ಎಂ.ಕಾಂ ವಿದ್ಯಾರ್ಥಿನಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಎಂಕಾಂ ವಿದ್ಯಾರ್ಥಿನಿಯಾದ ಯುವತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಬಳಿಯ ಕೆದುಂಬಾಡಿ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಆಮಿನತ್  ರಯಾನ (22) ಮೃತಪಟ್ಟ ಯುವತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 2.30ರ ವೇಳೆ ಬೆಡ್‌ರೂಂಗೆ ತೆರಳಿದ ಆಮಿನತ್ ರಯಾನ ದೀರ್ಘ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ತಾಯಿ ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ಯುವತಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರ.   ಕೂಡಲೇ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ …

ಕಿಫ್‌ಬಿ ರಸ್ತೆಗಳಲ್ಲೂ ಟೋಲ್: ಕಾನೂನು ನಿರ್ಮಾಣಕ್ಕೆ ಸಚಿವ ಸಂಪುಟ ಅನುಮತಿ

ತಿರುವನಂತಪುರ: ರಾಜ್ಯದಲ್ಲಿ ಕಿಫ್‌ಬಿ ಯೋಜನೆ ಪ್ರಕಾರ ನಿರ್ಮಿಸುವ ರಸ್ತೆಗಳಲ್ಲಿ  ಸಂಚರಿಸುವ ವಾಹನಗಳಿಂದಲೂ ಇನ್ನು ಮುಂದೆ ಟೋಲ್ ಸಂಗ್ರಹಿಸಲು ಸರಕಾರ ಆಲೋಚಿಸುತ್ತಿರುವುದಾಗಿ ವರದಿಯಾಗಿದೆ. ೫೦ ಕೋಟಿ ರೂಪಾ ಯಿಗಿಂತ ಹೆಚ್ಚು ಮೊತ್ತ ವ್ಯಯಿಸಿ ನಿರ್ಮಿಸಿದ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಲಾಗುವುದು. ಇದಕ್ಕೆ ಸಂಬಂಧಪಟ್ಟು ಕಾನೂನು ನಿರ್ಮಾ ಣಕ್ಕೆ ಸಚಿವ ಸಂಪುಟದ ಅನುಮತಿ ಲಭಿಸಿದೆ. ಸರಕಾರ ಸಾಲ ಪಡೆಯುವು ದರಿಂದ ಉಂಟಾಗುವ ಸಂದಿಗ್ಧತೆ ಯನ್ನು ಟೋಲ್ ಸಂಗ್ರಹ ಮೂಲಕ ಪರಿಹರಿಸಬಹುದೆಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಗ್ರಹಿಸುವ ರೀತಿಯಲ್ಲೇ  ಕಿಫ್‌ಬಿ ಟೋಲ್ …

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಇಳಿದು ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮದ ದಳ

ಕಾಸರಗೋಡು: ಮನೆ ಬಳಿಯ ೪೫ ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲೆಂದು ಇಳಿದ ನಂತರ ಮೇಲ ಕ್ಕೇರಲು ಸಾಧ್ಯವಾಗದೆ ಅದರಲ್ಲಿ ಸಿಲುಕಿಕೊಂಡ ವ್ಯಕ್ತಿಯನ್ನು ಕಾಸರ ಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ಮಾಯಿಪ್ಪಾಡಿ ಬಳಿ ನಡೆದಿದೆ. ಶಿರಿಬಾಗಿಲು ಪೆರಿಯಡ್ಕದ ಶಶಿ (50)ಯವರ ಬಾವಿಗೆ ನಿನ್ನೆ ಬೆಕ್ಕು ಬಿದ್ದಿತ್ತು. ಅದನ್ನು ಕಂಡ ಶಶಿ ತಕ್ಷಣ ಬಾವಿಗಿಳಿದು ಬೆಕ್ಕಿನ ಪ್ರಾಣ ಉಳಿಸಿ ದರೂ, ಅವರಿಗೆ ಮೇಲಕ್ಕೇರಲು ಸಾಧ್ಯವಾಗಲಿಲ್ಲ. ಆಗ ಸ್ಥಳೀಯರಾದ ರಾಜು ಮತ್ತು ಚಂದ್ರಹಾಸ ಎಂಬವರು ಸೇರಿ ಶಶಿಯವರನ್ನು ರಕ್ಷಿಸಲೆತ್ನಿಸಿದರೂ …

