ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ರಾಜಗೋಪಾಲನ್ ಆಯ್ಕೆ

ಕಾಸರಗೋಡು: ಸಿಪಿಎಂನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯಾಗಿ ಶಾಸಕ ಎಂ. ರಾಜಗೋಪಾ ಲನ್ ಆಯ್ಕೆಗೊಂಡಿ ದ್ದಾರೆ. ಜಿಲ್ಲಾ ಸಮಿತಿಗೆ 36 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹಳೆ ಜಿಲ್ಲಾ ಸಮಿತಿಯ ಏಳು ಮಂದಿಯನ್ನು ಹೊಸ ಜಿಲ್ಲಾ ಸಮಿತಿಯಿಂದ ಹೊರತುಪಡಿಸಲಾಗಿದೆ. 9 ಹೊಸ ಮುಖಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಎಂ.ಬಿ. ಬಾಲಕೃಷ್ಣನ್ ಸತತ ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿ ದ್ದರು. ಅವರಿಗೆ 75 ವರ್ಷ ಮೀರಿದ ಹಿನ್ನೆಲೆಯಲ್ಲಿ ಅವರ ಬದಲು ಎಂ. ರಾಜಗೋಪಾಲನ್‌ರನ್ನು ಹೊಸ ಕಾರ್ಯದರ್ಶಿಯಾಗಿ ಆರಿಸಲಾಗಿದೆ. ನಿನ್ನೆ ಹೊಸದುರ್ಗದಲ್ಲಿ …

ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಲಘು ಭೂಕಂಪನ: ಜನರಲ್ಲಿ ಆತಂಕ

ಕಾಸರಗೋಡು: ವೆಳ್ಳೇರಿಕುಂಡ್ ತಾಲೂಕಿನಲ್ಲಿ ಲಘು ಭೂಕಂಪನ ಅನುಭವಗೊಂಡಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಇಂದು ಮುಂಜಾನೆ 1.35 ರ ವೇಳೆ ಭೂಕಂಪನ ಅನುಭವಗೊಂಡಿದೆ. ಬಿರಿಕುಳಂ, ಕೋಟಮಜಲ್, ಪರಪ್ಪ, ಒಡಯಂ ಚಾಲ್, ಬಳಾಲ್ ಕೊಟ್ಟೋಡಿ ಪರಪ್ಪ, ಪಾಲಂಕಲ್ ಎಂಬೀ ಭಾಗಗಳಲ್ಲಿ ಭೂಕಂಪನ ಅನುಭವಗೊಂಡಿರುವುದಾಗಿ ತಿಳಿಸಲಾಗಿದೆ. ಈ ಪ್ರದೇಶಗಳಲ್ಲಿ ನಾಲ್ಕೈದು ಸೆಕೆಂಡುಗಳ ತನಕ ಅಸಾಮಾನ್ಯ ಶಬ್ದ ಕೇಳಿ ಬಂದಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಮಂಚ ಸಹಿತ ಪೀಠೋಪಕರಣಗಳು ಅಲುಗಾಡಿವೆ. ಪಡಿಯಾನ್‌ವಳಪ್ಪ್ ಎಂಬಲ್ಲಿ ಇದೇ ರೀತಿ ಅನುಭವಗೊಂ ಡಿದೆ. ಚುಳ್ಳಿಕೆರೆ ಕಾಂಞಿರತ್ತಡಿಯಲ್ಲಿ ಹಲವರು …

ಮನೆಯಲ್ಲಿ ಬಚ್ಚಿಡಲಾಗಿದ್ದ 2.034 ಕೆಜಿ ಗಾಂಜಾ ವಶ: ಓರ್ವ ಸೆರೆ

ಕುಂಬಳೆ: ಕುಂಬಳೆ ಸಮೀಪದ ಕೊಯಿಪ್ಪಾಡಿ ಬಲ್ಲಂಪಾಡಿಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋಬ್  ಕೆ.ಎಸ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ 2.034 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ  ಬಲ್ಲಂಪಾಡಿಯ ಅಬ್ದುಲ್ಲ ಬಿ (50) ಎಂಬಾತನನ್ನು ಬಂಧಿಸಿ  ಆತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕುಂಬಳೆ  ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್  ಸಾನಿಧ್ಯದಲ್ಲಿ ಬಂಧಿತನ ದೇಹ ತಪಾಸಣೆ ನಡೆಸಲಾಯಿತು. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ …

ಮೈಸೂರಿನಲ್ಲಿ ವಾಹನ ಅಪಘಾತ : ವಯನಾಡಿನ ನೃತ್ಯ ಅಧ್ಯಾಪಿಕೆ ಮೃತ್ಯು

ವಯನಾಡು: ಮೈಸೂರಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಾನಂತವಾಡಿ ನಿವಾಸಿಯಾದ ನೃತ್ಯ ಅಧ್ಯಾಪಿಕೆ ಮೃತಪಟ್ಟರು. ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್  ಮೈತ್ರಿ ನಗರದ ಜೋಸಿ-ರೀನ ದಂಪತಿಯ ಪುತ್ರಿ ಅಲೀಶ (36) ಮೃತಪಟ್ಟ ದುರ್ದೈವಿ. ಅಲೀಶ ಪತಿ ಜೋಬಿನ್ ಜೊತೆ ನೃತ್ಯ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದಾಗ ಗುರುವಾರ ಮಧ್ಯರಾತ್ರಿ  ಮೈಸೂರಿನಲ್ಲಿ ಅಪಘಾತ ಸಂಭವಿಸಿದೆ.  ಇವರು ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಮಗುಚಿ ಅಪಘಾತ ಸಂಭವಿಸಿ ದೆಯೆಂದು ತಿಳಿದುಬಂದಿದೆ.  ಗಂಭೀರ ಗಾಯಗೊಂಡ ಅಲೀಶರನ್ನು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು …

5.140 ಗ್ರಾಂ ಎಂಡಿಎಂಎ ವಶ: ಯುವಕ ಸೆರೆ

ಕಾಸರಗೋಡು: ಹೊಸದುರ್ಗ ರೈಲು ನಿಲ್ದಾಣ ಪರಿಸರದಲ್ಲಿ ಹೊಸದುರ್ಗ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕ ದ್ರವ್ಯವಾದ 5.140 ಗ್ರಾಂ ಎಂಡಿ ಎಂಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕೊವ್ವಲ್‌ಪಳ್ಳಿ ಫೌಸಿಯಾ ಮಂಜಿಲ್‌ನ  ಶರೀಫ್ ಟಿ.ಕೆ (25) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್  ಪಿ ನೀಡಿದ ನಿರ್ದೇಶ ಪ್ರಕಾರ ಎಸ್‌ಐ ಗಳಾದ ಅಖಿಲ್ ಟಿ, ಮೋಹನ್ ವಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಕೇಶ್ …

ಹಿರಿಯ ಪತ್ರಕರ್ತ ನಿಧನ

ಕಾಸರಗೋಡು: ಹಿರಿಯ ಪತ್ರಕರ್ತ ಮುಸ್ಲಿಂ ಲೀಗ್ ನೇತಾರನಾದ ವಳವಕ್ಕಾಡ್ ನಿವಾಸಿ ವಿ.ಟಿ. ಶಾಹುಲ್ ಹಮೀದ್ (74) ನಿಧನ ಹೊಂದಿದರು. 1970ರಿಂದಲೇ ಚಂದ್ರಿಕ ಪತ್ರಿಕೆಯಲ್ಲಿ ಇವರು ಸೇವೆ ಆರಂಭಿಸಿದ್ದರು. ತೃಕ್ಕರಿಪುರ, ಪಯ್ಯನ್ನೂರು ಪಂಚಾಯತ್‌ಗಳಲ್ಲಿ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿಯಾಗಿ, ಎಸ್‌ಟಿಯು ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ತೃಕ್ಕರಿಪುರ ಗ್ರಾಮ ಪಂಚಾಯತ್ ಆಡಳಿತ ಸಮಿತಿಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಎನ್.ಪಿ. ಮರಿಯಮ್ಮ, ಮಕ್ಕಳಾದ ಮುಹಮ್ಮದಲಿ, ನಿಸಾರ್, ಫಾತಿಮ, ರಶೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿಖರ ಪ್ರತಿಷ್ಠೆ

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ನಿನ್ನೆ ಬೆಳಗ್ಗೆ ಶ್ರೀ ಉಮಾಮಹೇಶ್ವರ ಮತ್ತು ಸಪರಿವಾರ ದೇವರ ಪ್ರತಿಷ್ಠೆ ಜರಗಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ತಾಂತ್ರಿಕ ವಿದಿs ವಿಧಾನಗಳೊಂದಿಗೆ ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಅಂಕುರಪೂಜೆ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದರು. ರಾತ್ರಿ ನಿತ್ಯನೈಮಿತ್ಯಾದಿಗಳ ನಿರ್ಣಯ, ಅಂಕುರಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಿತು. ಭಜನಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ಭಜನ ಸಂಘ ನೆಕ್ರಾಜೆ, ಶ್ರೀ ಲಕ್ಷಿö್ಮÃಪಾರ್ವತಿ ಭಜನ ಸಂಘ …

