ಮಾದಕದ್ರವ್ಯ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪ್ರಿವೆನ್ಶನ್ ಆಫ್ ಇಲ್ಲೀಗಲ್ ಟ್ರಾಫಿಕ್ ಆಫ್ ನರ್ಕೋಟಿಕ್ ಡ್ರಗ್ಸ್ (ಪಿಟ್ ಎನ್‌ಡಿಪಿಎಸ್) ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ಬಂಧಿಸಿದ್ದಾರೆ. ಮುಟ್ಟತ್ತೋಡಿಗೆ ಸಮೀಪದ ಹಿದಾಯತ್‌ನಗರ ಚಟ್ಟುಂಗುಳಿ ನಿವಾಸಿ ಮೊಹಮ್ಮದ್ ಸಲೀಲ್ (40) ಬಂಧಿತ ಆರೋಪಿ. ಈತನ ವಿರುದ್ಧ ವಿದ್ಯಾನಗರ ಮತ್ತು ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟ್ ಎನ್‌ಡಿಪಿಎಸ್ ಪ್ರಕಾರ ಬಂಧಿಸಲಾಗುವ ಆರೋಪಿ ಗಳನ್ನು ಯಾವುದೇ ರೀತಿಯ ವಿಚಾರ ಣೆಯೂ ಇಲ್ಲದೆ …

ಕುಸಿದು ಬಿದ್ದ ನೂರಾರು ವರ್ಷಗಳ ಹಳೆಯ ಆಲದ ಮರ: ಕಾರಿಗೆ ಹಾನಿ

ಹೊಸದುರ್ಗ:  ಕಾಞಂಗಾಡ್ ಟಿ.ಬಿ ರಸ್ತೆ ಬದಿಯಲ್ಲಿ ನೂರಾರು ವರ್ಷ ಹಳೆಯದಾದ ಆಲದಮರ  ಕುಸಿದು ಬಿದ್ದಿದೆ. ದಾರಿಹೋಕರಿಗೆ ನೆರಳು, ಹಕ್ಕಿಗಳಿಗೆ ಆಶ್ರಯ ನೀಡುತ್ತಿದ್ದ ಈ ಮರ ಬುಡ ಸಮೇತ ಕುಸಿದು ಬಿದ್ದಿದೆ. ಇಂದು ಮುಂಜಾನೆ ಘಟನೆ ಸಂಭವಿಸಿದ ಕಾರಣ ಅಪಾಯ ಉಂಟಾಗಲಿಲ್ಲ. ಆದರೆ  ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ರೆಂಬೆಗಳು ಬಿದ್ದು ಹಾನಿಯುಂಟಾಗಿದೆ. ಮುಂಜಾನೆ ಯಿಂದ ರಾತ್ರಿವರೆಗೆ ಬಹಳ ಜನಸಂದಣಿ ಹಾಗೂ ವಾಹನದಟ್ಟಣೆ ಇರುವಂತಹ ಬೇಕಲ ಇಂಟರ್‌ನೇ ಶನಲ್ ಹೋಟೆಲ್ ಮುಂಭಾಗದ ಲ್ಲಿದ್ದ ಮರವಾಗಿತ್ತು ಇದು.

ಪತಿಯನ್ನು ಕೊಲೆಗೈದು ಹೂತುಹಾಕಿದ ಯುವತಿ: ಆರೋಪಿಗಳಿಗಾಗಿ ಶೋಧ

ಮುಂಬೈ: ಪ್ರಿಯತಮನ ಸಹಾಯದಿಂದ ಪತಿಯನ್ನು ಕೊಲೆಗೈದು ಮನೆಯೊಳಗೆ ಹೂತುಹಾಕಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ  ನಡೆದಿದೆ. ವಿಜಯ್ ಚೌಹಾಣ್ ಎಂಬ ೩೫ರ ಹರೆಯದ ಪತಿಯನ್ನು 28ರ ಹರೆಯದ ಪತ್ನಿ ಕೋಮಲ್ ನೆರೆಮನೆಯ ನಿವಾಸಿ ಹಾಗೂ ಪ್ರಿಯತಮನಾದ ಮೋನು ಜೊತೆ ಸೇರಿ ಕೊಲೆಗೈದು ಮನೆಯೊಳಗೆ ದಫನ ನಡೆಸಿರುವುದು. ಅದರ ಬಳಿಕ ಕೋಮಲ್ ಹಾಗೂ ಪ್ರಿಯತಮ ಪರಾರಿಯಾಗಿದ್ದಾರೆ. ಮುಂಬೈಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ನಳಸೋಪಾರ ಈಸ್ಟ್ ಗಡ್ಗಪದದಲ್ಲಿ ವಿಜಯ್ ಹಾಗೂ ಕೋಮಲ್ ವಾಸಿಸುತ್ತಿದ್ದರು. ಎರಡು ವಾರಕ್ಕೂ ಹೆಚ್ಚಾಗಿ ವಿಜಯ್ …

