ಸ್ಥಳೀಯಾಡಳಿತ ಸಂಸ್ಥೆ: ಕರಡು ಮತದಾರ ಯಾದಿ ಪ್ರಕಟ: ಜಿಲ್ಲೆಯಲ್ಲಿ 1,021,977 ಮತದಾರರು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆ ಅದಕ್ಕಿರುವ ಪೂರ್ವ ಸಿದ್ಧತೆಯಂತೆ ರಾಜ್ಯ ಚುನಾವಣಾ ಆಯೋಗ ಕರಡು ಮತದಾರ ಯಾದಿ ಪ್ರಕಟಿಸಿದೆ.ಇದರಂತೆ ಕಾಸರಗೋಡು ಜಿಲ್ಲೆಯ ಕರಡು ಮತದಾರ ಪಟ್ಟಿಯಲ್ಲಿ ಒಟ್ಟು 1,021,977 ಮತದಾರರಿದ್ದಾರೆ. ಇದರಲ್ಲಿ 4,86,113 ಪುರುಷರು, 5,35,857 ಮಹಿಳೆಯರು ಮತ್ತು ಏಳು ಮಂಗಳಮುಖಿಯರು ಒಳಗೊಂಡಿದ್ದಾರೆ. ಇನ್ನು ಅಂತಿಮ ಮತದಾರ ಪಟ್ಟಿಯನ್ನು ಅಗೋಸ್ತ್ 30ರಂದು ಪ್ರಕಟಿಸಲಾಗುವುದು. ಕರಡು ಮತದಾರ ಯಾದಿ ಸ್ಥಳೀಯಾಡಳಿತ ಸಂಸ್ಥೆಗಳು, ಗ್ರಾಮ ಕಚೇರಿ, ತಾಲೂಕು ಕಚೇರಿಗಳಲ್ಲಿ ಹಾಗೂ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ನಲ್ಲೂ ಪರಿಶೀಲನೆಗಾಗಿ …

ಪ್ರಕೃತಿಯಲ್ಲಿ ಲೀನವಾದ ವಿ.ಎಸ್

ಆಲಪ್ಪುಳ: ನಿಧನಹೊಂದಿದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಧುರೀಣರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಯನ್ನು ಜನಸಾಗರದ ಮಧ್ಯೆ ಪುನ್ನಪ್ರ ವಯಲಾರ್ ಹುತಾತ್ಮ ನಗರ ಸ್ಮಶಾನದಲ್ಲಿ ನಿನ್ನೆ ರಾತ್ರಿ 9.15ರ ವೇಳೆ ಸಕಲ ಸರಕಾರಿ ಗೌರವ ಗಳೊಂದಿಗೆ ನೆರವೇರಿಸಲಾಯಿತು.  ಅಚ್ಯುತಾನಂದನ್‌ರ ಪುತ್ರ ಪಿ.ವಿ. ಅರುಣ್ ಕುಮಾರ್  ಚಿತೆಗೆ ಅಗ್ನಿಸ್ಪರ್ಶ ನಡೆಸಿದರು. ಹಲವು ಗಣ್ಯರು ಸೇರಿದಂತೆ ಭಾರೀ ಜನಸಾಗರವೇ ಅಲ್ಲಿ ನೆರೆದಿತ್ತು. ತಿರುವನಂತಪುರದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ  ಮೆರವಣಿಗೆ ಮೂಲಕ ವಿ.ಎಸ್.ರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತರಲಾಗಿತ್ತು. ಪಾರ್ಥಿವ …

ಬದಿಯಡ್ಕ ಶ್ರೀನಿಧಿ ಕ್ಲಿನಿಕ್‌ನಲ್ಲಿ ಕಷಾಯ ವಿತರಣೆ

ಬದಿಯಡ್ಕ: ಡಾ| ಶ್ರೀನಿದಿs ಸರಳಾಯ ಅವರು ಆಟಿ ಅಮಾ ವಾಸ್ಯೆಯಂದು ಜನರಿಗೆ ಆಟಿ ಕಷಾಯ ವನ್ನು ಉಚಿತವಾಗಿ ವಿತರಿಸುತ್ತಿದ್ದು, ಈ ಬಾರಿ ಇಂದು ಬೆಳಿಗ್ಗೆ ಕ್ಲಿನಿಕ್‌ನಲ್ಲಿ ವಿತರಿಸಲಾಯಿತು. ನಾಡಿನ ವಿವಿಧೆಡೆ ಗಳಿಂದ ಅನೇಕರು ಆಗಮಿಸಿ ಕಷಾಯ ಸೇವಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಗೋಪಾಲ ಕೃಷ್ಣ ಕುಲಾಲ್ ವಾಂತಿಚ್ಚಾಲು ಮಾತನಾಡಿ, ನಾಡಿನ ಜನರ ಆರೋಗ್ಯದ ಬಗ್ಗೆ ಕಾಳಜಿಯಿರುವ ವೈದ್ಯರು ಆಟಿಕಷಾಯ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಡಾ| ಶ್ರೀನಿದಿs ಸರಳಾಯ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಇದೇ …

ವೀರಮಲಕುನ್ನ್‌ನಲ್ಲಿ ಗುಡ್ಡೆ ಕುಸಿತ: ಹೆದ್ದಾರಿ ಸಂಚಾರ ವ್ಯತ್ಯಯ; ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಕಾಸರಗೋಡು: ಚೆರುವತ್ತೂರು ಮಯ್ಯೀಚ ವೀರಮಲಕುನ್ನುನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಕುಸಿದು ಬಿದ್ದ ಸ್ಥಳಕ್ಕೆ ಶಾಸಕ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ಈ ಭಾಗದಲ್ಲಿ ಹೆದ್ದಾರಿ ಸಂಚಾರ ನಿಷೇಧಿಸಲಾಗಿದೆ. ಮಡಕ್ಕರ ಕೋಟಪುರಂ ಮೂಲಕ ನೀಲೇಶ್ವರಕ್ಕೆ ವಾಹನಗಳು ತೆರಳಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಜಿಲ್ಲಾಧಿಕಾರಿಯ ನಿರ್ದೇಶದಂತೆ ಎನ್‌ಡಿಆರ್‌ಎಫ್, ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿದೆ. ಶಾಸಕ ರಾಜಗೋಪಾಲನ್, ಮಾಜಿ ಸಂಸದ ಪಿ. ಕರುಣಾಕರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ನೀಲೇಶ್ವರ ಬ್ಲೋಕ್ ಪಂ. ಅಧ್ಯಕ್ಷ …

ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಓರ್ವ ಮೃತ್ಯು: ಹಲವರಿಗೆ ಗಾಯ

ಹೊಸದುರ್ಗ: ತೃಕರಿಪುರ ಕರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿ ದ್ದಾರೆ. ಹಲವರಿಗೆ ಗಾಯವುಂ ಟಾಗಿದೆ. ಕಾಞಂಗಾಡ್ ಪುಂಜಾವಿ ಕಡಪ್ಪುರ ನಿವಾಸಿ ಹರಿದಾಸನ್ (57) ಮೃತಪಟ್ಟವರು. ಗಾಯ ಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದು ಪೊಲೀಸರು ಹಾಗೂ ಕರಾವಳಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತರು ಪತ್ನಿ ಸತ್ಯವತಿ, ಮಕ್ಕಳಾದ ಅರ್ಜುನ್, ಅರುಣ್, ಆದರ್ಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಾಂಜಾ ಸಹಿತ ಓರ್ವ ಸೆರೆ

 ಮಂಜೇಶ್ವರ: ಗಾಂಜಾ ಕೈವಶವಿರಿಸಿಕೊಂಡ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ಮಿತ್ತನಡ್ಕ ಕರೋಪಾಡಿಯ ಮೊಹಮ್ಮದ್ ಸಜಾಫ್ (28) ಎಂಬಾತನನ್ನು ಮಂಜೇಶ್ವರ ಎಸ್‌ಐ ರತೀಶ್ ಸೆರೆಹಿಡಿದಿದ್ದಾರೆ. ಆರೋಪಿಯ ಕೈಯಿಂದ 08.70 ಗ್ರಾಂ ಗಾಂಜಾ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಗುವೆದಪಡ್ಪು ಬಸ್ ತಂಗುದಾಣ ಬಳಿ ನಿಂತಿದ್ದ ಈತನ ಕೈಯಲ್ಲಿ ಗಾಂಜಾ ಪತ್ತೆಯಾಗಿತ್ತು.

ಪ್ಲಸ್ ವನ್ ವಿದ್ಯಾರ್ಥಿನಿಗೆ ಪ್ಲಸ್ ಟು ವಿದ್ಯಾರ್ಥಿನಿಯರಿಂದ ಹಲ್ಲೆ, ಬೆದರಿಕೆ: ಕೇಸು ದಾಖಲು

ಮಂಜೇಶ್ವರ: ಪ್ಲಸ್‌ವನ್ ವಿದ್ಯಾರ್ಥಿನಿಗೆ ಬಸ್ ಸ್ಟಾಪ್‌ನಲ್ಲಿ ಪ್ಲಸ್ ಟು ವಿದ್ಯಾರ್ಥಿನಿಯರು ಹಲ್ಲೆಗೈದ ಬಗ್ಗೆ ದೂರಲಾಗಿದೆ.  ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿಗೆ ಅದೇ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯರು ಮುಖಕ್ಕೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಇತ್ತೀಚೆಗೆ ಶಾಲೆ ಬಿಟ್ಟು ನಯಬಜಾರ್‌ನ ಬಸ್‌ಸ್ಟಾಪ್‌ಗೆ ತಲುಪಿದಾಗ ವಿದ್ಯಾರ್ಥಿನಿಯರು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಗಾಯಗೊಂಡ ವಿದ್ಯಾರ್ಥಿನಿ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರು ಬೆದರಿಕೆಯೊಡ್ಡಿರುವುದಾಗಿಯೂ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹುಟ್ಟೂರಿಗೆ ಬಂದು ಸೇರಿದ ಜನನಾಯಕ ವಿ.ಎಸ್. ಪಾರ್ಥಿವ ಶರೀರ

