ಪಂಚಾಯತ್ ಚುನಾವಣೆ: ಒಂದೂವರೆ ವರ್ಷದಿಂದ ಮುಚ್ಚಿದ ಕಂಚಿಕಟ್ಟೆ- ಕೊಡ್ಯಮ್ಮೆ ಸೇತುವೆ ನಿರ್ಮಾಣಕ್ಕೆ ಮತ್ತೆ ಹೆಚ್ಚಿದ ಬೇಡಿಕೆ

ಕುಂಬಳೆ: ಜೀರ್ಣಗೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲವೆಂದು ಒಂದೂವರೆ ವರ್ಷದ ಹಿಂದೆ ಮುಚ್ಚಿದ ಕುಂಬಳೆ ಕೊಡ್ಯಮ್ಮೆ- ಕಂಚಿಕಟ್ಟೆ ವಿಸಿಬಿ ಕಂ ಬ್ರಿಡ್ಜ್ ಸಂಪೂರ್ಣ ನಾಶದತ್ತ ಸಾಗುತ್ತಿದೆ. ಸ್ಥಳೀಯರು ಮನವಿ ನೀಡಿದರೂ ಸೇತುವೆ ನಿರ್ಮಾಣಕ್ಕೆ ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ತ್ರಿಸ್ತರ ಪಂಚಾಯತ್ ಪದಾಧಿಕಾರಿಗಳು ಈ ವರ್ಷವೇ ನಬಾರ್ಡ್ ಯೋಜನೆಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಸೇರಿದ ತಂಡವೊಂದು ಸಚಿವ ಕೆ.ಎನ್. ಬಾಲಗೋಪಾಲ್, ಸಚಿವ ರೋಷಿ ಅಗಸ್ಟಿನ್ ಎಂಬಿವರನ್ನು …

ಹಿರಿಯ ವ್ಯಾಪಾರಿ ನಿಧನ

ಉಪ್ಪಳ: ಇಲ್ಲಿನ ಭಗವತೀ ಗೇಟ್ ಬಳಿ ಸುಮಾರು 50 ವರ್ಷಗಳಿಂದ ವ್ಯಾಪಾರಿಯಾಗಿದ್ದ ಬಂಟ ಸಮುದಾಯದ ಹಿರಿಯ, ಭಗವತಿ ನಡುಮನೆಗುತ್ತು ಕುಟುಂಬ ಸದಸ್ಯ, ಪ್ರಗತಿಪರ ಕೃಷಿಕ ತಿಮ್ಮಪ್ಪ ಶೆಟ್ಟಿ (85) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ  ನಿಧನ ಹೊಂದಿದರು.  ಉಪ್ಪಳ ಶ್ರೀ ಸದಾಶಿವ ಕ್ಷೇತ್ರದ ಮಾಜಿ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಇವರ ಪತ್ನಿ ಸುಶೀಲ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಇವರಿಗೆ ಮಕ್ಕಳಿಲ್ಲ. ಮೃತರು ಸಹೋದರಿ ಜಯಂತಿ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸೀತಾರಾಮ …

ಕೋಟ್ಯಂತರ ರೂ.ಗಳ ಎಂಡಿಎಂಎ ವಶ: ಮುಖ್ಯ ಆರೋಪಿಗಾಗಿ ಲುಕೌಟ್ ನೋಟೀಸು

ಕಲ್ಲಿಕೋಟೆ: ಕರಿಪ್ಪೂರ್‌ನಲ್ಲಿ ಒಂದು ಕಿಲೋ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸು ಹೊರಡಿಸಿದ್ದಾರೆ. ಕಣ್ಣೂರು ನಿವಾಸಿ ಯೂ ಒಮಾನ್‌ನಲ್ಲಿ ಉದ್ಯೋಗz ಲ್ಲಿರುವ ನೌಫಲ್ ಎಂಬಾತನ ಪತ್ತೆಗಾಗಿ  ಲುಕೌಟ್ ನೋಟೀಸು ಹೊರಡಿಸಲಾಗಿದೆ. ವಿದೇಶದಿಂದ ಇತ್ತೀಚೆಗೆ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಿದ  ಪತ್ತನಂತಿಟ್ಟ ನಿವಾಸಿ ಸೂರ್ಯ ಹಾಗೂ ಎಂಡಿಎಂಎ ಪಡೆದುಕೊಳ್ಳಲು ತಲುಪಿದ ಮಲಪ್ಪುರಂ ತಿರೂರಂಗಾಡಿಯ ಅಲಿ ಅಕ್ಬರ್, ಮುಹಮ್ಮದ್  ರಾಫಿ, ಸಿ.ಪಿ. ಬಷೀರ್ ಎಂಬಿವರನ್ನು   ಸೆರೆಹಿಡಿ ಯಲಾಗಿತ್ತು. ಇವರ ಕೈಯಿಂದ ಕೋಟ್ಯಂತರ ರೂಪಾಯಿಗಳ ಎಂಡಿಎಂಎ …

