ಬೇಳದಲ್ಲಿ ಸಿನಿಮಾ ಚಿತ್ರೀಕರಣ ಆರಂಭ

ನೀರ್ಚಾಲು: ಕೇರಳ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊ ರೇಶನ್ ನೇತೃತ್ವದಲ್ಲಿ ನಿರ್ಮಿಸುವ ಚಲನಚಿತ್ರವಾದ ‘ಮುಂತ’ ಇದರ ಪೂಜೆ ಹಾಗೂ ಸ್ವಿಚ್ ಆನ್ ಕಾರ್ಯಕ್ರಮ ನಡೆಯಿತು. ಬೇಳ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶಾಸಕ ಎಂ. ರಾಜಗೋಪಾಲನ್ ಸ್ವಿಚ್ ಆನ್ ಕಾರ್ಯಕ್ರಮ ನೆರವೇರಿಸಿದರು.

ಅನಗತ್ಯ ಹಂಪ್: ಸೀತಾಂಗೋಳಿ-ವಿದ್ಯಾನಗರ ರಸ್ತೆಯಲ್ಲಿ ಸಂಚಾರ ಕಿರಿಕಿರಿ

ವಿದ್ಯಾನಗರ: ವಿದ್ಯಾನಗರದಿಂದ ಸೀತಾಂಗೋಳಿ ವರೆಗೆ ಸಾಗುವ ರಸ್ತೆಯಲ್ಲಿ ಹಂಪ್‌ಗಳದ್ದೇ ಕಾರುಬಾರು ಎಂದು ಚಾಲಕರು ದೂರಿದ್ದಾರೆ. ಅನಗತ್ಯ ಹಂಪ್‌ಗಳಿಂದಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂದು ಚಾಲಕರು ತಿಳಿಸುತ್ತಾರೆ. ಈ ರಸ್ತೆಯಲ್ಲಿ ಒಟ್ಟು 12 ಹಂಪ್‌ಗಳಿದ್ದು, ಇದರಲ್ಲಿ ರೋಯಲ್ ಕನ್ವೆನ್ಷನ್ ಹಾಲ್, ಎರಡನೇ ಮೈತ್ರಿ ಕಾಲನಿ ಕಳೆದು ಇಝ್ಝತ್‌ನಗರಕ್ಕೆ ತಲುಪುವಲ್ಲಿ ಹಂಪ್‌ಗಳ ಅಗತ್ಯವೇ ಇಲ್ಲವೆಂದು ಚಾಲಕರು ತಿಳಿಸುತ್ತಾರೆ. ಇಲ್ಲಿರುವ ಹಂಪ್‌ಗಳಿಂದಾಗಿ ವಾಹನಗಳ ವೇಗ ಕಡಿತಗೊಳಿಸುವಾಗ ಹಿಂದಿನಿಂದ ಬರುವ ವಾಹನಗಳ ಚಾಲಕರಿಗೆ ಪಕ್ಕನೆ ಅರಿವಾಗದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ವಾಹನ …

ಪೆರಿಯ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ: ಪರೋಲ್‌ಗಾಗಿ ಅರ್ಜಿ ಸಲ್ಲಿಸಿದ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳು

ಕಾಸರಗೋಡು:  ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತ ರಾಗಿದ್ದ  ಕೃಪೇಶ್ ಮತ್ತು ಶರತ್ ಲಾಲ್‌ರನ್ನು  ಕೊಲೆಗೈದ ಪ್ರಕರಣದಲ್ಲಿ ಎರ್ನಾಕುಳಂನ ಸಿಬಿಐಯ ವಿಶೇಷ ನ್ಯಾಯಾಲಯ ಅವಳಿ ಜೀವಾವಧಿ ಸಜೆ ವಿಧಿಸಿದ್ದ ಆರೋಪಿಗಳ ಪೈಕಿ ಇಬ್ಬರು ಪರೋಲ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣದ ಎಂಟನೇ ಆರೋಪಿ ಸುಭೀಶ್ ವೆಳುತ್ತೋಳಿ ಮತ್ತು 15ನೇ ಆರೋಪಿ  ಎ. ಸುರೇಂದ್ರನ್ ಅಲಿಯಾಸ್ ವಿಷ್ಣು ಪರೋಲ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವಳಿ ಜೀವಾವಧಿ ಶಿಕ್ಷೆಗೊಳಗಾದ ಈ ಇಬ್ಬರು ಈಗ ಕಣ್ಣೂರು ಸೆಂಟ್ರಲ್ …

