ಕೊಯಿನಾಡು ಭೀಕರ ಅಪಘಾತ : ಉಳ್ಳಾಲದಿಂದ ತೆರಳುತ್ತಿದ್ದ 4 ಮಂದಿ ಮೃತ್ಯು

ಸುಳ್ಯ: ಉಳ್ಳಾಲದಿಂದ ಕಾರಿನಲ್ಲಿ ತೆರಳುತ್ತಿದ್ದ ನಾಲ್ಕು ಮಂದಿ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಲಾರಿ ಹಾಗೂ ಇವರು ಸಂಚರಿಸಿದ ಕಾರು ನಡುವೆ ಢಿಕ್ಕಿ ಸಂಭವಿಸಿ ಅಪಘಾತ ಉಂಟಾಗಿದೆ. ಮಡಿಕೇರಿ ಕೊಯನಾಡುನಲ್ಲಿ ಅಪಘಾತ ಸಂಭವಿಸಿದೆ.  ಗೋಣಿಕೊಪ್ಪ ಹುಣಸೂರಿನ ನಿಹಾದ್, ರಿಸ್ವಾನ್, ರಾಶಿಬ್, ರಿಷು ಎಂಬಿವರು ಮೃತಪಟ್ಟವರು. ಢಿಕ್ಕಿಯಾಘಾತಕ್ಕೆ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದ ಬಗ್ಗೆ ತಿಳಿದು ಸ್ಥಳಕ್ಕೆ ತಲುಪಿದ್ದ ಕುಟುಂಬ ಸದಸ್ಯರ ಕಾರಿಗೆ ಲಾರಿ ಢಿಕ್ಕಿ ಹೊಡೆದು ಕಾರಿನ ಮುಂಭಾಗ ಜಖಂ ಗೊಂಡಿದೆ. ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. …

ತಂಬಾಕು ಉತ್ಪನ್ನ ಸಹಿತ ಇಬ್ಬರ ಸೆರೆ  

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬೆರಿಪದವು ಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ತೀವ್ರಗೊಂ ಡಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರ ಕೈಯಿಂದ ಒಟ್ಟು 150 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ಬೆರಿಪದವು ಕೊಜಪ್ಪೆ ನಿವಾಸಿಗಳಾದ  ಗಂಗಾಧರನ್ (34) ದಿನಕರನ್ ಕೆ (36) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್‌ಐಗಳಾದ ಉಮೇಶ್ ಹಾಗೂ ರತೀಶ್ ನಡೆಸಿದ ಕಾರ್ಯಾಚರಣೆ ವೇಳೆ ಪಾನ್ ಮಸಾಲೆ ಪತ್ತೆಯಾಗಿದೆ.  ನಿನ್ನೆ ಬೆಳಿಗ್ಗೆ 11.15ರ ವೇಳೆ …

ಬಂದ್ಯೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ: ಮಾಹಿತಿಯಿದ್ದವರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕರೆ

ಕುಂಬಳೆ: ಬಂದ್ಯೋಡಿನಲ್ಲಿ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಬಂದ್ಯೋಡಿನ ಹಳೆಯ ಸರ್ವೀಸ್ ಸ್ಟೇಶನ್‌ನ ಕಟ್ಟಡದಲ್ಲಿ ಈ ತಿಂಗಳ 14ರಂದು ಸಂಜೆ ಮೃತದೇಹ ಪತ್ತೆಯಾಗಿತ್ತು.  ಸುಮಾರು 50 ವರ್ಷ ಪ್ರಾಯದ ಪುರುಷನ ಮೃತದೇಹ ಪತ್ತೆಯಾಗಿದ್ದು, ಆದರೆ ಇದುವರೆಗೆ ನಡೆಸಿದ ತನಿಖೆಯಲ್ಲಿ ಮೃತ ವ್ಯಕ್ತಿಯ ಗುರುತು ಹಚ್ಚಲಾಗಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇದೇ ವೇಳೆ ಮೃತದೇಹ …

ವಿದ್ಯುತ್ ಬೇಲಿಯಿಂದ ಶಾಕ್ ತಗಲಿ ಇಬ್ಬರು ಸಹೋದರರು ಮೃತ್ಯು

ಕಲ್ಪೆಟ್ಟ: ವನ್ಯಮೃಗಗಳ ದಾಳಿ ತಡೆಗಟ್ಟಲು ಸ್ಥಾಪಿಸಿದ್ದ ವಿದ್ಯುತ್ ಬೇಲಿ ಯಿಂದ ಶಾಕ್ ತಗಲಿ ಇಬ್ಬರು ಸಹೋ ದರರು ಮೃತಪಟ್ಟ ಘಟನೆ ನಡೆದಿದೆ. ವಯನಾಡ್ ವಾಳವಟ್ಟ ಕರಿಂಗಣಿಕುನ್ನು ಎಂಬಲ್ಲಿನ ವರ್ಕಿ ಎಂಬವರ ಮಕ್ಕಳಾದ ಅನೂಪ್ ಹಾಗೂ ಶಿನು ಎಂಬವರು ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಇವರು ಬಾಡಿಗೆಗೆ ಪಡೆದು ನಡೆಸುತ್ತಿದ್ದ ಕೋಳಿ ಸಾಕಣೆ ಕೇಂದ್ರಕ್ಕೆ ವನ್ಯ ಮೃಗಗಳು ದಾಳಿ ನಡೆಸುವುದನ್ನು ತಡೆಯಲು ವಿದ್ಯುತ್ ಬೇಲಿ ನಿರ್ಮಿಸಲಾಗಿತ್ತು. ನಿನ್ನೆ  ಬೆಳಿಗ್ಗೆ ಅಲ್ಲಿಗೆ ಸ್ಥಳದ ಮಾಲಕ   ತಲುಪಿದಾಗ ಈ ಇಬ್ಬರು ಶಾಲ್ ತಗಲಿ …

