ಉಪ್ಪಳದಲ್ಲಿ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆ: ಪರಾರಿಯಾದ ಆರೋಪಿಗಾಗಿ ತೀವ್ರ ಶೋಧ

ಉಪ್ಪಳ: ಉಪ್ಪಳದಲ್ಲಿ ಕಟ್ಟಡದ ಕಾವಲುಗಾರನನ್ನು ವ್ಯಕ್ತಿಯೋರ್ವ ಇರಿದು ಕೊಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇದೇ ವೇಳೆ ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪಯ್ಯನ್ನೂರು ಕಾರಮ್ಮಲ್ ಈಸ್ಟ್ ಎಡಕ್ಕೇ ವೀಟಿಲ್‌ನ ಸುರೇಶ್ ಕುಮಾರ್ (48) ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಪತ್ವಾಡಿ ನಿವಾಸಿ ಸವಾದ್ (23) ಎಂಬಾತ ಈ ಕೊಲೆ ನಡೆಸಿದ್ದು,  ಈತನಿಗಾಗಿ  ಶೋಧ ಆರಂ ಭಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 10ಗಂಟೆ ವೇಳೆ ಘಟನೆ ನಡೆದಿದೆ. ಉಪ್ಪಳ ಬಸ್ …

ಕಾಟುಕುಕ್ಕೆಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹ ಸುಟ್ಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಪೆರ್ಲ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಎಣ್ಮಕಜೆ ಕಾಟುಕುಕ್ಕೆ ಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹವನ್ನು ಸುಟ್ಟ ಪ್ರಕರಣದಲ್ಲಿ ಸೆರೆಯಾಗಿ ಜಾಮೀನಿನಲ್ಲಿ ಬಿಡುಗಡೆ ಗೊಂಡು ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆಯಾಗಿದ್ದಾನೆ. ಛತ್ತೀಸ್‌ಘಡ್, ನಾರಾಯಣ್‌ಪುರ್ ನಿವಾಸಿ ದೀಪಕ್ ಕುಮಾರ್ ಸಲಾಂ (32)ನನ್ನು ತಮಿಳು ನಾಡು ಈರೋಡ್‌ನಿಂದ ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ಸ್‌ಪೆಕ್ಟರ್‌ರ ನಿರ್ದೇಶ ಪ್ರಕಾರ ಸಿಪಿಒಗಳಾದ ಗೋಕುಲ್, ಹಾರಿಫ್, ಶ್ರೀನೇಶ್ ಎಂಬಿವರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. 2017 ಡಿಸೆಂಬರ್ 30ರಂದು ಕಾಟುಕುಕ್ಕೆಯ ಬಾಲಗೋಪಾಲ ಕೃಷ್ಣ ಭಟ್‌ರ ಹಿತ್ತಿಲಿನಲ್ಲಿ ಸುಟ್ಟು ಭಸ್ಮವಾದ …

ನೀರ್ಚಾಲು: ಮದ್ದಿನ ಅಂಗಡಿ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಕರಿಮಣಿಸರ ಎಗರಿಸಿ ಪರಾರಿ

ನೀರ್ಚಾಲು: ಔಷಧಿ ಖರೀದಿಸ ಲೆಂದು ತಿಳಿಸಿ ಮದ್ದಿನ ಅಂಗಡಿಗೆ ತಲುಪಿದ ತಂಡ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ನೀರ್ಚಾಲು ಮೇಲಿನ ಪೇಟೆಯ ಲ್ಲಿರುವ ರಾಘವೇಂದ್ರ ಆಯುರ್ವೇ ದಿಕ್ ಮೆಡಿಕಲ್ ಸ್ಟೋರ್‌ನ ಮಾಲಕಿ ನೀರ್ಚಾಲು ಜೇನುಮೂಲೆಯ ಸರೋಜಿನಿ ಎಸ್.ಎನ್. ಭಟ್ ಅವರು ಈ ಬಗ್ಗೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ೩.೩೦ರ ವೇಳೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಇಬ್ಬರು ಮೆಡಿಕಲ್ …

