ಸ್ವರ್ಗ-ತೂಂಬಡ್ಕ ರಸ್ತೆಯಲ್ಲಿ 1.3 ಕಿ.ಮೀ. ಶೋಚನೀಯ: ದುರಸ್ತಿಗೆ ನಾಗರಿಕರ ಬೇಡಿಕೆ

ಪೆರ್ಲ: ಸ್ವರ್ಗದಿಂದ ತೂಂಬಡ್ಕ ಮೂಲಕ ಆರ್ಲಪದವಿಗೆ ತೆರಳಿ ಸಂಪರ್ಕ ಕಲ್ಪಿಸುವ ಕೇರಳ ವ್ಯಾಪ್ತಿಯಲ್ಲಿರುವ 1.3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೊಳಗಾಗದೆ ಶೋಚನೀಯಾವಸ್ಥೆಯಲ್ಲಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವರ್ಗ-ತೂಂಬಡ್ಕ ರಸ್ತೆಯನ್ನು ಸುಮಾರು 40 ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದರು. ಅನಂತರ ಅದನ್ನು ಕರ್ನಾಟಕ ಗಡಿ ತನಕ ತಲುಪಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಬಂಟಾಜೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಈ ರಸ್ತೆ ಇದಾಗಿದ್ದು, ಕೇರಳ ಭಾಗದಲ್ಲಿರುವ ರಸ್ತೆಯಲ್ಲಿ ಇದೀಗ ಹೊಂಡಗಳು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆ …

ಮದ್ಯ ಸಹಿತ ಓರ್ವ ಸೆರೆ

ಉಪ್ಪಳ: ಬಂದ್ಯೋಡು ಕಲ್ಮಟ್ಟದಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಎಂ.ವಿ. ಸುಧೀಂದ್ರನ್‌ರ ತಂಡ ನಿನ್ನೆ ನಡೆಸಿದ ಕಾರ್ಯಾಚರ ಣೆಯಲ್ಲಿ 15.66 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಸ್ಥಳೀಯ ಸಂದೀಪ್ ರಾಘವನ್ ಎಂ. (37) ಎಂಬಾತನನ್ನು  ಬಂಧಿಸಿ ಪ್ರಕರಣ ದಾಖಳಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿತೇಂದ್ರನ್ ಕೆ. ಮತ್ತು ಸಿಜಿನ್ ಸಿ.  ಎಂಬವರು ಒಳಗೊಂಡಿದ್ದರು.

ಚೀಮೇನಿಯ ಮನೆಯಿಂದ ಕಳವು: 4 ಮಂದಿ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆ: ತನಿಖೆ ನೇಪಾಳಕ್ಕೆ ವಿಸ್ತರಣೆ

ಕಾಸರಗೋಡು: ಚೀಮೇನಿಯ ನಿಡುಂಬ ಎಂಬಲ್ಲಿ ಸಿವಿಲ್ ಇಂಜಿನಿಯರ್ ಮುಕೇಶ್ ಎಂಬವರ ಮನೆಯಿಂದ 40 ಪವನ್ ಚಿನ್ನಾಭರಣ ಹಾಗೂ ನಾಲ್ಕು ಬೆಳ್ಳಿ ಪಾತ್ರೆಗಳನ್ನು ಕಳವುಗೈದ ತಂಡವನ್ನು ಸೆರೆಹಿಡಿಯಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮನೆಯಲ್ಲಿ ಕೆಲಸಕ್ಕಾಗಿ ತಲುಪಿದ ನೇಪಾಳ ನಿವಾಸಿಗಳಾದ ದಂಪತಿಯನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಓರ್ವೆ ಮಹಿಳೆ ಸಹಿತ ನಾಲ್ಕು ಮಂದಿ ಮನೆಯಿಂದ ಕಳವು  ನಡೆಸಿರುವುದಾಗಿ ತಿಳಿದುಬಂದಿದೆ. ಈ ತಂಡ ಮನೆಗೆ ನಡೆದುಬರುವ ದೃಶ್ಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಪತ್ತೆಯಾಗಿದೆ. ಇಬ್ಬರು ಮನೆಯ ಹೊರಗೆ ಕಾವಲು ನಿಂತು ಮತ್ತಿಬ್ಬರು …