ರಾಜ್ಯ ಮುಂಗಡಪತ್ರ: ಎನ್‌ಜಿಒ ಸಂಘ್‌ನಿಂದ ಪ್ರತಿಭಟನೆ 10ರಂದು

ಕಾಸರಗೋಡು: ರಾಜ್ಯ ಮುಂಗಡಪತ್ರ ಸರಕಾರಿ ನೌಕರರ ಮಟ್ಟಿಗೆ ನಿರಾಶಾಜನಕವೆಂದು ಕೇರಳ ಎನ್‌ಜಿಒ ಸಂಘ್ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ಬಾಕಿ ಉಳಿದಿರುವ 19 ಶೇ. ಕ್ಷಾಮಭತ್ತೆ ಮಂಜೂರು ಮಾಡದಿರುವುದು ೧೨ನೇ ವೇತನ ಪರಿಷ್ಕರಣೆಯ ಕ್ರಮ ಘೋಷಿಸದಿರುವುದು ನಿರಾಶೆ ತಂದಿದೆ. ಪಾಲುದಾರಿಕೆ ಪಿಂಚಣಿ ಹಿಂತೆಗೆಯುವುದಾಗಿ ಎಡರಂಗದ ಪ್ರಣಾಳಿಕೆಯ ಬಗ್ಗೆ ಮೌನ ವಹಿಸಿ ವಿತ್ತ ಸಚಿವ  ಮುಂಗಡಪತ್ರ ಮಂಡಿಸಿದ್ದಾರೆ. ಇದನ್ನು ಖಂಡಿಸಿ ಈ ತಿಂಗಳ 10ರಂದು ಪ್ರತಿಭಟನಾ ಮೆರವಣಿಗೆ ಸಿವಿಸ್ ಸ್ಟೇಶನ್ ಪರಿಸರದಲ್ಲಿ  ನಡೆಸಲು ಎನ್‌ಜಿಒ ಸಂಘ್ ತೀರ್ಮಾನಿಸಿದೆ. ಈ ಬಗ್ಗೆ …

ಮೊಗ್ರಾಲ್‌ನಲ್ಲಿ ಮತಸೌಹಾರ್ದತೆ: ಶ್ರೀ ಕೋಡ್ದಬ್ದು ದೈವಸ್ಥಾನ ನೇಮೋತ್ಸವಕ್ಕೆ ವಲಿಯ ಜಮಾಯತ್ ಮಸೀದಿ ಸಮಿತಿಗೆ ಆಮಂತ್ರಣ

ಕಾಸರಗೋಡು: ಮೊಗ್ರಾಲ್ ಗಾಂಧಿ ನಗರ ಶ್ರೀ ಕೋಡ್ದಬ್ದು ದೈವಸ್ಥಾನದ ನೇಮೋತ್ಸವ ಈ ತಿಂಗಳ 13ರಿಂದ 16ರ ವರೆಗೆ ನಡೆಯಲಿದೆ. ಇದರಂತೆ ದೈವಸ್ಥಾನದ ಪದಾಧಿಕಾರಿಗಳು ಮಾಮೂಲಿಯಂತೆ ಈ ಬಾರಿಯೂ ಮೊಗ್ರಾಲ್ ಕಡಪ್ಪುರ ವಲಿಯ ಜಮಾಅತ್ ಮಸೀದಿಗೆ ತಲುಪಿ ನೇಮೋತ್ಸವದ ಆಮಂತ್ರಣ ನೀಡಿದರು. ಮಸೀದಿ ಬಳಿ ಇಮಾಂ ಅಬೂಬಕರ್ ಹಾಶಿಮಿ, ಜುಮಾ ಮಸೀದಿ ಕಮಿಟಿ ಪದಾಧಿಕಾರಿಗಳಾದ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬಿ.ಎನ್. ಮುಹಮ್ಮ ದಲಿ, ಟಿ.ಎಂ. ಶುಹೈಬ್, ಇಬ್ರಾಹಿಂ ಕೊಪ್ಪಳ, ಎಂಜಿಎ ರಹ್ಮಾನ್,, ಕಾರ್ಯ ಕಾರಿ ಸದಸ್ಯರು, ಮಹಲ್ಲ್ …

ಮುಡಿಮಾರಿನಲ್ಲಿ ಯಕ್ಷಗಾನ ಬಯಲಾಟ, ಸನ್ಮಾನ 10ರಂದು

ಮುಡಿಮಾರು: ಇಲ್ಲಿನ ಚಂದ್ರಹಾಸ ಪೂಜಾರಿ ಮತ್ತು ಮಕ್ಕಳ ಸೇವೆಯಾಗಿ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಮಂಡಳಿ ಬಜ್ಪೆ ಇವರಿಂದ 25ನೇ ವರ್ಷದ ಸೇವೆಯಾಟ ಈ ತಿಂಗಳ 10ರಂದು ರಾತ್ರಿ ೮ಕ್ಕೆ ಮುಡಿಮಾರು ಬಾಕಿಮಾರು ಗದ್ದೆಯಲ್ಲಿ ಪ್ರದರ್ಶ ನಗೊಳ್ಳಲಿದೆ. ಶ್ರೀದೇವಿ ಮಹಾತ್ಮೆ ಕಥಾ ಭಾಗದಲ್ಲಿ ಖ್ಯಾತ ಕಲಾವಿದರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಿ.ಹಿಂ.ಪ. ಮಂಜೇಶ್ವರ ಮಂಡಲ ಅಧ್ಯಕ್ಷ ಕೃಷ್ಣ ಶಿವಕೃಪಾ ಅಧ್ಯಕ್ಷತೆ ವಹಿಸುವರು. ರಾಜ ಬೆಳ್ಚಪ್ಪಾಡ ಸಹಿತ …