ಆಲಪ್ಪುಳ: ಅಗಲಿದ ಮಾಜಿ ಮುಖ್ಯಮಂತ್ರಿ, ಸಿಪಿಎಂನ ಹಿರಿಯ ನೇತಾರ ಹಾಗೂ ಜನನಾಯಕರೂ ಆಗಿರುವ  ವಿ.ಎಸ್. ಅಚ್ಯುತಾನಂದನ್‌ರ ಪಾರ್ಥಿವ ಶರೀರವನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿರುವನಂತಪು ರದಿಂದ ಮೆರವಣಿಗೆ ಮೂಲಕ ಹುಟ್ಟೂರಾದ ಆಲಪ್ಪುಳಕ್ಕೆ ಇಂದು ಬೆಳಿಗ್ಗೆ 7.30ಕ್ಕೆ ತಲುಪಿಸಲಾಯಿತು. ಆಲಪ್ಪುಳ ಜಿಲ್ಲೆಯ ಕಾಯಂಕುಳಕ್ಕೆ  ಪಾರ್ಥಿವ ಶರೀರ ತಲುಪಿದಾಗ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ  ಜನಪ್ರವಾಹವೇ ರಸ್ತೆಯುದ್ದಕ್ಕೂ ಹರಿದುಬಂದು ಅಗಲಿದ ನಾಯಕನಿಗೆ ಮುಗಿಲುಮುಟ್ಟುವ ಘೋಷಣೆ ಮೊಳಗಿಸುತ್ತಾ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 9.30ಕ್ಕೆ ವಿ.ಎಸ್.ರ ಹುಟ್ಟೂರಾದ ಪುನ್ನಪ್ರಕ್ಕೆ ತಲುಪಿಸಲು …

ವಳಯಂ ಉಸ್ತಾದ್ ನಿಧನ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಬಳಿಯ ಬತ್ತೇರಿಯಲ್ಲಿ ವಾಸಿಸುವ ಹಾಜಿ ಹಸೈನಾರ್ ಮುಸ್ಲಿಯಾರ್ ಯಾನೆ ವಳಯಂ ಉಸ್ತಾದ್ (54) ನಿಧನಹೊಂದಿದರು. ಇಂದು ಮುಂಜಾನೆ 1.30ರ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಕುಂಬಳೆ ಮುನೀರುಲ್ ಇಸ್ಲಾಂ ಮದ್ರಸಾದ ಅಧ್ಯಾಪಕನೂ, ನಾಟಿ ವೈದ್ಯನೂ ಆಗಿದ್ದರು. ಮೃತರು ಪತ್ನಿ ಸುಹರಾ, ಮಕ್ಕಳಾದ ಸಲ್ಮಾನ್ ವಾಫಿ, ಮೊಹಮ್ಮದ್ ಲಿಹಾವುದ್ದೀನ್, ಜಶ್ವಾನ್ ರಾಸಿ ಇಮಾಮಿ, ಮೊಯ್ನುದ್ದೀನ್ ಶಾಕಿರ್, ಖದೀಜತ್ ಕುಬ್ರ, ಆಯಿಶತ್ ಫಾಯಿಸ, ಬಲ್ಕೀಸತ್ ತಹ್‌ಸಿನ, ಸೈನಬತ್ …

ವಿ.ಎಸ್. ವಿರುದ್ಧ ಅವಹೇಳನ ಸಂದೇಶ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರ ವಿರುದ್ಧ ವಾಟ್ಸಪ್ ನಲ್ಲಿ ಸ್ಟೇಟಸ್, ಸಂದೇಶ ಹಾಕಿದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.   ಪಳ್ಳಿಕೆರೆ ತೊಟ್ಟಿ ನಿವಾಸಿ ಪೈಸಕ್ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ವಿ.ಎಸ್. ಅಚ್ಯುತಾನಂದನ್‌ರ ಫೊಟೋದ ಕೆಳಗೆ ಕೋಮುವಾದಿ ಎಂಬ ಅಡಿಬರಹದೊಂ ದಿಗೆ ಸ್ಟೇಟಸ್ ಹಾಕಲಾಗಿತ್ತು. ಇದರಿಂದ ಗಲಾಟೆ ಎಬ್ಬಿಸಲು ಆರೋಪಿ ಯತ್ನಿಸಿ ದ್ದಾನೆಂದು ಕೇಸು ದಾಖಲಿಸಲಾಗಿದೆ. ವಿದೇಶ ನಂಬ್ರದಲ್ಲಿರುವ ವಾಟ್ಸಪ್‌ನಲ್ಲಿ ಈತ ಸ್ಟೇಟಸ್ ಹಾಕಿದ್ದನು. ಸ್ಪೆಷಲ್ ಬ್ರಾಂಚ್‌ನ ವರದಿ ಹಿನ್ನೆಲೆಯಲ್ಲಿ …