ಬೀದಿನಾಯಿಗಳು ಬೆನ್ನಟ್ಟಿದಾಗ ಓಡಿದ ಮದ್ರಸ ವಿದ್ಯಾರ್ಥಿ ಬಿದ್ದು ಗಾಯ

ಉಪ್ಪಳ: ಮದ್ರಸದಿಂದ ಮನೆಗೆ ನಡೆದು ಹೋಗುತ್ತಿದ್ದ ಮೂರು ವಿದ್ಯಾರ್ಥಿಗಳನ್ನು ನಾಯಿಗಳ ಹಿಂಡು ಬೆನ್ನಟ್ಟಿದ್ದು, ಈ ವೇಳೆ ಓಡುತ್ತಿದ್ದಾಗ ಓರ್ವ ವಿದ್ಯಾರ್ಥಿ ಬಿದ್ದು ಗಾಯಗೊಂಡ ಘಟನೆ ಬಂದ್ಯೋಡು ಬಳಿಯಲ್ಲಿ ನಡೆದಿದೆ. ಬಂದ್ಯೋಡು ಬಳಿಯ ವಯಲ್‌ಕೆರೆ ನಿವಾಸಿ ಆದಂರ ಪುತ್ರ ಮೊಹಮ್ಮದ್ ಮುಫೀದ್ (11) ಗಾಯಗೊಂಡ ವಿದ್ಯಾರ್ಥಿ. ನಿನ್ನೆ ಬಂದ್ಯೋಡು ಮದ್ರಸದಿಂದ ಮೂರು ವಿದ್ಯಾರ್ಥಿಗಳು ಮನೆಗೆ ನಡೆದುಹೋಗುತ್ತಿದ್ದಾಗ ಒಳರಸ್ತೆಯಾದ ವಯಲ್‌ಕೆರೆ ರೋಡ್‌ನಲ್ಲಿ ನಾಯಿಗಳ ಹಿಂಡು ವಿದ್ಯಾರ್ಥಿಗಳನ್ನು ಬೆನ್ನಟ್ಟಿದೆ. ಇದರಿಂದ ಭಯ ಭೀತರಾಗಿ ಮೂವರು ಓಡಿದ್ದು, ಈ ಪೈಕಿ ಮೊಹಮ್ಮದ್ ಮುಫೀದ್ …

ಧಾರ್ಮಿಕ ಮುಂದಾಳು, ನಿವೃತ್ತ ಅಧ್ಯಾಪಕ ನಿಧನ

ಉಪ್ಪಳ: ಧಾರ್ಮಿಕ ಮುಂದಾಳು ಹಾಗೂ ನಿವೃತ್ತ ಅಧ್ಯಾಪಕ, ಬಿಜೆಪಿ ಸಕ್ರಿಯ ಕಾರ್ಯಕರ್ತ ಕಯ್ಯಾರು ಬಳಿಯ ಶಾಂತಿಯೋಡು ನಿವಾಸಿ ಬಾಲಕೃಷ್ಣ ನಾಯ್ಕ್ (93) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನರಾದರು. ಇವರು ಅಟ್ಟೆಗೋಳಿ ಎ.ಎಲ್.ಪಿ ಶಾಲೆಯಲ್ಲಿ 30ಕ್ಕಿಂತ ಅಧಿಕ ವರ್ಷ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ಕಯ್ಯಾರು ಶ್ರೀ ಮಹಮ್ಮಾಯಿ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ, ಶ್ರೀ ಜನಾರ್ಧನ ದೇವಸ್ಥಾನದ ಟ್ರಸ್ಟಿ, ಪೆರ್ಲ ಶಾರದಾ ಮರಾಠಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ಸಕ್ರಿಯ ಕಾರ್ಯಕರ್ತ, ಕೇರಳ ಮರಾಠಿ ಸಂರಕ್ಷಣ ಸಮಿತಿಯ …

ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕ ಸಮಾಪ್ತಿ

ಏತಡ್ಕ: ಏತಡ್ಕ ಶ್ರೀಸದಾಶಿವ ದೇವ ಸ್ಥಾನದಲ್ಲಿ ನಿನ್ನೆ ಶ್ರೀ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಸಹಸ್ರಾರು ಭಜಕರ ಸಮ್ಮುಖದಲ್ಲಿ ಸಮÁಪ್ತಿಗೊಂಡಿತು. ಪೂರ್ವಾಹ್ನ 108 ತೆಂಗಿನಕಾಯಿಗಣಪತಿ ಹೋಮ, ಪ್ರತಿಷ್ಠಾಪಾಣಿ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೆಕ, ಪ್ರತಿಷ್ಠಾಬಲಿ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ ನಡೆಯಿತು. ಸಪ್ತಸ್ವರ ಸಂಗೀತ ಶಾಲೆ ಪುತ್ತೂರು, ಸಾಮೂಹಿಕ ರುದ್ರ ಪಾರಾಯಣ ಸೇವೆ, ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಶಾಸ್ತಿçÃಯ ಸಂಗೀತ …

ಮುಖಮರೆಸಿ ನಡೆಯಬೇಕಾದ ಸ್ಥಿತಿ ಮಾರ್ಕಿಸ್ಟ್ ಕಾರ್ಯಕರ್ತರಿಗಿದೆ- ಸೋಮಶೇಖರ ಜೆ.ಎಸ್.

