ಬ್ಯಾಂಕ್ ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ 17ರ ಬಾಲಕ ಕೊನೆಗೂ ಸೆರೆ

ಕಾಸರಗೋಡು: ಬ್ಯಾಂಕ್ ಕಳವು ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ ೧೭ರ ಹರೆಯದ ಬಾಲಕನನ್ನು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಈತ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವ್ಯಕ್ತಿಯಾಗಿದ್ದಾನೆ. ಮೊನ್ನೆ ರಾತ್ರಿ ಪೆರಿಯ ಬಜಾರ್‌ನಲ್ಲಿರುವ ಭಾಸ್ಕರನ್ ಎಂಬವರ ಸುರಭಿ ಸ್ಟೋರ್ಸ್‌ನ ಮುಂದೆ ಸ್ಥಾಪಿಸಿದ್ದ ಸಿಸಿ ಟಿವಿ ಕ್ಯಾಮರಾವನ್ನು ಹಾನಿಗೆಡಹಿದ ಬಳಿಕ ಆ ಅಂಗಡಿಯ ಬೀಗ ಒಡೆದು ಒಳನುಗ್ಗಿ 1000 ರೂ. ನಗದು ಹಾಗೂ ಸುಮಾರು 2000 ರೂ.ಗಳ ಜೀನಸು ಸಾಮಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಆ ಬಗ್ಗೆ ಅಂಗಡಿ …

ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರ ಸೆರೆ

ಬದಿಯಡ್ಕ: ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಕುಂಬ್ಡಾಜೆ ಉಬ್ರಂಗಳ ಕರುವತ್ತಡ್ಕ ನಿವಾಸಿ ಅಬ್ದುಲ್ ಬಶೀರ್ (29), ಕೋಡಿಮೂಲೆ ಹೌಸ್‌ನ ಅಬ್ದುಲ್ ಸಮದ್ (21) ಎಂಬಿವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ಎಪಿ ಸರ್ಕಲ್‌ನಲ್ಲಿ ನಿನ್ನೆ ಸಂಜೆ ಎಸ್‌ಐ ಸುಮೇಶ್ ಬಾಬು ನೇತೃತ್ವ ದಲ್ಲಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ ದಾಗ 47.700 ಗ್ರಾಂ ಗಾಂಜಾ ಪತ್ತೆಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರು ಹಾಗೂ ಗಾಂಜಾವನ್ನು ವಶಕ್ಕೆ ತೆಗೆದ ಬಳಿಕ ಆರೋಪಿಗಳನ್ನು ನೋಟೀಸ್ …

ಕಲ್ಲಿಕೋಟೆ ನಿವಾಸಿ ಸಹಿತ 11 ಮಂದಿಯ ಸಾವಿಗೆ ಕಾರಣವಾದ ಶಿರೂರು ದುರಂತಕ್ಕೆ 1 ವರ್ಷ

ಕಾಸರಗೋಡು: ಕಲ್ಲಿಕೋಟೆ ಬಳಿಯ ಕನ್ನಾಡಿಕಲ್ ನಿವಾಸಿಯಾದ ಲಾರಿ ಚಾಲಕ ಅರ್ಜುನ್ ಸಹಿತ 11 ಮಂದಿ ಸಾವಿಗೀಡಾದ ಶಿರೂರು ದುರಂತ ಸಂಭವಿಸಿ ಇಂದಿಗೆ 1 ವರ್ಷವಾಯಿತು. 2024 ಜುಲೈ 16ರಂದು ಧಾರಾಕಾರ ಮಳೆಗೆ ಶಿರೂರಿನಲ್ಲಿ ರಸ್ತೆ ಬದಿಯ ಗುಡ್ಡೆ ಕುಸಿದು ಬಿದ್ದು  ದುರಂತ ಸಂಭವಿಸಿತ್ತು. 72 ದಿನಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಅರ್ಜುನ್‌ರ ಮೃತದೇಹದ ಅವಶಿಷ್ಟಗಳು ಹಾಗೂ ಟ್ರಕ್ ಗಂಗಾವಲಿ ಹೊಳೆಯಲ್ಲಿ ಪತ್ತೆಯಾಗಿತ್ತು. ಅಪಘಾತದಲ್ಲಿ ಸಿಲುಕಿದ ಇಬ್ಬರನ್ನು ಇನ್ನು ಕೂಡಾ ಪತ್ತೆಹಚ್ಚಲು ಸಾಧ್ಯವಾಗಿಲ್ಲ.  ಕರ್ನಾಟಕದ  ಶಿರೂರು  ರಾಷ್ಟ್ರೀಯ …

