವರು ಪ್ರಸ್ತುತ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ರಸಿಕ, ಭಾಗ್ಯಶ್ರೀ, ಸಹೋದರ- ಸಹೋದರಿಯರಾದ ರವಿಚಂದ್ರ, ಸೀತಾದೇವಿ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಚಂದ್ರರ ತಾಯಿ ರಾಧಾ ಹಾಗೂ …

ಟೊರೆಂಟೋದಲ್ಲಿ ಹೊತ್ತಿ ಉರಿದ ವಿಮಾನ

ಟೊರೆಂಟೋ:  ಲ್ಯಾಂಡ್ ಆಗಿ ರನ್‌ವೇಯಲ್ಲಿ ಸಾಗುವಾಗ ವಿಮಾನ ಮಗುಚಿ ಹೊತ್ತಿ ಉರಿದ ಘಟನೆ ಸಂಭವಿಸಿದೆ. ಕೆನಡದ ರಾಜಧಾನಿ ಟೊರೆಂಟೋದಲ್ಲಿ ಘಟನೆ ನಡೆದಿದೆ. ೮೦ ಜನರನ್ನು ಹೊತ್ತು ಆಗಮಿಸಿದ್ದ ಡೆಲ್ಟಾ ಏರ್‌ಲೈನ್ ವಿಮಾನ ರನ್‌ವೇಯಲ್ಲಿ ಮುಂದಕ್ಕೆ ಸಾಗುತ್ತಿರುವಾಗ ಅಪಘಾತ ಸಂಭವಿಸಿದ್ದು, ೧೮ ಮಂದಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಮಗು ಸೇರಿದಂತೆ ಓರ್ವ ವ್ಯಕ್ತಿ ಹಾಗೂ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಮಾನ ಅಮೆರಿಕಾದಿಂದ ಟೊರೆಂಟೋಕ್ಕೆ ತಲುಪಿತ್ತು.

ಕೇರಳದಲ್ಲಿ ಎಡರಂಗ ಮತ್ತು ಬಿಜೆಪಿ ಮಧ್ಯೆ ಅನೈತಿಕ ಮೈತ್ರಿ-ಡಿ.ಕೆ. ಶಿವಕುಮಾರ್

ಪೆರಿಯ: ಕೇರಳ ರಾಜಕೀಯದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಅನೈತಿಕ ಮೈತ್ರಿ ಏರ್ಪಟ್ಟಿದೆ ಎಂದೂ, ಕೇರಳ ವಿಧಾನಸಭೆಗೆ  ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಈ ಅನೈತಿಕ ಮೈತ್ರಿಯನ್ನು ಜನರು ತಿರಸ್ಕರಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ್ನು ಅಧಿಕಾರಕ್ಕೇರಿಸಲಿದ್ದಾರೆಂದು ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಅಧಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪೆರಿಯ ಕಲ್ಯೋಟ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್‌ರ ಆರನೇ ಸಂಸ್ಮರಣಾ ಕಾರ್ಯಕ್ರಮವನ್ನು ನಿನ್ನೆ ಕಲ್ಯೋಟ್‌ನಲ್ಲಿ ಉದ್ಘಾಟಿಸಿ ಶಿವಕುಮಾರ್ ಮಾತನಾಡುತ್ತಿದ್ದರು. ಯಾರಿಗೂ ನಂಬಲು ಸಾಧ್ಯವಾಗದ ರೀತಿಯಲ್ಲಿ …

ಸಾಲ ತೆಗೆದು ಸ್ಮಾರ್ಟ್ ಫೋನ್ ಖರೀದಿಸಿದ ಪತ್ನಿಗೆ ಇರಿದ ಪತಿ: ಚಿಕಿತ್ಸೆ ಮಧ್ಯೆ ಯುವತಿ ಮೃತ್ಯು

ತೃಶೂರು: ಪತಿ ಇರಿದು ಗಾಯಗೊಳಿಸಿದ ಯುವತಿ ಮೃತಪಟ್ಟರು. ಅಷ್ಟಮಿಚ್ಚಿರ ನಿವಾಸಿ ಗ್ರೀಷ್ಮಾ (35) ಮೃತಪಟ್ಟ ಯುವತಿ. ಜನವರಿ 29ರಂದು ರಾತ್ರಿ ಪತಿ ವಾಸನ್ ಗ್ರೀಷ್ಮಾಳನ್ನು ಇರಿದು ಗಾಯಗೊಳಿಸಿದ್ದನು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮಕ್ಕಳ ಮುಂಭಾಗದಲ್ಲೇ ಕತ್ತಿಯಿಂದ ಗ್ರೀಷ್ಮಾಳಿಗೆ ಕಡಿದು ಕೈಕಾಲುಗಳಿಗೆ ಗಂಭೀರ ಗಾಯಗೊಳಿಸಿದ್ದನು. ಬಳಿಕ ಈಕೆಯನ್ನು ಎರ್ನಾಕುಳಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮುಂಜಾನೆ ಈಕೆ ಮೃತಪಟ್ಟಿದ್ದಾರೆ. ಇದೇ ವೇಳೆ  ಸಾಲ ತೆಗೆದು ಸ್ಮಾರ್ಟ್ ಫೋನ್ ಖರೀದಿಸಿರುವುದೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಸೂಪರ್ ಮಾರ್ಕೆಟ್‌ನಲ್ಲಿ ನೌಕರೆಯಾದ ಗ್ರೀಷ್ಮಾ …

ಮಧೂರು ದೇಗುಲ ಬ್ರಹ್ಮಕಲಶೋತ್ಸವ ಪದಾಧಿಕಾರಿಗಳಿಂದ ರಾಘವೇಶ್ವರ ಶ್ರೀ ಭೇಟಿ

ಮಧೂರು: ಕ್ಷೇತ್ರದಲ್ಲಿ ಮಾರ್ಚ್ ೨೭ರಿಂದ ಜರಗಲಿರುವ ಬ್ರಹ್ಮಕಲಶೋ ತ್ಸವ, ಮೂಡಪ್ಪ ಸೇವೆಯ ಪೂರ್ವ ಭಾವಿಯಾಗಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಕಿಳಿಂಗಾರು ಸಾಯಿ ಮಂದಿರದಲ್ಲಿ ಭೇಟಿಯಾಗಿ ಸಮಿತಿ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕುಳೂರು ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದರು.