ಉಪ್ಪಳ: ಪಿಣರಾಯಿ ವಿಜಯನ್ ಹಾಗೂ ಹೊಗಳುಭಟರ ದರ್ಬಾರ್ ದೆಸೆಯಿಂದ ನಿಷ್ಟಾವಂತ ಮಾರ್ಕಿಸ್ಟ್ ಕಾರ್ಯಕರ್ತರು ಟವೆಲ್‌ನಿಂದ ಮುಖ ಮುಚ್ಚಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋ ಮಶೇಖರ ಜೆ.ಎಸ್. ಆರೋಪಿಸಿದರು. ಮಂಗಲ್ಪಾಡಿ ಮಂಡಲದ 13ನೇ ಮುಟ್ಟಂ ವಾರ್ಡ್ ಕಾಂಗ್ರೆಸ್ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತದ ಸಕಲ ವಲಯದಲ್ಲೂ ದಯನೀಯ ವೈಫಲ್ಯದ ಜೊತೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗೂಂಡಾಗಿರಿ, ಗಾಂಜಾ ಮಾಫಿಯಾಗಳ ಮೆರೆದಾಟದಿಂದ ಜನರು ಅಸಹನೆ ಗೊಂಡಿದ್ದು, ಈ ಸರಕಾರವನ್ನು ಕಿತ್ತೆಸೆದು …

ದೇವರನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಅಡೆತಡೆ ನಿವಾರಣೆ- ಕೊಂಡೆವೂರುಶ್ರೀ

ಕೂಡ್ಲು: ನಮ್ಮಲ್ಲಿರುವ ಆಸ್ತಿ ಸಂಪತ್ತುಗಳು ದೇವರಿಗೆ ಸೇರಿದ್ದಾಗಿದೆ. ಆದ್ದರಿಂದ ದೇವರನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಮಾತ್ರವೇ ನಮ್ಮ ಎಲ್ಲಾ ಅಡೆತಡೆಗಳು ಪರಿ ಪೂರ್ಣವಾಗಿ ನಿವಾರಣೆಗೊಳ್ಳುವುದು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಮಣ್ಣಿಪ್ಪಾಡಿ ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವದ ಪ್ರಥಮ ದಿನ ಜರಗಿದ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಇಂದಿನ ಯುವ ಪೀಳಿಗೆಗೆ ಆಧ್ಯಾ ತ್ಮಿಕತೆಯ ಬಗ್ಗೆ ಯಾವುದೇ ಅರಿವು, …

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸುತ್ತುಗೋಪುರಕ್ಕೆ ಶಿಲಾನ್ಯಾಸ

ಬೆಳಿಂಜ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ನವೀಕರಣದಂಗವಾಗಿ  ಸುತ್ತುಗೋಪುರಕ್ಕೆ ಶಿಲಾನ್ಯಾಸ ನಡೆಸಲಾಯಿತು. ಶಿಲ್ಪಿ ಸುಕುಮಾರನ್ ಚಾಲಿಂಗಾಲ್ ಶಿಲಾನ್ಯಾಸಕ್ಕೆ ನೇತೃತ್ವ ನೀಡಿದರು. ನೇರಪ್ಪಾಡಿ ತಂತ್ರಿ ಮನೆತನದ ಅಶೋಕ ಅಲೆವೂರಾಯ, ಆಡಳಿತ ಮೊಕ್ತೇಸರ ರಾಖಲ್ ಅಡ್ಯಂತಾಯ, ಅಂಬಾಡಿ ಕಾರ್ನವರ್, ಆಚಾರ ಸ್ಥಾನಿಕರು, ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು, ನವೀಕರಣ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ, ವಿವಿಧ ಸಮಿತಿ ಪದಾಧಿಕಾರಿಗಳು, ತೀಯ ಮಹಾಸಭಾ ಅಧ್ಯಕ್ಷ ಗಣೇಶ ಅರಮಂಗಾನಂ ಸಹಿತ ಭಕ್ತರು ಉಪಸ್ಥಿತರಿದ್ದರು.

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮುಖಮಂಟಪ ನಿಧಿ ಸಂಗ್ರಹಕ್ಕೆ ಚಾಲನೆ

ಅಗಲ್ಪಾಡಿ: ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸುವ ಮುಖಮಂಟಪದ ನಿಧಿ ಸಂಗ್ರಹಕ್ಕೆ  ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಮಧುಸೂದನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಿದರು. ಬಾಬು ಮಾಸ್ತರ್ ಅಗಲ್ಪಾಡಿ, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರೊ. ಶ್ರೀನಾಥ್, ಸುಧಾಮ ಪದ್ಮಾರು, ಈಶ್ವರಿ ಬೇರ್ಕಡವು, ಡಾ. ವೈ.ವಿ. ಕೃಷ್ಣಮೂರ್ತಿ, ಡಾ. ವೇಣುಗೋಪಾಲ ಕಳೆಯತ್ತೋಡಿ ಉಪಸ್ಥಿತರಿದ್ದರು. ಲಾವಣ್ಯ, ಶರಣ್, ರಮ್ಯ ಪ್ರಾರ್ಥನೆ ಹಾಡಿದರು. ರಮೇಶ್‌ಕೃಷ್ಣ ಪದ್ಮಾರು ಸ್ವಾಗತಿಸಿ, …