ಅಬುದಾಬಿಯಲ್ಲಿ ವಾಹನ ಅಪಘಾತ: ನೆಲ್ಲಿಕುಂಜೆ ನಿವಾಸಿ ಸಾವು

ಕಾಸರಗೋಡು: ಗಲ್ಫ್ ರಾಷ್ಟ್ರವಾದ ಅಬುದಾಬಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಸರಗೋಡು ನೆಲ್ಲಿಕುಂಜೆ ನಿವಾಸಿಯಾಗಿರುವ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ನೆಲ್ಲಿಕುಂಜೆ ಬದ್ರಿಯಾ ಹೌಸಿನ ಪಿ.ಎಂ. ಅಬ್ದುಲ್ ಖಾದರ್ -ನಫೀಸಾ ದಂಪತಿ ಪುತ್ರ ಅಯೂಬ್ ಅನ್ಸಾರ್ (43) ಸಾವನ್ನಪ್ಪಿದ ಯುವಕ. ನಿನ್ನೆ ಮುಂಜಾನೆ ಈ ವಾಹನ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆ ವಾಹನಲ್ಲಿದ್ದ ಸ್ಪೋನ್ಸರ್ಸ್‌ಗಳೂ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಇದೆ. ಈ ಸೋನ್ಸರ್ಸ್ ಗಳು ಹೊಸ ವ್ಯಾಪಾರ ಸಂಸ್ಥೆಯೊಂದನ್ನು ಆರಂಭಿಸುವ ಸಿದ್ಧತೆಯಲ್ಲಿ ತೊಡಗಿದ್ದರು. ಅಬುದಾಬಿಯ ಕಂಪೆನಿಯೊಂ ದರ ಮಾಲಕನ …

ಆದರ್ಶ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಸೋರುವ ಕಟ್ಟಡದಿಂದ ಸಮಸ್ಯೆ

ಮಂಜೇಶ್ವರ: ಆದರ್ಶ ನಿಲ್ದಾಣ ವಾಗಿರುವ ಮಂಜೇಶ್ವರ ರೈಲ್ವೇ ನಿಲ್ದಾ ಣದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿ ದ್ದರೂ ಪ್ರಧಾನ ಕಟ್ಟಡ ಶೋಚನೀ ಯಾವಸ್ಥೆಯಲ್ಲಿ ಮುಂದುವರಿ ಯುತ್ತಿದೆ. ಓಬಿರಾಯನ ಕಾಲದಷ್ಟು ಹಳೆಯದಾ ಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಈಗ ಕಾರ್ಯಾಚರಿಸುತ್ತಿದೆ. ಮಳೆ ಬಿರು ಸುಗೊಳ್ಳುತಿದ್ದಂತೆ ಸೋ ರಲಿಕ್ಕೂ ಶುರುವಾಗಿದೆ. ಸೋರುವು ದನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಯಾಗಿ ಶೀಟನ್ನು ಹಾಕಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿ ಈ ದುರವಸ್ಥೆ ಯಿಂದಿದೆ.ನಿರ್ಮಾಣ …

ಕೆಎಸ್‌ಟಿಪಿ ರಸ್ತೆ ನಿರ್ಮಾಣ: ಚರಂಡಿ ನಿರ್ಮಾಣಕ್ಕಾಗಿ ಅಗೆದು ಹಾಕಿದ ಇಂಟರ್‌ಲಾಕ್ ಮರು ಸ್ಥಾಪಿಸಿಲ್ಲ; ಅಪಾಯಭೀತಿ

