ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಣ: ಚಾಲಕನ ಸೆರೆ

 ಕುಂಬಳೆ: ಶಾಲಾ ಮೈದಾನ ದಲ್ಲಿ ಅಪಾ ಯಕಾರಿ ರೀತಿ ಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸಿದ ಯುವಕನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಾರು ಕಸ್ಟಡಿಗೆ ತೆಗೆಯಲಾಗಿದೆ. ಬಂದ್ಯೋಡು ಅಡ್ಕ ವೀರನಗರದ ಮಹಮ್ಮದ್ ಶಡ್ಮಾನ್ (21) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ಘಟನೆ ನಡೆದಿದೆ. ಶಾಲಾ ಮೈದಾನದಲ್ಲಿ ಧೂಳು ಹಬ್ಬುತ್ತಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತಲುಪಿದಾಗ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ …

ದೈವ ಕಲಾವಿದ ಕುಸಿದುಬಿದ್ದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ದೈವ ಕಲಾವಿದರೊ ಬ್ಬರು ತರವಾಡು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಉಳ್ಳೋಡಿಯ ದಿ| ಮಂಚ ಎಂಬವರ  ಪುತ್ರ ಎಂ.ಕೆ. ಕೃಷ್ಣ (57) ಮೃತಪಟ್ಟ ವ್ಯಕ್ತಿ. ತರವಾಡು ಮನೆಯಲ್ಲಿ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ನಿನ್ನೆ ಪುತ್ರ ಈ ಮನೆಗೆ ತಲುಪಿದಾಗ ಕೃಷ್ಣ ಛಾವಡಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಕ್ತ ಸೋರಿಕೆಯಾಗಿ ಸಾವು ಸಂಭವಿಸಿದೆ ಯೆಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಬದಿಯಡ್ಕ ಪೊಲೀಸರು ತಲುಪಿ ಮಹಜರು ನಡೆಸಿದ …

ದೆಹಲಿ, ಬಿಹಾರದಲ್ಲಿ ತೀವ್ರ ಭೂಕಂಪ

ನವದೆಹಲಿ: ದೆಹಲಿ ಮತ್ತು ಬಿಹಾರದಲ್ಲಿ ಇಂದು ಮುಂಜಾನೆ ತೀವ್ರ ಭೂಕಂಪ ಸಂಭವಿಸಿದೆ. ಭೂಕಂಪ ಎಷ್ಟು ಪ್ರಬಲವಾಗಿತ್ತೆಂದರೆ ಮನೆಯ ಹಾಸಿಗೆ ಯಿಂದ ಹಿಡಿದು ಕಿಟಕಿ ಮತ್ತು ಮನೆ ಸಾಮಗ್ರಿಗಳೆಲ್ಲಾ ಕೆಲವು ಸೆಕೆಂಡ್‌ಗಳ ಕಾಲ ಅಲುಗಾಡಿದೆ. ದೆಹಲಿಯಲ್ಲಿ ಭೂಕಂಪ ನಡೆದಿದ್ದು ಹತ್ತು ವರ್ಷಗಳ ಬಳಿಕ ಇದು ಮೊದಲ ಬಾರಿಯಾಗಿದೆ. ಭೂಕಂಪದ ಪರಿಣಾಮವಾಗಿ ಭೂಮಿಯು ಕೆಲವು ಸೆಂಕೆಂಡುಗಳ ಕಾಲ ನಡುಗಿತು. ಆ ವೇಳೆ ಗಾಢ ನಿದ್ರೆಯಲ್ಲಿದ್ದ ಜನರು ಪ್ರಾಣಭಯದಿಂದ ತಮ್ಮ ಮನೆಗಳಿಂದ ಹೊರಕ್ಕೆ ಓಡಲು ಪ್ರಾರಂಭಿಸಿದರು. ಆದರೆ ಭೂಕಂಪದಲ್ಲಿ ಯಾವುದೇ ಹಾನಿಯಾದ …

ಸಿಪಿಎಂ ನೇತಾರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಕೊಡಕ್ಕಾಡ್ ನಲ್ಲಿ ಸಿಪಿಎಂ ನೇತಾರನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲ್ಲಿ ಪತ್ತೆಯಾಗಿದ್ದಾರೆ. ವೆಳ್ಳಚ್ಚಾಲ್ ಟೌನ್ ಬ್ರಾಂಚ್ ಸೆಕ್ರೆಟರಿ ಪುನ್ಯಕೋಡನ್ ಚಂದ್ರನ್ (55) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಮನೆಯ ಏಣಿ ಮೆಟ್ಟಿಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ವಿಷಯ ತಿಳಿದು ಚೀಮೇನಿ ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಡೊಯ್ಯಲಾಯಿತು. ಈ ಹಿಂದೆ ಗಲ್ಫ್‌ನಲ್ಲಿದ್ದ ಚಂದ್ರನ್ ವೆಳ್ಳಚ್ಚಾಲ್ ಪೇಟೆಯಲ್ಲ್ಲಿ ಅಂಗಡಿ ನಡೆಸುತ್ತಿದ್ದರು. ಆರ್ಥಿಕ …