ಭಜನಾ ಮಂದಿರದ ವಿಗ್ರಹದಿಂದ ಚಿನ್ನದ ಸರ ತೆಗೆದು ನಕಲಿ ಸರ ತೊಡಿಸಿದ ಆರೋಪಿ ಸೆರೆ

ಕಾಸರಗೋಡು: ಕೂಡ್ಲು ಪಾರೆಕಟ್ಟೆ ಶಾಸ್ತಾನಗರ  ಶ್ರೀ ಅಯ್ಯಪ್ಪ ಭಜನಾ ಮಂದಿರದ ವಿಗ್ರಹಕ್ಕೆ ತೊಡಗಿಸಿದ್ದ 2,60,000 ರೂ. ಮೌಲ್ಯದ ನಾಲ್ಕು ಪವನ್‌ನ ಚಿನ್ನದ ಸರ ತೆಗೆದು ನಕಲಿ ಚಿನ್ನದ ಸರ ತೊಡಿಸಿದ ಪ್ರಕರಣಕ್ಕೆ ಸಂಬಂಧಿಸಿ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಭಜನಾ ಮಂದಿರದ  ಮಾಜಿ ಕಾರ್ಯದರ್ಶಿ ಕೂಡ್ಲು ರಾಮದಾಸನಗರ ಹೊಸ ಮನೆ ರಸ್ತೆ ನಂದಗೋಕುಲದ  ದಯಾನಂದ ಶೆಟ್ಟಿ (43)ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಪ್ರಸ್ತುತ ಭಜನಾ ಮಂದಿರದ ಅಧ್ಯಕ್ಷರು ಈ ಬಗ್ಗೆ ಪೊಲೀಸರಿಗೆ …

ಬೋವಿಕಾನ ಶಾಲೆಯ ಪ್ಲಸ್‌ಟು ಅಧ್ಯಾಪಿಕೆ ನಿಧನ

ಬೋವಿಕ್ಕಾನ: ಇಲ್ಲಿನ ಬಿಎಆರ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಅಧ್ಯಾಪಿಕೆ ಹೃದಯಾಘಾತದಿಂದ ನಿಧನ ಹೊಂದಿದರು. ಕಣ್ಣೂರು ಪಳ್ಳಿಕುನ್ ನಿವಾಸಿ ಎಂ. ಪ್ರೀತಾ (54) ಮೃತಪಟ್ಟವರು. ಇಕಾನಾಮಿಕ್ಸ್ ವಿಭಾಗ ಅಧ್ಯಾಪಿಕೆಯಾಗಿ ದ್ದಾರೆ. ನಿನ್ನೆ ರಾತ್ರಿ  ಅಣಂಗೂರಿನಲ್ಲಿ ವಾಸ ಸ್ಥಳದಲ್ಲಿ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯಾನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆ ವೇಳೆಗೆ ಮೃತಪಟ್ಟಿ ದ್ದಾರೆ. ಇಂದು ಬೆಳಿಗ್ಗೆ ಬೋವಿಕ್ಕಾನ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿ ಸಲಾಯಿತು. ಬಳಿಕ ಪಳ್ಳಿಕುನ್ನಿನ ಮನೆಗೆ ಮೃತದೇಹವನ್ನು ಕೊಡೊಯ್ಯ ಲಾಗುವುದು. ಮೃತರು ಪತಿ ವಿ. …

ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ: ಓರ್ವ ಸೆರೆ

ಬದಿಯಡ್ಕ: ಪೊಲೀಸರ ಕರ್ತ ವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಬೇಳ ಚೆಡೇಕಲ್ ನಿವಾಸಿ ರತೀಶ್ ಯು (32) ಎಂಬಾ ತನನ್ನು ಬದಿಯಡ್ಕ ಪೊಲೀಸರು ಬಂ ಧಿಸಿ ಕೇಸು ದಾಖಲಿಸಿಕೊಂ ಡಿದ್ದಾರೆ. ನೀರ್ಚಾಲಿನಲ್ಲಿ ನಿನ್ನೆ ಸಂಜೆ ತೆರೆದ ಸ್ಥಳದಲ್ಲಿ ರತೀಶ್ ಬಹಿರಂಗವಾಗಿ ಮದ್ಯಪಾನಗೈಯ್ಯು ತ್ತಿದ್ದನೆಂದೂ, ಆಗ ಆಲ್ಕೋಹಾಲ್ ಮೀಟರ್ ಬಳಸಿ ಆತನನ್ನು ಪರೀಕ್ಷೆಗೊಳಪಡಿಸಲು ಪೊಲೀಸರು ಮುಂದಾಗಿದ್ದು,  ಆತ ಅದಕ್ಕೆ ತಯಾ ರಾಗದಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಳ್ಳುವ ವೇಳೆ ಪೊಲೀಸರನ್ನು  ದೂಡಿ ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ …

ಗಲ್ಫ್ ಉದ್ಯಮಿ ಕೊಲೆ : ನಾಲ್ಕನೇ ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು

ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯಮಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55) ಕೊಲೆ ಪ್ರಕರಣಕ್ಕೆ ಸಂಬAಧಿಸಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳ ಪೈಕಿ ನಾಲ್ಕನೇ ಆರೋಪಿ ಮಧೂರು ಕೊಲ್ಯ ನವಾಸಿ ಆಯಿಷಾ (43)ಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶರತ್ತುಬದ್ದ ಜಾಮೀನು ಮಂದೂರು ಮಾಡಿದೆ.ಒಂದು ಲಕ್ಷ ರೂ. ಮುಚ್ಚಳಿಕೆ ಹಾಗೂ ಅದೇ ಮೊತ್ತದ ಇಬ್ಬರು ವ್ಯಕ್ತಿಗಳು ಮುಚ್ಚಳಿಕೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ತನಿಖೆ ಯೊಂದಿಗೆ ಸಹಕರಿಸಬೇಕು, ಸಾಕ್ಷಿ …