ಅಕ್ಷತಾರಾಜ್ ಪೆರ್ಲರ ಅವಲಕ್ಕಿ ಪವಲಕ್ಕಿ ಕೃತಿಗೆ ದತ್ತಿ ಪುರಸ್ಕಾರ

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪುರಸ್ಕಾರ ಪ್ರಕಟವಾಗಿದ್ದು, ಕಾಸರಗೋಡು ಜಿಲ್ಲೆಯ ಲೇಖಕರಿಗೆ ಮೀಸಲಾದ ಡಾ.ರಮಾನಂದ ಬನಾರಿ ಮತ್ತು ಶಾಂತಾಕುಮಾರಿ ದತ್ತಿನಿಧಿಗೆ ಲೇಖಕಿ ಅಕ್ಷತಾ ರಾಜ್ ಪೆರ್ಲರ ಅವಲಕ್ಕಿ ಪವಲಕ್ಕಿ ಅಂಕಣ ಬರೆಹಗಳ ಸಂಕಲನ ಆಯ್ಕೆಯಾಗಿದೆ. ಕೃತಿಯ ಹಸ್ತಪ್ರತಿಯು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗೀ ರೈ ದತ್ತಿನಿಧಿಗೂ ಭಾಜನವಾಗಿತ್ತು. ಅವಲಕ್ಕಿ ಪವಲಕ್ಕಿ ಕಾರವಲ್‌ನಲ್ಲಿ ಪ್ರಕಟವಾದ ದಿನಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರೆಹಗಳ ಒಟ್ಟು ಸಂಕಲನವಾಗಿದ್ದು ಮಂಗಳೂರಿನ ಸಾಹಿತ್ಯಾ ಪ್ರಕಾಶನ ಕೃತಿಯನ್ನು …

ಸಿಪಿಎಂ ಶಾಂತಿನಗರ ಬ್ರಾಂಚ್ ಸಮಿತಿ ಕಚೇರಿಗೆ ಶಿಲಾನ್ಯಾಸ

ಮೀಯಪದವು: ಸಿಪಿಎಂ ಕುಳೂರು ಶಾಂತಿನಗರ ಬ್ರಾಂಚ್ ಸಮಿತಿ ಕಚೇರಿ ಲಿಂಗಪ್ಪ ಪೂಜಾರಿ ಸ್ಮಾರಕ ಮಂದಿರಕ್ಕೆ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್ ಶಿಲಾನ್ಯಾಸ ಗೈದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಮುಖ್ಯ ಅತಿಥಿಗಳಾಗಿದ್ದರು. ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದರು. ಚಂದ್ರಹಾಸ ಪೂಜಾರಿ ಪಕ್ಷದ ಕಚೇರಿಗೆ ಬೇಕಾಗಿ ಕೇಮಜಾಲು ಎಂಬಲ್ಲಿ ೩ ಸೆಂಟ್ಸ್ ಸ್ಥಳವನ್ನು ಉಚಿತವಾಗಿ ನೀಡಿದ್ದರು. ಇಲ್ಲಿ ಮಂದಿರಕ್ಕೆ ಶಿಲಾನ್ಯಾಸ ನಡೆಸಲಾಗಿದೆ. ಮುಖಂಡರಾದ ಡಿ ಕಮಲಾಕ್ಷ, …

ದಂಪತಿ ಮಧ್ಯೆಗಿನ ವಿವಾದ ಮಾತುಕತೆ ಮೂಲಕ ಬಗೆಹರಿಸಲು ನಿರಾಕರಿಸಿದ ದ್ವೇಷ: ಯುವಕನನ್ನು ತಡೆದು ನಿಲ್ಲಿಸಿ ಕೊಲೆಗೆತ್ನ: 5 ಮಂದಿ ವಿರುದ್ಧ ಕೇಸು

ಬದಿಯಡ್ಕ: ಪತಿ ಹಾಗೂ ಪತ್ನಿ ಮಧ್ಯೆಗಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ನಿರಾಕರಿಸಿದ ದ್ವೇಷದಿಂದ ಯುವಕನನ್ನು ತಂಡವೊಂದು ತಡೆದು ನಿಲ್ಲಿಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ ಬಗ್ಗೆ ದೂರಲಾಗಿದೆ. ಬೇಳ ಮೇಲಿನ ನೀರ್ಚಾಲ್‌ನ ಜಯಶ್ರೀ ನಿಲಯದ ಬಿ. ಸೂರಜ್ (27)ರ ಮೇಲೆ ತಂಡ ಹಲ್ಲೆಗೈದಿದೆ. ಇವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಐದು ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಮಾಡತ್ತಡ್ಕದ ಕೆ. ಧೀರಜ್ (28), ನೆಕ್ರಾಜೆ ಚೂರಿಪಳ್ಳದ ಕೆ. ಸುದೀಶ್ (25), ಮಧೂರಿನ ಶೈಲೇಶ್ (20), …