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ: ಹರಿದುಬರುತ್ತಿರುವ ಭಕ್ತಸಾಗರ

ನಾರಂಪಾಡಿ: ಶ್ರೀ ಉಮಾಮಹೇ ಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ವಿವಿಧ ಕಡೆಗಳಿಂದ ನೂರಾರು ಮಂದಿ ಭಕ್ತರು ದಿನಂಪ್ರತಿ ಆಗಮಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ಶಾಂತಿ ಹೋಮ ಮೊದಲಾದ ವೈದಿಕ ಕಾರ್ಯಕ್ರಮಗಳು, ರಾತ್ರಿ ಹೋಮ ಕಲಶಾಭಿಷೇಕ, ಅಂಕುರಪೂಜೆ ಮೊದಲಾದವು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಿತು. ಭಜನಾ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ ಹಾಗೂ ಸಂಜೆ ಶ್ರೀ ಮಾತಾ ಕುಣಿತ ಭಜನಾ ಸಂಘ ಮಾರ್ಪನಡ್ಕ ಇವರಿಂದ ಕುಣಿತ …

ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳು ವಾಹನ ಸವಾರರಲ್ಲಿ ಆತಂಕ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರುಪದವ್-ಧರ್ಮತ್ತಡ್ಕ, ಸರ್ಕುತ್ತಿ ಕನಿಯಾಲ, ಬಳ್ಳೂರು ರಸ್ತೆಗಳ ವಿವಿಧೆಡೆ ಇಕ್ಕೆಡೆಗಳಲ್ಲಿ ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ವಾಹನ ಸವಾರರು ದೂರಿದ್ದಾರೆ. ಈ ದಾರಿ ಯಲ್ಲಿ ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ಪೊದೆಗಳು ಅಡ್ಡಿಯÁಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಬದಿ ಬೃಹತ್ ಹೊಂ ಡವಿದೆ. ಇದು ಅಪಾಯಕ್ಕೆ ಕಾರಣ ವಾಗುತ್ತಿರುವುದಾಗಿ ಸವಾರರು ತಿಳಿಸಿ …

ಜ್ಯೋತಿಷಿಯ ಪತ್ನಿ, ಪ್ರಿಯತಮ ಠಾಣೆಗೆ ಹಾಜರು : ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ಆದೇಶ

ಕಾಸರಗೋಡು: ಕುಂಡಂಕುಳಿಯಿಂದ ನಾಪತ್ತೆಯಾದ ಜ್ಯೋತಿಷಿಯ ಪತ್ನಿ ಹಾಗೂ ಪ್ರಿಯತಮ  ಬೇಡಗಂ  ಠಾಣೆಯಲ್ಲಿ ಹಾಜರಾದರು. ನಾವು ವಿವಾಹವಾ ಗಿದ್ದೇವೆಂದು ಇಬ್ಬರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಮಹಿಳೆಯನ್ನು ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ಆದೇಶಿಸಿದ. ಇದರೊಂದಿಗೆ ನಾಪತ್ತೆಯಾದ ಮಹಿಳೆ ಆಟೋ ಚಾಲಕನಾದ ಪ್ರಿಯತಮನ ಜೊತೆಯಲ್ಲಿ ತೆರಳಿದ್ದಾರೆ. ಫೆ. ೧ರಂದು ಕುಂಡಂಕುಳಿ ಶ್ರೀನಿಲಯದ ಶ್ರೀಕಲಾ (52) ನಾಪತ್ತೆಯಾಗಿದ್ದರು. ಬೆಳಿಗ್ಗೆ 8 ಗಂಟೆ ಹಾಗೂ ರಾತ್ರಿ 10.45 ರ ಮಧ್ಯೆ ನಾಪತ್ತೆಯಾಗಿದ್ದು, ನಾನು ತೆರಳುತ್ತೇನೆ ಎಂದು ಬರೆದಿಟ್ಟು ಶ್ರೀಕಲಾ ನಾಪತ್ತೆಯಾಗಿರುವುದಾಗಿ …

ಇಬ್ಬರು ಯುವತಿಯರು ನಾಪತ್ತೆ: ತನಿಖೆ ಆರಂಭ

ಕಾಸರಗೋಡು: ಬದಿಯಡ್ಕ ಹಾಗೂ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ವಾಸಿಸುವ ಇಬ್ಬರು ಯುವತಿಯರು ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಈ ಎgಡು ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬದಿಯಡ್ಕ ಸಮೀಪ ಪಳ್ಳತ್ತಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಂಜುಳ (19) ಜನವರಿ 30ರಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಸ್ಥಳೀಯ ನಿವಾಸಿಯಾದ ಬಿರ್ಮ ಎಂಬಾತ ನೊಂದಿಗೆ ಯುವತಿ  ತೆರಳಿರು ವುದಾಗಿ ಸಂಶಯಿಸಲಾಗುತ್ತಿದೆ ಯೆಂದು ತಾಯಿ ಲಲಿತ ಬದಿಯಡ್ಕ ಪೊಲೀ ಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಗರೆ. ಲಲಿತ ಹಾಗೂ ಕುಟುಂಬ ಕರ್ನಾಟಕದ ಬಾಗಲಕೋಟೆ …