ರೈಲಿನಲ್ಲಿ ನಷ್ಟಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಯ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಷ್ಟಹೊಂ ದಿದ ಮಹಿಳಾ ಪೊಲೀಸ್ ಸಿಬ್ಬಂದಿ ಯ ಸುಮಾರು ಎರಡೂವರೆ ಪವನ್ ಚಿನ್ನದ ಸರ ವಿದ್ಯಾರ್ಥಿನಿಯೋರ್ವೆ ಪತ್ತೆಹಚ್ಚಿ ಅದನ್ನು ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ. ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ  ನಿನ್ನೆ ಕುಂಬಳೆಗೆ ಬರುತ್ತಿದ್ದ  ಕುಂಬಳೆ  ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯೋರ್ವೆಯ ಚಿನ್ನದ ಸರ ರೈಲಿನೊಳಗೆ ನಷ್ಟಗೊಂಡಿತ್ತು. ಬಳಿಕ ಅದು ಅವರ ಗಮನಕ್ಕೆ ಬಂದಾಗ ತಕ್ಷಣ ಕಾಸರಗೋಡು ರೈಲ್ವೇ ಪೊಲೀ ಸರಿಗೆ ಕರೆದು ಮಾಹಿತಿ ನೀಡಿದ್ದಾರೆ. ಆಗ ತಡಮಾಡದ ರೈಲ್ವೇ ಪೊಲೀಸ್ …

ಆರು ಕೋಳಿಗಳನ್ನು ಕೊಂದು ಹಾಕಿದ ಅಜ್ಞಾತಜೀವಿ: ಮೂರು ಬೆಕ್ಕುಗಳೂ ನಾಪತ್ತೆ

ಕುಂಬಳೆ: ಪೆರುವಾಡ್ ಬದರಿ ಯಾ ನಗರದಲ್ಲಿ ಆರು ಕೋಳಿಗಳನ್ನು ಕೊಂದು ಹಾಕಿದ ಅಜ್ಞಾತ ಜೀವಿ ಯಾವುದೆಂದು ತಿಳಿದುಬಂದಿಲ್ಲ. ಅಲ್ಲದೆ ಮೂರು ಬೆಕ್ಕುಗಳು ಕೂಡಾ ನಿಗೂಢವಾಗಿ ನಾಪತ್ತೆಯಾಗಿದ್ದು, ಇದರಿಂದ ನಾಗರಿಕರಲ್ಲಿ ಆತಂಕ ತೀವ್ರಗೊಂಡಿದೆ. ಕೋಟ ಮಸೀದಿ ಬಳಿಯ ಮಾಲಿಯಂಗರ ಮದೀನ ಮಂಜಿಲ್‌ನ ಮುಹಮ್ಮದ್ ಕುಂಞಿಯವರ ಕೋಳಿಗಳು ಅಜ್ಞಾತ ಜೀವಿಯ ದಾಳಿಯಿಂದ ಸಾವಿಗೀಡಾಗಿದೆ. ಮೊನ್ನೆ ರಾತ್ರಿ  ಮನೆ ಪರಿಸರದಲ್ಲಿ ನಾಯಿಗಳು ಬೊಗಳುವುದು ಹಾಗೂ ಯಾವುದೋ ವನ್ಯಜೀವಿಯ ಕೂಗು ಕೇಳಿಬಂದಿತ್ತೆನ್ನಲಾಗಿದೆ. ಇದರಿಂದ ಮನೆಯ ವರು ಭಯದಿಂದ ಹೊರಗಿಳಿದಿರಲಿಲ್ಲ. ನಿನ್ನೆ ಮುಂಜಾನೆ  ನೋಡಿ …

ಸರಿಯಾದ ದಾಖಲುಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಡಲಾಗಿದ್ದ 17.3 ಲಕ್ಷ ರೂ.  ವಶ