ಕಾಪಾ ಕೇಸು: ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಿ ಸೆರೆ

ಕಾಸರಗೋಡು: ಕಾಪಾ ಕಾನೂನು ಪ್ರಕಾರ ಗಡಿಪಾರು ಮಾಡಿದ ಬಳಿಕ ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಊರಿಗೆ ಬಂದ ಆರೋ ಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪಳ್ಳಿಕೆರೆ ತಾಯಲ್ ಮವ್ವಲ್ ಹದ್ದಾದ್‌ನಗರದ ಅಶ್ರಫ್ ಅಲಿಯಾಸ್ ಕತ್ತಿ ಅಶ್ರಫ್ (43) ಬಂಧಿತ ಆರೋಪಿ. ಈತ ಮಾದಕದ್ರವ್ಯ, ಹಲ್ಲೆ ಇತ್ಯಾದಿ ನಾಲ್ಕರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ ಕಾಪಾ ಕಾನೂನು ಹೇರಿ ಊರಿನಿಂದ ಗಡಿಪಾರು ಮಾಡಲಾಗಿತ್ತು. ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಆತ ಊರಿಗೆ ಬಂದಿದ್ದನು. ಆ ಬಗ್ಗೆ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಬದಿಯಡ್ಕ: ಬದಿಯಡ್ಕ ಎಕ್ಸೈಸ್ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್.ರ ನೇತೃತ್ವದ ತಂಡ ಕಾಡಮನೆ ಎಂಬಲ್ಲಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 3.78 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಡು ಕೇಸು ದಾಖಲಿಸಿಕೊಂಡಿದೆ.ಇದಕ್ಕೆ ಸಂಬಂಧಿಸಿ ಕಂಕಣ್ಣಾರ್ ಎಂಬಲ್ಲಿ ವಾಸಿಸುವವಿನಯ್ ಕುಮಾರ್ ಎನ್.ಪಿ. ಎಂಬಾತನನ್ನು ಬಂಧಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಬಿಜೋಯ್ ಇ.ಕೆ., ಸಿಇಒಗಳಾದ ಶಾಲಿನಿ, ಲಿಜಿನ್ ಆರ್, ಟಿಪ್ಸನ್ ಟಿ.ಜಿ. ಮತ್ತು ಚಾಲಕ ಸಾಗರ್ ಎಂಬವರು …

ಕಾಡು ಹಂದಿ ಉಪಟಳ: ಜಿಲ್ಲೆಯಲ್ಲಿ 1071 ಮಂದಿಗೆ ಬಂದೂಕು ಲೈಸನ್ಸ್: ಗುಂಡಿಕ್ಕುವ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾಯಿಸಿದ್ದು 33 ಮಂದಿ ಮಾತ್ರ

ಕಾಸರಗೋಡು: ಉಪಟಳಕಾರಿ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆಯ ಅನುಮತಿ ಇದ್ದರೂ ಜಿಲ್ಲೆಯಲ್ಲಿ ಬಂದೂಕು ಲೈಸನ್ಸ್ ಹೊಂದಿರುವ ಹೆಚ್ಚಿನವರು ಅದಕ್ಕೆ ತಯಾರಾಗುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದಾರೆ. ಈ ಪೈಕಿ ಕೇವಲ 33 ಮಂದಿ ಮಾತ್ರವೇ ಅರಣ್ಯ ಇಲಾಖೆಯ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾ ಯಿಸಿದ್ದಾರೆ. ಜಿಲ್ಲಾಡಳಿತೆಯ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದು, ಅದರಲ್ಲ್ಲಿ 946 ಮಂದಿ ತಮ್ಮ ಬಂದೂಕು ಲೈಸನ್ಸ್ ನವೀಕರಿಸಿದ್ದಾರೆ. ಬಾಕಿ ಉಳಿದವರ ಲೈಸನ್ಸ್ …

ಫಿಟ್ನೆಸ್ ಸರ್ಟಿಫಿಕೇಟ್ ಇರುವ ಶಾಲಾ ಕಟ್ಟಡ ಅಪಾಯ ಭೀತಿಯಲ್ಲಿ : ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಏಳು ತರಗತಿಗಳಿಂದ ಮಕ್ಕಳ ತೆರವು

ಕುಂಬಳೆ: ತೀವ್ರಗೊಂಡ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ ಏರ್ಪಡಿಸುವ ಅಂಗವಾಗಿ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ  ಹೆಂಚು ಹಾಸಿದ ಕಟ್ಟಡಗಳಿಂದ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿ ಗಳು ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ. ಏಳು ತರಗತಿ ಕೊಠಡಿಗಳಿರುವ ಕಟ್ಟಡಕ್ಕೆ ಹೆಂಚು ಹಾಸಲಾಗಿದೆ. ಈ ಕಟ್ಟಡದಲ್ಲಿ  ಭದ್ರತಾ ಸಮಸ್ಯೆ ಇರುವುದರಿಂದ  ಆ ತರಗತಿಗಳಿಂದ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಟ್ಟಡಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇದೆ. ಆದರೆ ಮಳೆ ಸುರಿಯುವ ವೇಳೆ ಕಟ್ಟಡ ಅಪಾ ಯಕ್ಕೀಡಾಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಆದ್ದರಿಂದ …