ಕೃಪೇಶ್, ಶರತ್‌ಲಾಲ್ ಸಂಸ್ಮರಣೆ : ಇಂದು ಅಪರಾಹ್ನ ಡಿ.ಕೆ. ಶಿವಕುಮಾರ್ ಕಲ್ಯೋಟ್‌ಗೆ

ಕಾಸರಗೋಡು: ಪೆರಿಯ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್‌ರ ಆರನೇ ಸಂಸ್ಮರಣಾ ಕಾರ್ಯಕ್ರಮ ಇಂದು ಬೆಳಿಗ್ಗೆ ಆರಂಭಗೊಂಡಿತು. ಮೃತರ ಸ್ಮೃತಿ ಮಂಟಪ ದಲ್ಲಿ ಕಾಂಗ್ರೆಸ್, ಯೂತ್ ಕಾಂಗ್ರೆಸ್ ನೇತಾರರು, ಕಾರ್ಯಕರ್ತರು, ಕೃಪೇಶ್ ಮತ್ತು ಶರತ್‌ಲಾಲ್‌ರ ಕುಟುಂಬದವರು, ಸ್ನೇಹಿತರು ಸೇರಿದಂತೆ ಪುಷ್ಪಾರ್ಚನೆ ನಡೆಸಿದರು. ಸಂಜೆ 3 ಗಂಟೆಗೆ ಕಲ್ಯೋಟ್‌ನಲ್ಲಿ ನಡೆಯುವ ಸಂಸ್ಮರಣಾ ಸಭೆಯನ್ನು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸು ವರು. ಕಾಂಗ್ರೆಸ್‌ನ ಕೇರಳ ಘಟಕ ಅಧ್ಯಕ್ಷ ಕೆ. ಸುಧಾಕರನ್, ಸಂಸ ದರಾದ ರಾಜ್‌ಮೋಹನ್ …

ಫೆಡರಲ್ ಬ್ಯಾಂಕ್ ಕಳವು: ಆರೋಪಿ ಸೆರೆ

ತೃಶೂರು: ಫೆಡರಲ್ ಬ್ಯಾಂಕ್‌ನ ಪೋಟ ಶಾಖೆಯಲ್ಲಿ ಹಾಡಹಗಲು ಕಳವು ನಡೆಸಿದ ಪ್ರಕರಣದ ಆರೋಪಿ ಸೆರೆಯಾಗಿದ್ದಾನೆ. ಚಾಲಕ್ಕುಡಿ ನಿವಾಸಿ ರಿಜೋ ಸೆರೆಯಾದ ವ್ಯಕ್ತಿ. ಈತನಿಂದ 10 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಸಾಲ ತೀರಿಸಲು ದರೋಡೆ ನಡೆಸಿರುವುದಾಗಿ ಈತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ತೃಶೂರು ರೂರಲ್ ಪೊಲೀಸ್ ಈತನನ್ನು ಬಂಧಿಸಿದೆ.  ಶುಕ್ರವಾರ ಮಧ್ಯಾಹ್ನ ಕಳವು ನಡೆಸಲಾಗಿದೆ. ಹೆಲ್ಮೆಟ್, ಮಾಸ್ಕ್ ಧರಿಸಿ ಸ್ಕೂಟರ್‌ನಲ್ಲಿ ತಲುಪಿದ ಈತ ಬ್ಯಾಂಕ್‌ನ ಒಳಗೆ ನುಗ್ಗಿ ಕ್ಯಾಶ್ ಕೌಂಟರ್ ಸಮೀಪದಲ್ಲಿದ್ದ ಇಬ್ಬರು ನೌಕರರನ್ನು ಹಾಗೂ ಆಹಾರ ಸೇವಿಸುತ್ತಿದ್ದವರನ್ನೆಲ್ಲಾ …

ಉಪ್ಪಳದಲ್ಲಿ ಕಾವಲುಗಾರನ ಕೊಲೆಗೈದ ಪ್ರಕರಣ : ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ

ಉಪ್ಪಳ: ಉಪ್ಪಳ ಮೀನು ಮಾರುಕಟ್ಟೆ ಬಳಿಯ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಗಳನ್ನು ಐದು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಉಪ್ಪಳ ಪತ್ವಾಡಿ ನಿವಾಸಿಯಾದ ಸವಾದ್ (24) ಎಂಬಾತನನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ಕಸ್ಟಡಿಗೆ ನೀಡಿದೆ.  ಕೊಲ್ಲಂ ಏಳುಕೋಣ್ ನಿವಾಸಿಯೂ 15 ವರ್ಷಗಳಿಂದ ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದ ಸುರೇಶ್ (48) ಫೆಬ್ರವರಿ 11ರಂದು ರಾತ್ರಿ ಇರಿತಕ್ಕೀಡಾಗಿ ಸಾವನ್ನಪ್ಪಿದ್ದರು.  ಇಬ್ಬರು ಜೊತೆಯಾಗಿ ಮದ್ಯ ಸೇವಿಸುತ್ತಿದ್ದಾಗ ನಡೆದ …

ಮಂಜೇಶ್ವರ ಸ್ನೇಹಾಲಯದಿಂದ ಯುವಕ ನಾಪತ್ತೆ

ಉಪ್ಪಳ: ಒಂದು ವಾರ ಹಿಂದೆ ಮಂಜೇಶ್ವರ ಪಾವೂರಿನ ಸ್ನೇಹಾಲಯಕ್ಕೆ ತಲುಪಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಳ್ಳಾಲ ಅಲೆಕಳ ನಿವಾಸಿ ಇಸ್ಮಾಯಿಲ್‌ರ ಪುತ್ರ ಉಮ್ಮರ್ ಫಾರೂಕ್ (23) ನಾಪತ್ತೆಯಾದ ಯುವಕ. ಫೆ. 15ರಂದು ಮಧ್ಯಾಹ್ನ ದಿಂದ ಈತ ನಾಪತ್ತೆಯಾಗಿರು ವುದಾಗಿ ತಿಳಿಸಿ ತಾಯಿ ಮರಿಯಾ ಫಾತಿಮ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವಾರ ಹಿಂದೆ ಓರ್ವ ವೈದ್ಯನ ನಿರ್ದೇಶ ಪ್ರಕಾರ ಫಾರೂಕ್‌ನನ್ನು ಸ್ನೇಹಾಲಯಕ್ಕೆ ತಲುಪಿಸಲಾಗಿತ್ತು. ನಾಪತ್ತೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಎಂಡಿಎಂಎ ಸಹಿತ ಯುವಕ ಸೆರೆ

ಕೂಡ್ಲು: ಕೂಡ್ಲು ವಿವೇಕಾನಂದ ನಗರದಲ್ಲಿ ಕಾಸರಗೋಡು ಪೊಲೀಸರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ  ಮಾದಕ ವಸ್ತುವಾದ ೦.22 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಅಡೂರು ಅಡ್ಕದ ಕೆ. ಅಭಿಷೇಕ್ (29) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

ಎರಡೆಡೆ ನಡೆದ ಘಟನೆಗಳು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸೇರಿ ಇಬ್ಬರು ಮೃತ್ಯು

ಕಾಸರಗೋಡು: ಕಾಸರಗೋಡಿನಲ್ಲಿ ನಿನ್ನೆ ಕೇವಲ 30 ನಿಮಿಷಗಳ ಅಂತರದಲ್ಲಾಗಿ ನಡೆದ ಎರಡು ದುರ್ಘಟನೆಗಳ ಲ್ಲಾಗಿ ವಿದ್ಯಾರ್ಥಿ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉದುಮ ಕೋಟೆಕುನ್ನು ಶಾಲೆ ಬಳಿ ನಿವಾಸಿ ಗಲ್ಫ್ ಉದ್ಯೋಗಿ ಅಬ್ದುಲ್ ಸತ್ತಾರ್- ಎರೋಲ್‌ನ ಫರೀದಾ ದಂಪತಿ ಪುತ್ರ ಉದುಮ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಎಸ್.ವಿ. ಅಬ್ದುಲ್ಲ (13) ಮತ್ತು ವೆಸ್ಟ್ ಎಳೇರಿ ಪರಂಬ ಕುಟ್ಟಿತ್ತಾನಿನ ಕಾಂತಮಲೆ ಜೋನಿ-ಜಾನ್ಸಿ ದಂಪತಿ ಪುತ್ರ ರಿಕ್ಷಾ ಚಾಲಕ ಅಬಿನ್ ಜೋನಿ (27) ಸಾವನ್ನಪ್ಪಿದ ದುರ್ದೈವಿಗಳು. …