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಮನೆಯೊಂ ದರಲ್ಲಿ ಬಚ್ಚಿಡಲಾಗಿದ್ದ 17,30,000 ರೂ. ನಗದನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ  ಕೆ.ಪಿ. ಪ್ರತೀಶ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನ ಮನೆಯಿಂದ ಈ ನಗದನ್ನು ಪೊಲೀಸರು ಪತ್ತೆಹಚ್ಚಿ ದ್ದಾರೆ.  ನಿನ್ನೆ ಸಂಜೆ ಪೊಲೀಸರು ಈ ಕಾರ್ಯಾಚರಣೆ ನಡೆದಿದೆ. ವಶಪಡಿಸಲಾದ ಹಣಕ್ಕೆ ಸಂಬಂಧಿ ಸಿದ ಅಧಿಕೃತ ದಾಖಲುಪತ್ರಗಳನ್ನು ಆ ಮನೆ ಮಾಲಕ ಹಾಜರುಪಡಿಸದೇ ಇದ್ದ ಹಿನ್ನೆಲೆಯಲ್ಲಿ  ಅದನ್ನು ಇಂದು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ …

120 ಪ್ಯಾಕೆಟ್ ಕರ್ನಾಟಕ ಮದ್ಯ ವಶ ಆರೋಪಿ ಪರಾರಿ

ಕಾಸರಗೋಡು: ನೆಲ್ಲಿಕುಂಜೆ ಸಾಕ್ಷರತಾ ಮಿಷನ್ ಕಚೇರಿಯ ಹಿಂದುಗಡೆ ಅಬಕಾರಿ ತಂಡ ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆ ಯಲ್ಲಿ ೧೮೦ ಎಂ.ಎಲ್‌ನ 120 ಟೆಟ್ರಾ ಪ್ಯಾಕೆಟ್ (21.9 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಅದನ್ನು ಅಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿ ಪರಾರಿಯಾಗಿರುವು ದಾಗಿಯೂ, ಆತ ಈ ಹಿಂದೆ ಬೇರೊಂದು ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ ಸುರೇಶ್‌ರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ ನೌಶಾದ್ …

ಉಷ್ಣತೆ: ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಬಿಸಿಲಿಗೆ ಕೆಲಸ ನಿರ್ವಹಿಸದಂತೆ ನಿರ್ದೇಶ

ಕಾಸರಗೋಡು:  ರಾಜ್ಯದಲ್ಲಿ ಉಷ್ಣತೆ ಮಟ್ಟ ಹೆಚ್ಚಿರುವುದರಿಂದ ಸೂರ್ಯನ ತಾಪ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬಿಸಿಲಿಗೆ ಕೆಲಸ ನಿರ್ವಹಿಸುವ ಕಾರ್ಮಿಕರ ಕೆಲಸದ ಸಮಯ ನಿಗದಿಪಡಿ ಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವ ರೆಗೆ 8 ಗಂಟೆ ಕೆಲಸದ ಸಮಯ ವಾಗಿದ್ದು, ಕಾರ್ಮಿಕರು ಮಧ್ಯಾಹ್ನ 12ರಿಂದ ಅಪರಾಹ್ನ 3 ಗಂಟೆ ವರೆಗೆ ವಿಶ್ರಾಂತಿ ಪಡೆಯಬೇಕಾಗಿದೆ. ಶಿಫ್ಟ್ ಮಧ್ಯಾಹ್ನ 12ಕ್ಕೆ ಕೊನೆಗೊಳಿಸಿ ಸಂಜೆ 3ಕ್ಕೆ ಆರಂಭಿಸುವ ರೀತಿಯಲ್ಲಿ ಕೆಲಸದ ಸಮಯ ನಿಗದಿಪಡಿಸಿರು ವುದಾಗಿ ಲೇಬರ್ ಕಮಿಶನರ್ ತಿಳಿಸಿದ್ದಾರೆ. ಮೇ …

