ರೈಲು ಪ್ರಯಾಣಿಕನ ನಗದು ಒಳಗೊಂಡ ಬ್ಯಾಗ್ ಕಳವು: ರೈಲ್ವೇ ಸಿಬ್ಬಂದಿ ಸೆರೆ

ಕಾಸರಗೋಡು: ರೈಲ್ವೇ ಪ್ರಯಾಣಿಕನ ಹಣ ಹಾಗೂ ದಾಖಲೆ ಪತ್ರಗಳಿದ್ದ  ಬ್ಯಾಗ್ ಕಳವುಗೈದ  ರೈಲ್ವೇ ನೌಕರನನ್ನು ಬಂಧಿಸಲಾಗಿದೆ. ಬಿಹಾರ ನಾರಾಯಣ್‌ಪುರ್ ನಿವಾಸಿಯೂ ಟ್ರ್ಯಾಕ್ ಮ್ಯಾನ್ ಆಗಿರುವ ಸುಬೋದ್ ಕುಮಾರ್ ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.  ನೆಲ್ಲಿಕುಂಜೆ ಬೀಚ್ ರಸ್ತೆಯ ಅಶೋಕ್ ಶೆಟ್ಟಿ (48) ಎಂಬವರ ಬ್ಯಾಗ್ ಕಳವಿಗೀಡಾಗಿತ್ತು.  ಅಶೋಕ್ ಶೆಟ್ಟಿ ಚಂಡೀಘಡದಿಂದ ಕೊಚ್ಚುವೇಳಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಈ ತಿಂಗಳ ೧೮ರಂದು ಮುಂಜಾನೆ 2 ಗಂಟೆಗೆ ಇಳಿಯುತ್ತಿದ್ದ ವೇಳೆ 59೦೦ ರೂ. ಹಾಗೂ ಇತರ …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 34 ಲೀಟರ್ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 34 ಲೀಟರ್ ಕರ್ನಾಟಕ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಸ್ಕೂಟರ್ ಸವಾರನನ್ನು ಬಂಧಿಸಿದ್ದಾರೆ. ಬೆದ್ರಡ್ಕ ಕಿನ್ನಿಗೋಳಿಯ ಸುರೇಶ್ ಬಿ.ಪಿ ಎಂಬಾತ ಬಂಧಿತ ವ್ಯಕ್ತಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಉಳಿಯತ್ತಡ್ಕದಲ್ಲಿ ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ನಾರ್ಕೋಟಿಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಶ್ರೀನಿವಾಸನ್ ಪತ್ತಿಲು  ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಮದ್ಯ ಸಾಗಾಟ ಪತ್ತೆಹಚ್ಚಲಾಗಿದೆ.

ಹೊಳೆಯಲ್ಲಿ ನಾಪತ್ತೆಯಾಗಿದ್ದ ಬೆಳಗಾವಿ ನಿವಾಸಿಯ ಮೃತದೇಹ ಪತ್ತೆ

ಹೊಸದುರ್ಗ: ಪಾಣತ್ತೂರು ಮಂಞಡ್ಕದ ಹೊಳೆಯಲ್ಲಿ ನಾಪತ್ತೆಯಾ ಗಿದ್ದ ಕರ್ನಾಟಕದ ಬೆಳಗಾವಿ ನಿವಾಸಿ ದುರ್ಗಪ್ಪ (18) ಎಂಬಾತನ ಮೃತದೇಹ ಪತ್ತೆಯಾಗಿದೆ. ನಿನ್ನೆ ಪಾಣತ್ತೂರು ವಟ್ಟಕುಂಡ್ ಎಂಬಲ್ಲಿನ ಹೊಳೆಯಲ್ಲಿ ಮೃತದೇಹ ಕಂಡು ಬಂದಿದೆ. ಇದೇ ವೇಳೆ ದುರ್ಗಪ್ಪ ಸಂಚರಿಸಿದ ದ್ವಿಚಕ್ರ ವಾಹನ ಪತ್ತೆಯಾಗಿಲ್ಲ. ಪ್ಲಾಂಟೇಶನ್ ಕಾರ್ಪರೇಶನ್‌ನ ಪಾಣತ್ತೂರಿನ ತೋಟದಲ್ಲಿ ಕೆಲಸಕ್ಕಾಗಿ ಬಂದಿದ್ದ ದುರ್ಗಪ್ಪ ಕಳೆದ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದನು. ಕೆಲಸ ಸ್ಥಳದಿಂದ ಮಧ್ಯಾಹ್ನ ಊಟಕ್ಕಾಗಿ ತೆರಳುತ್ತಿದ್ದಾಗ ಮಂಞಡ್ಕ ಹೊಳೆ ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದನು. ಅಂದಿನಿಂದಲೇ ಹೊಳೆಯಲ್ಲಿ ಶೋಧ ಆರಂಭಿಸಲಾಗಿತ್ತು. ನಾಗಪ್ಪ …