ಕುಂಬಳೆ: ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆ ನಿರ್ಮಾಣ ವೇಳೆ ಚರಂಡಿ ನಿರ್ಮಿಸಲು ಅಗೆದು ಹಾಕಿದ ರಸ್ತೆಯ ಇಂಟರ್‌ಲಾಕ್ ಮರು ಸ್ಥಾಪಿಸದೇ ಇರುವುದು ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಕುಂಬಳೆ ಹೋಲಿಫ್ಯಾಮಿಲಿ ಶಾಲೆ ಬಳಿಯ ಕೆಎಸ್‌ಟಿಪಿ ರಸ್ತೆಯಿಂದ ಕಂಚಿಕಟ್ಟೆ ಮಳಿ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಪಾಯಭೀತಿ ಉಂಟಾಗಿದೆ. ಕೆಎಸ್‌ಟಿಪಿ ರಸ್ತೆ ಕಾಮಗಾರಿ ವೇಳೆ ಚರಂಡಿ ನಿರ್ಮಿಸಲೆಂದು ಕಂಚಿಕಟ್ಟೆ ರಸ್ತೆಯ ಇಂಟರ್‌ಲಾಕ್ ಅಗೆದು ತೆಗೆಯಲಾಗಿತ್ತು. ಚರಂಡಿ ಕಾಮಗಾರಿ ಮುಗಿದ ಕೂಡಲೇ ಇಂಟರ್‌ಲಾಕ್ ಅಳವಡಿಸುವಂತೆ ಕುಂಬಳೆ ಪಂಚಾಯತ್ ಅಧಿಕಾರಿಗಳು ಕೆಎಸ್‌ಟಿಪಿ ಅಧಿಕಾರಿಗಳಲ್ಲಿ ತಿಳಿಸಿದ್ದರು. …

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಮಂಜೇಶ್ವರ ಏರಿಯಾ ರೈತ ಸಂಘದಿಂದ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್

ಪೈವಳಿಕೆ: ರಸಗೊಬ್ಬರದ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ನಡೆದ ರೈತ , ಕಾರ್ಮಿಕರ ಪ್ರತಿಭಟನೆಯ ಅಂಗವಾಗಿ ಮಂಜೇಶ್ವರ ಏರಿಯಾ ರೈತ ಸಂಘದ ವತಿಯಿಂದ ಪೈವಳಿಕೆ ಅಂಚೆ ಕಚೇರಿ ಗೆ ಮಾರ್ಚ್ ನಡೆಸಲಾಯಿತು. ರೈತ ಸಂಘದ ಏರಿಯಾ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದÄ, ಕಾಸರಗೋಡು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಚಂದ್ರಶೇಖರನ್ ಮಾರ್ಚ್ ಉದ್ಘಾಟಿಸಿದÀರು. ಕೃಷಿ ಉಪಯೋ ಗದ ರಸಗೊಬ್ಬರದ ಬೆಲೆ ಏರಿಕೆ ಯಿಂದ ದೇಶದಾದ್ಯಂತ ಕೃಷಿಕರು ಕಂಗೆಟ್ಟಿದ್ದಾರೆ. ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಇಳಿಸದೆ …

ಕೆಎಸ್‌ಆರ್‌ಟಿಸಿ ಬಸ್- ಆಟೋರಿಕ್ಷಾ ಢಿಕ್ಕಿ: ಇಬ್ಬರು ಮೃತ್ಯು

ಪಾಲಕ್ಕಾಡ್: ಕಲ್ಲಿಕೋಟೆ ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋರಿಕ್ಷಾ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಪಾಲಕ್ಕಾಡ್ ತೃಕ್ಕಲ್ಲೂರು ನಿವಾಸಿಗಳಾದ ಆಟೋಚಾಲಕ ಅಸೀಸ್ (52), ಪ್ರಯಾಣಿಕ ಅಯ್ಯಪ್ಪನ್ ಕುಟ್ಟಿ (60) ಎಂಬಿವರು ಮೃತಪಟ್ಟವರಾಗಿದ್ದಾರೆ. ನಿನ್ನೆ ರಾತ್ರಿ ೮.೧೫ರ ವೇಳೆ ಮಣ್ಣಾರ್‌ಕಾಡ್ ತಚ್ಚಂಬಾರ ಎಂಬಲ್ಲಿ ಅಪಘಾತವುಂಟಾಗಿದೆ. ಕಲ್ಲಿಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದೇ ವೇಳೆ ಆಟೋ ಚಾಲಕ ಅಸೀಸ್‌ರ ಸಾವಿನ ವಿಷಯ ತಿಳಿದು ಸಂಬಂಧಿಕೆ ಕುಸಿದು ಬಿದ್ದು ಮೃತಪಟ್ಟ ಘಟನೆ …

ಸಿಪಿಎಂ ಮುಖಂಡ ಲೋಕಯ್ಯ ಪೂಜಾರಿ ಸಂಸ್ಮರಣೆ

ಬೇಕೂರು: ಬೊಳ್ಳಾರು ನಿವಾಸಿ, ಸಿಪಿಎಂ ನೇತಾರ ಲೋಕಯ್ಯ ಪೂಜಾರಿ ಯವರ ೮ನೇ ವಾರ್ಷಿಕ ಸಂಸ್ಮರಣೆ ಬೇಕೂರು ಸುಭಾಷ್‌ನಗರದಲ್ಲಿ ನಡೆ ಯಿತು. ಲೋಕಯ್ಯ ಪೂಜಾರಿಯವರ ಸಹೋದರರಾದ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಲೋ ಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ಉದ್ಘಾಟಿಸಿ ಮಾತನಾ ಡಿದರು. ಏರಿಯಾ ಕಮಿಟಿ ಸದಸ್ಯ ಡಿ. ಕಮಲಾಕ್ಷ, ಲೋಕಲ್ ಕಮಿಟಿ ಸದಸ್ಯ ಪ್ರವೀಣ್, ಪಾರ್ವತಿ, ಸಜಾನ್ ಮಂಗಲ್ಪಾಡಿ, ಪಂ. ಸದಸ್ಯೆ ಸುಜಾತಾ ಯು. ಶೆಟ್ಟಿ ಹಾಗೂ ಹಿರಿಯ ನೇತಾರ ದಾಮೋದರ್ ಕನ್ನಟಿಪಾರೆ, …

ಮಜೀರ್ಪಳ್ಳಕಟ್ಟೆ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ

ಬದಿಯಡ್ಕ: ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಆಶ್ರಯದಲ್ಲಿ ಮಜೀರ್ಪಳ್ಳಕಟ್ಟೆ ೧ನೇ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಿಸ ಲಾಯಿತು. ಪೆರಿಯಾಟಡ್ಕದಲ್ಲಿ ನಡೆದ ಸಭೆಯನ್ನು ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಅವರು ಮಾತನಾಡಿ, ಮುಂಬರುವ ತ್ರಿಸ್ತರ ಪಂಚಾಯತ್ ಚುನಾವಣೆಗೆ  ಪಕ್ಷದ ನೇತಾರರು ಹಾಗೂ   ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು. ವಿಲ್ಫ್ರೆಡ್ ಮನೋಹರ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಮಂಡಲ ಉಪಾಧ್ಯಕ್ಷ ಕೃಷ್ಣದಾಸ್ ಬೇಳ, ಕಾರ್ಯದರ್ಶಿ ಲೋಹಿತಾಕ್ಷ ನಾಯರ್, ಮಂಡಲ ಪದಾಧಿ ಕಾರಿಗಳಾದ ವಾಮನ, ಜೋನಿ ಕಾರ್ಮಾರು, …