ತಲಪಾಡಿ ಟೋಲ್‌ಗೇಟ್ ಉಪೇಕ್ಷಿಸಲು ಮಂಜೇಶ್ವರ ಪಂ. ಜನತೆ ನಿರ್ಧಾರ: ಹೊಸ ಬೈಪಾಸ್ ರಸ್ತೆಗೆ ಸಿದ್ಧತೆ

ಮಂಜೇಶ್ವರ: ತಲಪಾಡಿ ಟೋಲ್ ಗೇಟ್ ಮತ್ತೆ ಸುದ್ದಿಯಾಗುತ್ತಿದೆ. ಇಬ್ಬಗೆ ನೀತಿಯ ವಿರುದ್ಧ ನ್ಯಾಯ ದೊರ ಕಿಸಿಕೊಡುವಂತೆ ಮಂಜೇಶ್ವರದ ಜನತೆ ಅದೆಷ್ಟೋ ಮನವಿಯನ್ನು ಸಲ್ಲಿಸಿ ಹಲವು ಪ್ರತಿಭಟನೆಗಳನ್ನು ನಡೆಸಿದರು ಕೂಡಾ ಟೋಲ್ ಬೂತ್ ನಿರ್ವಾಹಕರ ನಡುವೆ ಘರ್ಷಣೆಗಳು ಆಗಾಗ ಸಂಭವಿಸುತ್ತಲೇ ಇದೆ. ಆದರೆ ಯಾವುದೇ ಪರಿಹಾರ ಕಾಣಲು ಸಾಧ್ಯವಾಗಿರಲಿಲ್ಲ. ತಲಪಾಡಿ ಪಂಚಾಯತಿಗೊಳಪಟ್ಟ ವಾಹನ ಗಳಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಟೋಲ್ ಗೇಟ್ ನಿರ್ವಾಹಕರು ಮಂಜೇಶ್ವರ ಪಂಚಾಯತಿಗೊಳಪಟ್ಟವರಿಗೆ ಶುಲ್ಕ ವಿಧಿಸುತ್ತಿರುವುದು ಎಲ್ಲಿಯ ನ್ಯಾಯ…? ಇದು ಇಲ್ಲಿಯ ಗ್ರಾಮಸ್ಥರ …

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ರಿಕ್ಷಾ ಚಾಲಕ ಸಾವು

ಕಾಸರಗೋಡು: ವಾಹನ ಅಪಘಾತದಲ್ಲಿ  ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ. ಕುಟ್ಟಿಕ್ಕೋಲ್ ಚೋನೋಕಿ ನಿವಾಸಿ ಪ್ರಕಾಶನ್ (48) ಸಾವನ್ನಪ್ಪಿದ ದುರ್ದೈವಿ. ಬಂದಡ್ಕಕ್ಕೆ ಸಮೀಪದ ಮಾಣಿಮೂಲೆ ಪುಳಂಜಾಲ್‌ನಲ್ಲಿ ನಾಲ್ಕು ದಿನಗಳ ಹಿಂದೆ ಪ್ರಕಾಶನ್ ಚಲಾಯಿಸುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಅಲ್ಲಿನ ಸೇತುವೆಯಿಂದ ಹೊಳೆಗೆ ಬಿದ್ದಿತ್ತು. ಅದರಿಂದ ಗಂಭೀರ ಗಾಯಗೊಂಡ ಪ್ರಕಾಶ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗಿತ್ತು. ತಪಾಸಣೆಯಲ್ಲಿ ಶ್ವಾಸಕೋಶದೊಳಗೆ ನೀರು ಪ್ರವೇಶಿಸಿರುವುದಾಗಿ ತಿಳಿದು ಬಂದಿತ್ತು. ಚಿಕಿತ್ಸೆ ಮಧ್ಯೆ ಅವರು ನಿನ್ನೆ ಅಸುನೀಗಿದ್ದಾರೆ. …