ತಲೆಯಲ್ಲಿ ಭರಣಿ ಸಿಲುಕಿ ಸಂಕಷ್ಟದಲ್ಲಿದ್ದ ನಾಯಿಯನ್ನು  ಅಪಾಯದಿಂದ ಪಾರು ಮಾಡಿದ ವ್ಯಾಪಾರಿ, ಅನ್ಯರಾಜ್ಯ ಕಾರ್ಮಿಕರು

ಕುಂಬಳೆ: ಪ್ಲಾಸ್ಟಿಕ್ ಭರಣಿಯೊಳಗೆ ತಲೆ ಸಿಲುಕಿಕೊಂಡು ಹಲವು ದಿನಗಳಿಂದ ವಿವಿಧೆಡೆ ಅಲೆ ದಾಡುತ್ತಾ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬೀದಿನಾಯಿಯನ್ನು ಪ್ರಾಣಿ ಸ್ನೇಹಿ ಹಾಗೂ ಅನ್ಯರಾಜ್ಯ ಕಾರ್ಮಿಕರು ಸೇರಿ ರಕ್ಷಿಸಿದರು. ಕುಂಬಳೆ ಭಾಸ್ಕರನಗರ ನಿವಾಸಿ ವ್ಯಾಪಾರಿಯಾದ ಮುಹಮ್ಮದ್ ಅಸೀಸ್ ಹಾಗೂ ಬಿಹಾರ ನಿವಾಸಿಗಳಾದ ವಿನೋದ್ ಹಾಗೂ ಬೋಲ ಎಂಬಿವರು ಸೇರಿ ನಾಯಿಯನ್ನು ಹಿಡಿದು ಅಜರ ತಲೆಯನ್ನು ಭರಣಿಯಿಂದ ತೆಗೆದಿದ್ದಾರೆ. ಒಂದು ವಾರ ಹಿಂದೆ ಕುಂಬಳೆ ಬದ್ರಿಯಾ ನಗರದಲ್ಲಿ ತಲೆ ಭರಣಿಯಲ್ಲಿ ಸಿಲುಕಿಕೊಂಡ ನಾಯಿ ಅಲೆದಾಡುತ್ತಿತ್ತು. ಹಲವರು ಭರಣಿ ತೆರವುಗೊಳಿಸಲು  …

ಮಿಂಚಿಪದವು ಶ್ರೀ ಕಾವೇರಮ್ಮ ಕ್ಷೇತ್ರ ಜೀರ್ಣೋದ್ಧಾರ ಲಕ್ಕಿ ಕೂಪನ್ ಬಿಡುಗಡೆ

ಮಿಂಚಿಪದವು: ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದಂಗವಾಗಿ ಬ್ರಹ್ಮಕಲಶ ನಿಧಿ ಸಂಗ್ರಹಾರ್ಥ ಲಕ್ಕಿಕೂಪನ್ ಬಿಡುಗಡೆ ನಿನ್ನೆ ಕ್ಷೇತ್ರ ಸಭಾಂಗಣದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಾಮೋದರ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ಕಂಟಾರು ವಾಸುದೇವ ತಂತ್ರಿ ದೀಪ ಪ್ರಜ್ವಲಿಸಿದರು. ಸಂತೋಷ್ ರೈ ಸಬ್ರುಕಜೆ ಕೂಪನ್ ಬಿಡುಗಡೆಗೊ ಳಿಸಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಮುಳಿಯಾರು ಕ್ಷೇತ್ರದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ದಾಮೋದರ ಕುಳ, ಮನಮೋಹನ ರೈ ಪಿಂಡಗ, ಪಿ.ಕೆ. …

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕಕ್ಕೆ ಅದ್ದೂರಿಯ ಚಾಲನೆ

ನಾರಂಪಾಡಿ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕಕ್ಕೆ ನಿನ್ನೆ ಅದ್ಧೂರಿಯ ಚಾಲನೆ ನೀಡಲÁಯಿತು. ಬೆಳಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ ನಡೆಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟï ಆನೆಮಜಲು ದೀಪಬೆಳಗಿಸಿದರು.ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದಿAದ ಆರಂಭಗೊAಡ ಹಸಿರುವಾಣಿ ಹೊರೆಕಾಣಿಕೆ ಮೆರ ವಣಿಗೆಯೊಂದಿಗೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕುರುಮುಜ್ಜಿಕಟ್ಟೆ, ವಲವಡಲ ಶ್ರೀ ಮಹಾದೇವ ಶ್ರೀ ಮಹಾವಿಷ್ಣು ದೇವಸ್ಥಾನ ಪಣಿಯೆ, ಅಂಕುರ್ ಎಂಟರ್‌ಪ್ರೆöÊಸಸ್ ಬದಿಯಡ್ಕ ಹಾಗೂ ಭಗವದ್ಭಕ್ತರು ತಮ್ಮ …