ಇಸ್ಕಾನ್ ದೇವಾಲಯಕ್ಕೆ ಬಾಂಬ್ ಬೆದರಿಕೆ

ಮುಂಬೈ: ಮುಂಬೈಯಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಇ ಮೈಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದೆ. 16 ತಾಸುಗಳೊಳಗಾಗಿ ಆರ್‌ಡಿಎಕ್ಸ್ ತುಂಬಿದ 5 ಐಇಡಿ ಬಾಂಬ್‌ಗಳು ಸ್ಫೋಟಗೊಳ್ಳಲಿದೆಯೆಂದು ಅಪರಿಚಿತ ಐಡಿ ಮೂಲಕ ಕಳುಹಿ ಸಲಾದ ಇಮೈಲ್ ಸಂದೇಶದಲ್ಲಿ ತಿಳಿಸಲಾಗಿದೆ. ತಕ್ಷಣ ಪೊಲೀಸರ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ  ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ಆರಂಭಿಸಿದೆ.

2.88 ಲೀಟರ್ ಕರ್ನಾಟಕ ಮದ್ಯ ವಶ

ಕುಂಬಳೆ: ಕುಂಬಳೆ ರೇಂಜ್ ಅಬಕಾರಿ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಅಬಕಾರಿ ತಂಡಹೊಸಂಗಡಿ ಯಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ 2.88 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ವಶಪಡಿಸಲಾದ ಮಾಲುಗಳನ್ನು ಬಳಿಕ ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಸಾಗಿಸಲಾಗಿದೆ.

14.69 ಕೋಟಿ ರೂ.ಗಳ ಕೊಕೈನ್ ವಶ: ಇಬ್ಬರು ಯುವತಿಯರ ಬಂಧನ

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 14.69 ಕೋಟಿ ರೂಪಾಯಿ ಮೌಲ್ಯದ 7 ಕಿಲೋ ಕೊಕೈನ್ ವಶಪಡಿಸ ಲಾಗಿದೆ.  ಘಟನೆಗೆ ಸಂಬಂಧಿಸಿ  ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ. ಮಣಿಪುರ್ ನಿವಾಲಿ ಲಾಲ್‌ಜಾಮ್ ಲೂವಾಯಿ ಮಿಜೋರಾಮ್‌ನ ಲಾಲ್‌ತಾಂಗ್ ಲಿಯಾನಿ ಎಂಬಿವರು ಬಂಧಿತ ಯುವತಿ ಯರಾಗಿದ್ದು, ಇವರು ಅಂತಾರಾಜ್ಯ ಮಾದಕವಸ್ತು ಸಾಗಾಟದ ಕೊಂಡಿಗ ಳಾಗಿದ್ದಾರೆಂದು ಹೇಳಲಾಗುತ್ತಿದೆ. ಸಾಬೂನು ಪೆಟ್ಟಿಗೆಗಳಲ್ಲಿ ಬಚ್ಚಿಟ್ಟು ಕೊಕೈನ್ ತರಲಾಗಿತ್ತು. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ನಡೆಸಿದ ತಪಾಸಣೆ ವೇಳೆ ಮಾದಕ ವಸ್ತು ಪತ್ತೆಯಾಗಿದೆ.

ಸ್ಕೂಟರ್-ಕಾರು ಢಿಕ್ಕಿ: ಸ್ಕೂಟರ್ ಸವಾರನ ವಿರುದ್ಧ ಕೇಸು

ಮಂಜೇಶ್ವರ:  ಕಾರಿಗೆ ಸ್ಕೂಟರ್ ಢಿಕ್ಕಿ ಹೊಡೆದ ಸಂಬಂಧ ಸ್ಕೂಟರ್ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಸೋಮೇಶ್ವರ ಮೇರಳಗುಡ್ಡೆ ನಿವಾಸಿ ಮೊಹಮ್ಮದ್ ಸಲೀಂ (37) ವಿರುದ್ಧ ಕೇಸು ದಾಖಲಿಸಲಾಗಿದೆ.  ನಿನ್ನೆ ಸಂಜೆ ೪.೪೫ರ ವೇಳೆ ಕುಂಜತ್ತೂರು ಜಂಕ್ಷನ್‌ನಲ್ಲಿ  ಅಪಘಾತ ಸಂಭವಿಸಿದೆ.  ಮೊಹಮ್ಮದ್ ಸಲೀಂ ಚಲಾಯಿಸುತ್ತಿದ್ದ ಸ್ಕೂಟರ್  ರಿಟ್ಸ್ ಕಾರಿಗೆ ಢಿಕ್ಕಿ ಹೊq ದಿತ್ತು. ವಿಷಯ ತಿಳಿದು ಅಲ್ಲಿಗೆ ತಲುಪಿದ ಪೊಲೀಸರು ತಪಾಸಣೆ ನಡೆಸಿದಾಗ ಮೊಹಮ್ಮದ್ ಸಲೀಂ ಮದ್ಯದಮಲಿನಲ್ಲಿ  ಸ್ಕೂಟರ್ ಚಲಾಯಿಸಿರುವುದಾಗಿ ತಿಳಿದು ಬಂದಿದೆಯೆಂದು ಪೊಲೀಸರು …

