ಯೂತ್ ಕಾಂಗ್ರೆಸ್ ನೇತಾರ ಬಾಲಕೃಷ್ಣನ್ ಕೊಲೆ ಪ್ರಕರಣ: ಜೀವಾವಧಿ ಸಜೆಗೊಳಗಾದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು

ಕಾಸರಗೋಡು: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯನ್ನು ಮದುವೆಯಾದ ಯೂತ್ ಕಾಂಗ್ರೆಸ್‌ನ ಕಾಸರಗೋಡು ಮಂಡಲ ಅಧ್ಯಕ್ಷರಾಗಿದ್ದ ಕಾಸರಗೋಡು ಸೂರ್ಲು ಉಮಾ ನರ್ಸಿಂಗ್ ಬಳಿ ನಿವಾಸಿ ಹಾಗೂ ಬಳಿಕ ವಿದ್ಯಾನಗರ ಪಡುವಡ್ಕಕ್ಕೆ ವಾಸ ಬದಲಾಯಿಸಿದ್ದ ಬಾಲಕೃಷ್ಣನ್ (28)ರನ್ನು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಎರ್ನಾಕುಳಂನ ವಿಶೇಷ ಸಿಬಿಐ ನ್ಯಾಯಾಲಯ ಈ ಹಿಂದೆ ವಿಧಿಸಿದ್ದ ಜೀವಾವಧಿ ಸಜೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಪಡಿಸಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಕಾಸರಗೋಡು ಚಟ್ಟಂಚಾಲ್ ಕುನಿಕುನ್ನು ಪಾದೂರು ರಸ್ತೆ ಬಳಿಯ ಮುಹಮ್ಮದ್ ಇಕ್ಬಾಲ್ …

ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ: 30.59 ಲಕ್ಷ ರೂ. ಎಗರಿಸಿದ ದೂರಿನಂತೆ ಬದಿಯಡ್ಕದಲ್ಲಿ ಕೇಸು ದಾಖಲು

ಬದಿಯಡ್ಕ: ಅರ್ಧ ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಲಾಗುವುದೆಂದು ನಂಬಿಸಿ ಹಣ ಪಡೆದು ವಂಚನೆಗೈದ ಬಗ್ಗೆ ದೂರೊಂದು ಬದಿಯಡ್ಕ ಪೊಲೀಸ್ ಠಾಣೆಗೂ ಲಭಿಸಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದರಂತೆ ಎರ್ನಾಕುಳಂ ರೂರಲ್ ತೊಡುಪುಳದ ಆನಂದಕೃಷ್ಣನ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬ್ಡಾಜೆ ಮಾರ್ಪನಡ್ಕದಲ್ಲಿ ಕಾರ್ಯವೆಸಗುತ್ತಿರುವ ಮೈತ್ರಿ ಲೈಬ್ರೆರಿ ಆಂಡ್ ರೀಡಿಂಗ್ ರೂಮ್ ಮೂಲಕ ಆ ಕ್ಲಬ್ ಪರಿಸರ ಪ್ರದೇಶಗಳಲ್ಲಿ ವಾಸಿಸುತ್ತಿರುವ 36 ಮಂದಿಗೆ ಅರ್ಧ ಬೆಲೆಗೆ ಸ್ಕೂಟಿ ಹಾಗೂ 36 ಮಂದಿಗೆ …

‘ವರ್ಕ್ ಫ್ರಮ್ ಹೋಮ್’: ಕಾಸರಗೋಡಿನ ವೈದ್ಯನ 2.23 ಕೋಟಿ ರೂ. ಎಗರಿಸಿದ ಪ್ರಕರಣದ ಆರೋಪಿ ಸೆರೆ; ವಿದೇಶ ನಂಟು ಬಯಲು

ಕಾಸರಗೋಡು: ‘ವರ್ಕ್ ಫ್ರಮ್ ಹೋಮ್’ ಎಂಬ ಹೆಸರಲ್ಲಿ ಹಾಗೂ ಆನ್‌ಲೈನ್ ಟ್ರೇಡಿಂಗ್‌ನ ಮೂಲಕ ಹಲವರಿಂದಾಗಿ ಕೋಟಿಗಟ್ಟಲೆ ರೂ. ಎಗರಿಸಿದ ಪ್ರಕರಣದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಪಯ್ಯನ್ನೂರು ಕವ್ವಾಯಿ ಎ.ಟಿ. ಹೌಸ್‌ನ ಎ.ಟಿ. ಮೊಹಮ್ಮದ್ ನೌಶಾದ್ (45) ಬಂಧಿತ ಆರೋಪಿ. ಕಾಸರಗೋಡಿನ ವೈದ್ಯರೋರ್ವರಿಂದ 2.23 ಕೋಟಿ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ಅವರು ನೀಡಿದ ನಿರ್ದೇಶ ಪ್ರಕಾರ ಸೈಬರ್ ಪೊಲೀಸರ ಸಹಾಯದೊಂದಿಗೆ ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಟಿ. …

