ನಗರಸಭೆ ಮುಂಭಾಗ ಬಿಜೆಪಿ ಕೌನ್ಸಿಲರ್ಗಳಿಂದ ಪ್ರತಿಭಟನೆ
ಕಾಸರಗೋಡು: ನಗರಸಭೆಯ ಕಾರ್ಯದರ್ಶಿಯನ್ನು ಬೆದರಿಸಿದ ಶಾಸಕ, ಮುಸ್ಲಿಂ ಲೀಗ್ ನಗರಸಭಾ ಆಡಳಿತಾಧಿಕಾರಿಗಳು ಕಾರ್ಯದರ್ಶಿ ಯವರಲ್ಲಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ನಗರಸಭೆ ಮುಂಭಾಗದಲ್ಲಿ ಪ್ಲೇಕಾರ್ಡ್ ಸಹಿತ ಅವರು ಪ್ರತಿಭಟಿಸಿದರು. ಕಾಸರಗೋಡು ನಗರಸಭೆಯಲ್ಲಿ ಕಾರ್ಯದರ್ಶಿಗಳನ್ನು ಹಲ್ಲೆಗೈದು ಬೆದರಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಆಡಳಿತ ನಡೆಸುವವರು ಈ ರೀತಿಯ ದುಷ್ಕೃತ್ಯಗಳಿಗೆ ಜೊತೆ ಸೇರುತ್ತಿರುವುದರಿಂದಾಗಿ ಇದು ಸಂಭವಿಸುತ್ತಿದೆ. ನಿಜವಾಗಿ ನಗರಸಭೆಯ ಅಭಿವೃದ್ಧಿಗೆ ಪ್ರಧಾನ ಸವಾಲಾಗಿ ಇದು ಪರಿಣಮಿಸಿದೆ ಎಂದು ಬಿಜೆಪಿ ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ಅಧಿಕಾರಿಗಳು ನಗರಸಭೆಯಲ್ಲಿ ಸೇವೆ ಗೈಯ್ಯಲು …