ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಾಯಗೊಂಡ ಯುವಕ ಮೃತ್ಯು

ಉಪ್ಪಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿನ ದಿ| ಹೆನ್ರಿ ಮೋರಸ್ ಎಂಬವರ ಪುತ್ರ ರೋಶನ್ ಮೋರಸ್ (34) ಮೃತಪಟ್ಟ ದುರ್ದೈವಿಯಾಗಿ ದ್ದಾರೆ.  ಇವರು ಇಲೆಕ್ಟ್ರೀಶ್ಯನ್ ಕೆಲಸ ನಿರ್ವಹಿಸುತ್ತಿದ್ದರು. ಮೊನ್ನೆ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮುಡಿಪು ಬಳಿ ಬೋಳಿಯಾರ್‌ನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಅಪಘಾತವುಂ ಟಾಗಿತ್ತು.  ಇದರಿಂದ ಗಂಭೀರ ಗಾಯಗೊಂಡಿದ್ದರು. …

ನಗರದ ಆಟೋ ಚಾಲಕ ಹೃದಯಾಘಾತದಿಂದ ನಿಧನ

ಕಾಸರಗೋಡು: ನಗರದ ಆಟೋ ಚಾಲಕ ಹೃದಯಾಘಾ ತದಿಂದ  ನಿಧನಹೊಂದಿದರು. ಮೀಪುಗುರಿ ಶ್ರೀ ದುರ್ಗಾಪರಮೇ ಶ್ವರಿ ಕ್ಷೇತ್ರ ಬಳಿಯ ಸಾಕ್ಷಿ ನಿಲಯದ ವಿನಯ ಕುಮಾರ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆಯಲ್ಲಿ ನಿದ್ರಿಸಿದ್ದ ಇವರಿಗೆ ಹೃದಯಾಘಾತವುಂ ಟಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಹಲವು ವರ್ಷಗಳಿಂದ ಕಾಸರಗೋಡು ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ದಿ| ವಿಠಲ ಎಂಬವರ  ಪುತ್ರನಾದ ಮೃತರು ತಾಯಿ ಭವಾನಿ, ಪತ್ನಿ ಸರಸ್ವತಿ, ಮಕ್ಕಳಾದ …

ಮಣಿಪುರ ಸಿಆರ್‌ಪಿಎಫ್ ಶಿಬಿರದಲ್ಲಿ ಗುಂಡಿಗೆ ಇಬ್ಬರು ಬಲಿ: ಸೈನಿಕ ಆತ್ಮಹತ್ಯೆ

ಇಂಫಾಲ್: ಮಣಿಪುರ್‌ನಲ್ಲಿ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಎರಡು ಸಹೋದ್ಯೋಗಿಗಳನ್ನು ಕೊಂದು ಸೈನಿಕ ಆತ್ಮಹತ್ಯೆ ನಡೆಸಿದ್ದಾನೆ. ೮ ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಗಳನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಹವೀಲ್ದಾರ್ ಸಂಜಯ್ ಕುಮಾರ್ ತನ್ನ ಸರ್ವೀಸ್ ರಿವಾಲ್ವರ್ ಉಪಯೋಗಿಸಿ ಸಬ್ ಇನ್ಸ್‌ಪೆಕ್ಟರ್ ಗೂ, ಕಾನ್‌ಸ್ಟೇಬಲ್‌ಗೂ ಗುಂಡು ಹಾರಿಸಿದ್ದಾನೆ. ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಸಂಜಯ್ ಕುಮಾರ್ ಸ್ವಯಂ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೈದಿದ್ದಾನೆ. ಎಫ್-120 ಸಿಒವೈ ಸಿಆರ್ ಪಿಎಫ್‌ನ ಅಧಿಕಾರಿಗಳಾಗಿದ್ದಾರೆ ಇವರು. ವೈಯಕ್ತಿಕ ಕಾರಣಗಳಿಂದ ಆಕ್ರಮಣ ನಡೆಸಿರಬೇಕೆಂದು …