ವ್ಯಕ್ತಿ ಮನೆಯೊಳಗೆ ನೇಣು ಬಿಗಿದು ಸಾವು

ಹೊಸದುರ್ಗ: ವ್ಯಕ್ತಿಯೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ನೀಲೇಶ್ವರ ನೆಡುಕಂಡ ಎಂಬಲ್ಲಿನ ರಾಜೀವನ್ (52) ಮೃತ ವ್ಯಕ್ತಿ. ಮೊನ್ನೆ ಇವರು ಮನೆಯ ಬೆಡ್‌ರೂಂನಲ್ಲಿ ಸೀರೆ ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಟಿ. ಚೊಯ್ಯಂಬು-ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಲೀಲಾ, ಮಕ್ಕಳಾದ ಅಖಿಲ, ಆದರ್ಶ್, ಅಳಿಯ ವಿನೀಶ್, ಸಹೋದರರಾದ ರಾಜು, ರಮೇಶನ್, ಸಹೋದರಿ ತಂಗಮಣಿ ಮೊದಲಾ ದವರನ್ನು ಅಗಲಿದ್ದಾರೆ.

ಕಲ್ಲಗದ್ದೆ- ಮೇಕೆಪದವು ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆ: ದುರಸ್ತಿಗೆ ಸ್ಥಳೀಯರ ಒತ್ತಾಯ

ಪೈವಳಿಕೆ: ಪಂಚಾಯತ್‌ನ ೬ನೇ ವಾರ್ಡ್ ಕಲ್ಲಗದ್ದೆ- ಮೇಕೆಪದವು ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಸುಮಾರು ೧ ಕಿಲೋ ಮೀಟರ್ ರಸ್ತೆಯಲ್ಲಿ ಡಾಮರು ನಾಪತ್ತೆಯಾಗಿದ್ದು, ಹೊಂಡ ಸೃಷ್ಟಿಯಾಗಿದೆ. ವಾಹನ ಸಂಚಾರ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು ೨೦ರಷ್ಟು ಕುಟುಂಬಗಳು ವಾಸಿಸುತ್ತಿದ್ದು, ಹಲವು ವರ್ಷಗಳಿಂದ ಶೋಚನೀಯಗೊಂಡ ಈ ರಸ್ತೆಯನ್ನೇ ಇವರು ಬಳಸುತ್ತಿದ್ದಾರೆ. ದುರಸ್ತಿಗೊಳಿಸಲು ಪಂಚಾಯತ್‌ಗೆ ಈ ಹಿಂದೆ ಸ್ಥಳೀಯರು ಮನವಿ ಮಾಡಿದರೂ ಯಾವುದೇ ಕ್ರಮ …

ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣ: ಆರೋಪಿಗೆ ಮೂರು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯ ಮೂರು ವರ್ಷ ಕಠಿಣ ಸಜೆ ಮತ್ತು 3೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ತಲಶ್ಶೇರಿ ಮುಳಪ್ಪಿಲಂಗಾಡ್ ಕಸ್ಟಮ್ಸ್  ಕಚೇರಿಗೆ ಸಮೀಪ ರುಬಿಯಾ ಕ್ವಾರ್ಟರ್ಸ್‌ನ ನಿವಾಸಿ ಕೆ.ವಿ. ಅರ್ಶಾದ್ (25) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಇತರ ಆರೋಪಿಗಳಾದ …

ನಿಧನ

ಪೆರ್ಮುದೆ: ಹಿರಿಯ ಕೃಷಿಕ ಉದ್ಯಮಿ ಗುಂಪೆ ರಾಮ ಭಟ್ (84) ನಿಧನ ಹೊಂದಿದರು. ನಿನ್ನೆ ಮುಂಜಾನೆ ಅವರ ಸ್ವ-ಗೃಹ ಶ್ರೀ ಲಕ್ಷ್ಮಿ ನಿವಾಸದಲ್ಲಿ ನಿಧನ ಸಂಭವಿಸಿದೆ. ಇವರ ಪತ್ನಿ ಜಯಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಧಾಕೃಷ್ಣ (ಉದ್ಯಮಿ ಬೆಂಗಳೂರು), ರಾಜಗೋಪಾಲ್ (ಗುಂಪೆ ಟ್ರೇಡರ್ಸ್ ಪೆರ್ಮುದೆ), ಗೋವಿಂದರಾಜ್, ಸೊಸೆಯಂದಿರಾದ ವಿಜಯಪ್ರಭ, ಮಂಗಳಗೌರಿ, ರಾಜಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಧಾರ್ಮಿಕ ಮುಂದಾಳು ಕೋಳಾರು ಸತೀಶ್ಚಂದ್ರ ಭಂಡಾರಿ …