ಮಟ್ಕಾ: 4465 ರೂ.ನೊಂದಿಗೆ ಇಬ್ಬರ ಸೆರೆ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದ ಮಟ್ಕಾ ಜೂಜಾಟ ಕೇಂದ್ರಕ್ಕೆ ಕಾಸರಗೋಡು ಪೊಲೀಸರು ದಾಳಿ ನಡೆಸಿ ನುಳ್ಳಿಪ್ಪಾಡಿಯ ಎನ್. ವಿಜೇಶ್ ಮತ್ತು ಕರ್ನಾಟಕದ ಮಂಜು ಎಂಬಿಬ್ಬರನ್ನು  4465 ರೂ.ನೊಂದಿಗೆ ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕಾಸರಗೋಡು ನಗರದ ಹಲವೆಡೆಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದು, ಅದರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಏತಡ್ಕ ಶ್ರೀ ಸದಾಶಿವ ಕ್ಷೇತ್ರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭ: ಎಡನೀರು ಶ್ರೀಗಳಿಂದ ಧಾರ್ಮಿಕ ಸಭೆ ಉದ್ಘಾಟನೆ

ಏತಡ್ಕ: ಭಾರತ ವೇದಪ್ರಕಾಶ ಗೊಂಡು ಜಗದೆಡೆಗೆ ಪಸರಿಸಿದ ಪುಣ್ಯ ಭೂಮಿ. ಇಲ್ಲಿಯ ಧರ್ಮ ವೈವಿಧ್ಯ ಮಯ ಆಚರಣೆಯ ಮೂಲಕ ಸಕಲ ಜೀವರಾಶಿಗಳಿಗೂ ಒಳಿತನ್ನು ಸಾರುವ ಋಷಿ ಪರಂಪರೆಯ ಹಿನ್ನೆಲೆಯದ್ದು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಏತಡ್ಕ ಶ್ರೀ ಸದಾಶಿವ ದೇವಾ ಲಯದಲ್ಲಿ  ಮಂಗಳವಾರ ಆರಂಭಗೊಂಡ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂ ಗವಾಗಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಕಲರಿಗೂ ಒಳಿತನ್ನು ಬಯಸುವ ಸದಾಶಿವ ಕಲ್ಪನೆ ನಮ್ಮಲ್ಲಿ ಸಾಕಾರಗೊಳ್ಳುವ ಮೂಲಕ …

50ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರು ಸೆರೆ

ಕಣ್ಣೂರು: ವಿಗ್ರಹ, ಚಿನ್ನ, ಹಣ, ರಬ್ಬರ್ ಶೀಟ್ ಸಹಿತ 50ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಯಾದ ಇಬ್ಬರನ್ನು ಬಂಧಿಸಲಾಗಿದೆ. ಉಳಿಕ್ಕಲ್ ತೇರ್ಮಲ ನಿವಾಸಿ ಹಾಗೂ ಪಯ್ಯಾವೂರು ವಾದಿಲ್‌ಮಡದಲ್ಲಿ ವಾಸಿಸುತ್ತಿರುವ ಪಡುವಿಲಾನ್ ಪ್ರಶಾಂತ್ (28), ಎರುವೇಶಿ ಅರಿಕಾಮಲ ಬಿಬಿನ್ ಕುರ್ಯನ್(32) ಎಂಬಿವರನ್ನು ಉಳಿಕ್ಕಲ್ ಎಸ್‌ಐ ಸುರೇಶ್ ಹಾಗೂ ತಂಡ ಬಂಧಿಸಿದೆ. ಈ ತಿಂಗಳ 7ರಂದು ಪುಳಂಙರಕಂಡಿ ಮುನ್ಸೀರರ ಮನೆಯಂಗಳದಲ್ಲಿ ಒಣಗಲು ಹಾಕಿದ್ದ 80 ರಬ್ಬರ್ ಶೀಟ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಈಗ ಸೆರೆಹಿಡಿಯಲಾಗಿದೆ. ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರೀಕರಿಸಿ …

ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನಾಳೆ

ಉಪ್ಪಳ: ಕಿಫ್‌ಬಿ ನಿಧಿಯಡಿ ಯಲ್ಲಿ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಹೊಸದಾಗಿ ನಿರ್ಮಿಸಲಾದ ಕಟ್ಟಡದ ಉದ್ಘಾಟನೆ ನಾಳೆ ಬೆಳಿಗ್ಗೆ 10.15ಕ್ಕೆ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್ ಕುಟ್ಟಿ ನಿರ್ವಹಿಸಲಿರುವರು. ಹೊಸ ಕಟ್ಟಡ ವನ್ನು ಸರ್ಕಾರದ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾಯಜ್ಞ ಮತ್ತು ವಿದ್ಯಾಕಿರಣಂ ಯೋಜನೆಗಳ ಅಡಿ ಯಲ್ಲಿ ನಿರ್ಮಿಸಲಾಗಿದೆ. ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆರು ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ …

ಯುವಕನ ಮೃತದೇಹ ಕಾಲುವೆಯಲ್ಲಿ ಪತ್ತೆ : ಕೊಲೆಯೆಂದು ಶಂಕೆ

ಕೊಚ್ಚಿ: ಕಾಲುವೆಯಲ್ಲಿ ಯುವಕನ ಮೃತದೇಹ ಪತ್ತೆಹಚ್ಚಿದ ಘಟನೆಯಲ್ಲಿ ಗೆಳೆಯ ಜಿಶಿ ಸೆರೆಯಾ ಗಿದ್ದಾನೆ. ಎರೂರು ಪೆರಿಕ್ಕಾಡ್ ತಂಬಿ ಎಂದು ಕರೆಯುವ  ಸನಲ್‌ನನ್ನು ಎರೂರಿನ ಕಾಲುವೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಸನಲ್ ಹಾಗೂ ಜಿಶಿ ಮಧ್ಯೆ ಮದ್ಯಪಾನದ ವೇಳೆ ಗಲಾಟೆ ಉಂಟಾಗಿದ್ದು, ಆ ಬಳಿಕ ಕೊಲೆ ನಡೆಸಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಈವೇಳೆ  ಇತರ ಇಬ್ಬರು ಗೆಳೆಯರು ಇವರ ಜೊತೆ ಇದ್ದರೆನ್ನ ಲಾಗಿದೆ. ಇವರು ತೆರಳಿದ ಬಳಿಕ ಸನಲ್ ಹಾಗೂ ಜಿಶಿ ಮಧ್ಯೆ ವಾಗ್ವಾದ ವುಂಟಾಗಿ ರುವುದಾಗಿ ತಿಳಿಯಲಾಗಿದೆ. ನಿನ್ನೆ …

ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಅಂಬುಕುಂಜೆ ಮಜಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ

ಮುಳಿಯಾರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವ ಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋ ತ್ಸವದಂಗವಾಗಿ ಅಂಬುಕುಂಜೆ ಮಜ ಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ಸ್ಥಳೀಯ ಶ್ರೀ ಧೂಮಾ ವತಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜರಗಿತು. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಉದ್ಘಾಟಿಸಿದರು. ಗೋವಿಂದ ಬಳ್ಳಮೂಲೆ  ಮಾಹಿತಿ ನೀಡಿದರು. ಸಮಿತಿ ರೂಪೀಕರಿಸಲಾಯಿತು.  ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಅಂಬುಕುಂಜೆ, ಕೇಶವ ರಾವ್  ಅಂಬುಕುಂಜೆ, ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಎಂ. ನಾರಾಯಣ ರಾವ್, ಪ್ರವೀಣ ಅಂಬುಕುಂಜೆ, ಸರೋಜ …

ಚೆರುಗೋಳಿ ಶಾಲೆಯ ಶತಮಾನೋತ್ಸವ ಸಂಭ್ರಮ 22ರಂದು

ಮಂಗಲ್ಪಾಡಿ: ಚೆರುಗೋಳಿ ಪರಿ ಸರದಲ್ಲಿ ಕಳೆದ 100 ವರ್ಷಗಳಿಂದ ಅಕ್ಷರ ಜ್ಞಾನ ಧಾರೆ ಎರೆದ ಜಿ.ಎಚ್. ಡಬ್ಲೂ÷್ಯ.ಪಿ ಶಾಲೆ ಮಂಗಲ್ಪಾಡಿ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸಂಭ್ರಮಾಚರಣೆ ಪೆs.22 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ಶತಮಾನೋತ್ಸವ ಸಂಭ್ರಮ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬಿನಾ ನೌಫಲ್ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸುವರು. ಪಂ. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಚಯರ್‌ಪರ್ಸನ್ ಇರ್ಫಾನಾ ಇಕ್ಬಾಲ್, ಪಂ. ಸದಸ್ಯೆ ರೇವತಿ ಕಮಲಾಕ್ಷ, ಮಂಜೇಶ್ವರ ಬಿ.ಆರ್.ಸಿಯ …