ಶಾಲೆಗೆ ಹೋದ ವಿದ್ಯಾರ್ಥಿನಿ ನಾಪತ್ತೆ: ದೂರು

ಮಂಜೇಶ್ವರ:  ಶಾಲೆಗೆ ಹೋದ  17ರ ಹರೆಯದ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಪ್ಪಳ ಸಮೀಪ ವಾಸಿಸುವ  ವಿದ್ಯಾ ರ್ಥಿನಿ ನಾಪತ್ತೆಯಾಗಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ. ನಿನ್ನೆ ಶಾಲೆಗೆ ತೆರಳಿದ ವಿದ್ಯಾರ್ಥಿನಿ ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ತಾಯಿಯ ಕಣ್ಮುಂದೆ ಪುತ್ರಿಯ ಮಾನಭಂಗ  ತಲೆಮರೆಸಿಕೊಂಡಿದ್ದ ತಾಯಿ, ಪ್ರಿಯತಮ ಸೆರೆ

ಪತ್ತನಂತಿಟ್ಟ: ತಾಯಿಯ ಒಪ್ಪಿಗೆಯೊಂದಿಗೆ ಆಕೆಯ ಎದುರಲ್ಲೇ 14ರ ಹರೆಯದ ಪುತ್ರಿಯನ್ನು ಕೊಲೆಪ್ರಕಣದ ಆರೋಪಿ ಮಾನಭಂಗಪಡಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ತಾಯಿಯ ಗೆಳೆಯ ಮಾನಭಂಗಪಡಿಸಿದ ವ್ಯಕ್ತಿಯಾಗಿದ್ದಾನೆ.  ಆ ಬಳಿಕ ನಾಪತ್ತೆಯಾಗಿದ್ದ ತಾಯಿ ಹಾಗೂ ಗೆಳೆಯನನ್ನು ಪತ್ತನಂತಿಟ್ಟ ಪೊಲೀಸರು ಬಂಧಿಸಿದರು. ರಾಣಿ ಅಙಾಡಿಕ್ಕಲ್ ಪುಣಕ್ಕಾವ್‌ಪಳ್ಳಿನಡಯಿಲ್ ಜೈಮೋನ್(42), ತಿರುವನಂತಪುರ ನಿವಾಸಿಯಾದ 44ರ ಹರೆಯದ ಮಹಿಳೆ ಸೆರೆಯಾದವರು. ಜೈಮೋನ್ ಮಲಪ್ಪುರ ಕಳಿಕ್ಕಾವ್ ಪೊಲೀಸ್ ಠಾಣೆಯಲ್ಲಿ ನೋಂದಾಯಿತಗೊಂಡ ಕೊಲೆ ಪ್ರಕರಣದ ಆರೋಪಿಯಾಗಿ ದ್ದಾನೆ. ಇತರ 11 ಕ್ರಿಮಿನಲ್ ಪ್ರಕರಣಗಳು ಈತನ ಹೆಸರಲ್ಲಿದೆ. ಇದರಲ್ಲಿ ಮೂರು ಮಾನಭಂಗ …

ಶಿಕ್ಷಣ ಸಚಿವ ಇಂದು ಜಿಲ್ಲೆಯಲ್ಲಿ

ಕಾಸರಗೋಡು: ರಾಜ್ಯ ಶಿಕ್ಷಣ, ಉದ್ಯೋಗ ಖಾತೆ ಸಚಿವ ವಿ. ಶಿವನ್ ಕುಟ್ಟಿ ಜಿಲ್ಲೆಗೆ ಆಗಮಿಸಿದ್ದು, ಇಂದು ಹಾಗೂ ನಾಳೆ ವಿವಿಧೆಡೆ ನಡೆಯುವ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು.  ಮಂಜೇಶ್ವರ  ಕುಂಜತ್ತೂರು ಕಣ್ವತೀಥ ಜಿಎಲ್‌ಪಿ ಶಾಲೆಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ನಿರ್ಮಿಸಿದ ಕಟ್ಟಡ, ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಿಫ್‌ಬಿ ಯೋಜನೆಯಲ್ಲಿ ನಿರ್ಮಿಸಿದ ಕಟ್ಟಡ ಹಾಗೂ ಬಂಬ್ರಾಣ ಜಿಎಲ್‌ಪಿ ಶಾಲೆಗೆ ಕಿಫ್‌ಬಿ  ಫಂಡ್ ಬಳಸಿ ನಿರ್ಮಿಸಿದ ಕಟ್ಟಡವನ್ನು  ಇಂದು ಬೆಳಿಗ್ಗೆ ಸಚಿವ ಉದ್ಘಾಟಿಸಿದರು. ಇಂದು ಮಧ್ಯಾಹ್ನ 2 …