ಚಿರತೆ ಭಯ ನೀಗಿಸಲು ಅರಣ್ಯ ಇಲಾಖೆಯಿಂದ ಬಿಗು ನಿಗಾ

ಬೋವಿಕ್ಕಾನ: ಬೋವಿಕ್ಕಾನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ರಾತ್ರಿ ತಪಾಸಣೆಯನ್ನು ತೀವ್ರಗೊಳಿಸಿದೆ. ಕಾರಡ್ಕ, ಮುಳಿಯಾರು, ದೇಲಂಪಾಡಿ, ಪುಲ್ಲೂರು-ಪೆರಿಯ, ಬೇಡಡ್ಕ, ಕುತ್ತಿಕ್ಕೋಲ್ ಪಂಚಾಯತ್‌ಗಳ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಚಿರತೆಯ ಭೀತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾಗ್ರತೆ ಪಾಲಿಸುತ್ತಿದೆ. ಕಳೆದ ಆಗಸ್ಟ್‌ನಿಂದ ವಿವಿಧ ಪಂಚಾಯತ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಆಕ್ರಮಿಸಿ ಕೊಂದ ಹಲವು ಪ್ರಕರಣಗಳು ವರದಿಯಾಗಿದ್ದು, ಮುಂದೆ ಈ ರೀತಿ ಸಂಭವಿಸದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ. ಚಿರತೆ ಇರುವ ಸ್ಥಳವನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ವಿವಿಧ ಪ್ರದೇಶಗಳಲ್ಲಿ …

ಮಂಗಲ್ಪಾಡಿಯಲ್ಲಿ 10 ಸರಕಾರಿ ಕಟ್ಟಡಗಳು ಅನಾಥ

ಮಂಗಲ್ಪಾಡಿ: ಪಂಚಾಯತ್‌ನ ಶಿಕ್ಷಣ ಇಲಾಖೆಯ 10 ಕಟ್ಟಡಗಳು ಅನಾಥವಾಗಿ ಬಿದ್ದುಕೊಂಡಿವೆ. ೮ ಕಟ್ಟಡಗಳು ಹಳೆಯ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್, 2 ಕಟ್ಟಡಗಳು ಚಿನ್ನಮೊಗರು ಶಿರಿಯ ಏಕೋಪಾ ಧ್ಯಾಯ ವಿದ್ಯಾಲಯಗಳಾಗಿವೆ. ಇಲ್ಲಿ ಈಗ ಜಿಬಿಎಲ್‌ಪಿ ಶಾಲೆ ಮಂಗಲ್ಪಾಡಿ ಮಾತ್ರವೇ ಕಾರ್ಯಾಚರಿಸುತ್ತಿದೆ. ಈ ಕಟ್ಟಡಕ್ಕೆ 100 ವರ್ಷಕ್ಕೂ ಹೆಚ್ಚು ಹಳಮೆ ಇದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿಯ ಅಂಗವಾಗಿರುವ ಹೈಸ್ಕೂಲ್, ಯುಪಿ ಶಾಲೆ, ಹೈಯರ್ ಸೆಕೆಂಡರಿ ನೆಲೆಗೊಂಡಿರುವ ಜನಪ್ರಿಯ ಜಂಕ್ಷನ್‌ಗೆ ಸ್ಥಳಾಂತರಗೊಂಡ ಕಾರಣ ೮ ಕಟ್ಟಡಗಳು …

ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ 17ರಂದು

ಕಲ್ಲಿಕೋಟೆ: ಬಿಜೆಪಿ ನೂತನ ರಾಜ್ಯ ಅಧ್ಯಕ್ಷರ ಆಯ್ಕೆ ಈ ತಿಂಗಳ ೧೭ರಂದು ನಡೆಯಲಿದೆಯೆಂದು ತಿಳಿದುಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಎಂ.ಟಿ. ರಮೇಶ್, ವಿ. ಮುರಳೀಧರನ್, ಶೋಭಾ ಸುರೇಂದ್ರನ್ ಎಂಬಿವರ ಹೆಸರು ಪರಿಗಣನೆಯಲ್ಲಿದೆ. ಆದರೆ ಎಂ.ಟಿ. ರಮೇಶ್ ಅಧ್ಯಕ್ಷರಾಗುವ ಸಾಧತೆ ಹೆಚ್ಚಿದೆ.  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ವರದಿಯನ್ನು ಕೇಂದ್ರ ನಾಯಕತ್ವಕ್ಕೆ ನೀಡಲಾಗಿದೆ. ಎಂ.ಟಿ. ರಮೇಶ್‌ರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶವೊದಗಿ ಸಬೇಕೆಂದು ಒಂದು ವಿಭಾಗ ನೇತಾರರು ಸೂಚಿಸಿದ್ದಾರೆಂದು ತಿಳಿದುಬಂದಿದೆ.