ಗ್ಯಾಸ್ ಲಾರಿ ಅಪಘಾತ: ಟ್ಯಾಂಕರ್ ತೆರವು; ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭ

ಕಾಸರಗೋಡು: ಎಲ್‌ಪಿಜಿ ಟ್ಯಾಂಕರ್ ಲಾರಿ ಮಗುಚಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಞಂಗಾಡ್ ಸೌತ್‌ನಲ್ಲಿ ನಿಯಂತ್ರಣ ಹೇರಿದ್ದ ಸಾರಿಗೆ ಸಂಚಾರವನ್ನು  ಪುನರ್ ಸ್ಥಾಪಿಸಲಾಗಿದೆ. ಶುಕ್ರವಾರ ರಾತ್ರಿ 11.30ರ ವೇಳೆ ಟ್ಯಾಂಕರ್‌ನಿಂದ  ಅನಿಲವನ್ನು ಸ್ಥಳಾಂತರಿಸುವ ಕೆಲಸ ಪೂರ್ತಿಯಾಗಿತ್ತು. 2ಗಂಟೆಯ ವೇಳೆಗೆ ಪಡನ್ನಕ್ಕಾಡ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಆರಂಭಿಸಲಾಗಿದೆ. ಸಂಭವಿಸ ಬಹುದಾಗಿದ್ದ ಭಾರೀ ದುರಂತವನ್ನು ಕಾರ್ಯದಕ್ಷತೆ ಹಾಗೂ ಜಾಗರೂ ಕತೆಯಿಂದ ಕಾರ್ಯಾಚರಿಸಿ ಹೊರತುಪಡಿಸಿದ ಎಲ್ಲರಿಗೂ ಜಿಲ್ಲಾಡಳಿತ ಅಭಿನಂದನೆ ತಿಳಿಸಿದೆ. ಹಗಲು-ರಾತ್ರಿ ದುಡಿದು ಈ ಕಾರ್ಯ ನಡೆಸಲು ಸಾಧ್ಯವಾಗಿದೆ …

ಚುನಾವಣೆ ಸಮಯದಲ್ಲಿ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣ: ಇಬ್ಬರಿಗೆ 2 ವರ್ಷ ಕಠಿಣ ಸಜೆ, ದಂಡ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಸಾಗಿಸುತ್ತಿದ್ದ 4.8 ಗ್ರಾಂ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣದಲ್ಲಿ ಇಬ್ಬರಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ದಂಡ ಶಿಕ್ಷೆ ಹೇರಿದೆ. ಪಡನ್ನಕ್ಕಾಡ್ ಕರುವಳಂ ಶೆರೀಫ್ ಮಂಜಿಲ್ ನಿವಾಸಿ ಸಿ.ಎಚ್. ಸಾಬಿರ್ (29), ಪಡನ್ನಕ್ಕಾಡ್ ನಶ್ವರಂ ನಿವಾಸಿ ಸಿ.ಪಿ. ಜಮಾಲ್ (27) ಎಂಬವರಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಧೀಶೆ ಕೆ. ಪ್ರಿಯ ಈ ಶಿಕ್ಷೆ ಘೋಷಿಸಿದ್ದಾರೆ. ದಂಡ ಪಾವತಿಸದಿದ್ದರೆ ಮೂರು ತಿಂಗಳು …

ಪೈವಳಿಕೆಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿ

ಪೈವಳಿಕೆ: ಪಂಚಾಯತ್‌ನ 11ನೇ ವಾರ್ಡ್‌ಗೊಳಪಟ್ಟ ಪ್ರದೇಶದಲ್ಲಿ ಮೂರು ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ. ಬೀಡುಬೈಲು ಎಂಬಲ್ಲಿ ಪಂಚಾಯತ್ ಮಾಜಿ ಸದಸ್ಯ ಸುಂದರ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬಿದ್ದು ಹಾನಿಯುಂಟಾಗಿದೆ. ಮೊನ್ನೆ ರಾತ್ರಿ 12 ಗಂಟೆ ವೇಳೆಗೆ ಸುರಿದ ಮಳೆ, ಗಾಳಿಗೆ ಘಟನೆ ನಡೆದಿದೆ. ಇದಲ್ಲದೆ ಮನೆ ಹಿತ್ತಿಲಲ್ಲಿದ್ದ ಹಲಸಿನ ಮರ ಬಿದ್ದು ವಿದ್ಯುತ್ ಸಂಪರ್ಕ ವಿಚ್ಛೇಧಿಸಲಾಗಿತ್ತು. ಇದೇ ವೇಳೆ ಸಮೀಪದ ಸುಬ್ಬಣ್ಣ ಮೂಲ್ಯ ಎಂಬವರ ಹೆಂಚಿನ ಮನೆಯ ಮೇಲೆ ಹಲಸಿನ ಮರ ಬಿದ್ದು ಆ …