ಕಾಸರಗೋಡು ರೈಲು ನಿಲ್ದಾಣದಲ್ಲಿ ನಾಪತ್ತೆಯಾದ ಕನ್ನಡ ನಾಮಫಲಕಗಳು

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡವನ್ನು ಪೂರ್ಣವಾಗಿ ಹೊರತುಪಡಿಸಿರುವು ದಾಗಿ ಆರೋಪವುಂಟಾಗಿದೆ. ರೈಲು ನಿಲ್ದಾಣದ ವಿವಿಧೆಡೆ ಸ್ಥಾಪಿಸಲಾದ ಸ್ಥಳ ನಾಮಫಲಕಗಳು ಇಂಗ್ಲಿಷ್, ಹಿಂದಿ ಹಾಗೂ ಮಲೆಯಾಳ ಭಾಷೆಗಳಲ್ಲಿವೆ. ಆದರೆ ಬಹುತೇಕ ಮಂದಿ ಕನ್ನಡಿಗರು ಇರುವ ಇಲ್ಲಿನ ನಾಮಫಲಕಗಳಲ್ಲಿ ಕನ್ನಡವನ್ನು ಹೊರತುಪಡಿಸಿರುವುದು ವ್ಯಾಪಕ ಆರೋಪಕ್ಕೆಡೆಯಾಗಿದೆ. ರೈಲ್ವೇ ಫ್ಲಾಟ್‌ಫಾಂನ ವಿವಿಧೆಡೆ ಹಲವು ನಾಮಫಲಕಗಳಿವೆ. ಅವುಗಳಲ್ಲಿ ಎಲ್ಲಿಯೂ ಕನ್ನಡವನ್ನು ಬಳಸಲಿಲ್ಲ. ಪ್ರತಿದಿನ ಸಾವಿರಾರು ಮಂದಿ ಪ್ರಯಾಣಕ್ಕಾಗಿ ತಲುಪುವ ರೈಲು ನಿಲ್ದಾಣದಲ್ಲಿ ಕನ್ನಡವನ್ನು ಮಾತ್ರ ಹೊರತುಪಡಿಸಲಾಗಿದೆ. ಇದರಿಂದ ಕನ್ನಡ ಮಾತ್ರ ಓದಲು ತಿಳಿದಿರುವ …

ಕ್ಷೇತ್ರ ಉತ್ಸವ ವೇಳೆ ಮದವೇರಿದ ಆನೆಯ ಕಾಲ್ತುಳಿತದಲ್ಲಿ ಸಿಲುಕಿ ಮೂವರು ಸಾವು

ಕಲ್ಲಿಕೋಟೆ: ಕ್ಷೇತ್ರ ಉತ್ಸವ ಸಂದರ್ಭದಲ್ಲಿ ಆನೆಗಳು ಮದವೇರಿ ಓಡಿದ ವೇಳೆ ಉಂಟಾದ ನೂಕುನುಗ್ಗಲು, ಕಾಲ್ತುಳಿತದಲ್ಲಿ ಸಿಲುಕಿ  ಮೂವರು ಮೃತಪಟ್ಟ ಘಟನೆ ಕೊಯಿಲಾಂಡಿ ಸಮೀಪ ನಡೆದಿದೆ. ಕುರುವಂಗಾಡ್ ಮಣಕುಳಂಙರ ಕ್ಷೇತ್ರದಲ್ಲಿ ನಿನ್ನೆ ಸಂಜೆ ೬ ಗಂಟೆಗೆ ಘಟನೆ ನಡೆದಿದೆ. ಕುರುಂವಗಾಡ್ ವಟ್ಟಾಕಂಡಿ ತಾಳ ಎಂಬಲ್ಲಿನ ಲೀಲ (68), ತಾಳತ್ತೇಡದ ಅಮ್ಮುಕುಟ್ಟಿ ಅಮ್ಮ (78), ವಡಕ್ಕಯಿಲ್ ರಾಜನ್ (68) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. 31 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಕ್ಷೇತ್ರ ಉತ್ಸವ ವೇಳೆ ಪೀತಾಂಬರನ್ ಎಂಬ ಆನೆ …