ಏಣಿಯರ್ಪು ಲೈಫ್ ಹೌಸ್ ವಿಲ್ಲಾದ ಸ್ಥಳ ಸ್ವಾಧೀನಪಡಿಸಲು ವ್ಯಕ್ತಿ ಯತ್ನ: ಪ್ರತಿಭಟಿಸಿ ಬೇಳ ವಿಲ್ಲೇಜ್‌ಗೆ 25ರಂದು ಕ್ರಿಯಾಸಮಿತಿಯಿಂದ ಮಾರ್ಚ್

ನೀರ್ಚಾಲು: ಏಣಿಯರ್ಪು ಲೈಫ್ ಹೌಸ್ ವಿಲ್ಲಾಕ್ಕಿರುವ ರಸ್ತೆ ಹಾಗೂ ಇಲ್ಲಿನ ಸ್ಥಳವನ್ನು ವ್ಯಕ್ತಿಯೋರ್ವ ವಶಪಡಿಸಲು ಯತ್ನಿಸುತ್ತಿದ್ದು, ಬಡವರಿಗೆ ಸರಕಾರ ನೀಡಿದ ಮನೆ ನಷ್ಟವಾಗುವ ಭೀತಿ ಇದೆ ಎಂದು ಆರೋಪಿಸಿ ವಿಲ್ಲಾದಲ್ಲಿ ವಾಸಿಸುವವರು ಕ್ರಿಯಾ ಸಮಿತಿ ರೂಪೀಕರಿಸಿ ಬೇಳ ವಿಲ್ಲೇಜ್ ಕಚೇರಿಗೆ ಮಾರ್ಚ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ತಿಂಗಳ 25ರಂದು ಬೆಳಿಗ್ಗೆ 10 ಗಂಟೆಗೆ ಮಧೂರು ರಸ್ತೆಯಿಂದ ಮಾರ್ಚ್ ಆರಂಭಿಸಲು ತೀರ್ಮಾನಿಸಲಾಗಿದೆ. ಬಡ ಕುಟುಂಬಗಳಿಗಾಗಿ ಸರಕಾರ ನೀಡಿದ ಸ್ಥಳವನ್ನು ಖಚಿತಪಡಿಸಬೇಕೆಂದು ಆಗ್ರಹಿಸಿ ಮಾರ್ಚ್ ಹಮ್ಮಿಕೊಳ್ಳಲಾಗಿದೆ. 2014ರಲ್ಲಿ ಸರಕಾರ …

ಗಿಳಿವಿಂಡುನಲ್ಲಿ ಕಾವ್ಯ ಸಂಸ್ಕೃತಿಯಾನ 27ರಂದು

ಮಂಜೇಶ್ವರ: ಬೆಂಗಳೂರಿನ ರಂಗಮAಡಲ ಹಾಗೂ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಜು.27 ರಂದು ಬೆಳಿಗ್ಗೆ 10ರಿಂದ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕೃತಿ ಯಾನ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರ್ವಾಧ್ಯಕ್ಷತೆ ವಹಿಸುವರು. ಕವಯಿತ್ರಿ ಡಾ.ಕೆ.ವಿ.ಸಿಂಧು ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್, ಎಡಿಎಂ ಅಖಿಲ್ ಪಿ., ಕೆ.ವಿ.ಕುಂಞÂ ರಾಮನ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಗೋವಿಂದ ಪೈ …

ವಿ.ಎಸ್. ನಿಧನ: ಮೀಯಪದವುನಲ್ಲಿ ಸರ್ವಪಕ್ಷ ಸಂತಾಪ ಸಭೆ

ಮೀಂಜ: ನಿಧಾನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಎಂ ಹಿರಿಯ ನೇತಾರ ವಿ ಎಸ್ ಅಚ್ಯುತಾನಂದನ್‌ರ ನಿಧನಕ್ಕೆ ಸಿಪಿಎಂ ಮೀಂಜ ಫಸ್ಟ್ ಮತ್ತು ಸೆಕೆಂಡ್ ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಸಿಪಿಎಂ ಹಿರಿಯ ನೇತಾರ ಬಿ ಸದಾಶಿವ ರೈ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನೇತಾರ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡಂಬಾರ್, ಬಿಜೆಪಿ ನೇತಾರ, ಬ್ಲಾಕ್ ಪಂಚಾಯತ್ ಸದಸ್ಯ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನೇತಾರ ದಾಮೋದರ, ಮಾಣಿ …