ಕರ್ನಾಟಕ ಮದ್ಯ ಪತ್ತೆ ಸ್ಕೂಟರ್ ವಶ

ಕಾಸರಗೋಡು: ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಸ್ಕೂಟರೊಂದರಲ್ಲಿ ಬಚ್ಚಿಡಲಾಗಿದ್ದ 12.84 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಬಂಧಿಸಿ ಚೆಂಗಳ ಮಾರ್ಥೋಮಾ  ರಸ್ತೆ ಬಳಿಯ ಹಾರೀಸ್ ಪಿ.ಎ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಆದರೆ  ಆರೋಪಿ ಪರಾರಿ ಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ ರಂಜನ್ ಕೆ.ವಿ …

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶೋಕ ಆಚಾರ್ಯ ನಿಧನ

ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಆದೂರು ಆಲಂತಡ್ಕ ನಿವಾಸಿ ಉದಾರ ದಾನಿಗಳ ಸಹಾಯ ಲಭಿಸಿದರೂ  ಇಹಲೋಕ ತ್ಯಜಿಸಿದ್ದಾರೆ. ಆಲಂತ್ತಡ್ಕ ನಿವಾಸಿ ಅಶೋಕ ಆಚಾರ್ಯ (46) ನಿಧನ ಹೊಂದಿದವರು. ಅಸೌಖ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಕೊನೆಯುಸಿರೆಳೆದರು. ಬಡಗಿ ವೃತ್ತಿಯ ಅಶೋಕ ಆಚಾರ್ಯ ಅಸೌಖ್ಯ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದಾಗ ಎರಡೂ ಕಿಡ್ನಿ ವೈಫಲ್ಯಗೊಂಡಿರುವುದಾಗಿ ಗಮನಕ್ಕೆ ಬಂದಿತ್ತು. ಇವರ ಚಿಕಿತ್ಸೆಗಾಗಿ ಕಾರಡ್ಕ ಪಂಚಾಯತ್‌ನ ಜನಪ್ರತಿನಿಧಿಗಳು, ಸಾರ್ವಜನಿಕರು ಚಿಕಿತ್ಸಾ ಸಮಿತಿ ರೂಪೀಕರಿಸಿ ನಿಧಿ ಸಂಗ್ರಹ …

ಮೊಗ್ರಾಲ್‌ನಲ್ಲಿ ಮನೆಗೆ ನುಗ್ಗಿ 20,000 ರೂ. ಕಳವು ಸ್ಥಳೀಯರಲ್ಲಿ ಆತಂಕ

ಮೊಗ್ರಾಲ್: ಇಲ್ಲಿನ ಕಡಪ್ಪುರದ ಟೆಂಪೊ ಚಾಲಕ ಬಾಸಿತ್‌ರ ಮನೆಯಲ್ಲಿ ಕಳ್ಳ ನುಗ್ಗಿ 20,000 ರೂ. ಅಪಹರಿಸಿದ್ದಾನೆ. ಮನೆ ಮಂದಿ ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿದೆ. ಅಡುಗೆಕೋಣೆಯ ಭಾಗದಿಂದ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕಳವು ನಡೆಸಲಾಗಿದೆ. ಈ ಬಗ್ಗೆ ಬಾಸಿತ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ತಲುಪಿ ಪರಿಶೀಲಿಸಿದ್ದಾರೆ. ಕಳವು ಹಾಡಹಗಲೇ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮೊದಲು ಮಸೀದಿ …

ಪ್ಲಸ್‌ಟು ಸೇ ಪರೀಕ್ಷೆಯಲ್ಲಿ ಅಂಕ ಕಡಿಮೆಯಾದ ವ್ಯಥೆ: ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪ್ಲಸ್‌ಟು ಸೇ ಪರೀಕ್ಷೆಯಲ್ಲಿ  ಅಂಕ ಕಡಿಮೆಯಾ ದುದರಿಂದ ವ್ಯಥೆಯಲ್ಲಿದ್ದ ವಿದ್ಯಾ ರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೆಳ್ಳರಿಕುಂಡ್ ಸೈಂಟ್ ಜೂಡ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಚೆಂಬನ್ ಕುನ್ನುವಿನ  ಕಿಳಕ್ಕೇಕುಟ್ಟ್ (ಮೀಂಬುಳೈಕಲ್) ಬಿನು ಥೋಮಸ್-ಶಿಲ್ಪಾ ದಂಪತಿಯ ಪುತ್ರ ಕ್ರಿಸ್ಟೋ ಥೋಮಸ್ (18) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ 2ಗಂಟೆಗೆ ವೇಳೆ ಮನೆ ಸಮೀಪ ದಲ್ಲಿ ರುವ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈತ ಪತ್ತೆ ಯಾಗಿದ್ದನು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ …

ಕರ್ನಾಟಕದ ಕಾರ್ಮಿಕ ನಾಪತ್ತೆ: ಹೊಳೆ ನೀರಿನಲ್ಲಿ ಸೆಳೆತಕ್ಕೊಳಗಾಗಿರಬಹುದೆಂಬ ಶಂಕೆ

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ನಿವಾಸಿ ವಲಸೆ ಕಾರ್ಮಿಕ ನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಜೆಸಿಬಿ ವಾಹನದ ಸಹಾಯಕನಾಗಿ ಕರ್ನಾಟಕ ಬೆಳಗಾವಿ ನಿವಾಸಿ ದುರ್ಗಪ್ಪ (ಅನಿಲ್-18) ನಾಪತ್ತೆಯಾದ ಕಾರ್ಮಿಕ. ತೋಟಗಾರಿಕಾ ನಿಗಮದ ಪಾಣತ್ತೂರಿನಲ್ಲಿರುವ ಸ್ಥಳದಲ್ಲಿ  ಅನನಾಸು ಕೃಷಿ ನಡೆಸಲು ಅಲ್ಲಿನ  ನೆಲವನ್ನು ಸಮತಟ್ಟುಗೊಳಿಸಲು ಬಂದ ಜೆಸಿಬಿ ವಾಹನದ ಸಹಾಯಕನಾಗಿ ದುರ್ಗಪ್ಪ ನಿನ್ನೆ ಬಂದಿದ್ದನು. ಮಧ್ಯಾಹ್ನ ಊಟದ ಬಳಿಕ ಆತ ದಿಢೀರ್ ನಾಪತ್ತೆಯಾಗಿದ್ದಾನೆ. ಆ ಬಗ್ಗೆ ಜೆಸಿಬಿ  ಚಾಲಕ ಕರ್ನಾಟಕ ಕೊಡಗು ನಿವಾಸಿ  ಯುವಾನಂದ ನೀಡಿದ …

ಮಳೆ: ಮುಂದುವರಿಯುತ್ತಿರುವ ನಾಶನಷ್ಟ ; ಕೊಡ್ಲಮೊಗರುನಲ್ಲಿ ಗುಡ್ಡೆ ಕುಸಿತ

ಕೊಡ್ಲಮೊಗರು: ವಿವಿಧ ಕಡೆಗ ಳಲ್ಲಿ ಗುಡ್ಡೆ ಕುಸಿತ, ಕೃಷಿ ನಾಶ ಸಂಭವಿಸುತ್ತಿರುವ ಮಧ್ಯೆ ಕೊಡ್ಲ ಮೊಗರು ಉರ್ಮಿ ತುಪ್ಪೆಯಲ್ಲಿ ನಿನ್ನೆ ರಾತ್ರಿ ಗುಡ್ಡೆ ಕುಸಿತ ಉಂಟಾಗಿದೆ. ಇದರಿಂದಾಗಿ ಇಲ್ಲಿನ ಜನಾರ್ದನ ಭಟ್, ಸಹೋದರಿ ಶಶಿಕಲಾ ಎಂಬಿವರ ಕೃಷಿ ನಾಶವಾಗಿದೆ. ಇವರ ತೋಟಕ್ಕೆ ಗುಡ್ಡೆ ಕುಸಿದು ಬಿದ್ದಿದೆ. ಕಂಗು, ತೆಂಗು ನಾಶವಾಗಿ ರುವುದಾಗಿ ಅವರು ತಿಳಿಸಿದ್ದಾರೆ. ಕೃಷಿ ತೋಟದ ಬದಿಯಲ್ಲಿರುವ ತೋಡು ಮಣ್ಣಿನಿಂದ ಮುಚ್ಚಿಹೋಗಿದ್ದು, ತೋಟಕ್ಕೆ ನೀರು ಹರಿದು ಬರುತ್ತಿದೆ. ಪೆರ್ಲ: ಇಲ್ಲಿನ ಅಡ್ಕಸ್ಥಳ ಸಮೀಪದ ಪೈಸಾರಿ ಎಂಬಲ್ಲಿ …