ಸರಕಾರ ನೀಡಿದ ಸ್ಥಳ ಸಂರಕ್ಷಿಸಲು ಒತ್ತಾಯಿಸಿ ಬೇಳ ಗ್ರಾಮ ಕಚೇರಿಗೆ ಮುತ್ತಿಗೆ

ನೀರ್ಚಾಲು: ಸರಕಾರ ನೀಡಿದ ಜಾಗ, ರಸ್ತೆ, ಮನೆ ಎಂಬಿವುಗಳನ್ನು ಸಂರಕ್ಷಿ ಸಬೇಕೆಂದು ಒತ್ತಾಯಿಸಿ ಏಣಿಯರ್ಪು ಲೈಫ್ ಹೌಸ್ ವಿಲ್ಲಾದ  ನಿವಾಸಿಗಳು ಬೇಳ ಗ್ರಾಮ ಕಚೇರಿಗೆ ನಿನ್ನೆ  ಮಾರ್ಚ್ ನಡೆಸಿದರು. ಏಣಿಯರ್ಪು ಲೈಫ್ ವಿಲ್ಲಾದ ನಿವಾಸಿಗಳು ರೂಪೀಕರಿಸಿದ  ಕ್ರಿಯಾ ಸಮಿತಿ ಆಶ್ರಯದಲ್ಲಿ  ಚಳವಳಿ ನಡೆಸಲಾಯಿತು. ಇಲ್ಲಿ ಸರಕಾರ ನೀಡಿದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸು ತ್ತಿದ್ದಾರೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ.  ಮಧೂರು ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯನ್ನು ಪೊಲೀಸರು ತಡೆದರು. ಬಳಿಕ  ನಡೆದ ಪ್ರತಿಭಟನೆಯನ್ನು ಪುತ್ತಿಗೆ ಪಂಚಾಯತ್  ಅಧ್ಯಕ್ಷ …

ತೀಯಾ ಮಹಾಸಭಾ ಜಿಲ್ಲಾ ಸಮ್ಮೇಳನ ನಾಳೆ

ಕಾಸರಗೋಡು: ತೀಯಾ ಮಹಾಸಭಾ ಜಿಲ್ಲಾ ಸಮ್ಮೇಳನ ‘ಆರೂಢಂ ೨೦೨೫’ ಹಾಗೂ ಪ್ರಥಮ ಆದಿ ದಿವ್ಯನ್ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ ವಿದ್ಯಾನಗರ ಬಳಿಯ ಉದಯಗಿರಿ ಶ್ರೀಹರಿ ಆಡಿಟೋರಿ ಯಂನಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಲೇಖಕ ಪದ್ಮಶ್ರೀ ಬಾಲನ್ ಪೂತೇರಿ ಮಲಪ್ಪುರ ಉದ್ಘಾಟಿಸುವರು. ತಳಂಗರೆ ಶ್ರೀ ಚೀರುಂಬಾ ಭಗವತೀ  ದೇವಸ್ಥಾನದ ಆಚಾರಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ದೇವಸ್ಥಾನದ ಆಚಾರ ಸ್ಥಾನಿಕ ಮಂಜು ಕಾರ್ನವರ್ ದೀಪ ಪ್ರಜ್ವಲನೆ ನಡೆಸುವರು. ತೀಯಾ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಸಿ. ವಿಶ್ವಂಭರನ್ …

ಚೆರ್ಕಳಂ ಅಬ್ದುಲ್ಲ ಸಂಸ್ಮರಣೆ ನಾಳೆ

ಕಾಸರಗೋಡು: ಮುಸ್ಲಿಂ ಲೀಗ್‌ನ ಹಿರಿಯ ಮುಖಂಡ ನಾಗಿದ್ದ ಹಾಗೂ ಐಕ್ಯರಂಗದ ಜಿಲ್ಲಾ  ಅಧ್ಯಕ್ಷನಾಗಿದ್ದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲರ ೭ನೇ ವಾರ್ಷಿಕ ಸಂಸ್ಮರಣೆ ನಾಳೆ ಅಪರಾಹ್ನ ೨ ಗಂಟೆಗೆ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಚೇರಿ ಟಿ.ಎ. ಇಬ್ರಾಹಿಂ ಸ್ಮಾರಕ ಮಂದಿರದಲ್ಲಿ ನಡೆಯಲಿದೆ. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು, ವಿಧಾನಸಭಾ ಮಂಡಲ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮೊದಲಾದವರು ಭಾಗವಹಿಸುವರೆಂದು ಕಲ್ಲಟ್ರ ಮಾಹಿನ್ ಹಾಜಿ, ಎ. ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.