ವಿವಿಧೆಡೆ ಬಿಎಂಎಸ್ ಸ್ಥಾಪನಾ ದಿನಾಚರಣೆ

ಮಂಜೇಶ್ವರ: ಬಿಎಂಎಸ್ ಸ್ಥಾಪನಾ ದಿನದಂಗವಾಗಿ ವಿವಿಧ ಕಡೆಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ಮಂಜೇಶ್ವರ ವಲಯದ ಕುಂಜತ್ತೂರು ಯೂನಿಟ್‌ನಲ್ಲಿ ರವಿಮಜಲ್, ಹೊಸಂಗಡಿಯಲ್ಲಿ ಪ್ರಕಾಶ್ ಕೆ.ಪಿ, ಬೆಜ್ಜ ಯೂನಿಟ್‌ನಲ್ಲಿ ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ, ಮೊರತ್ತಣೆಯಲ್ಲಿ ರಾಮಚಂದ್ರ ಬಟ್ಟಿಪದವು, ಕೋಳ್ಯೂರ್‌ನಲ್ಲಿ ನಾರಾಯಣ ತುಂಗ, ಗುವೆದಪಡ್ಪುವಿನಲ್ಲಿ ಸತೀಶ್ ಗುರಿಕುಮೇರ್, ದೈಗೋಳಿ ಯಲ್ಲಿ ಸತ್ಯನಾರಾಯಣ ಭಟ್, ಪಾವಳ ಘಟಕದಲ್ಲಿ ರೂಪದರ, ಮಜೀರ್ಪಳ್ಳ ದಲ್ಲಿ ಸುನಿಲ್ ಧ್ವಜಾರೋಹಣಗೈದರು. ಹೊಸಂಗಡಿಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಭಾಸ್ಕರ ಬಿ.ಎಂ, ಪುಟ್ಟರಾಜು, …

ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ತ್ಯಾಜ್ಯ ಸಂಸ್ಕರಣಾ ಸ್ಥಾವರ ಯೋಜನೆ ಕೈಬಿಡಬೇಕು-ಕ್ರಿಯಾ ಸಮಿತಿ

ಕಾಸರಗೋಡು:  ಮಂಜೇಶ್ವರ ಪಂಚಾಯತ್‌ನ ಏಳನೇ ವಾರ್ಡ್‌ನ ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ಆರಂಭಿಸಲಾಗುವ ತ್ಯಾಜ್ಯ ಸಂಸ್ಕರಣಾ ಸ್ಥಾವರ (ಫಿಕಲ್ ಸ್ಲಜ್ಡ್ ಟ್ರೀಟ್‌ಮೆಂಟ್ ಪ್ಲಾಂಟ್) ಯೋಜನೆಯನ್ನು ಕೈಬಿಡಬೇಕೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕಾಸರಗೋಡು  ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಟ್ಟಿದ್ದಾರೆ. 2005ರಲ್ಲಿ ಕ್ಲೀನ್ ಕೇರಳ ಮಿಶನ್ ಮೂಲಕ ಈ ಪ್ರದೇಶದಲ್ಲಿ ಘನತ್ಯಾಜ್ಯ ಸಂಸ್ಮರಣಾ ಸ್ಥಾವರ ಆರಂಭಿಸಲು ತೀರ್ಮಾನಿಸಲಾಗಿತ್ತು.  ಬಳಿಕ ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಗಿತ್ತು. ಈ ಪ್ರದೇಶವಾಸಿಗಳಿಗಾಗಲೀ, ಗ್ರಾಮ ಸಭೆಯನ್ನು ಕರೆದು ಚರ್ಚಿಸಲಾಗಲೀ ಅಥವಾ ಇತರ ಯಾವುದೇ ರೀತಿಯ …

ಪತಿ, ಅತ್ತೆಯಿಂದ ಹಿಂಸೆ: ಪುತ್ರನೊಂದಿಗೆ ಹೊಳೆಗೆ ಹಾರಿದ ಯುವತಿಯ ಪತ್ರ ಬಹಿರಂಗ

ಕಣ್ಣೂರು: ಚೆಂಬಲ್ಲಿಕುಂಡ್ ಹೊಳೆಗೆ ಹಾರಿ ಮೃತಪಟ್ಟ ರೀಮರ ಆತ್ಮಹತ್ಯಾ ಪತ್ರ ಬಹಿರಂಗಗೊಂಡಿದೆ. ತನ್ನ ಹಾಗೂ ಪುತ್ರನ ಸಾವಿಗೆ ಹೊಣೆ ಪತಿ ಕಮಲ್‌ರಾಜ್ ಹಾಗೂ ಪತಿಯ ತಾಯಿ ಪ್ರೇಮರಾಗಿ ದ್ದಾರೆಂದು ಆತ್ಮಹತ್ಯಾ ಪತ್ರದಲ್ಲಿ ಬರೆಯಲಾಗಿದೆ. ತಾಯಿಯ ಮಾತು ಕೇಳಿ ತನ್ನನ್ನು ಹಾಗೂ ಪುತ್ರನನ್ನು ಮನೆಯಿಂದ ಹೊರ ಹಾಕಿ ಹೋಗಿ ಸಾಯಲು ಹೇಳಿರು ವುದಾಗಿ ಪತ್ರದಲ್ಲಿ ಬರೆಯ ಲಾಗಿದೆ. ಪತಿಯ ತಾಯಿ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ಕಾನೂನು ವ್ಯವಸ್ಥೆಯಲ್ಲಿ ತನಗೆ ನಂಬಿಕೆ ಇಲ್ಲದಾಗಿದೆ ಎಂದು ಬರೆಯಲಾಗಿದೆ. ತನ್ನ ಹಾಗೂ …