ಮೆದುಳಿನ ಆಘಾತದಿಂದ ಯುವಕ ಮೃತ್ಯು

ಕುಂಬಳೆ: ಮೆದುಳಿನ ಆಘಾತ ದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟನು. ಪೇರಾಲ್ ಮಾಳಿಯೇಕ್ಕಲ್ ಹೌಸ್‌ನ ಜವಾದ್  ಯಾನೆ ಫವಾದ್ (24) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ವೇಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇವರು  ಚೆರ್ಕಳದ  ಅಂಗಡಿಯೊಂದರ ನೌಕರನಾಗಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತಲುಪಿದ  ಫವಾದ್‌ಗೆ ಅಸಹನೀಯ ತಲೆನೋವು ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಕುಂಬಳೆ  ಹಾಗೂ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿ ಸಿದರೂ …

ತೆಂಗಿನಕಾಯಿ ಕಳವು: ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಮನೆಯ ಶೆಡ್‌ನಿಂದ ಹಾಡಹಗಲೇ ತೆಂಗಿನಕಾಯಿಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಜೆ.ಎಂ. ರೋಡ್‌ನ ಅಹಮ್ಮದ್ ಬಶೀರ್ (50), ಕುಂಜತ್ತೂರು ಮಾಡದ ದಿನೇಶ್ (50) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈ ತಿಂಗಳ 16ರಂದು ಕುಂಜತ್ತೂರು ಕೊಳಕೆಯ ಹರೀಶ್ ಪಿ.ಕೆ ಎಂಬವರ ಮನೆ ಬಳಿಯ ಶೆಡ್‌ನಿಂದ 200 ತೆಂಗಿನಕಾಯಿ ಕಳವಿಗೀಡಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಲುಪಿದ ಕಳ್ಳರು ತೆಂಗಿನಕಾಯಿ ಕಳವುನಡೆಸಿದ್ದರು. ಈ ಬಗ್ಗೆ ಹರೀಶ್ …

ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರ ಸೆರೆ

ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಾಂಗಿಕಡಪ್ಪುರ ನಿವಾಸಿಗಳಾದ ಶಂಸುದ್ದೀನ್ (20), ಮೊಹಮ್ಮದ್ ಶಿಹಾಬುದ್ದೀನ್ (20) ಎಂಬಿವರನ್ನು ಬಂಧಿಸಲಾಗಿದೆ. ಶಂಸುದ್ದೀನ್ ಮೊಗ್ರಾಲ್ನ ರೆಸಾರ್ಟ್ ಬಳಿ, ಮೊಹಮ್ಮದ್ ಶಿಹಾಬುದ್ದೀನ್ ಕೊಪ್ಪಳ ಅಂಡರ್‌ಪಾಸ್ ಬಳಿ ಗಾಂಜಾ ಸೇದುತ್ತಿದ್ದಾಗ ಬಂಧಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ 4 ಕಿಲೋ ಗಾಂಜಾ ಸಾಗಿಸಿದ ಪ್ರಕರಣ: ದ್ವಿತೀಯ ಆರೋಪಿ ಪಟ್ಲ ನಿವಾಸಿಗೆ ಎರಡು ವರ್ಷ ಕಠಿಣ ಸಜೆ, 30 ಸಾವಿರ ರೂ. ದಂಡ

ಕಾಸರಗೋಡು: ಸ್ವಿಫ್ಟ್ ಕಾರಿನಲ್ಲಿ 4.830 ಕಿಲೋ ಗಾಂಜಾ ಸಾಗಿಸಿದ ಪ್ರಕರಣದಲ್ಲಿ  ಎರಡನೇ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ. ಪಟ್ಲ ನಿವಾಸಿ ಅಬ್ದುಲ್ ರೌಫ್ (39) ಎಂಬಾತನಿಗೆ ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಈ ಪ್ರಕರಣದಲ್ಲಿ ಒಂದನೇ ಆರೋಪಿಯನ್ನು ಈ ಹಿಂದೆ ಶಿಕ್ಷಿಸಲಾಗಿತ್ತು. …