ಉದ್ಯಮಿಯ ಕೊಲೆ: ವಿದೇಶದಲ್ಲಿರುವ ಇಬ್ಬರು ಆರೋಪಿಗಳಿಗಾಗಿ ಲುಕೌಟ್ ನೋಟೀಸ್

ಉದುಮ: ಉದ್ಯಮಿ ಎಂ.ಸಿ. ಅಬ್ದುಲ್ ಗಫೂರ್ ಹಾಜಿಯವರ ಕೊಲೆಗೆ ಸಂಬಂಧಿಸಿ ವಿದೇಶದಲ್ಲಿರುವ ಇಬ್ಬರು ಆರೋಪಿಗಳನ್ನು ಊರಿಗೆ ತಲುಪಿಸಲು ಕ್ರಮ ಆರಂಭಿಸಲಾಗಿದೆ. ಪಳ್ಳಿಕ್ಕರೆ ಪೂಚಕ್ಕಾಡ್‌ನ ಉವೈಸ್, ಶಮ್ಮಾಸ್ ಎಂಬಿವರನ್ನು ಆರೋಪಪಟ್ಟಿ ಯಲ್ಲಿ ಸೇರಿಸಿಕೊಂಡು ತನಿಖಾ ತಂಡ ಈ ಮೊದಲು ಹೊಸದುರ್ಗ ನ್ಯಾಯಾ ಲಯದಲ್ಲಿ ವರದಿ ನೀಡಿತ್ತು. ಇದರ ಮುಂದುವರಿಕೆಯಾಗಿ ಇವರು ಕೊಲೆ ಕೃತ್ಯ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆಂದು ತೋರಿಸಿ ಲುಕೌಟ್ ನೋಟೀಸ್ ತಿರುವನಂತಪುರ ಕ್ರೈಮ್ ಬ್ರಾಂಚ್ ಹೆಡ್ ಕ್ವಾರ್ಟರ್ಸ್ ಮೂಲಕ ಸಂಬಂಧಪಟ್ಟ ರಾಯಭಾರಿ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ ವಿದೇಶದಲ್ಲಿರುವ …

ತಲೆಯಿಲ್ಲದ ಮಾವಿನ ಮರದಲ್ಲಿ ಹೂವಿನ ಗಿಡಗಳು: ಜನರಲ್ ಆಸ್ಪತ್ರೆ ನೌಕರನ ಪರಿಸರ ಪ್ರೇಮ

ಕಾಸರಗೋಡು: ಕಟ್ಟಡ ನಿರ್ಮಾಣಕ್ಕಾಗಿ ತಲೆ, ರೆಂಬೆ, ಕೊಂಬೆಗಳನ್ನು ಕಡಿದು ಬೋಳಾಗಿರುವ ಮಾವಿನ ಮರ ಇದೀಗ ಹೂವಿನ ಗಿಡಗಳಿಗೆ ಆಶ್ರಯವಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಬಳಿ ಹಲವು ವರ್ಷಗಳ ಹಳಮೆಯುಳ್ಳ ಮಾವಿನ ಮರದ ವಿಶೇಷತೆಯಾಗಿದೆ ಇದು. ತಿಂಗಳುಗಳ ಹಿಂದೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಈ ಮಾವಿನ ಮರದ ರೆಂಬೆಗಳನ್ನು ಕಡಿದು ತೆಗೆಯಲಾಗಿದೆ. ಉಳಿದಿರುವ ಎರಡು ರೆಂಬೆಗಳಲ್ಲಿ ಇದೀಗ ಹೂವಿನ ಗಿಡಗಳ ಕುಂಡಗಳು ಗಮನ ಸೆಳೆಯುತ್ತಿವೆ. ಇದು ಜನರಲ್ ಆಸ್ಪತ್ರೆಯ ನೌಕರನಾದ ಮಾಂಗಾಡ್ ಮೇಲ್ಬಾರ ನಿವಾಸಿ ಶಿವರಾಮನ್‌ರ ಪರಿಸರ ಪ್ರೇಮದ …