ಕಾರ್ಖಾನೆಯಿಂದ ಮಲಿನ ಜಲ ಹರಿಯಬಿಟ್ಟ ಮಾಲಕನಿಗೆ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ 5೦,೦೦೦ ರೂ. ದಂಡ

ವರ್ಕಾಡಿ: ಪಂಚಾಯತ್‌ನ ೨ನೇ ವಾರ್ಡ್ ಕೆದುಂಬಾಡಿಯಲ್ಲಿ ಕೆಲವು ಮನೆಗಳ ಬಾವಿಗಳ ನೀರಿನಲ್ಲಿ ಬಣ್ಣ ವ್ಯತ್ಯಾಸ ಉಂಟಾಗುತ್ತಿದೆ ಎಂದು ಸಮೀಪದ ಒರತೆಯಲ್ಲಿ ಕಪ್ಪು ಮಿಶ್ರಿತ ಮಲಿನ ಜಲ ಹರಿಯುತ್ತಿದೆ ಎಂದು ಲಭಿಸಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನ ನೇತೃತ್ವದಲ್ಲಿ  ಪರಿಶೋಧನೆ ನಡೆಸಲಾ ಯಿತು. ಗಡಿಪ್ರದೇಶದ ಕರ್ನಾಟಕ ವ್ಯಾಪ್ತಿಯಲ್ಲಿ ಮಂಜೇಶ್ವರ ನಿವಾಸಿಯ ಮಾಲಕತ್ವದಲ್ಲಿರುವ ಗೇರುಬೀಜ ಕಾರ್ಖಾನೆಯಲ್ಲಿ ಎಣ್ಣೆ ಉತ್ಪಾದಿಸುವ ವೇಳೆ ಮಲಿನ ಜಲವನ್ನು ಕೆಳಗಿನ ಭಾಗದಲ್ಲಿರುವ ಕೆಂಪು ಕಲ್ಲಿನ ಕೋರೆಗೆ ಹರಿಯಬಿಟ್ಟಿರುವುದೇ ಪರಿಸರದಲ್ಲಿ ಮಲಿನೀಕರಣಕ್ಕೆ ಕಾರಣವಾಗಿರುವು …

ಕೊಳೆತು ದುರ್ವಾಸನೆ ಬೀರುತ್ತಿರುವ ಬೀದಿ ನಾಯಿ: ಸ್ಥಳೀಯರಿಗೆ ತೀವ್ರ ಸಮಸ್ಯೆ

ಉಪ್ಪಳ: ರಸ್ತೆಯಲ್ಲಿ  ನಾಯಿ ಸತ್ತು ಕೊಳೆತು ದುರ್ವಾಸನೆ ಬೀರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಉಪ್ಪಳ ಭಗವತೀ ಗೇಟ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಒಂದು ವಾರದ ಹಿಂದೆ ಸತ್ತ ನಾಯಿಯ ಕಳೇಬರ ಈಗಲೂ ಅಲ್ಲಿದ್ದು, ಇದು ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಸಮಸ್ಯೆಯಾಗಿದೆ.  ಈ ಪರಿಸರದಲ್ಲಿ ಕಳೆದ ಹಲವು ತಿಂಗಳುಗಳಿಂದ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ಠಿಕಾಣಿ ಹೂಡಿತ್ತು. ಇವುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡುತ್ತಿರುವುದು ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವ …

ಪತ್ರಕರ್ತ ರವಿ ನಾಯ್ಕಾಪುಗೆ ಗಡಿನಾಡ ಸಾಹಿತ್ಯಭೂಷಣ ಪ್ರಶಸ್ತಿ ಪ್ರದಾನ 27ರಂದು

ಬೆಂಗಳೂರು: ಬೆಂಗಳೂರು ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆಯು ನೀಡುವ ಗಡಿನಾಡ ಸಾಹಿತ್ಯಭೂಷಣ ಪ್ರಶಸ್ತಿಗೆ ಪತ್ರಕರ್ತ ರವಿ ನಾಯ್ಕಾಪು ಆಯ್ಕೆಯಾಗಿದ್ದಾರೆ. ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ಈ ತಿಂಗಳ 27ರಂದು ಬೆಂಗಳೂರಿನ ಗೆಜ್ಜೆನಾದ ಸ್ಟುಡಿಯೋ ಸಭಾಂಗಣದಲ್ಲಿ ನಡೆಯುವ ಕನ್ನಡ ಸಂಸ್ಕೃತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾಸರಗೋಡಿನ ಪತ್ರಿಕಾರಂಗದಲ್ಲಿ ಹಾಗೂ ಸಾಹಿತ್ಯ ವಲಯದಲ್ಲಿ ಗೈದ ಸೇವೆಯನ್ನು ಪರಿಗಣಿಸಿ ರವಿ ನಾಯ್ಕಾಪುರನ್ನು ಈ ಪ್ರಶಸ್ತಿಗೆ …